Quantcast
Channel: VijayKarnataka
Viewing all articles
Browse latest Browse all 6795

ದಿನಭವಿಷ್ಯ: 15 ಮಾರ್ಚ್ 2017

$
0
0

ಮೇಷ:- ಈ ದಿನ ನಿಮಗೆ ಶುಭ ತರುವ ದಿನವಾಗಿದೆ. ನಿಮ್ಮ ಮನೋಕಾಮನೆಗಳು ಇಂದು ಪೂರ್ಣಗೊಳ್ಳುವವು. ಅದಕ್ಕೆ ಪೂರಕವಾಗಿ ಗುರುವಿನ ಸ್ತೋತ್ರ ಪಠಿಸಿದಲ್ಲಿ ಹೆಚ್ಚಿನ ಪ್ರಯೋಜನವಾಗುವುದು.

ವೃಷಭ:- ಪರಸ್ಪರ ಮುಕ್ತ ಮಾತುಕತೆಗಳ ಮೂಲಕ ಕೌಟುಂಬಿಕ ಜೀವನದ ಭಿನ್ನಾಭಿಪ್ರಾಯಗಳು ಕಡಿಮೆ ಆಗುವುದು. ಕಚೇರಿ ಕೆಲಸಗಳು ಸರಾಗವಾಗಿ ನಡೆಯುವುದು. ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ.

ಮಿಥುನ:- ಯಾರಿಗೂ ಹೆದರುವ ಅವಶ್ಯಕತೆ ಇಲ್ಲ. ಹಾಗಂತ ಇತರೆಯವರನ್ನು ಎದುರು ಹಾಕಿಕೊಳ್ಳುವುದು ಸೂಕ್ತವಲ್ಲ. ನೂತನ ವಾಹನ ಖರೀದಿಯನ್ನು ಮುಂದೂಡಿರಿ. ತಾಯಿಯವರ ಆರೋಗ್ಯದ ಕಡೆ ಗಮನ ಕೊಡಿರಿ.

ಕಟಕ:- ನೂತನ ಪಾರ್ಟನರ್‌ಶಿಪ್‌ ವ್ಯವಹಾರ ಬೇಡ. ಸ್ವಂತ ದುಡಿಮೆಯಿಂದಲೇ ಸಾಕಷ್ಟು ಹಣಕಾಸು ಒದಗಿ ಬರುವುದು. ಸಹೋದರರು ಇಂದಿನ ಕಾರ್ಯಕ್ಕೆ ಸಹಕಾರ ನೀಡಲಿರುವರು. ಹಣಕಾಸು ಉತ್ತಮವಾಗಿರುತ್ತದೆ.

ಸಿಂಹ:- ನಿಮ್ಮ ಊಹಾಶಕ್ತಿ, ಸಂಕಲ್ಪ ಶಕ್ತಿ ಮತ್ತು ಆರನೆಯ ಇಂದ್ರಿಯದ ಕಲ್ಪನಾತೀತ ತರ್ಕದಿಂದ ನಿಮ್ಮ ಬದುಕಿನ ದಾರಿಯಲ್ಲಿ ಜಯವನ್ನು ಕಾಣುವಿರಿ. ಉನ್ನತ ವ್ಯಾಸಂಗದಲ್ಲೂ ಹೆಚ್ಚಿನ ಪ್ರಗತಿ ಕಂಡುಬರುವುದು.

ಕನ್ಯಾ:-ಬಂಧುಗಳೊಬ್ಬರಿಂದ ಕೆಲವು ಆಸ್ತಿಯ ವಿಚಾರದಲ್ಲಿ ನಿಮಗೆ ಲಾಭವಾಗುವುದು. ನೀವು ಮನೆ ಮಾಡಲು ಅಥವಾ ಖರೀದಿ ಮಾಡಲು ಹಿಂಜರಿಕೆಯ ಸ್ವಭಾವದಿಂದ ಕೈಗೂಡುತ್ತಿಲ್ಲ. ಧೈರ್ಯದಿಂದ ಮುನ್ನುಗ್ಗಿದಲ್ಲಿ ಅನುಕೂಲವಾಗುವುದು.

ತುಲಾ:- ಹಳೆಯ ತಕರಾರುಗಳು ಬಹುಮಟ್ಟಿಗೆ ಇಂದಿಗೆ ನಿರ್ಣಾಯಕ ಹಂತವನ್ನು ತಲುಪಲಿದ್ದು ಆ ಮೂಲಕ ಬರಬೇಕಾದ ಹಣಕಾಸಿನ ವ್ಯವಹಾರಕ್ಕೆ ನಿರ್ದಿಷ್ಟ ದಿನಾಂಕ ಗೊತ್ತಾಗುವುದು. ಇದರಿಂದ ನಿಮ್ಮ ಮುಂದಿನ ಕಾರ್ಯ ಯೋಜನೆಗೆ ಸಹಕಾರ ದೊರೆಯುವುದು.

ವೃಶ್ಚಿಕ:- ಜನ್ಮಶನಿಯ ಬಿಡುಗಡೆ ಆಗಿದ್ದರೂ ಧನಸ್ಥಾನದ ಶನಿಯಿಂದಾಗಿ ಹೊಸ ಬಂಡವಾಳದೊಂದಿಗೆ ವ್ಯಾಪಾರ ಆರಂಭಿಸುವುದು ಸೂಕ್ತವಲ್ಲ. ನೆರೆಹೊರೆಯವರೊಡನೆ ಕಲಹ ಬೇಡ. ಅವರೊಂದಿಗೆ ಸ್ನೇಹ-ಸೌಹಾರ್ದತೆಯಿಂದ ವರ್ತಿಸಿರಿ.

ಧನಸ್ಸು:- ಜನ್ಮ ಶನಿಯ ಸಂಚಾರದಿಂದಾಗಿ ಮನಸ್ಸು ಗಾಬರಿಗೊಳ್ಳುವುದು. ಅಂದುಕೊಂಡ ಕಾರ್ಯಗಳು ಸಕಾಲದಲ್ಲಿ ಮುಗಿಯದೆ ಬೇಸರವುಂಟು ಮಾಡುವುದು. ಕೆಲವರಿಗೆ ಸ್ಥಾನ ಬದಲಾವಣೆಯಿಂದ ಮನಸ್ಸಿಗೆ ಕಿರಿಕಿರಿ ಆಗುವುದು.

ಮಕರ:- ಕೆಲವರ ಪಾಲಿಗೆ ಇಂದು ಕೆಲಸದ ಸ್ಥಳದಲ್ಲಿ ಪದೋನ್ನತಿ ದೊರೆಯುವುದು. ಹಿರಿಯರ ಆಸ್ತಿಗೆ ಸಂಬಂಧಪಟ್ಟಂತೆ ಶುಭ ಸೂಚನೆ ದೊರೆಯುವುದು. ಕಾರ್ಯ ನೆರವೇರಲು ಅಧಿಕ ಖರ್ಚಾಗುವ ಸಾಧ್ಯತೆ ಇರುತ್ತದೆ.

ಕುಂಭ:- ಕಲಾಕಾರರು, ಕುಶಲಕರ್ಮಿಗಳು ಚಿತ್ರ ಕಲಾವಿದರಿಗೆ ಹೆಚ್ಚಿನ ಬೇಡಿಕೆ ಬರಲಿದೆ. ಧನಲಾಭಕ್ಕೆ ಕೂಡ ಅನೇಕ ದಾರಿಗಳು ತೆರೆದುಕೊಳ್ಳುವುದು. ಕೆಲವರಿಗೆ ವಿವಾಹ ಭಾಗ್ಯ ದೊರೆಯುವುದು. ಅರ್ಥಾತ್‌ ಮಾತುಕತೆಯು ಪೂರ್ಣಗೊಳ್ಳುವುದು.

ಮೀನ:- ಉದ್ಯೋಗದಲ್ಲಿ ಬಡ್ತಿ, ನಿರುದ್ಯೋಗಿಗಳಿಗೆ ನೌಕರಿ ದೊರೆಯುವುದು. ಕೌಟುಂಬಿಕ ಜೀವನದಲ್ಲಿ ನೆಮ್ಮದಿ ಕಂಡು ಬರುವುದು. ಹಳೆಯ ಗೆಳೆಯರ ಭೇಟಿಯಾಗುವುದು. ಕುಲದೇವತಾ ದರ್ಶನದಿಂದ ಆತ್ಮ ತೃಪ್ತಿ ಉಂಟಾಗಲಿದೆ.


Viewing all articles
Browse latest Browse all 6795

Trending Articles


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ತುಳು ತೆರೆಗೆ ಸೋನಿಯಾ ಎಂಟ್ರಿ


‘ವ್ಯಾಪಾರ’ದಲ್ಲಿ ವೃದ್ಧಿಯಾಗಲು ಹೀಗೆ ಮಾಡಿ….


ಅಪ್ಪ ಅಮ್ಮ ಬೈಯ್ತಾರೆ ಅಂತ ಬೆಂಗಳೂರಿಂದ ಚಳ್ಳಕೆರೆಗೆ ಹೋದ ಮಕ್ಕಳು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


Namaskāra नमस्कार (salutation)



<script src="https://jsc.adskeeper.com/r/s/rssing.com.1596347.js" async> </script>