Quantcast
Channel: VijayKarnataka
Viewing all articles
Browse latest Browse all 6795

ಮೋದಿ ನಡೆಯಿಂದ ನಿರಾಸೆ: ದೇವೇಗೌಡ

$
0
0

ಬೆಂಗಳೂರು: ಮೋದಿ‌ ನಡೆ ತುಂಬಾ ನಿರಾಸೆಯಾಗಿದೆ. ಇಂತಹ ನಡೆಯನ್ನುಮೋದಿಯಿಂದ ನಿರೀಕ್ಷೆ ಮಾಡಿರಲಿಲ್ಲ...

- ಇದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ನಗರದ ಖಾಸಗಿ ಹೋಟೆಲೊಂದರಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ನೋಟು ನಿಷೇಧ ಕುರಿತು ಪ್ರಧಾನಿ ನರೇಂದ್ರ ಮೋದಿ ಮೊನ್ನೆ ಮಾಡಿದ ಭಾಷಣಕ್ಕೆ ನೀಡಿದ ಪ್ರತಿಕ್ರಿಯೆ.

ಅವರ ಮಾತಿನ ಮುಖ್ಯಾಂಶಗಳು ಇಲ್ಲಿವೆ:

* ಕೇಂದ್ರ ಸರ್ಕಾರದ ನೋಟು ನಿಷೇಧ ದೇಶದ ಇತಿಹಾಸದಲ್ಲಿ ಅತ್ಯಂತ ದಿಟ್ಟ ಹೆಜ್ಜೆ. ದೇಶದ ಒಳಿತಿಗಾಗಿ ಮಾಡಿದ್ದನ್ನು ನಾನೂ ಸ್ವಾಗತಿಸಿದೆ. ಆದ್ರೆ ಇವತ್ತಿನ ತನಕ ನೋಟು ನಿಷೇಧ ನಂತರ 60 ಮಾರ್ಪಾಡು ಮಾಡಿದ್ದಾರೆ.

* ಭ್ರಷ್ಟಾಚಾರ ನಿರ್ಮೂಲನೆ ಮಾಡಿ ದೇಶವನ್ನು ಸುಭಿಕ್ಷವಾಗಿ ಮಾಡುತ್ತೇನೆ ಅಂತ ಮೋದಿ ಹೇಳಿದ್ರು. ಆದ್ರೆ, ನೋಟ್ ಬ್ಯಾನ್ ಮೂಲಕ ಕೂಲಿ ಕಾರ್ಮಿಕರು, ಸಾಮಾನ್ಯ ಜನ ಇವತ್ತಿಗೂ ಪರದಾಡುತ್ತಿದ್ದಾರೆ.

* ಮೋದಿ ಅವರದ್ದು ಸದುದ್ದೇಶದ ಕ್ರಮ ಎಂದು ಭಾವಿಸುತ್ತೇನೆ. ಆದರೆ ಪೂರ್ವಾಲೋಚನೆ ಇಲ್ಲದೆ ಮಾಡಿದ್ದು ತಪ್ಪು. ಜತೆಗೆ, ಮೊನ್ನೆ ಮೋದಿ ಭಾಷಣ ಮಾಡಿದ್ದು ಸಂಪೂರ್ಣವಾಗಿ ಕೇಳಿದೆ. ಭಾಷಣ ಕೇಳಿ ತುಂಬಾ ನಿರಾಶೆ ಆಯ್ತು.

* ಮಾತನಾಡುವ ಕಲೆ ಮೋದಿಗೆ ಕರಗತವಾಗಿದೆ. ಆದ್ರೆ ಇದೊಂದೇ ಕಲೆಯಿಂದ ದೇಶದ ಜನತೆಯ ಮನಸನ್ನ ಗೆಲ್ಲೋಕಾಗಲ್ಲ. ದಿಲ್ಲಿಯಲ್ಲಿ ಹೇಗೆ ಮಾತಾಡ್ಬೇಕು ಅಂತಾ, ಲಖನೌದಲ್ಲಿ ಹೇಗೆ ಭಾಷಣ ಮಾಡ್ಬೇಕು ಅನ್ನೋದು, ವಾರಣಾಸಿಗೆ ಹೋದಾಗ ಇನ್ಹೇಗೆ ಮಾತಾಡಬೇಕು ಅನ್ನೋದು ಪ್ರಧಾನಿಗೆ ಕರಗತವಾಗಿದೆ.

* ಸಿಬಿಐ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಗೌಡರು, ಸಿಬಿಐ ಅನ್ನುಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಟೀಕಿಸಿದರು. ಪಶ್ಚಿಮ ಬಂಗಾಳದಲ್ಲಿ ಸಿಬಿಐ ದಾಳಿ ನಡೆಸುತ್ತಿರುವುದಕ್ಕೆ ಈ ಪ್ರತಿಕ್ರಿಯೆ ನೀಡಿದ ಗೌಡರು, ನೋಟ್ ಬ್ಯಾನ್ ವಿರುದ್ಧ ಸಿಡಿದೆದ್ದ ದಿಟ್ಟ ಮಹಿಳೆ ಅಲ್ಲಿನ ಸಿಎಂ ಮಮತಾ ಬ್ಯಾನರ್ಜಿ ಎಂದು ಶ್ಲಾಘಿಸಿದರು.

ರಾಜ್ಯದಲ್ಲಿ ಹದಗೆಟ್ಟ ಕಾನೂನು ಸುವ್ಯವಸ್ಥೆ:
ನೂತನ ವರ್ಷಾಚರಣೆ ವೇಳೆ ಎಂ.ಜಿ.ರಸ್ತೆ ಮತ್ತು ಕಮ್ಮನಹಳ್ಳಿಯಲ್ಲಿ ನಡೆದ ದೌರ್ಜನ್ಯವನ್ನು ಖಂಡಿಸಿದ ಗೌಡರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗಿದೆ ಎಂದು ಆರೋಪಿಸಿದರು.

Did'nt Expected this by Modi: H.D Devegowda

Bengaluru: I did not expected by this kind of action by Prime Minister Narendra Modi. Ex Prime Minister H.D Devegowda told this in a pressmeet.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಅಪಘಾತ ಗಾಯಾಳುಗಳಿಗೆ ನೆರವು ನೀಡಿದವರಿಗೆ ಜೀವರಕ್ಷಕ ಪ್ರಶಸ್ತಿ


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಶಿವಸೇನೆ ಬಿಗಿಪಟ್ಟು: ದೇಶ ಗೆದ್ದ ಬಿಜೆಪಿ ವಿಲವಿಲ


ಶುಭ ಫಲಕ್ಕಾಗಿ ಮನೆಯಲ್ಲಿ ಗಾಳಿ ಗಂಟೆ ಹಾಕುವ ಮುನ್ನ ಈ ವಿಚಾರ ತಿಳಿಯಿರಿ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>