Quantcast
Channel: VijayKarnataka
Viewing all articles
Browse latest Browse all 6795

ಹಾಸ್ಯದಲ್ಲಿ ಅರಳಿದ ಶ್ರೀನಿವಾಸನ ಕಲ್ಯಾಣ

$
0
0

- ಹರೀಶ್‌ ಬಸವರಾಜ್

ಡಾ. ರಾಜ್‌ಕುಮಾರ್‌ ಅಭಿನಯದ ಶ್ರೀನಿವಾಸ ಕಲ್ಯಾಣ ಒಂದು ಅದ್ಭುತ ಚಿತ್ರಕಾವ್ಯ. ಅದೇ ಹೆಸರನ್ನಿಟ್ಟುಕೊಂಡು ಬಂದ ಈಗಿನ ಶ್ರೀನಿವಾಸ ಕಲ್ಯಾಣ ನವೀನ ಕತೆಯನ್ನು ಒಳಗೊಂಡ ತಿಳಿಹಾಸ್ಯದ ಚಿತ್ರ. ಈ ಸಿನಿಮಾ ನೋಡಿ ಹೊರ ಬಂದ ಪ್ರೇಕ್ಷಕನಿಗೆ ತನ್ನ ಹಳೆಯ ಪ್ರೀತಿ ನೆನಪಾಗದೆ ಇರುವುದಿಲ್ಲ. ಕಾಲೇಜು ಲೈಫ್ನಲ್ಲಿ ಯುವಕರು ತಮ್ಮ ಪ್ರೀತಿ, ಮದುವೆ ವಿಚಾರದಲ್ಲಿ ಅನುಭವಿಸುವ ಒದ್ದಾಟಗಳನ್ನು ನಿರ್ದೇಶಕ ಶ್ರೀನಿವಾಸ್ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ಈ ರೀತಿಯ ಚಿತ್ರಗಳು ಸಾಕಷ್ಟು ಬಂದಿದ್ದರೂ ನಿರ್ದೇಶಕರ ನಿರೂಪಣಾ ಶೈಲಿ ಹಾಗೂ ಎಪಿಸೋಡ್ಗಳ ರೀತಿಯಲ್ಲಿ ಕಟ್ಟಿಕೊಟ್ಟಿರುವುದು ಪ್ರೇಕ್ಷಕರನ್ನು ಸೆಳೆಯುತ್ತದೆ.

ಟಿವಿ ನಿರೂಪಕ ಎಂ ಕೆ ಬಾಲುವಿನ(ಶ್ರೀನಿವಾಸ್) ಪ್ರೀತಿ, ಮದುವೆಯ ಸುತ್ತ ಸುತ್ತುವ ಕತೆಯೆ ಇಡಿ ಚಿತ್ರ. ಅವನಿಗೆ ಮದುವೆ ಮಾಡಲು ಹೊರಡುವ ಗುರುಗಳು (ದತ್ತಣ್ಣ) ನಿರ್ದೇಶಕರೊಬ್ಬರಿಗೆ ಬಾಲುವಿನ ಶಾಲಾ ಜೀವನದ ಆಕರ್ಷಣೆ, ಅವನ ಪ್ರೇಮ ಪ್ರಸಂಗಗಳ ಬಗ್ಗೆ ಹೇಳುತ್ತಾನೆ. ಕಡೆಗೆ ಬಾಲು ಮದುವೆ ಆಗುತ್ತಾನಾ? ಇಲ್ಲವಾ? ಎಂಬುದೇ ಚಿತ್ರದ ಕತೆ.

ಈ ಎಲ್ಲ ಸೀನ್‌ಗಳನ್ನು ನಿರ್ದೇಶಕರು ಚೆಂದವಾಗಿ ಚಿತ್ರಿಸಿದ್ದಾರೆ. ಎಲ್ಲವೂ ಫ್ರೆಶ್ ಆಗಿ ಕಾಣುವುದರಿಂದ ಒಂದು ರೀತಿಯಲ್ಲಿ ತಾಜಾತನವಿದೆ. ಉಪ್ಪಿಯ ‘ಟೋಪಿವಾಲ’ ಚಿತ್ರ ನಿರ್ದೇಶಿಸಿದ್ದ ಶ್ರೀನಿ, ಈಗ ಎರಡನೇ ಸಿನಿಮಾದಲ್ಲಿ ತಮ್ಮ ಸಾಮರ್ಥ್ಯವನ್ನು ಖಡಕ್ ಆಗಿ ಸಾಬೀತು ಪಡಿಸಿದ್ದಾರೆ. ಜತೆಗೆ ನಾಯಕನಾಗಿ ಅಭಿನಯದಲ್ಲಿಯೂ ಹಿಂದೆ ಬಿದ್ದಿಲ್ಲ. ಶಾಲಾ ದಿನಗಳ ಸೀನ್ನಲ್ಲಿ ಬಾಲಕನಾಗಿ, ಯೌವನಾವಸ್ಥೆಯಲ್ಲಿ ಪ್ರೇಮವನ್ನು ಕಳೆದುಕೊಂಡು ಒದ್ದಾಡುವ ಯುವ ಪ್ರೇಮಿಯಾಗಿ ಉತ್ತಮವಾಗಿ ಸ್ಕೋರ್ ಮಾಡಿದ್ದಾರೆ. ಅಲ್ಲದೆ ಇಂಟ್ರಡಕ್ಷನ್ ಸಾಂಗ್ನಲ್ಲಿ ಸೂಪರ್ ಆಗಿ ಸ್ಟೆಪ್ಗಳನ್ನು ಹಾಕುವ ಮೂಲಕ ಪ್ರೇಕ್ಷಕರನ್ನು ಸೆಳೆಯುತ್ತಾರೆ.

ಇನ್ನು ಇಬ್ಬರು ನಾಯಕಿಯರಲ್ಲಿ ಕವಿತಾ ಮುದ್ದುಮುದ್ದಾಗಿ ಕಾಣಿಸಿ ನಮ್ಮ ಮನೆಯ ಹುಡುಗಿಯ ರೀತಿ ಫೀಲ್ ಆಗುತ್ತಾರೆ. ಗಂಡು ಬೀರಿಯಾಗಿ ಖಡಕ್ ಡೈಲಾಗ್ ಹೊಡೆಯುವ ಹುಡುಗಿಯಾಗಿ ಕಾಣಿಸಿಕೊಂಡಿರುವ ನಿಖಿಲಾ, ಡಬಲ್ಮೀನಿಂಗ್ ಡೈಲಾಗ್ಗಳನ್ನು ನಿರರ್ಗಳವಾಗಿ ಹೊಡೆಯುತ್ತಾರೆ.

ನಾಯಕನ ಗೆಳೆಯನ ಪಾತ್ರದಲ್ಲಿ ನಟಿಸಿರುವ ರಂಗಭೂಮಿ ಕಲಾವಿದ ಸುಜಯ್ಶಾಸ್ತ್ರಿ ಸಿನಿಮಾಗೆ ಒಂದು ಪ್ಲಸ್ ಪಾಯಿಂಟ್. ಅವರ ಕಾಮಿಡಿ ಟೈಮಿಂಗ್ ಅದ್ಭುತವಾಗಿದ್ದು ಈ ಸಿನಿಮಾ ಮೂಲಕ ಕನ್ನಡಕ್ಕೊಬ್ಬ ಉತ್ತಮ ಕಾಮಿಡಿ ಕಲಾವಿದ ಸಿಕ್ಕಿದ್ದಾರೆ ಎನ್ನಬಹುದು. ವಿದ್ಯಾವೆಂಕಟ್ರಾಮ್ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದಾರೆ. ಸಾಮಾಜಿಕ ಕಾರ್ಯಕರ್ತನಾಗಿ ಮತ್ತು ನಾಯಕನ ತಂದೆಯಾಗಿ ಅಚ್ಯುತ್ ಅಭಿನಯ ಮೆಚ್ಚುವಂತಿದೆ. ದತ್ತಣ್ಣ ಅವರದ್ದು ಎಂದಿನಂತೆ ನೂರಕ್ಕೆ ನೂರರಷ್ಟು ಅಭಿನಯ.

ಎರಡು ಹಾಡುಗಳು ಗುನುಗುವಂತಿದ್ದು, ಅದ್ಧೂರಿ ಲೊಕೇಶನ್‌ಗಳಿರದ ಕಾರಣ ಸಿನಿಮಾಟೋಗ್ರಾಫರ್ ಅಶ್ವಿನ್ ಕಡಂಬೂರ್ ಇರುವುದರಲ್ಲೇ ಒಳ್ಳೆಯ ಕೆಲಸವನ್ನು ಮಾಡಿದ್ದಾರೆ. ತಾಂತ್ರಿಕವಾಗಿ ಸಿನಿಮಾವನ್ನು ಇನ್ನಷ್ಟು ಉತ್ತಮ ಪಡಿಸಬಹುದಿತ್ತು, ಮತ್ತು ಡಬಲ್ಮೀನಿಂಗ್ ಡೈಲಾಗ್ಗಳನ್ನು ಕಡಿಮೆ ಮಾಡಿದ್ದರೆ ಚೆನ್ನಾಗಿರುತ್ತಿತ್ತು. ಈ ಎರಡು ಅಂಶಗಳನ್ನು ಬದಿಗಿಟ್ಟರೆ ಶ್ರೀನಿವಾಸ ಕಲ್ಯಾಣ ಈ ವಾರಾಂತ್ಯಕ್ಕೆ ಒಳ್ಳೆ ಮನರಂಜನೆಯುಳ್ಳ ಸಿನಿಮಾ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಮಲಗಿದ್ದ ಮಹಿಳೆ ಬೆದರಿಸಿ ಬೆತ್ತಲೆ ಫೋಟೋ ತೆಗೆದ ಕಳ್ಳ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


‘ವ್ಯಾಪಾರ’ದಲ್ಲಿ ವೃದ್ಧಿಯಾಗಲು ಹೀಗೆ ಮಾಡಿ….


ಅಪ್ಪ ಅಮ್ಮ ಬೈಯ್ತಾರೆ ಅಂತ ಬೆಂಗಳೂರಿಂದ ಚಳ್ಳಕೆರೆಗೆ ಹೋದ ಮಕ್ಕಳು


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


Namaskāra नमस्कार (salutation)


ತುಳು ತೆರೆಗೆ ಸೋನಿಯಾ ಎಂಟ್ರಿ



<script src="https://jsc.adskeeper.com/r/s/rssing.com.1596347.js" async> </script>