Quantcast
Channel: VijayKarnataka
Viewing all articles
Browse latest Browse all 6795

ಕ್ವಾರ್ಟರ್‌ ಫೈನಲ್‌ಗೆ ಸೈನಾ, ಸಿಂಧೂ

$
0
0

ಆಲ್‌ ಇಂಗ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌

ಬರ್ಮಿಂಗ್‌ಹ್ಯಾಮ್‌ (ಇಂಗ್ಲೆಂಡ್‌): ಭರ್ಜರಿ ಪ್ರದರ್ಶನ ನೀಡಿದ ಭಾರತದ ತಾರೆಗಳಾದ ಸೈನಾ ನೆಹ್ವಾಲ್‌ ಮತ್ತು ಪಿ.ವಿ ಸಿಂಧೂ, ಇಲ್ಲಿ ನಡೆಯುತ್ತಿರುವ ಆಲ್‌ ಇಂಗ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನ ಮಹಿಳಾ ಸಿಂಗಲ್ಸ್‌ನಲ್ಲಿ ಕ್ವಾರ್ಟರ್‌ ಫೈನಲ್‌ ತಲುಪಿದ್ದಾರೆ.

ಇಲ್ಲಿನ ಬಾಕ್ಲೇರ್‍ಕಾರ್ಡ್‌ ಅರೆನಾದಲ್ಲಿ ಗುರುವಾರ ನಡೆದ ಪ್ರಿ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಮಿಂಚಿದ ಸಿಂಧೂ 21-12, 21-4 ಅಂತರದ ನೇರ ಗೇಮ್‌ಗಳಿಂದ ಇಂಡೋನೇಷ್ಯಾದ ಆಟಗಾರ್ತಿ ದಿನಾರ್‌ ದಿಯಾ ಅಯುಸ್ಟೈನ್‌ ವಿರುದ್ಧ ಸುಲಭ ಜಯ ದಾಖಲಿಸಿ ಅಂತಿಮ 8ರ ಘಟ್ಟ ತಲುಪಿದ್ದಾರೆ.

2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಸಾಧನೆ ಮಾಡಿದ್ದ ಸಿಂಧೂ, ಕೇವಲ 30 ನಿಮಿಷಗಳಲ್ಲಿ ವಿಶ್ವದ 39ನೇ ರಾರ‍ಯಂಕ್‌ನ ಆಟಗಾರ್ತಿ ಎದುರು ಜಯ ದಾಖಲಿಸಿದರು.

ಸೈನಾಗೆ ಭರ್ಜರಿ ಗೆಲುವು

ಭಾರತದ ಅನುಭವಿ ಆಟಗಾರ್ತಿ ಸೈನಾ ನೆಹ್ವಾಲ್‌, ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ 21-18, 21-10 ಅಂತರದ ನೇರ ಗೇಮ್‌ಗಳಿಂದ ಜರ್ಮನಿಯ ಫ್ಯಾಬಿಯಾನಿ ಡಿಪ್ರೆಜ್‌ ಅವರನ್ನು ಮಣಿಸಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಇದಕ್ಕೂ ಮುನ್ನ ಮೊದಲ ಸುತ್ತಿನಲ್ಲಿ 21-15, 21-14 ಅಂತರದ ಗೇಮ್‌ಗಳಿಂದ ಹಾಲಿ ಚಾಂಪಿಯನ್‌ ಜಪಾನ್‌ನ ಆಟಗಾರ್ತಿ ನಜೊಮಿ ಒಕುಹರಗೆ ಆಘಾತ ನೀಡಿ ಪ್ರಿ ಕ್ವಾರ್ಟರ್‌ ಹಂತ ತಲುಪಿದ್ದರು.

ಪ್ರಣೋಯ್‌ಗೆ ನಿರಾಸೆ

ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಭಾರತದ ಏಕೈಕ ಭರವಸೆಯಾಗಿದ್ದ ಎಚ್‌.ಎಸ್‌ ಪ್ರಣೋಯ್‌ ನಿರಾಸೆ ಅನುಭವಿಸಿದ್ದಾರೆ. ಮೊದಲ ಸುತ್ತಿನಲ್ಲಿ ಪ್ರಯಾಸದ ಗೆಲುವು ದಾಖಲಿಸಿದ್ದ ಪ್ರಣೋಯ್‌, ಪ್ರಿ ಕ್ವಾರ್ಟರ್‌ ಹಂತದಲ್ಲಿ 13-21, 5-21ರ ಅಂತರದಲ್ಲಿ 7ನೇ ಶ್ರೇಯಾಂಕಿತ ಆಟಗಾರ ಚೀನಾದ ತಿಯಾನ್‌ ಹೋವಿ ಎದುರು ಸುಲಭವಾಗಿ ಸೋಲೊಪ್ಪಿಕೊಂಡರು.

ಇದಕ್ಕೂ ಮೊದಲು ಭಾರತದ ನಂ.1 ಸಿಂಗಲ್ಸ್‌ ಆಟಗಾರ ಕಿಡಂಬಿ ಶ್ರೀಕಾಂತ್‌ ಹೋರಾಟ ಪ್ರದರ್ಶಿಸಿದರೂ 19-21, 21-19, 12-21 ಅಂತರದ ಗೇಮ್‌ಗಳಿಂದ ಚೀನಾದ ಜಾವೊ ಜುನ್ಪೆಂಗ್‌ ವಿರುದ್ಧ ಮೊದಲ ಸುತ್ತಿನಲ್ಲೇ ಮುಗ್ಗರಿಸಿದರು. ಅಲ್ಲದೆ ಅಜಯ್‌ ಜಯರಾಮ್‌ ಕೂಡ ಆರಂಭದಲ್ಲೇ ಸೋತು ಹೊರ ಬಿದ್ದಿದ್ದಾರೆ. ಈ ಮಧ್ಯೆ ಮಹಿಳಾ ಹಾಗೂ ಪುರುಷರ ಡಬಲ್ಸ್‌ ವಿಭಾಗಗಳಲ್ಲಿಯೂ ಭಾರತದ ಸವಾಲು ಅಂತ್ಯಗೊಂಡಿದೆ.


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ತುಳು ತೆರೆಗೆ ಸೋನಿಯಾ ಎಂಟ್ರಿ


BIG NEWS : ಶಾಲೆಗಳ ಪ್ರಥಮ ಮಾನ್ಯತೆ, ಮಾನ್ಯತೆ ನವೀಕರಣದ ಕುರಿತು ‘ಶಿಕ್ಷಣ ಇಲಾಖೆ’ಯಿಂದ...


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>