Quantcast
Channel: VijayKarnataka
Viewing all articles
Browse latest Browse all 6795

ಕಿಡ್ಸ್; ನೀವೂ ಮ್ಯಾಜಿಕ್ ಮಾಡಿ

$
0
0

ಶಿಶುಗೀತೆ

ಜಗದೊಡೆಯ ಭಾಸ್ಕರ (ಹೆಡ್ಡಿಂಗ್‌)

ಹಗಲು ರಾತ್ರಿ ಎಂದರೆ ಬೆಳಕಿನ ಆಟ

ರವಿ ಭುವಿಯ ನಡುವಿನ ನಿತ್ಯದೋಟ

ಅದರ ಜೊತೆಗೆ ಇರುವುದು ಗ್ರಹಗಳ ಕೂಟ

ಬಾನಿನಲ್ಲಿ ಚಂದ್ರ ತಾರೆ ಸುಂದರ ನೋಟ

ಸಕಲ ಜೀವ ತಂತುಗಳಿಗೆ ಸೂರ್ಯನೆ ಸ್ಫೂರ್ತಿ

ನಿತ್ಯವು ಗಿಡ ಮರಗಳಿಗೆ ಬೆಳಕಿನಾರತಿ

ಶಾಖ ಬೆಳಕು ಇಲ್ಲದಿರೆ ಭೂಮಿಯು ಬರಡು

ಜೀವಿ ಇರದ ಪೃಥ್ವಿಯು ಒಣಗಿದ ಕೊರಡು

ಆಕಾಶದ ಅನಂತದಲಿ ತಾರೆಯ ಬಳಗ

ಸೃಷ್ಟಿಯ ವಿಸ್ಮಯವ ತಿಳಿವ ಒಡ್ಡೋಲಗ

ಚಂದ್ರನ ಬಿಂಬಾವಸ್ಥೆಯು ನಿತ್ಯದ ಬೆರಗು

ರವಿಯ ವಿದ್ಯಮಾನದಿಂದ ಕಣ್ಣಿಗೆ ಸೊಬಗು

ಸೌರವ್ಯೂಹ ಭೂಚರಗಳ ಪ್ರಭಾವಾಲಯ

ಬಾನು ಭೂಮಿ ನಡುವಿನ ಸೇತುವೆ ವಲಯ

ಜಲ ಚಕ್ರದ ಮೂಲಕ ಮಳೆಯ ವಿದ್ಯಮಾನ

ಪ್ರಕೃತಿಯ ಪೋಷಣೆಗೆ ಸೂರ್ಯನೆ ಚೇತನ

ಪಂಚ ಭೂತಗಳಿಗೆಲ್ಲ ಅಧಿಪತಿ ಸೂರ್ಯ

ನಿತ್ಯವೂ ಸಾಗುವುದು ಅವನ ಕೈಂಕರ್ಯ

ಜಗದ ಪಾಲನೆಗೆ ಬೇಕು ದಿನಕರ ಕೃಪೆಯು

ಹದ ತಪ್ಪಲು ಪರಿಸರದಿ ಸೃಷ್ಟಿಯ ಅಳಿವು

ಹೊರಾ.ಪರಮೇಶ್‌ ಹೊಡೇನೂರು

ಕಿಡ್ಸ್‌ ಕ್ರಾಫ್ಟ್‌

ಹಳೆಯ ಆಮಂತ್ರಣ ಪತ್ರಿಕೆ ಶುಭಾಶಯ ಪತ್ರ

ಮನೆಯಲ್ಲಿ ಹಲವಾರು ಸಮಾರಂಭಗಳ ಆಮಂತ್ರಣ ಪತ್ರಗಳು ರಾಶಿಗಟ್ಟಲೆ ಬಿದ್ದಿರುತ್ತವೆ. ಇವುಗಳನ್ನು ಕಸದ ಬುಟ್ಟಿಗೆ ಬಿಸಾಡುವ ಬದಲು ಸಂಗ್ರಹ ಮಾಡಿಟ್ಟುಕೊಳ್ಳಿ. ಯಾಕೆಂದರೆ ಅದರಿಂದ ಚೆಂದನೆಯ ಶುಭಾಶಯ ಪತ್ರಗಳನ್ನು ಮಾಡಲು ಸಾಧ್ಯವಿದೆ. ವಿವಿಧ ಹಬ್ಬಗಳಿಗೆ ಈ ಶುಭಾಶಯ ಪತ್ರಗಳನ್ನು ನಿಮ್ಮ ಆತ್ಮೀಯರಿಗೆ ಕೊಡಬಹುದು.

ಬೇಕಾಗುವ ಸಾಮಗ್ರಿ

ಸುಂದರವಾದ ಮೇಲ್ಮುಖವಿರುವ ಮದುವೆಯ ಆಮಂತ್ರಣ ಪತ್ರಿಕೆಯ ರಕ್ಷಾಪುಟ-1, ಬಣ್ಣ ಬಣ್ಣದ ಸ್ಕೆಚ್‌ ಪೆನ್‌ಗಳು, ಸ್ಕೇಲ್‌, ಅಂಟು, ಒಣಗಿದ ಎಲೆಗಳ ಸಹಿತ ಕಡ್ಡಿಗಳು-4, ಎರಡು ಮೂರು ಬಣ್ಣದ ಒಣಗಿದ ಸೇವಂತಿಗೆ ಹೂವು-6.

ಮಾಡುವ ವಿಧಾನ

1. ಮೊದಲಿಗೆ ಎಲೆಗಳಿರುವ ಕಡ್ಡಿ ಮತ್ತು ಹೂವುಗಳನ್ನು ಬಿಸಿಲು ಅಥವಾ ನೆರಳಿನಲ್ಲಿ ಒಣಗಿಸಿ ಹಾಸಿಗೆಯ ಕೆಳಗಡೆ ನೀಟಾಗಿ ಮೂರ್ನಾಲ್ಕು ದಿನವಿಟ್ಟು ಪ್ರೆಸ್‌ ಆಗುವಂತೆ ನೋಡಿಕೊಳ್ಳಿ.

2. ಆಮಂತ್ರಣ ಪತ್ರಿಕೆಯ ರಕ್ಷಾಪುಟ ಮಾತ್ರ ತೆಗೆದುಕೊಂಡು ತೆರೆದಿಡಿ. ಚಿತ್ರದಲ್ಲಿ ತೋರಿಸಿರುವಂತೆ ಎಡಗಡೆಯ ಭಾಗದಲ್ಲಿ ನಾಲ್ಕು ಕಡೆ ಹಸಿರು ಬಣ್ಣದ ಸ್ಕೆಚ್‌ ಪೆನ್‌ನಿಂದ ಸ್ಕೇಲ್‌ನ ಸಹಾಯದಿಂದ ಗೆರೆ ಎಳೆಯಿರಿ.

3. ನಾಲ್ಕು ಮೂಲೆಗಳಲ್ಲೂ ಕೆಂಪು ಬಣ್ಣದ ಸ್ಕೆಚ್‌ ಪೆನ್‌ನಿಂದ ಹೂವಿನಂತೆ ಬರೆಯಿರಿ. ಎಡಗಡೆಯ ಭಾಗದ ಮಧ್ಯದಲ್ಲಿ ಒಣಗಿಸಿಟ್ಟಿರುವ ಎಲೆಯ ಕಡ್ಡಿ ಮತ್ತು ಒಣಗಿದ ಸೇವಂತಿಗೆ ಹೂವುಗಳನ್ನು ಚಿತ್ರದಲ್ಲಿ ತೋರಿಸಿರುವಂತೆ ಅಂಟಿನಿಂದ ನಾಜೂಕಾಗಿ ಅಂಟಿಸಿ.

4. ಬಲಗಡೆ ಕಾಗದದ ಅಂಚಿನಲ್ಲಿರುವ ಆಕಾರವನ್ನು ಗುಲಾಬಿ ಬಣ್ಣದ ಪೆನ್ಸಿಲ್‌ನಿಂದ ದಪ್ಪಗೆ ಬರೆದು ತಿದ್ದಿರಿ. ಇದೇ ಕಾಗದದ ಮಧ್ಯದಲ್ಲಿ ಶುಭಾಶಯಗಳ ಒಕ್ಕಣೆಯನ್ನು ನೀಟಾಗಿ ಬರೆಯಿರಿ.

5. ಅದರ ಕೆಳಗಡೆ ನಿಮ್ಮ ಹೆಸರು ಮತ್ತು ದಿನಾಂಕವನ್ನು ಬರೆಯಿರಿ. ಈಗ ಸುಂದರವಾದ ಮನೆಯಲ್ಲೇ ಇರುವ ಸಾಮಗ್ರಿಗಳಿಂದ ನೀವೇ ತಯಾರಿಸಿದ ಶುಭಾಶಯ ಪತ್ರ ರೆಡಿಯಾಗಿದೆ.

ಸೂಪರ್‌ ಮ್ಯಾಜಿಕ್‌

ಕುಣಿಯುವ ದೆವ್ವ

ಬಲೂನ್‌ನ ಚಲನೆಗೆ ತಕ್ಕಂತೆ ಕುಣಿಯುವ ದೆವ್ವವೊಂದನ್ನು ನೀವು ನೋಡಿದ್ದೀರಾ? ಇಲ್ಲವಾದರೆ ಈ ಕೆಳಗಿನ ಪ್ರಯೋಗವನ್ನು ಮಾಡಿ ನೋಡಿ. ಅದಕ್ಕೆ ಕಾರಣವನ್ನೂ ಕಂಡುಕೊಳ್ಳಿ.

ಬೇಕಾಗುವ ಸಾಮಗ್ರಿ

ಬಿಳಿ ಟಿಶ್ಯೂ ಪೇಪರ್‌, ಸ್ಕೆಚ್‌ ಪೆನ್‌, ಕತ್ತರಿ ಮತ್ತು ಒಂದು ಬಲೂನ್‌.

ಮಾಡುವ ವಿಧಾನ

1. ಬಿಳಿ ಟಿಶ್ಯೂ ಪೇಪರ್‌ನಲ್ಲಿ ದೆವ್ವದ ಆಕಾರವನ್ನು ಚಿತ್ರಿಸಿ ಕತ್ತರಿಸಿ. ಇದಕ್ಕಾಗಿ ತೆಳ್ಳನೆಯ ಒಂದೇ ಒಂದು ಮಡಿಕೆಯ ಟಿಶ್ಯೂ ಪೇಪರ್‌ ಉಪಯೋಗಿಸಿ. ಸ್ಕೆಚ್‌ ಪೆನ್‌ನಿಂದ ಈ ದೆವ್ವದ ಆಕಾರಗಳನ್ನು ಕಣ್ಣುಗಳನ್ನು ಚಿತ್ರಿಸಿ.

2. ದೆವ್ವದ ಬಾಲದ ಕೊನೆಯ ತುದಿಯನ್ನು ಟೇಬಲ್‌ನಂತಹ ಚಪ್ಪಟೆ ಮೇಲ್ಮೈಗೆ ಟೇಪ್‌ನಿಂದ ಅಂಟಿಸಿ.

3. ಬಲೂನ್‌ ಅನ್ನು ಊದಿ ಅದರ ತುದಿಯನ್ನು ಗಂಟು ಹಾಕಿ. ಈ ಬಲೂನನ್ನು ನಿಮ್ಮ ತಲೆಗೂದಲಿಗೆ ಚೆನ್ನಾಗಿ ಉಜ್ಜಿ.

4. ನಿಧಾನವಾಗಿ ಬಲೂನ್‌ನ ಉಜ್ಜಿದ ಭಾಗವನ್ನು ದೆವ್ವದ ಆಕಾರದ ಸಮೀಪಕ್ಕೆ ತನ್ನಿ.

5. ಈಗ ಆ ದೆವ್ವದ ಆಕಾರದ ಹಾಳೆಯು ಮೇಲ್ಮುಖವಾಗಿ ಎದ್ದು ಬಲೂನ್‌ನ ಸಮೀಪಕ್ಕೆ ಬರುತ್ತದೆ. ನೀವು ಬಲೂನನ್ನು ಮುಂದಕ್ಕೆ ಚಲಿಸಿದಂತೆ ಅದು ಕೂಡಾ ಅದನ್ನು ಹಿಂಬಾಲಿಸುತ್ತದೆ.

ಕಾರಣ ಇಲ್ಲಿದೆ

ನೀವು ಬಲೂನನ್ನು ನಿಮ್ಮ ಕೂದಲಿಗೆ ಉಜ್ಜಿದಾಗ ಅದು ಚಾರ್ಜ್‌ ಆಗುತ್ತದೆ. ಇದಕ್ಕೂ ಕಾರಣವಿದೆ. ಇದನ್ನು ಅರ್ಥ ಮಾಡಿಕೊಳ್ಳಬೇಕಾದರೆ ವಸ್ತುವೊಂದರ ಸಣ್ಣ ಬಿಲ್ಡಿಂಗ್‌ ಬ್ಲಾಕ್‌ ಅನ್ನು ಅರ್ಥೈಸಿಕೊಳ್ಳಬೇಕು. ಸಣ್ಣ ಬಿಲ್ಡಿಂಗ್‌ ಬ್ಲಾಕ್‌ ಅಂದರೆ ಅಣು. ಈ ಅಣು ಯಾವುದರಿಂದ ಮಾಡಲ್ಪಟ್ಟಿದೆ ಗೊತ್ತೇ? ಅತ್ಯಂತ ಸಣ್ಣ ಕಣಗಳಾದ ಎಲೆಕ್ಟ್ರಾನ್ಸ್‌, ಪ್ರೋಟಾನ್ಸ್‌ ಮತ್ತು ನ್ಯೂಟ್ರಾನ್‌ಗಳಿಂದ ಮಾಡಲ್ಪಟ್ಟಿದೆ. ಈ ಅಣುವನ್ನು ಜನರು ಒಂದು ಮನೆಯಲ್ಲಿ ವಾಸಿಸುವಂತೆ ಎಲೆಕ್ಟ್ರಾನ್ಸ್‌, ಪ್ರೋಟಾನ್ಸ್‌ ಮತ್ತು ನ್ಯೂಟ್ರಾನ್‌ಗಳ ಮನೆಯೆಂದು ಭಾವಿಸೋಣ. ಈಗ ಪ್ರೋಟಾನ್ಸ್‌ ಮತ್ತು ನ್ಯೂಟ್ರಾನ್ಸ್‌ ಸೋಮಾರಿಗಳಾಗಿದ್ದು, ತಮ್ಮ ಕೋಣೆಗಳನ್ನು ಬಿಡಲು ಒಪ್ಪುವುದಿಲ್ಲ. ಆದರೆ ಎಲೆಕ್ಟ್ರಾನ್ಸ್‌ ಸಕ್ರಿಯವಾಗಿದ್ದು, ಸದಾ ಜಿಗಿಯಲು ಸಿದ್ಧವಾಗಿರುತ್ತದೆ. ವಿಭಿನ್ನ ವಸ್ತುಗಳು ಪ್ರತಿಯೊಂದಕ್ಕೂ ವಿರುದ್ಧವಾಗಿ ಉಜ್ಜಿದಾಗ ಅದರ ಅಣುಗಳು ಪರಸ್ಪರ ಸಂಪರ್ಕಕ್ಕೆ ಬರುತ್ತವೆ. ಇದು ಎಲೆಕ್ಟ್ರಾನ್‌ಗೆ ಇನ್ನೊಂದು ಮನೆಗೆ ಭೇಟಿ ನೀಡುವ ಅವಕಾಶವನ್ನು ನೀಡುತ್ತದೆ ಮತ್ತು ಅವು ತಕ್ಷ ಣಕ್ಕೆ ಇನ್ನೊಂದು ಮನೆಗೆ ಜಿಗಿಯುತ್ತವೆ. ಕೂದಲು ಮತ್ತು ಬಲೂನ್‌ನ ವಿಷಯದಲ್ಲಿ ಹೇಳುವುದಾದರೆ ನಿಮ್ಮ ಕೂದಲಿನ ಎಲೆಕ್ಟ್ರಾನ್ಸ್‌ ಬಲೂನ್‌ಗೆ ಜಿಗಿಯುತ್ತವೆ. ಇದು ಬಲೂನ್‌ ಅನ್ನು ಎಲೆಕ್ಟ್ರಾನ್‌ಗಳ ಮೂಲಕ ಚಾರ್ಜ್‌ ಮಾಡುತ್ತದೆ. ಇದನ್ನು ಸ್ಥಾಯಿ ವಿದ್ಯುತ್‌ ಎಂದು ಹೇಳುತ್ತಾರೆ. ಇದು ಸ್ಥಾಯಿಯಾಗಿರಲು ಕೂಡಾ ಒಂದು ಕಾರಣವಿದೆ. ಇದು ವಿದ್ಯುತ್‌ನಂತೆ ಹರಿಯುವ ಬದಲು ಒ ಂದೇ ಸ್ಥಳದಲ್ಲಿ ನಿಂತಿರುತ್ತದೆ. ಈ ಸ್ಥಾಯಿ ವಿದ್ಯುತ್‌ ಜಾರ್ಜ್‌ನಿಂದಾಗಿಯೇ ಅದು ಟಿಶ್ಯೂ ಪೇಪರನ್ನು ಆಕರ್ಷಿಸಿ ಅದು ಚಲಿಸುವಂತೆ ಮಾಡುತ್ತದೆ. ಇದರಿಂದ ದೆವ್ವದ ಆಕಾರದಲ್ಲಿರುವ ಟಿಶ್ಯೂ ಪೇಪರ್‌ ಚಲಿಸುತ್ತದೆ. ಈ ದೆವ್ವದ ಮೇಲೆ ಬಲೂನ್‌ ಅನ್ನು ಚಲಿಸುವ ಮೂಲಕ ನೀವು ದೆವ್ವವನ್ನು ಬೇಕಾದಂತೆ ಕುಣಿಸಬಹುದು.

ಸರಳ ವಿಜ್ಞಾನ

ಲೋಹದ ಛಾವಣಿ

ಮನೆಯೊಂದರ ಲೋಹದ ಛಾವಣಿಯು ಸಿಡಿಲಿನ ಬಡಿತವನ್ನು ತಡೆಯುವುದೇ? ಸಿಡಿಲು, ಸರೋವರ ಮತ್ತು ನದಿಗಳಂತೆ ನೀರಿನ ಮೂಲಗಳಿಗೆ ಬಡಿಯುವುದೇ?

ಲೋಹವು ಸಿಡಿಲನ್ನು ಆಕರ್ಷಿಸುವುದಿಲ್ಲ. ಸಿಡಿಲು ಆಯಾ ಸ್ಥಳಗಳ ಎತ್ತರದ ಸ್ಥಳಗಳಿಗೆ ಬಡಿಯುತ್ತದೆ. ಮರ, ಕಲ್ಲುಗಳ ಛಾವಣಿಯಂತೆ ಲೋಹದ ಛಾವಣಿಗೂ ಸಿಡಿಲು ಬಡಿಯುವ ಸಾಧ್ಯತೆ ಮತ್ತು ಅದು ಉಂಟು ಮಾಡುವ ಪರಿಣಾಮ ಒಂದೇ ರೀತಿಯದ್ದಾಗಿರುತ್ತದೆ. ಸಿಡಿಲು ನೀರಿಗೂ ಬಡಿಯುತ್ತದೆ. ಆದರೆ ಅದು ನೀರಿನ ಮೇಲ್ಮೈಯಲ್ಲಿ ಚಲಿಸುತ್ತದೆ ಎಂದು ನಂಬಲಾಗಿದೆ. ಆದರೆ ಅದು ನೀರಿನಲ್ಲಿ ಎಷ್ಟು ಹೊತ್ತು ಚಲಿಸುತ್ತದೆ ಎಂದು ಇನ್ನೂ ತಿಳಿದು ಬಂದಿಲ್ಲ.

ಯಾರಿವರು?

1. ಜರ್ಮನ್‌ನ ಭೌತಶಾಸ್ತ್ರಜ್ಞರಾಗಿರುವ ಇವರು ಜರ್ಮನಿಯ ಹಂಬರ್ಗ್‌ನಲ್ಲಿ 1857 ರಲ್ಲಿ ಜನಿಸಿದರು.

2. ಸ್ಕಾಟ್ಲೆಂಡ್‌ನ ಭೌತಶಾಸ್ತ್ರಜ್ಞ ಜೇಮ್ಸ್‌ ಕ್ಲರ್ಕ್‌ ಮ್ಯಾಕ್ಸ್‌ವೆಲ್‌ರವರ ಸಿದ್ಧಾಂತವಾದ ಎಲೆಕ್ಟ್ರೋಮ್ಯಾಗ್ನಿಟಿಸಂಅನ್ನು ಇವರು ಸರಿಯಾಗಿದ್ದೆಂದು ಪ್ರತಿಪಾದಿಸಿದ್ದು ಮಾತ್ರವಲ್ಲದೆ, ಶಾಖ ಮತ್ತು ಬೆಳಕನ್ನು ಎಲೆಕ್ಟ್ರೋಮ್ಯಾಗ್ನಿಟಿಕ್‌ ವಿಕಿರಣಗಳೆಂದು ಹೇಳಿದ್ದಾರೆ.

3. ಇವರು ಫೋಟೊ ಎಲೆಕ್ಟ್ರಿಕ್‌ನ ಪರಿಣಾಮವನ್ನು ಕಂಡು ಹಿಡಿದಿದ್ದು ಮಾತ್ರವಲ್ಲದೆ, ಅಣು ಲೋಕದ ಅಸ್ತಿತ್ವದ ಕುರಿತು ಮೊದಲ ಬಾರಿಗೆ ಸುಳಿವು ನೀಡಿದ್ದಾರೆ.

4. ಆವರ್ತನಗಳ ಘಟಕಕ್ಕೆ ಇವರ ಹೆಸರನ್ನು ಇಡಲಾಗಿದೆ.

5. ಇವರ ಅಳಿಯ ಕೂಡಾ ವಿಜ್ಞಾನಿಯಾಗಿದ್ದು, ಭೌತಶಾಸ್ತ್ರದಲ್ಲಿ ಮಾಡಿದ ಸಾಧನೆಗಾಗಿ ನೋಬೆಲ್‌ ಪ್ರಶಸ್ತಿಯನ್ನು ಪಡೆದಿದ್ದಾರೆ.

ಉತ್ತರ: ಹೆನ್ರಿಚ್‌ ಹರ್ಡ್ಜ್‌

ಲಾಜಿಕ್‌ ಮ್ಯಾಜಿಕ್‌

ಎ, ಬಿ ಮತ್ತು ಸಿ ಎಂಬ ವ್ಯಕ್ತಿಗಳು ತಾವು ಒಟ್ಟು ಎಷ್ಟು ವರ್ಷಗಳ ಕಾಲ ಕೆಲಸ ಮಾಡಿದ್ದೇವೆ ಎಂಬುದರ ಬಗ್ಗೆ ಚರ್ಚೆ ಮಾಡುತ್ತಿರುತ್ತಾರೆ. ಅದರ ಮುಖ್ಯಾಂಶ ಹೀಗಿದೆ.

-ಎ ಮತ್ತು ಬಿ ಯು ಒಟ್ಟಿಗೆ 36 ವರ್ಷ ಕೆಲಸ ಮಾಡಿದ್ದಾರೆ.

-ಬಿ ಮತ್ತು ಸಿ ಒಟ್ಟಿಗೆ 22 ವರ್ಷ ಕೆಲಸ ಮಾಡಿದ್ದಾರೆ.

-ಸಿ ಮತ್ತು ಎ ಒಟ್ಟಿಗೆ 28 ವರ್ಷ ಕೆಲಸ ಮಾಡಿದ್ದಾರೆ.

ಈ ಮೇಲಿನ ಸುಳಿವುಗಳ ಮೂಲಕ ಒಬ್ಬೊಬ್ಬರು ಎಷ್ಟು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ ಎಂಬುದನ್ನು ಕಂಡು ಹಿಡಿಯಿರಿ.

ಉತ್ತರ: ಎ ಎಂಬ ವ್ಯಕ್ತಿಯು 21 ವರ್ಷ ಕೆಲಸ ಮಾಡಿದ್ದರೆ, ಬಿ ಯು 15 ವರ್ಷ ಮತ್ತು ಸಿ ಯು 7 ವರ್ಷ ಕೆಲಸ ಮಾಡಿದ್ದಾರೆ.

ಚಿತ್ರಪ್ರಶ್ನೆ

1, 2, 3 ಮತ್ತು 4 ನೇ ಉಪ ಚಿತ್ರಗಳು ಮುಖ್ಯ ಚಿತ್ರದ ವಿವಿಧ ಭಾಗಗಳಾಗಿವೆ. ಇವುಗಳನ್ನು ನೀವು ಸರಿಯಾಗಿ ಹೊಂದಿಸಿರಿ.

ಸುಳಿವು: ಈ ಉಪಚಿತ್ರಗಳನ್ನು ನೀವು ವಿವಿಧ ದಿಕ್ಕುಗಳಲ್ಲಿ ತಿರುಗಿಸಿ ನೋಡಬಹುದು.

ಉತ್ತರ: 1-2/ಎ, 2-3/ಸಿ, 3-1/ಎ, 4-4/ಸಿ.


Viewing all articles
Browse latest Browse all 6795

Trending Articles


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ಮಲಗಿದ್ದ ಮಹಿಳೆ ಬೆದರಿಸಿ ಬೆತ್ತಲೆ ಫೋಟೋ ತೆಗೆದ ಕಳ್ಳ


ಅಪಘಾತ ಗಾಯಾಳುಗಳಿಗೆ ನೆರವು ನೀಡಿದವರಿಗೆ ಜೀವರಕ್ಷಕ ಪ್ರಶಸ್ತಿ


ಬಿಗ್‌ ನ್ಯೂಸ್: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟ -‌ ಈ ಬಾರಿಯೂ...


 ಕೌಟುಂಬಿಕ ಕಲಹ ಹಿನ್ನೆಲೆ; ಬುದ್ದಿವಾದ ಹೇಳಿದ ತಂಗಿಯನ್ನೇ ಕೊಂದ ಅಣ್ಣ…


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ವಚನಗಳಿಂದ ಸಂಗೀತ ಲೋಕ ಶ್ರೀಮಂತ


Final chapter from Krishnamacharya's Yogasanagalu Part II Pranayam. Plus the...


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಆಲೋಚನೆಗೂ ಕ್ರಿಯೆಯಷ್ಟೇ ಮಹತ್ವವಿದೆ


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


‘ವ್ಯಾಪಾರ’ದಲ್ಲಿ ವೃದ್ಧಿಯಾಗಲು ಹೀಗೆ ಮಾಡಿ….


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>