ವಿಕ ವಿಶೇಷ ಅವಿಭಜಿತ ಕಲಬುರಗಿ ಜಿಲ್ಲೆ ಇದ್ದಾಗ ಏ. 2, 2005ರಂದು ಬಿಎಸ್ಎನ್ಎಲ್ ಟವರ್ ಅಳವಡಿಸಲಾಗಿದೆ. ಅಂದಿನ ಜಿಪಂ ಉಪ ಕಾರ್ಯದರ್ಶಿಗಳು ಒಪ್ಪಂದ ಮಾಡಿಕೊಂಡಿದ್ದರು. ಆಗ ಇದು ಸಮುದಾಯ ಆರೋಗ್ಯ ಕೇಂದ್ರವಾಗಿತ್ತು. ಮೇಲ್ದರ್ಜೆಗೇರಿ ಈಗ ತಾಲೂಕು ಆಸ್ಪತ್ರೆಯಾಗಿದೆ. ಟವರ್ ಕೂರಿಸಿದ ದಿನದಿಂದಲೇ ಬಾಡಿಗೆ ಆರಂಭವಾಗಿದೆ. ಬಿಎಸ್ಎನ್ಎಲ್ ಒಂದೇ ಒಂದು ತಿಂಗಳ ಬಾಡಿಗೆ ನೀಡಿಲ್ಲ. ಕಾರಣ ಸಹ ತಿಳಿಯುತ್ತಿಲ್ಲ. ಈ ಕುರಿತು ಆಸ್ಪತ್ರೆಯವರು ಪತ್ರ ಬರೆದರೆ, ಉತ್ತರವೂ ಬರುತ್ತಿಲ್ಲ. 10 ವರ್ಷಗಳ ಕಾಲ ಒಪ್ಪಂದ ಮಾಡಿಕೊಳ್ಳಲಾಗಿದೆ. ಏ. 1,2015ಕ್ಕೆ ಒಪ್ಪಂದ ಮುಗಿದಿದೆ. ಅಗ್ರಿಮೆಂಟ್ ವೇಳೆ ಪ್ರತಿ ತಿಂಗಳು ತಾಲೂಕು ಆಸ್ಪತ್ರೆಗೆ 750 ರೂ. ಬಾಡಿಗೆ ಕೊಡಬೇಕಿತ್ತು.ಆದರೆ, ಇದು ದಾಖಲಾತಿಯಲ್ಲಿ ಮಾತ್ರವಿದ್ದು ಹಣ ಸಂದಾಯ ಮಾಡಲು ಬಿಎಸ್ಎನ್ಎಲ್ ಮುಂದಾಗಿಲ್ಲ. ಬಾಡಿಗೆ ನಿರಾಕರಿಸುತ್ತಿರುವುದು ಗೊಂದಲ ಮೂಡಿಸಿದೆ. ತಾಲೂಕು ಆಸ್ಪತ್ರೆಯ ಕಟ್ಟಡ ಮೇಲೆ ಅಳವಡಿಸಿರುವ ಟವರ್ ಬೇರೆ ಕಡೆಗೆ ಸ್ಥಳಾಂತರ ಮಾಡುವ ಜತೆಗೆ ಒಪ್ಪಂದದ ಪ್ರಕಾರ ಬಾಡಿಗೆ ನೀಡುವಂತೆ ತಾಲೂಕು ಆರೋಗ್ಯಾಧಿಕಾರಿ ಡಾ. ಆರ್.ವಿ. ನಾಯಕ್ ಅವರು ಕಲಬುರಗಿ ಜಿಲ್ಲಾ ಟೆಲಿಕಾಂ ಅಧಿಕಾರಿಗೆ 8ಕ್ಕೂ ಹೆಚ್ಚು ಸಲ ಪತ್ರ ಬರೆದಿದ್ದಾರೆ. ಆದರೆ, ಇಲ್ಲಿಯವರೆಗೂ ಉತ್ತರ ಬಂದಿಲ್ಲ. ಬಾಡಿಗೆ ನೀಡುವ ಬಗ್ಗೆಯೂ ಸ್ಪಂದಿಸಿಲ್ಲ. ಸರಕಾರಿ ಆಸ್ಪತ್ರೆಗಳ ಕಟ್ಟಡ ಮೇಲೆ ಯಾವುದೇ ರೀತಿಯ ಟವರ್ಗಳನ್ನು ಅಳವಡಿಸಬಾರದು. ಅದರಿಂದಾಗಿ ರೋಗಿಗಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಹೀಗಾಗಿ, ಇದನ್ನು ತೆರವುಗೊಳಿಸಲು ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಮುಂದಾಗಬೇಕಿದೆ. ಬಿಎಸ್ಎನ್ಎಲ್ ಗೋಪುರ ಅಳವಡಿಸಿ 12 ವರ್ಷ ಆಗುತ್ತಿದೆ. ನಯಾಪೈಸೆ ಬಾಡಿಗೆ ನೀಡಿಲ್ಲ. ಟವರ್ ಬೇರೆಡೆ ಸ್ಥಳಾಂತರ ಮಾಡುವಂತೆ ಕಲಬುರಗಿ ಜಿಲ್ಲಾ ಟೆಲಿಕಾಂ ಅಧಿಕಾರಿಗಳಿಗೆ 8ಕ್ಕೂ ಹೆಚ್ಚು ಸಲ ಪತ್ರ ಬರೆದಿದ್ದೇನೆ. ಪ್ರತಿಕ್ತಿಯೆ ಮಾತ್ರ ಬಂದಿಲ್ಲ. ಹೀಗಾಗಿ ಇಲಾಖೆಯ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು. -ಡಾ.ಆರ್.ವಿ. ನಾಯಕ್, ತಾಲೂಕು ಆರೋಗ್ಯಾಧಿಕಾರಿ ತಾಲೂಕು ಸರಕಾರಿ ಆಸ್ಪತ್ರೆ, ಸುರಪುರ
ಯಾದಗಿರಿ: ಭಾರತೀಯ ಸಂಚಾರ ನಿಗಮ ನಿಯಮಿತದವರು ಸುರಪುರ ತಾಲೂಕು ಆಸ್ಪತ್ರೆಯ ಕಟ್ಟಡದ ಮೇಲುಗಡೆ ಬಿಎಸ್ಎನ್ಎಲ್ ಟವರ್ ಅಳವಡಿಸಿ 12 ವರ್ಷಗಳಾಗಿವೆ.ಆದರೂ, ಇಲ್ಲಿಯವರೆಗೂ ನಯಾಪೈಸೆ ಬಾಡಿಗೆ ನೀಡಿಲ್ಲ ಎಂಬ ಸೋಜಿಗದ ಸಂಗತಿ ಬೆಳಕಿಗೆ ಬಂದಿದೆ.
↧
12 ವರ್ಷದಿಂದ ಬಾಡಿಗೆ ಇಲ್ಲ,ಪತ್ರಕ್ಕೂ ಉತ್ತರವಿಲ್ಲ
↧