Quantcast
Channel: VijayKarnataka
Viewing all articles
Browse latest Browse all 6795

ಪ್ರಣಬ್ ಮುಖರ್ಜಿಗೆ ‘ಗರ್‌ವೂಡ್ ಪ್ರಶಸ್ತಿ’ಯ ಗೌರವ

$
0
0

ಹೊಸದಿಲ್ಲಿ: ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಅಮೆರಿಕದ ಕ್ಯಾಲಿಫೋರ್ನಿಯಾದ 'ಯುಸಿ ಬರ್ಕ್‌ಲೇ-ಹಾಸ್ ಸ್ಕೂಲ್ ಆಫ್ ಬಿಸಿನೆಸ್'ವಿಶ್ವವಿದ್ಯಾಲಯದ ಪ್ರತಿಷ್ಠಿತ 'ಗರ್‌ವೂಡ್ ಪ್ರಶಸ್ತಿ' ಲಭಿಸಿದೆ. ರಾಷ್ಟ್ರಪತಿ ಭವನದಿಂದಲೇ ಮಹೋನ್ನತ ಹೊಸತನದ ಕಾರ್ಯಕ್ರಮಗಳನ್ನು ಆರಂಭಿಸಿರುವುದನ್ನು ಗುರುತಿಸಿ, ರಾಷ್ಟ್ರಪತಿ ಅವರಿಗೆ ಈ 'ಜಾಗತಿಕ ನಾಯಕ' ಪ್ರಶಸ್ತಿ ನೀಡಿ, ಗೌರವಿಸಲಾಗಿದೆ.

ರಾಷ್ಟ್ರಪತಿ ಭವನದಲ್ಲಿ ಗುರುವಾರ ಆಯೋಜಿಸಲಾಗಿದ್ದ ಸಮಾರಂಭದಲ್ಲಿ 'ಗರ್‌ವೂಡ್ ಪ್ರಶಸ್ತಿ' ಸ್ವೀಕರಿಸಿ ಮಾತನಾಡಿದ ಪ್ರಣಬ್ ಮುಖರ್ಜಿ, ಈ ಪ್ರಶಸ್ತಿಯನ್ನು ದೇಶದ ಜನರಿಗೆ, ರಾಷ್ಟ್ರಪತಿ ಭವನದ ಸಿಬ್ಬಂದಿ ಮತ್ತು ಸಹೋದ್ಯೋಗಳಿಗೆ ಮುಡಿಪಾಗಿಟ್ಟಿದ್ದೇನೆ. ಅವರೆಲ್ಲರ ಸಹಕಾರ ಮತ್ತು ಬೆಂಬಲವೇ ಜಾಗತಿಕ ನಾಯಕ ಪ್ರಶಸ್ತಿ ತಮಗೆ ಲಭಿಸಲು ಕಾರಣ ಎಂದು ಸ್ಮರಿಸಿದರು.

ದೇಶದ ನಾಗರಿಕರಿಗೆ ಉತ್ತಮ ಸೇವೆ ಒದಗಿಸಬೇಕಾದರೆ ಸರಕಾರದ ಮಟ್ಟದಲ್ಲಿ ಮುಕ್ತ ಅನುಶೋಧನೆ ಹೆಚ್ಚಾಗುವುದು ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ಎಲ್ಲಾ ಮೂಲಗಳಿಂದ ಜ್ಞಾನದ ಹರಿವನ್ನು ಸೆರೆ ಹಿಡಿಯಬಲ್ಲ ಸಾಮರ್ಥ್ಯ ಹೊಂದಿರುವ ಮುಕ್ತ ಅನುಶೋಧನೆಯು ಉಜ್ವಲ ಭವಿಷ್ಯಕ್ಕೆ ಉತ್ತಮ ಮಾರ್ಗ. ಸಂಸ್ಥೆಯ ಒಳಗೆ ಮತ್ತು ಹೊರಗೆ ಇದು ಅಗತ್ಯ. ಸರಕಾರದ ಸಂಸ್ಥೆಗಳಿಗಂತೂ ಇದು ಅತ್ಯಗತ್ಯ. ಏಕೆಂದರೆ ದೇಶದ ಜನರಿಗೆ ಸೇವೆ ಒದಗಿಸುವ ಸವಾಲು ಈ ಸಂಸ್ಥೆಗಳಿಗೆ ಇದೆ ಎಂದು ಅವರು ತಿಳಿಸಿದರು.

ಖಾಸಗಿತನಕ್ಕೆ ಅವಕಾಶ ನೀಡದೆ ದತ್ತಾಂಶಗಳನ್ನು ಸಾರ್ವಜನಿಕವಾಗಿ ತೆರೆದಿಡುವುದರಿಂದ ಪಾರದರ್ಶಕತೆಯ ಉತ್ತೇಜನ, ಹೊಸ ಶೋಧನೆ ಮತ್ತು ಹೊಸ ಅವಕಾಶಗಳನ್ನು ತೆರೆಯುವ ಮೂಲಕ ದೇಶದ ಜನತೆಯ ಸಮಸ್ಯೆಗಳನ್ನು ದಕ್ಷತೆಯಿಂದ ಮತ್ತು ಪರಿಣಾಮಕಾರಿಯಾಗಿ ಪರಿಹರಿಸಲು ಸಾಧ್ಯವಿದೆ ಎಂದು ರಾಷ್ಟ್ರಪತಿ ತಿಳಿಸಿದರು.

ರಾಷ್ಟ್ರಪತಿ ಭವನದಲ್ಲಿ ಈ ವರ್ಷದ ಆರಂಭದಲ್ಲಿ ನಡೆದ 'ಪ್ರೆಸಿಡೆಂಟ್ಸ್ ಎಸ್ಟೇಟ್' ಮೊಟ್ಟಮೊದಲ ಉತ್ಸವ ಹೊಸತನದ ಕಾರ್ಯಕ್ರಮಗಳಲ್ಲಿ ಒಂದು. ಯುವ ಸಮುದಾಯವನ್ನು ಉತ್ತೇಜಿಸುವ ಈ ರೀತಿಯ ಹಲವಾರು ಕಾರ್ಯಕ್ರಮಗಳು ರಾಷ್ಟ್ರಪತಿ ಭವನದಿಂದ ಹೊರಮೂಡಿವೆ. ಪ್ರಗತಿ ಮತ್ತು ಅಭಿವೃದ್ಧಿಗೆ ಅನುಶೋಧನೆ ನಿರ್ಣಾಯಕ ಚಾಲನಾಶಕ್ತಿ ಎಂದು ಅವರು ತಿಳಿಸಿದರು.

ಶಿಕ್ಷಣ ತಜ್ಞರು ಮತ್ತು ಬೋಧಕ ಸಿಬ್ಬಂದಿಯ ನಿಯೋಗದೊಂದಿಗೆ ದಿಲ್ಲಿಗೆ ಆಗಮಿಸಿರುವ ಗರ್‌ವೂಡ್ ಕೇಂದ್ರದ ಕಾರ್ಯಕಾರಿ ನಿರ್ದೇಶಕ ಪ್ರೊ. ಸೊಲೊಮನ್ ಡಾರ್ವಿನ್, ಪ್ರಣ್ ಮುಖರ್ಜಿ ಅವರು 'ಹೊಸತನದ ಚಿಂತನೆಯ ಚಾಂಪಿಯನ್' ಎಂದು ಬಣ್ಣಿಸಿದರು.

ಗರಿಷ್ಠ ಸಂಖ್ಯೆಯ ನೊಬೆಲ್ ಪುರಸ್ಕೃತರನ್ನು ಸೃಷ್ಟಿಸಿರುವ ಕ್ಯಾಲಿಫೋರ್ನಿಯಾದ 'ಯುಸಿ ಬರ್ಕ್‌ಲೇ-ಹಾಸ್ ಸ್ಕೂಲ್ ಆಫ್ ಬಿಸಿನೆಸ್' ವಿಶ್ವವಿದ್ಯಾಲಯ, ಇದೇ ಮೊದಲ ಬಾರಿಗೆ ಸ್ಮಾರ್ಟ್ ಸಿಟಿಗಳ ನಿರ್ಮಾಣಕ್ಕೆ ಸಂಬಂಧಿಸಿದ ಕೋರ್ಸ್ ಆರಂಭಿಸಿದೆ.


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ವೃದ್ದೆಗೆ ಚಾಕು ತೋರಿಸಿ ದುಷ್ಕೃತ್ಯ


ತುಳು ತೆರೆಗೆ ಸೋನಿಯಾ ಎಂಟ್ರಿ


ಗಮನಿಸಿ : ‘ಆಯುಷ್ಮಾನ್ ಕಾರ್ಡ್’ನಡಿ 5 ಲಕ್ಷದವರೆಗೆ ಸಿಗಲಿದೆ ಉಚಿತ ಚಿಕಿತ್ಸೆ, ಇಲ್ಲಿದೆ...


ಈ 12 ಕಾರಣಗಳಿಗೆ ನಿಮಗೆ ಡಿ.ಕೆ.ರವಿ ಇಷ್ಟವಾಗಲೇಬೇಕು!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ



<script src="https://jsc.adskeeper.com/r/s/rssing.com.1596347.js" async> </script>