Quantcast
Channel: VijayKarnataka
Viewing all articles
Browse latest Browse all 6795

ಬಾಲಾಪರಾಧಿ ವಿಧೇಯಕ: ಸೋನಿಯಾ, ಅಮಿತ್‌ಗೆ ಪತ್ರ

$
0
0

ನವದೆಹಲಿ: ಬಾಲಾಪರಾಧಿ ವಿಧೇಯಕ ಕಾನೂನಿನ ಬಿಲ್‌ನ್ನು ಮುಂಬರುವ ಸಂಸತ್ ಅಧಿವೇಶನದಲ್ಲಿ ಅಂಗೀಕಾರ ಮಾಡುವಂತೆ ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಅವರು, ಬಿಜೆಪಿ ಅಧ್ಯಕ್ಷ ಅಮಿತ್ ಷಾ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಮನವಿ ಪತ್ರವನ್ನು ಕಳಿಸಿದ್ದಾರೆ.

ಅಮಿತ್ ಷಾ ಗೆ ಬರೆದ ಪತ್ರದಲ್ಲಿ, ನಮ್ಮ ದೇಶದ ಎಲ್ಲಾ ನಿರ್ಭಯಾ ಪರವಾಗಿ, ಸಂಸತ್ ಅಧಿವೇಶನದಲ್ಲಿ ಚರ್ಚಿಸಬೇಕು. ಜೊತೆಗೆ ಬಾಲಾಪರಾಧಿ ವಿಧೇಯಕದ ಬಿಲ್ ನ್ನು ಪಾಸ್ ಮಾಡಬೇಕು, ಸಂಸತ್ ನ ಅಧಿವೇಶನದ ದಿನಗಳು ಮುಂದುವರೆದರೂ ಪರವಾಗಿಲ್ಲ, ಆದರೆ ಎಲ್ಲಾ ನಿರ್ಭಯಾಗಳಿಗೂ ನ್ಯಾಯ ದೊರಕಬೇಕು ಎಂದಿದ್ದಾರೆ.

ಸೋನಿಯಾ ಗಾಂಧಿಗೆ ಬರೆದ ಪತ್ರದಲ್ಲಿ, ಈ ವಿಧೇಯಕವು ಇನ್ನೂ ರಾಜ್ಯ ಸಭೆಯಲ್ಲಿ ಯೇ ಅಂಗೀಕಾರವಾಗದ ಕುರಿತು ತಾನು ತುಂಬಾ ಗೊಂದಲಕ್ಕೊಳಗಾಗಿದ್ದೇನೆಂದು ಬರೆದಿದ್ದು, ಪ್ರಸಕ್ತ ಅಧಿವೇಶನದಲ್ಲಿ ಇದನ್ನು ಅಂಗೀಕಾರಗೊಳಿಸಿ, ನಿರ್ಭಯಾ ಹತ್ಯೆಯ ಕಾನೂನನ್ನು ಬಿಗಿಗೊಳಿಸಬೇಕೆಂದು ಕೇಳಿಕೊಂಡಿದ್ದಾರೆ.

ಈ ವಿಧೇಯಕವು ಸಂಸತ್‌ನಲ್ಲಿ ಅಂಗೀಕಾರವಾದರೆ, ಈಗಿರುವ ಶಿಕ್ಷೆಗಿಂತ ಕಠಿಣ ಶಿಕ್ಷೆಯನ್ನು ಕೊಡಲಾಗುತ್ತದೆ.

2012, ಡಿಸೆಂಬರ್ 16 ರಂದು 23 ವರ್ಷದ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ'ನಿರ್ಭಯಾ' ಅತ್ಯಾಚಾರಕ್ಕೊಳಗಾಗಿ ಮರಣ ಹೊಂದಿದ್ದಳು.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್