Quantcast
Channel: VijayKarnataka
Viewing all articles
Browse latest Browse all 6795

ಐಸಿಸ್‌ ಸೇರಲು ಕಾತರಳಾಗಿದ್ದ ಬಾಲಕಿ ರಕ್ಷಣೆ

$
0
0

ಪುಣೆ: ಐಸಿಸ್‌ ಸಂಘಟನೆಗೆ ಸೇರ್ಪಡೆಗೊಳ್ಳುವ ಹಾದಿಯಲ್ಲಿದ್ದ 16 ವರ್ಷದ ಮುಸ್ಲಿಂ ಬಾಲಕಿಯನ್ನು ಮಹಾರಾಷ್ಟ್ರದ ಉಗ್ರ ನಿಗ್ರಹ ದಳದವರು ರಕ್ಷಿಸಿದ್ದಾರೆ.

ಪುಣೆಯ ಕಾನ್ವೆಂಟ್ ಒಂದರ 11ನೇ ತರಗತಿ ವಿದ್ಯಾರ್ಥಿನಿಯಾಗಿರುವ ಆ ಬಾಲಕಿ ಆನ್‌ಲೈನ್‌ನಲ್ಲಿ ಇಸಿಸ್‌ನ ತತ್ವ ಪ್ರಚಾರಗಳಿಂದ ಆಕರ್ಷಿತಳಾಗಿದ್ದಳಲ್ಲದೆ, ಉಗ್ರ ಸಂಘಟನೆಯ ಚಟುವಟಿಕೆಯಲ್ಲಿ ಭಾಗವಹಿಸಲು ತುದಿಗಾಲಲ್ಲಿ ನಿಂತಿದ್ದಳು. ಮಾತ್ರವಲ್ಲ ಭಯೋತ್ಪಾದಕ ಸಂಘಟನೆಗಳ ಪರ ಅನುಕಂಪ ಹೊಂದಿರುವ ಅನೇಕರ ಜತೆ ಆಕೆ ಸಂಪರ್ಕದಲ್ಲಿದ್ದಳು ಎಂದು ಸಹಾಯಕ ಪೊಲೀಸ್ ಕಮಿಷನರ್ ಭಾನುಪ್ರತಾಪ್‌ ಬಾರ್ಗೆ ಹೇಳಿದ್ದಾರೆ.

ಆಕೆ ಇತ್ತೀಚೆಗೆ ಬಂಧಿಸಲಾಗಿರುವ ಇಂಡಿಯನ್ ಆಯಿಲ್ ಕಾರ್ಪೊರೇಶನ್ (ಐಒಸಿ) ಕಾರ್ಯನಿರ್ವಾಹಕ ಮೊಹಮ್ಮದ್ ಸಿರಾಜುದ್ದೀನ್‌ ಎಂಬ ಉಗ್ರನ ಜತೆಗೂ ಸತತ ಸಂಪರ್ಕದಲ್ಲಿದ್ದಳು. ಅಲ್ಲದೆ, ಆಕೆಗೆ ಇಸ್ಲಾಮಿಕ್‌ ಸ್ಟೇಟ್‌ ಉಗ್ರರ ಜತೆಗೂ ನಂಟಿರುವುದು ತನಿಖೆ ಸಂದರ್ಭದಲ್ಲಿ ತಿಳಿದುಬಂದಿತ್ತು. ಈ ಹಿನ್ನೆಲೆಯಲ್ಲಿ ಆಕೆಯ ಮೇಲೆ ಪೊಲೀಸರು ಕಣ್ಗಾವಲು ಇರಿಸಿದ್ದರು.

ಐಸಿಸ್‌ ಪರ ಒಲವಿರುವ ಮಹಾರಾಷ್ಟ್ರದ ಯುವಕ, ಯುವತಿಯರ ಜತೆಗೆ ಸಿರಾಜುದ್ದೀನ್‌ ಸತತವಾಗಿ ಫೇಸ್‌ಬುಕ್ ಹಾಗೂ ವಾಟ್ಸ್‌ಆಪ್‌ ಮೂಲಕ ಸಂಪರ್ಕ ಇರಿಸಿಕೊಂಡಿದ್ದ. ಆತ ಆನ್‌ಲೈನ್ ಮೂಲಕ ಐಸಿಸ್‌ ಚಟುವಟಿಕೆಗಳ ಪ್ರಚಾರ ನಡೆಸುತ್ತಿದ್ದ. ಕಳೆದ ವಾರವಷ್ಟೇ ಸಿರಾಜುದ್ದೀನ್‌ನನ್ನು ಜೈಪುರದಲ್ಲಿ ಬಂಧಿಸಲಾಗಿತ್ತು. ಆಗ ಈ ಬಾಲಕಿಯ ಬಗೆಗೂ ಮಾಹಿತಿ ಲಭ್ಯವಾಗಿತ್ತು.

"ನಾವು ಆ ಬಾಲಕಿಯ ಬಗ್ಗೆ ನಿಗಾ ವಹಿಸಿದ್ದೇವೆ. ಆಕೆಯನ್ನು ತೀವ್ರಗಾಮಿ ಸ್ಥಿತಿಯಿಂದ ಮರಳಿ ಸಾಮಾನ್ಯ ಸ್ಥಿತಿಗೆ ತರಲು ಪ್ರಯತ್ನಗಳು ನಡೆಯುತ್ತಿವೆ. ಇದಕ್ಕಾಗಿ ಆಕೆಯ ಪೋಷಕರು, ಧಾರ್ಮಿಕ ಪಂಡಿತರು ಮತ್ತು ಮುಸ್ಲಿಂ ಸಮುದಾಯದ ನಾಯಕರ ನೆರವು ಕೇಳಲಾಗಿದೆ. ಐಸಿಸ್‌ ಚಟುವಟಿಕೆ ಎಷ್ಟು ತಪ್ಪು ಎನ್ನುವುದನ್ನು ಮನದಟ್ಟು ಮಾಡಿ ನೈಜ ಇಸ್ಲಾಂ ಧರ್ಮದ ಬಗ್ಗೆ ಬಾಲಕಿಗೆ ತಿಳುವಳಿಕೆ ನೀಡಿ ಎಚ್ಚರಿಸುವುದಾಗಿ ಧಾರ್ಮಿಕ ಪಂಡಿತರು ಒಪ್ಪಿಕೊಂಡಿದ್ದಾರೆ ಎಂದು ಭಾನುಪ್ರತಾಪ್‌ ಬಾರ್ಗೆ ತಿಳಿಸಿದ್ದಾರೆ.

ಬಾಲಕಿಗೆ ಮನೋಸ್ಥಿತಿ:

ಅಧಿಕಾರಿಗಳ ಪ್ರಕಾರ, ಆ ಬಾಲಕಿ ಸಿರಾಜುದ್ದೀನ್‌ನೊಂದಿಗೆ ಬಹಳ ನಿಕಟ ಸಂಪರ್ಕ ಇರಿಸಿದ್ದಲ್ಲದೆ, ಇರಾನ್‌ ಅಥವಾ ಸಿರಿಯಾಗೆ ತೆರಳಿ ಐಸಿಸ್‌ ಉಗ್ರ ಸಂಘಟನೆಯ ಸದಸ್ಯೆಯಾಗಲು ತೆರಳಲು ಸಿದ್ಧತೆ ನಡೆಸಿದ್ದಳು. ಆಕೆ ಪಡೆಯಬೇಕಿದ್ದ ವೈದ್ಯ ಶಿಕ್ಷಣ ಮತ್ತಿತರ ವೆಚ್ಚವನ್ನು ಭರಿಸಲು ಐಸಿಸ್‌ ಒಪ್ಪಿಕೊಂಡಿತ್ತು. ಇದಕ್ಕೆ ಪ್ರತಿಯಾಗಿ ನಿನ್ನ ದೇಶದಲ್ಲಿ ಇಸ್ಲಾಂಗೋಸ್ಕರ ನೀನು ಏನು ಬೇಕಾದರೂ ಮಾಡಲು ಸಿದ್ಧಳಾಗಬೇಕು ಎಂದು ಉಗ್ರ ಸಂಘಟನೆ ಸದಸ್ಯರು ಕೋರಿದ್ದರು.

ಆಕೆಗೆ ಫೇಸ್‌ಬುಕ್‌ನಲ್ಲಿ 200ಕ್ಕೂ ಅಧಿಕ ಸ್ನೇಹಿತರಿದ್ಧಾರೆ. ಆಕೆ ವಾಟ್ಸ್‌ಆಪ್‌ ಹಾಗೂ ಟ್ವಟಿರ್‌ ಮೂಲಕವೂ ಐಸಿಸ್‌ ಪರ ಸಹಾನುಭೂತಿ ಹೊಂದಿರುವವರ ಜತೆ ಸಂರ್ಪಕದಲ್ಲಿದ್ದಳು. ಅಲ್ಲದೆ ಮಹಾರಾಷ್ಟ್ರ, ರಾಜಸ್ಥಾನ, ಆಂಧ್ರಪ್ರದೇಶ, ತಮಿಳುನಾಡು, ಜಮ್ಮು ಮತ್ತು ಕಾಶ್ಮೀರ, ಕರ್ನಾಟಕ ಮತ್ತು ಫಿಲಿಫೈನ್ಸ್, ಶ್ರೀಲಂಕಾ, ದುಬೈ, ಸೌದಿ ಅರೇಬಿಯಾ, ಕೀನ್ಯಾ ಮುಂತಾದ ದೇಶಗಳ ಉಗ್ರರ ಅನುಕಂಪ ಹೊಂದಿರುವವರ ಸಂಪರ್ಕದಲ್ಲಿ ಆಕೆ ಸಿಲುಕಿದ್ದಳು ಎಂದು ಉಗ್ರ ನಿಗ್ರಹ ದಳದ ಅಧಿಕಾರಿಗಳು ಮಾಹಿತಿ ನೀಡಿದ್ಧಾರೆ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>