Quantcast
Channel: VijayKarnataka
Viewing all articles
Browse latest Browse all 6795

ಸತ್ಯದೇವ್‌ ಐಪಿಎಸ್‌: ಕನ್ನಡದ ನೇಟಿವಿಟಿಗೆ ದೂರ

$
0
0

-ಸ್ಟೀವನ್‌ ರೇಗೊ

ಪ್ರೇಕ್ಷಕನ ಎದೆಬಡಿತ ಏರಿಳಿಸುವ ಹಿನ್ನೆಲೆ ಸಂಗೀತದ ಜತೆಗೆ ಪ್ರೀತಿಯ ಅಮಲನ್ನು ನವೀರಾಗಿ ಲೇಪಿಸುತ್ತಾ ಸಾಗುವ ಕಥಾ ದಾಟಿ, ಇವುಗಳನ್ನು ಮೀರಿ ನಿಲ್ಲುವ ಅಪ್ಪ-ಮಗಳ ಬಾಂಧವ್ಯ, ಅಚಾನಕ್‌ ಆಗಿ ಎದುರಾಗುವ ನಾಯಕಿಯರು, ಚಿತ್ರದ ಉದ್ದಕ್ಕೂ ಸಿಗುವ ತಿರುವುಗಳು, ನಾಯಕ- ಖಳನಾಯಕ ಹೊಡೆದಾಟಗಳ ಮೂಲಕ ಸತ್ಯದೇವ್‌ ಐಪಿಎಸ್‌ ಚಿತ್ರ ಗಮನ ಸೆಳೆಯುತ್ತದೆ.

ತಮಿಳಿನಲ್ಲಿ ಬಂದಿದ್ದ 'ಎನ್ನೈ ಅರಿಂದಾಲ್‌' ಕನ್ನಡಕ್ಕೆ ಡಬ್‌ ಸತ್ಯದೇವ್‌ ಐಪಿಎಸ್‌ ಆಗಿ ಬಂದಿದೆ. ತಮಿಳಿನ ಸ್ಟಾರ್‌ ನಟ ಅಜಿತ್‌ (ಸತ್ಯದೇವ್‌) ಇಡೀ ಚಿತ್ರವನ್ನು ಆವರಿಸಿಕೊಂಡಿದ್ದಾರೆ. ಪ್ರತಿ ಫ್ರೇಮ್‌ನಲ್ಲೂ ಅವರ ಮಿಂಚಿದೆ. ಇವರಿಗೆ ಎದುರಾಗಿ ವಿಲನ್‌ ಪಾತ್ರದಲ್ಲಿ ನಟಿಸಿರುವ ಅರುಳ್‌ ವಿಜಯ್‌ ಚಿತ್ರಕ್ಕೆ ಮತ್ತಷ್ಟು ಶಕ್ತಿ ತುಂಬಿದ್ದಾರೆ. ಡಬ್ಬಿಂಗ್‌ ಚಿತ್ರ ಎಂಬ ಕಾರಣಕ್ಕೆ ಕುತೂಹಲ ಕೆರಳಿಸಿದ್ದ ಈ ಚಿತ್ರವನ್ನು ಒಮ್ಮೆ ನೋಡಬಹುದು. ಆದರೆ ಕನ್ನಡ ನೇಟಿವಿಟಿ ಅಂತ ನೋಡಿದರೆ ಕೊಂಚ ನಿರಾಶೆಯಾಗುತ್ತದೆ. ಪಾತ್ರಗಳೆಲ್ಲ ಕನ್ನಡದಲ್ಲೇ ಮಾತನಾಡಿದರೂ ಅದು ಕನ್ನಡ ಚಿತ್ರ ಅಂತ ಅನಿಸುವುದೇ ಇಲ್ಲ.

ಮೊದಲ ಭಾಗದಲ್ಲಿ ಸತ್ಯದೇವ್‌ ಹಾಗೂ ತನ್ಮಯ ಜತೆಗಿನ ಮಾತುಕತೆಯಿಂದ ನಿಧಾನವಾಗಿ ಚಿತ್ರ ಫ್ಲ್ಯಾಶ್‌ಬ್ಯಾಕ್‌ ಕಡೆ ತಿರುಗುತ್ತದೆ. ಮನಸ್ಸು ಹೇಳಿದ ವಿಚಾರದ ಕಡೆ ಹೆಚ್ಚು ಗಮನ ಕೊಟ್ಟು ಮೆಲ್ಲನೆ ತನಿಗಿಷ್ಟವಾದ ವೃತ್ತಿ ಆರಿಸಿಕೊಂಡು ಮುಂದೆ ಬರಬೇಕು ಎನ್ನುವ ತಂದೆಯ ಸಲಹೆ ಒಪ್ಪಿಕೊಂಡ ಸತ್ಯದೇವ್‌, ಒಳ್ಳೆಯದು- ಕೆಟ್ಟದ್ದರ ನಡುವಿನ ಗೆರೆಯಲ್ಲಿ ನಿಂತು ಅಲೋಚನೆ ಮಾಡುತ್ತಿರುವಂತೆ ಅವರ ತಂದೆ ಗ್ಯಾಂಗ್‌ಸ್ಟರ್‌ಗೆ ಬಲಿಯಾಗುತ್ತಾರೆ. ಇದರಿಂದ ಆಘಾತಗೊಳ್ಳುವ ನಾಯಕ, ತಂದೆ ಹತ್ಯೆಗೆ ಸೇಡು ತೀರಿಸಿಕೊಳ್ಳುವುದು ಸೇರಿ ತನ್ನದಲ್ಲದ ಮಗುವನ್ನು ಲಾಲನೆ ಮಾಡುವುದು, ಅಲ್ಲಿ ವ್ಯಕ್ತವಾಗುವ ಭಾವನೆಗಳಿಗೆ ನ್ಯಾಯ ಒದಗಿಸುವುದೇ ಸವಾಲಿನಂತೆ ಕಾಣುತ್ತದೆ.

ಹೀರೋ ಮತ್ತು ವಿಲನ್‌ ಹೋರಾಟಗಳ ನಡುವೆ ಇದ್ದಕ್ಕಿದ್ದಂತೆ ಕಾಣಿಸಿಕೊಳ್ಳುವ ತ್ರಿಷಾ (ಇಮಾನಿಕಾ) ಇಡೀ ಚಿತ್ರದ ಟರ್ನಿಂಗ್‌ ಪಾಯಂಟ್‌. ಈ ದೃಶ್ಯಗಳನ್ನು ನಿರ್ದೇಶಕ ಗೌತಮ್‌ ವಾಸುದೇವ್‌ ಮೆನನ್‌ ಅದ್ಭುತವಾಗಿ ಚಿತ್ರಿಸಿದ್ದಾರೆ. ಇಬ್ಬರ ನಡುವಿನ ಪ್ರೀತಿಯನ್ನು ಡಿಫರೆಂಟಾಗಿ ತೋರಿಸಿದ್ದಾರೆ. ಇನ್ನೇನು ಆ ಪ್ರೀತಿ ಮದುವೆ ಮಂಟಪಕ್ಕೆ ಬರುತ್ತೆ ಅನ್ನುವ ಹೊತ್ತಿನಲ್ಲಿ ಇಮಾನಿಕಾಳ ಕೊಲೆ ಆಗಿಬಿಡುತ್ತದೆ. ಈ ವೇಳೆ ಇಮಾನಿಕಾ ಮಗಳು ಈಶಾಳಿಗಾಗಿ ಬದುಕಲು ನಿರ್ಧರಿಸುವ ಸತ್ಯದೇವ್‌ ಪಾತ್ರದಲ್ಲಿ ಅಜಿತ್‌ ಅದ್ಭುತವಾಗಿ ನಟಿಸಿದ್ದಾರೆ. ಇದೇ ಸಮಯದಲ್ಲಿ ಅನುಷ್ಕಾ ಶೆಟ್ಟಿ (ತನ್ಮಯ) ಜತೆಗೆ ಸ್ನೇಹ ಬೆಳೆದು, ಅದು ಪ್ರೀತಿಗೆ ತಿರುಗುವ ಹೊತ್ತಿಗೆ ವಿಲನ್‌ ಅಬ್ಬರ ಜೋರಾಗುತ್ತದೆ. ಉಳಿದ ಕತೆ ಬೇಕಾದರೆ ಸಿನಿಮಾವನ್ನೇ ನೋಡಬೇಕು.

ಮೊದಲೇ ಹೇಳಿದಂತೆ ಇದು ಕಂಪ್ಲೀಟ್‌ ಅಜಿತ್‌ ಸಿನಿಮಾ. ಅವರ ನಟನೆ ಬಗ್ಗೆ ಮಾತನಾಡುವಂತಿಲ್ಲ. ಅರುಳ್‌ ವಿಜಯ್‌ ಅಂತೂ ಅಜಿತ್‌ ಪೈಪೋಟಿ ಕೊಟ್ಟಂತೆ ನಟಿಸಿದ್ದಾರೆ. ತ್ರಿಷಿಕಾ ಪಾತ್ರ ಪುಟ್ಟದಾದರೂ ಹೆಚ್ಚು ಗಮನ ಸೆಳೆಯುತ್ತಾರೆ. ಅನುಷ್ಕಾ ಶೆಟ್ಟಿ ಪರವಾಗಿಲ್ಲ.

ಉಳಿದಂತೆ ಹ್ಯಾರಿಸ್‌ ಜಯರಾಜ್‌ ಸಂಗೀತ ಚಿತ್ರಕ್ಕೆ ಪೂರಕವಾಗಿದೆ. ಆದರೆ ಹಾಡುಗಳಲ್ಲಿ ಕನ್ನಡತನ ಒಂದಿಷ್ಟೂ ಇಲ್ಲ. ಇನ್ನು ಡಬ್ಬಿಂಗ್‌ ಹೇಳಿರುವ ಕಲಾವಿದರು ಸಾಕಷ್ಟು ಸರ್ಕಸ್‌ ಮಾಡಿದಂತೆ ತೋರುತ್ತದೆ. ಪಾತ್ರಗಳು ಪಕ್ಕಾ ತಮಿಳಿನಲ್ಲೇ ಇರುವುದರಿಂದ ಅವಕ್ಕೆ ಕನ್ನಡದ ಲೇಪ ಹಚ್ಚಲು ಅವರು ಕಷ್ಟಪಟ್ಟಿದ್ದಾರೆ. ಬಹುತೇಕ ಕಡೆ ಪಾತ್ರಗಳು ನಮ್ಮ ಭಾಷೆಗೆ ಸಿಂಕ್‌ ಆಗುವುದೇ ಇಲ್ಲ. ಕೊನೆಗೆ ಸಂಕಲನ, ಛಾಯಾಗ್ರಾಹಣ ಅದ್ಭುತ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>