ಅಮಿತ್ ಷಾ ಗೆ ಬರೆದ ಪತ್ರದಲ್ಲಿ, ನಮ್ಮ ದೇಶದ ಎಲ್ಲಾ ನಿರ್ಭಯಾ ಪರವಾಗಿ, ಸಂಸತ್ ಅಧಿವೇಶನದಲ್ಲಿ ಚರ್ಚಿಸಬೇಕು. ಜೊತೆಗೆ ಬಾಲಾಪರಾಧಿ ವಿಧೇಯಕದ ಬಿಲ್ ನ್ನು ಪಾಸ್ ಮಾಡಬೇಕು, ಸಂಸತ್ ನ ಅಧಿವೇಶನದ ದಿನಗಳು ಮುಂದುವರೆದರೂ ಪರವಾಗಿಲ್ಲ, ಆದರೆ ಎಲ್ಲಾ ನಿರ್ಭಯಾಗಳಿಗೂ ನ್ಯಾಯ ದೊರಕಬೇಕು ಎಂದಿದ್ದಾರೆ.
ಸೋನಿಯಾ ಗಾಂಧಿಗೆ ಬರೆದ ಪತ್ರದಲ್ಲಿ, ಈ ವಿಧೇಯಕವು ಇನ್ನೂ ರಾಜ್ಯ ಸಭೆಯಲ್ಲಿ ಯೇ ಅಂಗೀಕಾರವಾಗದ ಕುರಿತು ತಾನು ತುಂಬಾ ಗೊಂದಲಕ್ಕೊಳಗಾಗಿದ್ದೇನೆಂದು ಬರೆದಿದ್ದು, ಪ್ರಸಕ್ತ ಅಧಿವೇಶನದಲ್ಲಿ ಇದನ್ನು ಅಂಗೀಕಾರಗೊಳಿಸಿ, ನಿರ್ಭಯಾ ಹತ್ಯೆಯ ಕಾನೂನನ್ನು ಬಿಗಿಗೊಳಿಸಬೇಕೆಂದು ಕೇಳಿಕೊಂಡಿದ್ದಾರೆ.
ಈ ವಿಧೇಯಕವು ಸಂಸತ್ನಲ್ಲಿ ಅಂಗೀಕಾರವಾದರೆ, ಈಗಿರುವ ಶಿಕ್ಷೆಗಿಂತ ಕಠಿಣ ಶಿಕ್ಷೆಯನ್ನು ಕೊಡಲಾಗುತ್ತದೆ.
2012, ಡಿಸೆಂಬರ್ 16 ರಂದು 23 ವರ್ಷದ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ'ನಿರ್ಭಯಾ' ಅತ್ಯಾಚಾರಕ್ಕೊಳಗಾಗಿ ಮರಣ ಹೊಂದಿದ್ದಳು.
ನವದೆಹಲಿ: ಬಾಲಾಪರಾಧಿ ವಿಧೇಯಕ ಕಾನೂನಿನ ಬಿಲ್ನ್ನು ಮುಂಬರುವ ಸಂಸತ್ ಅಧಿವೇಶನದಲ್ಲಿ ಅಂಗೀಕಾರ ಮಾಡುವಂತೆ ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಅವರು, ಬಿಜೆಪಿ ಅಧ್ಯಕ್ಷ ಅಮಿತ್ ಷಾ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಮನವಿ ಪತ್ರವನ್ನು ಕಳಿಸಿದ್ದಾರೆ.