Quantcast
Channel: VijayKarnataka
Viewing all articles
Browse latest Browse all 6795

ಬಾಳೆ ತೋಟದಲ್ಲಿ ತರಕಾರಿ

$
0
0

- ವಿ.ಬಾಲಕೃಷ್ಣ ಶಿರ್ವ

ಬಾಳೆ ಜತೆಗೆ ಅಂತರ ಬೆಳೆಯಾಗಿ ಬದನೆ, ಹೂಕೋಸು, ಮೆಣಸು, ಸೋರೆಕಾಯಿ ಬೆಳೆಸಿ ಆದಾಯ ಕಂಡಿದ್ದಾರೆ ಮೆಲ್‌ರಾಯ್‌ ರೋಸ್ಚ್‌ ಮತ್ತು ಮಹಮ್ಮದ್‌ ಸಾಹೀದ್‌.

ಅವರು ಮೂಡುಬಿದ್ರೆ ಸಮೀಪದ ಅಲಂಗಾರಿನಲ್ಲಿ ಮೂರುವರೆ ಎಕರೆಯಲ್ಲಿ ಅರಸಿಕೆರೆ ಕದಳಿ ಬಾಳೆ ಬೆಳೆದಿದ್ದಾರೆ. ತರಹೇವಾರಿ ತರಕಾರಿ ಇಲ್ಲಿ ಅಂತರ ಬೆಳೆ. ವಾರ್ಷಿಕ ಬೆಳೆಯಾದ ಬಾಳೆ ಬೆಳೆದು ಫಲ ನೀಡುವವರೆಗೆ ಕಿರು ಅವಧಿಯ ತರಕಾರಿ ಬೆಳೆಯಿಂದ ಉತ್ತಮ ಆದಾಯ ಪಡೆದಿದ್ದಾರೆ.

ಒಂದು ಬಾಳೆ ಗಿಡದಿಂದ ಇನ್ನೊಂದು ಗಿಡಕ್ಕೆ 3 ಅಡಿ ಅಂತರ ಹಾಗೂ ಸಾಲಿನಿಂದ ಸಾಲಿಗೆ 3 ಅಡಿ ಅಂತರವಿದೆ. ಎರಡು ಸಾಲಿನ ಮಧ್ಯದಲ್ಲಿ 3 ತಿಂಗಳ ಅವಧಿಯಲ್ಲಿ ಫಲ ನೀಡುವ ಬದನೆ, ಹೂಕೋಸು, ಮೆಣಸು, ಟೊಮೆಟೊ, ಸೋರೆಕಾಯಿ, ಕಲ್ಲಂಗಡಿ ಬೆಳೆದಿದ್ದಾರೆ.

ಸೂಕ್ತ ಸಮಯದಲ್ಲಿ ರಸಗೊಬ್ಬರ ನೀಡಿದ್ದಾರೆ. ತರಕಾರಿಗಳ ಗಿಡಗಳ ಎಲೆ ಹಳದಿಯಾದಾಗ ಕೀಟನಾಶಕ ಹಾಗೂ ಆ್ಯಂಟಿ ಫಂಗಸ್‌ ದ್ರಾವಣ ಸಿಂಪರಿಸಿದ್ದಾರೆ. 200 ಬದನೆ ಗಿಡ, 1200 ಟೊಮೆಟೊ ಗಿಡ, 1000 ಕಲ್ಲಂಗಡಿ, 100 ಸೋರೆಕಾಯಿ ಬಳ್ಳಿ, 500 ಹೋಕೋಸು ಸಸಿಗಳನ್ನು ನಾಟಿ ಮಾಡಿದ್ದು, ಉತ್ತಮ ಇಳುವರಿ ಪಡೆದಿದ್ದಾರೆ.

ಎಲೆಕೋಸು ಮತ್ತು ಹೂಕೋಸನ್ನು 1 ಕೆಜಿಗೆ 15 ರೂಪಾಯಿ ದರದಲ್ಲಿ ಮಾರಾಟ ಮಾಡಿದ್ದಾರೆ. ಇವುಗಳ ಮಾರಾಟದಿಂದ 1200 ರೂಪಾಯಿ ಆದಾಯ ಬಂದಿದೆ. ಮೆಣಸನ್ನು 1 ಕೆಜಿಗೆ 40 ರೂ. ದರದಲ್ಲಿ ಮಾರಾಟ ಮಾಡಿದ್ದು 4000 ರೂಪಾಯಿ ಆದಾಯ ಬಂದಿದೆ. ಬದನೆಯನ್ನು 20 ರೂ.ದರದಲ್ಲಿ ಮಾರಾಟ ಮಾಡಿದ್ದು 30, 000 ಆದಾಯ ಬಂದಿದೆ. ಕಲ್ಲಂಗಡಿ ಹಣ್ಣನ್ನು 1 ಕೆಜಿಗೆ 15 ರೂ. ದರದಲ್ಲಿ ಮಾರಾಟ ಮಾಡಿದ್ದು 63,000 ಆದಾಯ ಬಂದಿದೆ. ಸೋರೆಕಾಯಿಯನ್ನು 15 ರೂ. ದರದಲ್ಲಿ ಮಾರಾಟ ಮಾಡಿದ್ದು 30, 000 ರೂ. ಆದಾಯ ಸಿಕ್ಕಿದೆ. ಮೂರೂವರೆ ಎಕರೆಯಲ್ಲಿ 3500 ಬಾಳೆ ಗಿಡಗಳನ್ನು ನಾಟಿ ಮಾಡಿದ್ದು ಖರ್ಚು ಕಳೆದು 4 ಲಕ್ಷ ರೂಪಾಯಿ ಆದಾಯ ಬರುವ ನಿರೀಕ್ಷೆಯಿದೆ.

ಬಾಳೆ ಜತೆ ಅಂತರ ಬೆಳೆಯಾಗಿ ತರಕಾರಿ ಬೆಳೆಸುವುದರಿಂದ ಉತ್ತಮ ಆದಾಯ ಪಡೆಯಬಹುದು ಎಂಬುದು ಮೆಲ್‌ರಾಯ್‌ ರೋಸ್ಚ್‌ ಮತ್ತು ಮಹಮ್ಮದ್‌ ಸಾಹೀದ್‌ ಅವರ ಅಭಿಪ್ರಾಯ.



Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>