Quantcast
Channel: VijayKarnataka
Viewing all articles
Browse latest Browse all 6795

ಟಿಪ್ಪು ಮದ್ದಿನ ಮನೆ ಸ್ಥಳಾಂತರ ಸ್ಥಳಕ್ಕೆ ಸಂಸದ ಭೇಟಿ

$
0
0

ಶ್ರೀರಂಗಪಟ್ಟಣ: ಬೆಂಗಳೂರು-ಮೈಸೂರು ಜೋಡಿ ರೈಲು ಮಾರ್ಗಕ್ಕೆ ಅಡ್ಡಿಯಾಗಿದ್ದ ಟಿಪ್ಪು ಆಡಳಿತ ಕಾಲದ ಮದ್ದಿನ ಮನೆ ಸ್ಥಳಾಂತರ ಸ್ಥಳಕ್ಕೆ ಮೈಸೂರು ಹಾಗೂ ಕೊಡಗು ಸಂಸದ ಪ್ರತಾಪ್‌ ಸಿಂಹ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಂತರ ಮಾತನಾಡಿದ ಅವರು, 900 ಮೆಟ್ರಿಕ್‌ ಟನ್‌ ತೂಕದ ಸ್ಮಾರಕವೊಂದನ್ನು ಅದು ಹೇಗಿದೆಯೋ ಹಾಗೆ ಯಂತ್ರಗಳ ಸಹಾಯದಿಂದ ಸ್ಥಳಾಂತರ ಮಾಡುತ್ತಿರುವುದು ಭಾರತದಲ್ಲಿ ಮೊಟ್ಟ ಮೊದಲು. ಇದೊಂದು ಅವಿಸ್ಮರಣೀಯವಾದ ಪ್ರಯತ್ನ, ಮುಂದಿನ ದಿನಗಳಲ್ಲಿ ಪುರಾತನ ಕಾಲದ ಸ್ಮಾರಕಗಳನ್ನು ಇದೇ ಮಾದರಿಯಲ್ಲಿ ಉಳಿಸಿಕೊಳ್ಳಬಹುದು ಎಂಬುದನ್ನು ಈ ಯೋಜನೆ ಸಾಕ್ಷೀಕರಿಸಿದೆ. ಭಾರತೀಯ ರೈಲ್ವೆ ಇಲಾಖೆ ಅಧಿಕಾರಿಗಳು ಅಮೇರಿಕಾದ ತಂತ್ರಜ್ಞರ ಜತೆಯಲ್ಲಿ ಮದ್ದಿನ ಮನೆ ಸ್ಥಳಾಂತರಕ್ಕೆ ಅವಿರತ ಶ್ರಮಿಸುತ್ತಿದ್ದಾರೆ ಎಂದರು.

ಜೋಡಿ ರೈಲು ಮಾರ್ಗಕ್ಕೆ ಅಡ್ಡಿಯಾಗಿದ್ದ ಮದ್ದಿನ ಮನೆ ಸ್ಥಳಾಂತರ ಬೆನ್ನಲ್ಲೇ ಬಾಕಿ ಉಳಿದಿದ್ದ ಕಾಮಗಾರಿ ಮುಗಿಯಲಿದ್ದು, ಶೀಘ್ರ ಜೋಡಿ ರೈಲು ಮಾರ್ಗವನ್ನು ಸಾರ್ವಜನಿಕ ಸೇವೆಗೆ ಒದಗಿಸಲಾಗುವುದು. ಹೆದ್ದಾರಿಯಲ್ಲಿ ವಾಹನ ದಟ್ಟಣೆ ನಿಯಂತ್ರಣಕ್ಕೆ ಈ ಯೋಜನೆ ಅತ್ಯಗತ್ಯವಾಗಿತ್ತು ಎಂದು ಹೇಳಿದರು.

ರೈಲ್ವೆ ಇಲಾಖೆ ಡೆಪ್ಯೂಟಿ ಮ್ಯಾನೇಜರ್‌ ರವಿಚಂದ್ರನ್‌ ಮಾತನಾಡಿ, ಯುನಿಫೈಡ್‌ ಜಾಕಿಂಗ್‌ ಯಂತ್ರದ ಸಹಾಯದಿಂದ ಸ್ಮಾರಕವನ್ನು ಸ್ಥಳಾಂತರ ಮಾಡಲಾಗುತ್ತಿದೆ. ಮೊದಲ ದಿನ 30 ಮೀಟರ್‌ ದೂರ ಸ್ಮಾರಕವನ್ನು ಮುಂದಕ್ಕೆ ನೂಕಲಾಗಿತ್ತು. ಎರಡನೆ ದಿನ 20 ಮೀಟರ್‌ ದೂರ ನೂಕಲಾಗಿದೆ. ಇನ್ನು ಮೂರು ದಿನದಲ್ಲಿ 100 ಮೀಟರ್‌ ದೂರಕ್ಕೆ ಸ್ಮಾರಕವನ್ನು ಸ್ಥಳಾಂತರ ಮಾಡಲಾಗುವುದು ಎಂದು ತಿಳಿಸಿದರು.


Viewing all articles
Browse latest Browse all 6795

Trending Articles


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


Namaskāra नमस्कार (salutation)


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


‘ವ್ಯಾಪಾರ’ದಲ್ಲಿ ವೃದ್ಧಿಯಾಗಲು ಹೀಗೆ ಮಾಡಿ….


ಅಪ್ಪ ಅಮ್ಮ ಬೈಯ್ತಾರೆ ಅಂತ ಬೆಂಗಳೂರಿಂದ ಚಳ್ಳಕೆರೆಗೆ ಹೋದ ಮಕ್ಕಳು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರಲು ಮಂಗಳಮುಖಿಯಿಂದ ಒಂದು ನಾಣ್ಯ ಪಡೆದು ಹೀಗೆ ಮಾಡಿ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>