Quantcast
Channel: VijayKarnataka
Viewing all articles
Browse latest Browse all 6795

ಬೃಹತ್‌ ಸಾಧು ಸಂತರ ಸಮಾವೇಶ

$
0
0

ಶಹಾಪುರ: ಸಾಧು,ಸಂತರ, ಮಹಾಂತರ ನೆಲೆಬೀಡಾದ ಸಗರನಾಡಿನ ಶಹಾಪುರ ತಾಲೂಕಿನ ಮೂಡಬೂಳದ ಅವಧೂತ ಸದ್ಗುರು ರಂಗಲಿಂಗೇಶ್ವರ ಗುರುಗಳ ಸವಿ ನೆನಪಿಗಾಗಿ ಮಾರ್ಚ 27ರಂದು 101 ಸಾಧು ಸಂತರ ಬೃಹತ್‌ ಶಹಾಪುರದಲ್ಲಿ ಸಮಾವೇಶ ಜರುಗಲಿದೆ ಎಂದು ತಾಲೂಕಿನ ಶಿರವಾಳ ವಲಯ ಕಸಾಪ ಅಧ್ಯಕ್ಷ ಮಲ್ಲಣ್ಣ ಹೊಸಮನಿ ತಿಳಿಸಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿ ಸಮಾವೇಶದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿ, ನಗರದಲ್ಲಿ ಪ್ರಪ್ರಥಮ ಬಾರಿಗೆ ಚರಬಸವೇಶ್ವರ ಗದ್ದುಗೆ ಕಲ್ಯಾಣ ಮಂಟಪದಲ್ಲಿ 27ರಂದು ಬೆಳಿಗ್ಗೆ 10.30ಗಂಟೆಗೆ ಬೃಹತ್‌ ಸಾಧು ಸಂತರ ಸಮಾವೇಶ ಉದ್ಘಾಟನೆ ನಡೆಯಲಿದೆ. ಚರಬಸವೇಶ್ವರ ಸಂಸ್ಥಾನದ ಬಸವಯ್ಯ ಶರಣರು, ಯಾದಗಿರಿ ದಾಳಬಾಳ ಮಠದ ವೀರೇಶ ಸ್ವಾಮಿಗಳು,ವೀರಗೊಟ್ಟದ ಆದಿಲಿಂಗೇಶ್ವರ ಸಂಸ್ಥಾನದ ಅಡವಿಲಿಂಗ ಮಹಾರಾಜರು, ಹೋತಪೇಟ ಕೈಲಾಶ ಆಶ್ರಮದ ಶಿವಲಿಂಗ ಶರಣರು,ಸಿದ್ಧಾರೂಢ ಮಠದ ಮಾತೋಶ್ರೀ ಜ್ಞಾನೇಶ್ವರಿ ಅಮ್ಮ, ಪಂಚಾಚಾರ್ಯ ಸೇವಾಭೂಷಣ ಕಲಬುರ್ಗಿಯ ಗಿರಿಯಪ್ಪ ಮುತ್ಯಾ ಅವರು ಸಾನ್ನಿಧ್ಯವನ್ನು ವಹಿಸಿ ಅನುಭವದ ಆರ್ಶಿವಚನ ನೀಡುವರು.

ತಾಲೂಕಿನ ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷ ಲಿಂಗಣ್ಣ ಪಡಶೆಟ್ಟಿ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ತಾಲೂಕು ಕಸಾಪ ಅಧ್ಯಕ್ಷ ಸಿದ್ದಲಿಂಗಣ್ಣ ಆನೆಗುಂದಿ ಆಗಮಿಸುವರು. ರಾಘವೇಂದ್ರ ಹಾರಣಗೇರಾ ಮತ್ತು ನಿವೃತ್ತ ಉಪನ್ಯಾಸಕ ಸೈಯದ್‌ ಚಾಂದ್‌ ಪಾಶಾ ಉಪನ್ಯಾಸ ನೀಡಲಿದ್ದಾರೆ.

ಸಮಾವೇಶದಲ್ಲಿ 101 ಕಾವಿಧಾರಿಗಳಿಗೆ ಸಮವಸ್ತ್ರ ವಿತರಿಸಲಾಗುವುದು. ನಾಡಿನ ನೆಲ,ಜಲ,ಸಂಸ್ಕೃತಿ ಸಂಪ್ರದಾಯಗಳನ್ನು ಮುಂದಿನ ಪೀಳಿಗೆಗೆ ರವಾನಿಸಲು ಈ ಸಮಾವೇಶ ದಾರಿ ದೀಪವಾಗಲಿ ಎಂದು ಅಭಿಪ್ರಾಯಿಸಿದರು. ಮಾನಪ್ಪ ಬಡಿಗೇರ ಮೂಡಬೂಳ,ಸಂಗಣ್ಣಗೌಡ ಮಡ್ನಾಳ,ಮಾರ್ಥಂಡಪ್ಪ ಶಿರವಾಳ,ಸಂಗಣ್ಣ ಹತ್ತಿ ಹೊನ್ನಕಿರಣಗಿ ಉಪಸ್ಥಿತರಿದ್ದರು.


Viewing all articles
Browse latest Browse all 6795

Trending Articles


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಬಿಗ್‌ ನ್ಯೂಸ್: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟ -‌ ಈ ಬಾರಿಯೂ...


‘ಬಾಹುಬಲಿ’ಅಭಿಮಾನಿಗಳಿಗೆ ಗುಡ್ ನ್ಯೂಸ್ ಸುದ್ದಿ ! ಬರ್ತಿದೆ ‘ಪಾರ್ಟ್-3’


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ತುಳು ತೆರೆಗೆ ಸೋನಿಯಾ ಎಂಟ್ರಿ



<script src="https://jsc.adskeeper.com/r/s/rssing.com.1596347.js" async> </script>