Quantcast
Channel: VijayKarnataka
Viewing all articles
Browse latest Browse all 6795

ಇದು ಕಾಸ್ಟ್ಲಿ ಕ್ರ್ಯಾಷ್

$
0
0

ಕೋಲ್ಕತ್ತಾ: ಜೆಟ್ ಏರ್‌ವೇಸ್‌ನ ರಾತ್ರಿ ಪಾಳಿಯ ಚಾಲಕ ನಿದ್ದೆಯ ಮಂಪರಿನಲ್ಲಿ ಬಸ್ ಓಡಿಸಿದ ಪರಿಣಾಮ, ನಿಲ್ಲಿಸಿದ್ದ ಏರ್ ಇಂಡಿಯಾ ವಿಮಾನಕ್ಕೆ ಡಿಕ್ಕಿ ಹೊಡೆದು, ಸುಮಾರು 400 ಕೋಟಿ ರೂ. ನಷ್ಟ ಸಂಭವಿಸಿದ ಘಟನೆ ಕೋಲ್ಕತ್ತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಬೆಳಗಿನ ಜಾವ ನಡೆದಿದೆ.

ಬೆಳಗ್ಗೆ 5.25ರ ಹೊತ್ತಿಗೆ ದುರಂತ ನಡೆದಿದ್ದು, ಬಸ್ ಹಾಗೂ ವಿಮಾನದಲ್ಲಿ ಯಾರೂ ಇಲ್ಲದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ತಾನು ನಿದ್ದೆಯ ಮಂಪರಿನಲ್ಲಿದ್ದೆ ಎಂದು ಚಾಲಕ ಮೊಮಿನ್ ಅಲಿ ತಪ್ಪೊಪ್ಪಿಕೊಂಡಿದ್ದಾನೆ. ಆತ ಕುಡಿದಿರಲಿಲ್ಲ ಹಾಗೂ ಯಾವುದೇ ಮಾದಕ ವಸ್ತು ಸೇವಿಸಿರಲಿಲ್ಲ ಎಂದು ವೈದ್ಯಕೀಯ ಪರೀಕ್ಷೆಗಳು ದೃಢಪಡಿಸಿವೆ.

ಅಸ್ಸಾಂನ ಸಿಲ್ಚಾರ್‌ಗೆ ತೆರಳಲು ಸಿದ್ಧಗೊಳ್ಳುತ್ತಿದ್ದ ಏರ್ ಇಂಡಿಯಾ ವಿಮಾನವು 32ನೇ ಬೇಯಲ್ಲಿ ನಿಂತಿತ್ತು. ವಿಮಾನದ ಎಡರೆಕ್ಕೆಗೆ ಬಲವಾಗಿ ಬಸ್ ಬಡಿದಿದ್ದರಿಂದ, ಎಂಜಿನ್‌ಗೆ ಹಾನಿಯಾಗಿದೆಯಲ್ಲದೆ, 400 ಕೋಟಿ. ರೂ ಮೌಲ್ಯದ ನಷ್ಟ ಸಂಭವಿಸಿದೆ ಎಂದು ಕಂಪನಿಯು ಹೇಳಿಕೊಂಡಿದೆ. ಘಟನೆಯ ನಂತರ ಈಶಾನ್ಯ ರಾಜ್ಯಗಳಿಗೆ ತೆರಳಲಿದ್ದ ಎರಡು ವಿಮಾನಗಳನ್ನು ಸಂಸ್ಥೆಯು ರದ್ದುಪಡಿಸಿತು.

ಘಟನೆ ಕುರಿತು ತನಿಖೆ ನಡೆಸುವಂತೆ ನಾಗರಿಕ ವಿಮಾನಯಾನ ಸಹಾಯಕ ಸಚಿವ ಮಹೇಶ್ ಶರ್ಮಾ ಆದೇಶಿಸಿದ್ದಾರೆ.

ವಾರದ ಹಿಂದಷ್ಟೇ ಮುಂಬಯಿಯಲ್ಲಿ ಏರ್ ಇಂಡಿಯಾದ ಎಂಜಿನಿಯರ್ ಒಬ್ಬರನ್ನು ವಿಮಾನದ ಎಂಜಿನ್ ನುಂಗಿಹಾಕಿದ್ದನ್ನು ಇಲ್ಲಿ ಸ್ಮರಿಸಬಹುದು.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>