Quantcast
Channel: VijayKarnataka
Viewing all articles
Browse latest Browse all 6795

ಬೆಳಗ್ಗೆ ಬಾಳೆಹಣ್ಣು ತಿಂತೀರಾ ? ಜೋಕೆ !

$
0
0

ಬೆಳಗ್ಗಿನ ಉಪಾಹಾರಕ್ಕೆ ಬಾಳೆಹಣ್ಣು ಸೇವಿಸುವ ಅಭ್ಯಾಸವಿದೆಯೇ? ಹಾಗಾದರೆ ಜೋಕೆ!

ಅದನ್ನು ತಿನ್ನುವ ಕ್ರಮದಲ್ಲಿ ವ್ಯತ್ಯಾಸವಾದರೆ ದೇಹದ ಮೇಲೆ ಅಡ್ಡ ಪರಿಣಾಮ ಬೀರಬಹುದು. ಆದ್ದರಿಂದ ಬಾಳೆಹಣ್ಣಿನ ಡಯಟ್‌ ಹೇಗಿರಬೇಕು ಎಂದು ತಿಳಿಯಲು ಮುಂದೆ ಓದಿ:

ಕೆಲವರು ಬೆಳಗ್ಗಿನ ಉಪಾಹಾರಕ್ಕೆ ಬಾಳೆಹಣ್ಣು ಸೇವಿಸುತ್ತಾರೆ. ಹೀಗೆ ಮಾಡುವುದರಿಂದ ಮಧ್ಯಾಹ್ನ ಹಾಗೂ ರಾತ್ರಿ ಸೇವಿಸುವ ಆಹಾರದ ಪ್ರಮಾಣ ತಗ್ಗಿಸಬಹದು ಎಂಬುದು ಈ ಡಯಟ್‌ ಉದ್ದೇಶದಿಂದ ಈ ರೀತಿ ಮಾಡುತ್ತಾರೆ. ಆದರೆ ಬೆಳಗ್ಗೆ ಬಾಳೆಹಣ್ಣು ತಿಂದು ಮಧ್ಯಾಹ್ನ ಪಿಜ್ಜಾ, ಫ್ರೈಸ್‌ ಜತೆಗೊಂದಿಷ್ಟು ಸಿಹಿ, ಡಿನ್ನರ್‌ಗೆ ತಮಗೆ ಇಷ್ಟ ಬಂದ ಆಹಾರವನ್ನು ತಿಂದರೆ ಅಪಾಯಕಾರಿ ಪರಿಣಾಮ ಬೀರಬಹುದು ಎಂದು ಅಮೆರಿಕದ ಪೌಷ್ಠಿಕಾಂಶ ತಜ್ಞರು ಎಚ್ಚರಿಸುತ್ತಾರೆ.

'ಬಾಳೆಹಣ್ಣಿನಲ್ಲಿ ನಾರಿನಂಶ ಹೆಚ್ಚಿರುವುದರಿಂದ ಹೊಟ್ಟೆ ತುಂಬಿದ ಅನುಭವ ನೀಡುವುದು. ಆದರೆ, ತೂಕ ಕಳೆದುಕೊಳ್ಳುವ ಉದ್ದೇಶದಿಂದ ಈ ಡಯಟ್‌ ಪಾಲಿಸುವವರು ಮಧ್ಯಾಹ್ನ ಹಾಗೂ ರಾತ್ರಿ ಹಿತಮಿತ ಆಹಾರ ಸೇವಿಸುವ ಬದಲು ಪಿಜ್ಜಾ, ಫ್ರೈಸ್‌ ತಿಂದರೆ, ಉದ್ದೇಶ ಈಡೇರದು,ಎಂದು ಪೌಷ್ಠಿಕಾಂಶ ತಜ್ಞ ಕೆರ್ರಿ ಹೇಳುತ್ತಾರೆ.

'ಕೆಲವರ ಪಾಲಿಗೆ ಈ ಡಯಟ್‌ ಮಾರಕವಾಗಬಹುದು. ಇಡೀ ದಿನ ಸಿಕ್ಕಾಪಟ್ಟೆ ಚಾಕೋಲೆಟ್, ಸಿಹಿ ತಿನ್ನುವವರು ನಿಲ್ಲಿಸಿದರೆ ಸ್ವಲ್ಪ ತೂಕ ಕಳೆದುಕೊಳ್ಳಬಹುದು. ಖುಷಿ ಅಥವಾ ಬೇಸರವಾದಾಗ ತಿನ್ನುವ ರೂಢಿ ಇರುವವರು ರಾತ್ರಿ ಹೊತ್ತು ಮನಸೋಇಚ್ಛೆ ಆಹಾರ ಸೇವಿಸುವವರು. ಅದಕ್ಕೆ ಕಡಿವಾಣ ಹಾಕಿದರೆ, ತೂಕ ಇಳಿಸಬಹುದು. ಆದರೆ, ಬಾಳೆಹಣ್ಣುತಿಂದ ನಂತರ ಇಡೀ ದಿನ ಬೇಕಾದನ್ನು ತಿನ್ನಬಹುದು ಎಂದು ಭಾವಿಸದರೆ ಖಂಡಿತಾ ಅಪಾಯ,' ಎಂದು ಪೌಷ್ಠಿಕಾಂಶ ತಜ್ಞರು ಎಚ್ಚರಿಸಿದ್ದಾರೆ.

ಉಪಾಹಾರದ ಜತೆಗೆ ಬೆಚ್ಚಗಿನ ನೀರು ಕುಡಿಯುವುದು ಒಳ್ಳೆಯ ಐಡಿಯಾ. 'ಜೀರ್ಣಕ್ರಿಯೆಗೆ ಇದು ಸಹಕಾರಿ ಎಂದು ಹಲವರು ಭಾವಿಸುತ್ತಾರೆ. ಬೆಳಗಿನ ಹೊತ್ತು ಬಿಸಿ ನೀರು ಕುಡಿಯುವುದು ಕೆಲವರಿಗೆ ಅಭ್ಯಾಸ. ಬೆಳಗಿನ ಹೊತ್ತು ದ್ರವಾಹಾರ ಹೆಚ್ಚು ಸೇವಿಸುವುದು ಒಳ್ಳೆಯದು. ಆದರೆ, ಬಾಳೆಹಣ್ಣಿನ ಜತೆ ಬೆಚ್ಚಗಿನ ನೀರು ಯಾವ ರೀತಿ ಸಹಾಯಕಾರಿ ಗೊತ್ತಿಲ್ಲ,'ಎನ್ನುತ್ತಾರೆ.

ಬೆಳಗಿನ ಬನಾನಾ ಡಯಟ್‌, ಜೀವನ ಪೂರ್ತಿ ಪಾಲಿಸಲು ಅಸಾಧ್ಯ. ಬಹಳಷ್ಟು ಮಂದಿಗೆ ಇದರಿಂದ ಯಾವುದೇ ಪ್ರಯೋಜನ ಆಗದು. ಅದರಲ್ಲಿ ನಾರಿನಂಶ, ಪ್ರೋಟಿನ್‌, ಪೊಟ್ಯಾಸಿಯಂ ಇರುತ್ತದೆ. ಅದು ನಿಮ್ಮ ಡಯಟ್‌ ಭಾಗವಾಗಿರಬೇಕು ಅಷ್ಟೇ. ಆದರೆ, ಪೂರ್ತಿ ಬಾಳೆಹಣ್ಣು ಸೇವಿಸುವುದರಿಂದ ಯಾವುದೇ ಅನುಕೂಲ ಇಲ್ಲ,'ಎಂದು ಹೇಳಿದ್ದಾರೆ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಬಿಗ್‌ ನ್ಯೂಸ್: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟ -‌ ಈ ಬಾರಿಯೂ...


 ಕೌಟುಂಬಿಕ ಕಲಹ ಹಿನ್ನೆಲೆ; ಬುದ್ದಿವಾದ ಹೇಳಿದ ತಂಗಿಯನ್ನೇ ಕೊಂದ ಅಣ್ಣ…


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


‘ಒಡಕು ಮೂಡಿಸಿದ ಸಿದ್ಧರಾಮಯ್ಯ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>