Quantcast
Channel: VijayKarnataka
Viewing all articles
Browse latest Browse all 6795

ಬರದಲ್ಲೂ ಬೋರೆ

$
0
0

- ಲಕ್ಷ್ಮೀ ಬಿರಾದಾರ

ಬೋರೆ ವಿಜಯಪುರ ಜಿಲ್ಲೆಯ ಸಾಂಪ್ರದಾಯಿಕ ಬೆಳೆ. ಬರದ ನಡುವೆಯೂ ಬೋರೆ ಇಲ್ಲಿನ ರೈತರ ಕೈಹಿಡಿದಿದೆ. ಇಂಡಿ ತಾಲೂಕಿನ ಹಿರೇರೂಗಿ ಗ್ರಾಮದ ರೈತ ಶಾಂತಪ್ಪ ಬಡಿಗೇರ ಬೋರೆ ಹಣ್ಣಿನ ಬೇಸಾಯದಿಂದ ಆದಾಯ - ನೆಮ್ಮದಿ ಕಂಡಿದ್ದಾರೆ.

ಶಾಂತಪ್ಪ ಅವರು 2 ಎಕರೆ ಭೂಮಿಯಲ್ಲಿ ಬೋರೆ ಹಣ್ಣು ಬೆಳೆಯುತ್ತಿದ್ದಾರೆ. ಬೋರೆ ಬೇಸಾಯ ಆರಂಭಿಸಿ 20 ವರ್ಷಗಳೇ ಕಳೆದಿವೆ. ಕಡಕ್‌ ಮತ್ತು ಉಮರಾಣಿ ತಳಿಯ ಗಿಡಗಳು ಅವರ ತೋಟದಲ್ಲಿವೆ. ಎಲ್ಲವೂ ಕಸಿ ಗಿಡಗಳು.

ಸಾಮಾನ್ಯವಾಗಿ ಬೋರೆ ಗಿಡಗಳಿಗೆ ಅವರು ವಾರಕೊಮ್ಮೆ ನೀರು ಪೂರೈಸುತ್ತಾರೆ. ಆದರೆ, ಹಣ್ಣು ಬಿಡುವ ಸಮಯದಲ್ಲಿ ಮಾತ್ರ ನಿತ್ಯವೂ ಗಿಡಗಳಿಗೆ ನೀರುಣಿಸುತ್ತಾರೆ. ಇದರಿಂದ ಇಳುವರಿ ಪ್ರಮಾಣ ಹೆಚ್ಚಾಗುತ್ತದೆ.

2 ಎಕರೆಯಲ್ಲಿ ಒಟ್ಟು 200 ಗಿಡಗಳಿವೆ. ಬೋರೆ ಹಣ್ಣಿನ ಸುಗ್ಗಿ ಡಿಸೆಂಬರ್‌ ತಿಂಗಳಿಂದ ಫೆಬ್ರವರಿ ಅಂತ್ಯದ ವರೆಗೆ ಇರುತ್ತದೆ. ಇಂಡಿ ಹಾಗೂ ವಿಜಯಪುರ ಮಾರುಕಟ್ಟೆಗೆ ಹಣ್ಣುಗಳನ್ನು ಕಳಿಸುತ್ತಾರೆ. 1 ಕಿಲೋ ಬೋರೆ ಹಣ್ಣಿಗೆ 15ರಿಂದ 30 ರೂಪಾಯಿ ವರೆಗೆ ದರ ಸಿಗುತ್ತದೆ. ಕಿಲೋಕ್ಕೆ ಸರಾಸರಿ 20 ರೂಪಾಯಿ ದರಕ್ಕೆ ಮೋಸವಿಲ್ಲ.

2 ಎಕರೆ ಬೋರೆ ತೋಟ ನಿರ್ವಹಣೆಗೆ ವಾರ್ಷಿಕ 30,000 ರೂಪಾಯಿ ವೆಚ್ಚವಾಗುತ್ತದೆ. ಹಣ್ಣು ಮಾರಾಟದಿಂದ 2 ಲಕ್ಷ ರೂಪಾಯಿ ಆದಾಯ ಪಡೆಯುತ್ತಿದ್ದು, ವಾರ್ಷಿಕ 1.70 ಲಕ್ಷ ರೂಪಾಯಿ ಲಾಭ ಬೋರೆ ಕೃಷಿಯಿಂದ ಸಿಗುತ್ತದೆ.

ಕೊಯ್ಲು: ಬೋರೆ ತೋಟದ ಬಹುತೇಕ ಕೆಲಸಗಳನ್ನು ಬಡಿಗೇರ ದಂಪತಿ ಮಾಡುತ್ತಾರೆ. ಕೆಲಸದ ಪ್ರಮಾಣ ಹೆಚ್ಚಿದ್ದರೆ ಕೆಲವು ದಿನಗಳ ಮಟ್ಟಿದೆ 3ರಿಂದ 4 ಕಾರ್ಮಿಕರ ನೆರವು ಪಡೆಯುತ್ತಾರೆ.

ಬೋರೆ ಹಣ್ಣು ಕೊಯ್ಲು ಸುಲಭ. ಕೆಳ ಹಂತದಲ್ಲೇ ಫಲ ಇರುವುದರಿಂದ ಸುಲಭವಾಗಿ ಕಾಯಿಗಳನ್ನು ಕೀಳಬಹುದು. ಕೊಯ್ಲನ್ನು ಮನೆಯ ಸದಸ್ಯರೇ ಮಾಡುತ್ತಾರೆ. ಬೋರೆ ಗಿಡಕ್ಕೆ ಬೂದಿ ರೋಗ ಕಾಣಿಸಿಕೊಳ್ಳುತ್ತದೆ. ಇನ್ನು ಕೆಲವೊಮ್ಮೆ ಕೀಟ ಬಾಧೆಯೂ ಕಾಣಿಸಿಕೊಳ್ಳುವುದುಂಟು. ಅವುಗಳನ್ನು ರಾಸಾಯನಿಕ ಸಿಂಪರಣೆಯಿಂದ ನಿಯಂತ್ರಣ ಮಾಡುತ್ತಾರೆ. ''ಗೋ ಮೂತ್ರ, ಸಗಣಿ ಹಾಗೂ ಯೂರಿಯಾ ಸೇರಿಸಿ ಪ್ರತಿ ಗಿಡಕ್ಕೆ 1 ಲೀಟರ್‌ ನಷ್ಟು ನೀಡುವುದರಿಂದ ಬೋರೆ ಹಣ್ಣು ಹೊಳಪು ಪಡೆಯುತ್ತದೆ. ರುಚಿಯೂ ಚೆನ್ನಾಗಿರುತ್ತದೆ'' ಎಂಬುದು ಶಾಂತಪ್ಪ ಬಡಿಗೇರ ಅವರ ಅನಿಸಿಕೆ.

ಬೋರೆ ಮರವಾಗಿ ಬೆಳೆಯುತ್ತದೆ. ಹಣ್ಣುಗಳ ಕೊಯ್ಲು ಮತ್ತು ನಿರ್ವಹಣೆ ದೃಷ್ಟಿಯಿಂದ 6ರಿಂದ 7 ಅಡಿ ವರೆಗೆ ಬೆಳೆಯಲು ಬಿಟ್ಟು ತುದಿ ಭಾಗದ ಚಿಗುರುಗಳನ್ನು ಕತ್ತರಿ ಸುತ್ತಾರೆ. ಗಿಡಗಳಿಗೆ ಅಗಸ್ಟ್‌ ತಿಂಗಳಿನಲ್ಲಿ ತಿಪ್ಪೆ ಗೊಬ್ಬರ ಅಕ್ಚೋಬರ್‌ ತಿಂಗಳಲ್ಲಿ ಸರಕಾರಿ ಗೊಬ್ಬರ ನೀಡುತ್ತಾರೆ. 1 ಎಕರೆಗೆ ಸರಾಸರಿ 100 ಟನ್‌ ಬೋರೆ ಹಣ್ಣು ಸಿಗುತ್ತದೆ.

ಹೆಚ್ಚಿನ ಮಾಹಿತಿಗೆ ರೈತ ಶಾಂತಪ್ಪ ಬಿರಾದಾರ ಅವರ ಮೊ. 9900146836



Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>