Quantcast
Channel: VijayKarnataka
Viewing all articles
Browse latest Browse all 6795

ಬೆಚ್ಚಿ ಬೀಳುವ ದೆವ್ವದ ಕಥಾ ಪ್ರಸಂಗ

$
0
0

-ಪದ್ಮಾ ಶಿವಮೊಗ್ಗ

ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್‌ ಹೀರೊ ಆಗಿ ರೋಮಾಂಟಿಕ್‌ ಮತ್ತು ಬ್ಯೂಟಿಫುಲ್‌ ದೆವ್ವದ ಗೆಟಪ್‌ಗಳಲ್ಲಿ ನಟಿಸಿರುವ ರಿಕ್ತಾ ಚಿತ್ರ ಕುತೂಹಲವನ್ನು ಕೆರಳಿಸಿತ್ತು. ಹೊಸಬರ ತಂಡವೊಂದು ವಿಭಿನ್ನ ಪ್ರಯೋಗ ಮಾಡಿದ್ದಾರೆ. ಇದು ಹಾರರ್‌ ಚಿತ್ರವಾದರೂ ಸೂತ್ರವನ್ನು ಮುರಿದು ಮೃಧು ಸ್ವಭಾವದ ಭೂತದ ಪ್ರೀತಿಯನ್ನು ತೆರೆಗೆ ತರಲಾಗಿದೆ. ಇಲ್ಲಿವರೆಗೆ ದೆವ್ವವನ್ನು ನೋಡಿ ಜನ ಹೆದರುತ್ತಿದ್ದರು. ಈ ಚಿತ್ರದಲ್ಲಿ ಜನರನ್ನು ನೋಡಿ ದೆವ್ವ ಹೆದರುತ್ತದೆ. ನಿರ್ದೇಶಕ ಅಮೃತ್‌ ಕುಮಾರ್‌ಗೆ ಇದು ಮೊದಲ ಚಿತ್ರ.

ನಾಯಕ (ಸಂಚಾರಿ ವಿಜಯ್‌)ಗೆ ನಾಯಕಿಯ (ಅದ್ವಿಕಾ) ಮೇಲೆ ಪ್ರೀತಿ ಹುಟ್ಟುತ್ತದೆ. ಬಹುತೇಕ ಸಿನಿಮಾಗಳಲ್ಲಿರುವಂತೆಯೇ ಹುಡುಗಿ ನಾಯಕನ ಪ್ರೀತಿಗೆ ಅಷ್ಟು ಸುಲಭಕ್ಕೆ ಮರುಳಾಗುವುದಿಲ್ಲ. ನಾಯಕ ಅವಳ ಹಿಂದೆ ಓಡಾಡಿ, ಎದ್ದು ಬಿದ್ದು ತನ್ನ ಪ್ರೀತಿಯನ್ನು ಹೇಳಿಕೊಳ್ಳುತ್ತಿರುತ್ತಾನೆ. ಅವಳ ಮೇಲಿನ ಅವನ ಪ್ರೀತಿ ಗಾಢವಾಗಿರುತ್ತದೆ. ಇದರ ನಡುವೆ ಒಂದು ದಿನ ಇದ್ದಕ್ಕಿದ್ದಂತೆ ನಾಯಕಿ ಕಾಣೆಯಾಗುತ್ತಾಳೆ. ಎಲ್ಲಿ ಹೋಗುತ್ತಾಳೆ, ಏನಾದಳು? ಎಂದು ತಿಳಿಯುವುದಿಲ್ಲ. ನಾಯಕ ಕಂಗಾಲಾಗುತ್ತಾನೆ. ಅವಳಿಗಾಗಿ ಪರಿತಪಿಸುತ್ತಾನೆ. ಏನೇ ಆದರೂ ಅವಳನ್ನು ಮರೆಯಲಾಗುವುದಿಲ್ಲ. ನಾಯಕನಿಗೆ ಅವಳ ಮೇಲಿನ ಪ್ರೀತಿ ಕಡಿಮೆಯಾಗುವುದಿಲ್ಲ. ಅವಳ ನೆನಪಲ್ಲೇ ಕುಡಿದು ಗುಂಡಿಯೊಂದರಲ್ಲಿ ಬಿದ್ದುಹೋಗುತ್ತಾನೆ. ಇದನ್ನು ಅರಿಯದ ಕೆಲವರು ಮಣ್ಣು ಸುರಿದು ಜೀವಂತ ಸಮಾಧಿ ಮಾಡಿಬಿಡುತ್ತಾರೆ. ಇದರ ನಡುವೆ ನಾಯಕಿ ಸಿನಿಮಾ ತಂಡದೊಂದಿಗೆ ಪ್ರತ್ಯಕ್ಷಳಾಗುತ್ತಾಳೆ. ಅವಳು ನಟಿಯಾಗಿರುತ್ತಾಳೆ. ಹಾರರ್‌ ಸಿನಿಮಾದ ಶೂಟಿಂಗ್‌ಗೆಂದು ಅದೇ ಊರಿಗೆ ಬಂದಿರುತ್ತಾರೆ. ಕೊನೆಗೆ ಅದೇ ಸಮಾಧಿಯ ಬಳಿಗೆ ಚಿತ್ರತಂಡ ಬರುತ್ತದೆ. ಇಲ್ಲಿಂದ ಮುಂದೆ ದೆವ್ವದಾಟ ಶುರು. ಸತ್ತರೂ ಪ್ರೀತಿಯನ್ನು ಮರೆಯದ, ಪ್ರೀತಿಸಿದವಳನ್ನು ಬಿಡದ ದೆವ್ವ ಕೊನೆಗೆ ಏನು ಮಾಡುತ್ತದೆ ಎನ್ನುವುದು ಸಿನಿಮಾ.

ಕತೆಗೆ ಜೀವ ತುಂಬಲು ನಿರ್ದೇಶಕರು ಇನ್ನಷ್ಟು ಶ್ರಮ ಹಾಕಬೇಕಿತ್ತು ಎನ್ನಿಸಿದರೆ ಆಶ್ಚರ್ಯವಿಲ್ಲ. ಹಾರರ್‌ ಚಿತ್ರ ಎಂದಾಕ್ಷಣ ಬೆಚ್ಚಿ ಬೀಳಿಸುತ್ತದೆ ಎಂದು ನೋಡಲು ಹೋದರೆ ನಿರಾಶೆ ಖಂಡಿತ. ಯಾಕೆಂದರೆ ಹಾರರ್‌ ಸಿನಿಮಾ ನೋಡಿ ತಾನೇ ಬೆಚ್ಚಿ ಬೀಳುವ ದೆವ್ವದ ಕತೆ ಇದು. ಅದು ಪ್ರೇತ ಎಂದುಕೊಂಡು ನೋಡಬೇಕು. ಆದರೆ, ಮನುಷ್ಯನ ನಡವಳಿಕೆಗೂ ದೆವ್ವದ ನಡವಳಿಕೆಗೂ ಹೆಚ್ಚೇನೂ ವ್ಯತ್ಯಾಸವಿಲ್ಲ. ಈ ಚಿತ್ರದಲ್ಲಿರುವ ದೆವ್ವ ಪುಟ್ಟ ಮಗುವಿನಂತಾಡುತ್ತದೆ. ಸಂಚಾರಿ ವಿಜಯ್‌ ಯಾವ ಪಾತ್ರವಾದರೂ ಸರಿ ಜೀವ ತುಂಬಬಲ್ಲ ನಟ ಎನ್ನುವುದಕ್ಕೆ ಇನ್ನೊಂದು ಉದಾಹರಣೆ ಈ ಚಿತ್ರ. ಅವರ ಅಭಿನಯ ಚಿತ್ರಕ್ಕೆ ಪ್ಲಸ್‌ ಪಾಯಿಂಟ್‌. ಇನ್ನು ಹೊಸ ಹುಡುಗಿ ಅದ್ವಿಕಾ ಮೊದಲ ಚಿತ್ರವಾಗಿದ್ದರೂ ಪರವಾಗಿಲ್ಲ ಎನ್ನುವಂತೆ ನಟಿಸಿದ್ದಾರೆ. ಮಲೆನಾಡನ್ನು ಛಾಯಾಗ್ರಾಹಕ ಸುಂದರವಾಗಿ ಸೆರೆಹಿಡಿದಿದ್ದಾರೆ. ದೆವ್ವದ ಹೊಸ ರೂಪ ನೋಡಬಯಸುವವರು ಈ ಚಿತ್ರ ನೋಡಬಹುದು.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>