Quantcast
Channel: VijayKarnataka
Viewing all articles
Browse latest Browse all 6795

ದಿನ ಭವಿಷ್ಯ: 14 ಮಾರ್ಚ್ 2017

$
0
0

ಮೇಷ:- ಹೊಸದಾದ ವಿಚಾರಗಳು ನಿಮ್ಮ ದಾರಿಗೆ ಅನಿರೀಕ್ಷಿತ ತೊಡಕಾಗಬಲ್ಲದು. ಗುರು ಮತ್ತು ಶನಿ ಗ್ರಹರ ಅವಕೃಪೆಗೆ ಪಾತ್ರರಾಗಿರುವ ಇಂದು ನೀವು ಬಹಳ ಎಚ್ಚರಿಕೆಯಿಂದ ಕಾರ್ಯವನ್ನು ನಿರ್ವಹಿಸಬೇಕಾಗುವುದು. ಇಲ್ಲವೆ ಅಪವಾದಗಳು ಸುತ್ತುವರಿಯುವವು.

ವೃಷಭ:- ಆರೋಗ್ಯದಲ್ಲಿ ಸುಧಾರಣೆ ಕಂಡು ಬರುವುದರಿಂದ ಅನಗತ್ಯ ತಲ್ಲಣಗಳನ್ನು ಬಿಡಿರಿ. ಮನೋನಿಯಾಮಕ ರುದ್ರ ದೇವರನ್ನು ಭಜಿಸಿರಿ. ಈ ದಿನ ಹಸುವಿಗೆ ತೊಗರಿ ಬೇಳೆಯನ್ನು ಮತ್ತು ಸ್ವಲ್ಪ ಬೆಲ್ಲವನ್ನು ತಿನ್ನಿಸಿರಿ. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

ಮಿಥುನ:- ಮನೆಯಿಂದ ಹೊರಡುವಾಗ ಲಕ್ಷ್ಮೀನಾರಸಿಂಹ ದೇವರನ್ನು ಸ್ಮರಿಸಿಕೊಂಡು ಹೊರಗೆ ಹೊರಡಿರಿ. ಮನಸ್ಸಿನಲ್ಲಿ ಇಲ್ಲದ ವಿಚಾರಗಳನ್ನು ತುಂಬಿಕೊಂಡು ವಾಹನ ಚಲಾಯಿಸದಿರಿ. ಬಹುಮುಖ್ಯ ಕೆಲಸಗಳಿಗೆ ನೀಡುವ ಪರವಾನಗಿ ಪತ್ರವನ್ನು ಓದಿ ಸಹಿ ಮಾಡಿರಿ.

ಕಟಕ:- ನಿಮ್ಮ ನಿರೀಕ್ಷೆಯನ್ನು ಮೀರಿ ಈ ದಿನ ಕೆಲಸ ಕಾರ್ಯಗಳು ನಡೆಯುವುದು. ಪರಾಕ್ರಮ ಸ್ಥಾನದಲ್ಲಿ ಗುರುವು ನಿಮಗೆ ಹೆಚ್ಚಿನ ಧೈರ್ಯ ತುಂಬುವರು ಮತ್ತು ಶನಿ ಮಹಾರಾಜರು ಆರ್ಥಿಕ ಸಬಲತೆಯನ್ನು ತಂದು ಕೊಡುವರು.

ಸಿಂಹ:- ನೀವು ಧೈರ್ಯಶಾಲಿಗಳೆಂಬ ಮಾತು ನಿಜ. ಆದರೆ ಕೆಲವು ಜವಾಬ್ದಾರಿಗಳ ಕಹಿ ಅನುಭವವು ಇಂದಿನ ಕಾರ್ಯದಲ್ಲಿ ನೆನಪಾಗಿ ನೂತನ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ನೆಪ ಹುಡುಕುವಿರಿ. ಹಾಗೇ ಮಾಡದೆ ಜವಾಬ್ದಾರಿಯನ್ನು ಹೊತ್ತುಕೊಳ್ಳಲು ತಯಾರಾಗಿರಿ, ಅನುಕೂಲವಾಗುವುದು.

ಕನ್ಯಾ:- ನಿಮ್ಮ ಅನೇಕ ರೀತಿಯ ಹೊಸ ಸಂಪರ್ಕಗಳು ನಿಮ್ಮನ್ನು ಹುರಿದುಂಬಿಸುವುದು. ಮತ್ತು ಮನದಲ್ಲಿ ನೂತನ ಕಾರ್ಯವನ್ನು ಹಮ್ಮಿಕೊಳ್ಳಲು ಸಹಕಾರಿಯಾಗುವುದು. ನಿಮ್ಮ ಗೆಳೆಯರು ನಿಮ್ಮ ಬುದ್ಧಿಮತ್ತೆಯನ್ನು ಕೊಂಡಾಡುವರು.

ತುಲಾ:- ಮಾಡುವ ಕೆಲಸದಲ್ಲಿ ಒಂದು ಕ್ರಮತೆ ಇರಲಿ. ಒಂದನ್ನು ಅರ್ಧಕ್ಕೆ ಬಿಟ್ಟು ಮತ್ತೊಂದು ಕೆಲಸವನ್ನು ಆರಂಭಿಸದಿರಿ. ಸಾಲ ಕೊಟ್ಟವರು ಇಂದು ನಿಮ್ಮ ಮೇಲೆ ಒತ್ತಡ ಹೇರುವ ಸಾಧ್ಯತೆ ಇದೆ. ಆದರೆ ಇಂದು ಸ್ವಲ್ಪವಾದರೂ ಸಾಲ ತೀರಿಸುವುದು ಕ್ಷೇಮ.

ವೃಶ್ಚಿಕ:- ಬೆಳ್ಳಗಿರುವುದೆಲ್ಲಾ ಹಾಲಲ್ಲ ಎಂಬ ಸತ್ಯ ಗೊತ್ತಿದ್ದರೂ ಮತ್ತೆ ಮತ್ತೆ ಎಡುವುತ್ತಿದ್ದೀರಿ. ಸ್ನೇಹಿತನ ಮಾತಿಗೆ ಮರುಳಾಗಿ ಹಣವನ್ನು ಕೊಡುವಿರಿ. ಆದರೆ ಅದು ಪುನಃ ವಾಪಾಸ್ಸು ಬರುವ ಸಾಧ್ಯತೆ ಕಡಿಮೆ ಇರುತ್ತದೆ.

ಧನಸ್ಸು:- ಮನೆಯಲ್ಲಿ ಮತ್ತು ಕಚೇರಿಯಲ್ಲಿ ನಿಮ್ಮ ಕಾರ್ಯವೈಖರಿಗೆ ಇತರೆಯವರು ಬೇಸರ ವ್ಯಕ್ತಪಡಿಸುವರು. ಅದಕ್ಕಾಗಿ ಚಿಂತಿಸುವ ಕಾರಣವಿಲ್ಲ. ಗ್ರಹಗತಿಗಳು ಕೆಟ್ಟಾಗ ಮಡದಿ ಮಕ್ಕಳೇ ದೂರುವರು. ಮೌನವಾಗಿ ಭಗವಂತನನ್ನು ಪ್ರಾರ್ಥಿಸಿರಿ.

ಮಕರ:- ಇಂದಿನ ಕೆಲಸ ಕಾರ್ಯಗಳು ಸುಗಮವಾಗಿ ನಡೆಯುವವು. ಬಂಧು ಬಾಂಧವರು ನಿಮ್ಮ ಸಹಾಯಕ್ಕೆ ಬರುವರು. ವಿವಿಧ ಮೂಲಗಳಿಂದ ಬರಬೇಕಾದ ಹಣವು ಇಂದು ನಿಮ್ಮ ಕೈಸೇರುವ ಸಾಧ್ಯತೆ ಇರುತ್ತದೆ.

ಕುಂಭ:- ಹೊಸ ಹೊಸ ಚಿಂತನೆಗಳು ಇಂದು ಸಾಕಾರಗೊಳ್ಳುವವು. ನಿಮ್ಮ ಜೀವನದ ಮಾರ್ಗದರ್ಶಕರಿಂದ ಇಂದು ಹೆಚ್ಚಿನ ಮಾಹಿತಿ ದೊರೆಯುವುದು. ಹಣಕಾಸಿನ ಸ್ಥಿತಿಯು ಉತ್ತಮವಾಗಿರುವುದು.

ಮೀನ:- ವೃತ್ತಿಯಲ್ಲಿ ಅನುಕೂಲವಾಗುವುದು. ನಿಮ್ಮ ಕಾರ್ಯ ಯೋಜನೆಗಳಿಗೆ ಹಸಿರು ನಿಶಾನೆ ದೊರೆಯುವುದು. ನಿಮ್ಮ ಬರಹಗಳಿಗೆ ಹೆಚ್ಚಿನ ಬೇಡಿಕೆ ಬರುವುದು. ಈ ದಿನ ಆರೋಗ್ಯದ ಕಡೆ ಗಮನ ನೀಡುವುದು ಒಳ್ಳೆಯದು.


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


Namaskāra नमस्कार (salutation)


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>