Quantcast
Channel: VijayKarnataka
Viewing all articles
Browse latest Browse all 6795

ಮಾನವ ಕಳ್ಳ ಸಾಗಾಣಿಕೆಯಲ್ಲಿ ಹೈದರಾಬಾದ್‌ ನಂ 1

$
0
0

ಹೈದರಾಬಾದ್‌: ದೇಶದಲ್ಲೆ ಹೈದರಾಬಾದ್‌ ಮಾನವ ಸಾಗಾಣಿಕೆಗೆ ಹೈದರಾಬಾದ್‌ ಪ್ರಮುಖ ಕೇಂದ್ರವಾಗಿದೆ ಎಂದು ಸ್ಥಳೀಯ ಎನ್‌ಜಿಒ ಒಂದು ತನ್ನ ಸಂಶೋಧನೆಯಲ್ಲಿ ತಿಳಿಸಿದೆ.

ಮೈಚಾಯ್ಸ್‌ ಪೌಂಡೇಶನ್‌ನ ವರದಿಯ ಪ್ರಕಾರ ಯುವತಿಯರ ಮೇಲಿನ ದೌರ್ಜನ್ಯ, ವೇಷ್ಯಾವಾಟಿಕೆ ಜಾಲ, ಮನೆ ಕೆಲಸದ ಹೆಸರಿನಲ್ಲಿ ಕರೆಸಿಕೊಂಡು ವೇಷ್ಯಾವಾಟಿಕೆಗೆ ದೂಡುವ ಪಿಡುಗು ತೀವ್ರ ಪ್ರಮಾಣದಲ್ಲಿ ಹೆಚ್ಚಿದೆ.

' ಆಂಧ್ರಪ್ರದೇಶ ಮತ್ತು ತೆಲಂಗಾಣದ ಹಳ್ಳಿಗಳು ಮತ್ತು ಸಣ್ಣ ನಗರಗಳಿಂದ ಯುವತಿಯರನ್ನು ಹೈದರಾಬಾದ್‌ಗೆ ಕರೆತಂದು ಇಲ್ಲಿಂದ ದೇಶ-ವಿದೇಶಗಳಿಗೆ ಸಾಗಿಸಲಾಗುತ್ತಿದೆ'ಎಂದು ಸಂಸ್ಥೆ ತಿಳಿಸಿದ್ದು, ನಗರಕ್ಕಿರುವ ಉತ್ತಮ ಸಂಪರ್ಕ, ಉನ್ನತ ದರ್ಜೆಯ ಹೈವೇ, ರಸ್ತೆ, ರೈಲುಗಳು ಮತ್ತು ಇತರ ಸಾರಿಗೆ ವ್ಯವಸ್ಥೆ ಯನ್ನು ವ್ಯವಸ್ಥಿತವಾಗಿ ದುರ್ಬಳಿಸಿಕೊಳ್ಳಲಾಗುತ್ತಿದೆ ಎಂದು ಅಭಿಪ್ರಾಯ ಪಟ್ಟಿದೆ.

ದೇಶದ ನಾನಾ ಭಾಗಗಳಿಂದ ಯುವತಿಯರನ್ನು ಹೈದರಾಬಾದ್‌ಗೆ ಕರೆತಂದು ನಂತರ ಇಲ್ಲಿಂದ ಬೇರೆಡೆಗೆ ಕಳ್ಳಸಾಗಣೆ ಮಾಡಲಾಗುತ್ತದೆ. ನಗರಕ್ಕೆ ಕರಾವಳಿ ತೀರದ ಜತೆಗೆ ಉತ್ತಮ ಸಂಪರ್ಕವಿರುವುದು ಇದಕ್ಕೆ ಪ್ರಮುಖ ಕಾರಣ ಎಂದು ಪೊಲೀಸ್‌ ಮೂಲಗಳು 'ಟೈಮ್ಸ್‌ ಆಫ್‌ ಇಂಡಿಯಾ'ಗೆ ತಿಳಿಸಿವೆ.

'ಇಲ್ಲಿ ಈ ದಂಧೆಯನ್ನು ಮರೆಮಾಚಲಾಗಿದೆ, ನಗರ ಅಭಿವೃದ್ಧಿ ಹೊಂದುತ್ತಿದ್ದಂತೆ ವೇಶ್ಯಾವಾಟಿಕೆಯೂ ತನ್ನ ಸ್ವರೂಪ ಬದಲಿಸಿದೆ, ನಗರದಲ್ಲಿ ವೇಶ್ಯಾವಾಟಿಕೆ ಕೇಂದ್ರಗಳಿಲ್ಲ, ಈಗ ಅವು ವೃತ್ತಿಪರವಾಗಿ ಪ್ರತಿಷ್ಟಿತ ಹೊಟೇಲ್‌ ಮತ್ತು ಅಪಾರ್ಟ್‌ಮೆಂಟ್‌ಗಳಲ್ಲಿ ನಡೆಯುತ್ತಿವೆ' ಎಂದು ತೆಲಂಗಾಣದ ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಯುನಿಸೆಫ್‌ನ ವಿಶೇಷ ಅಧಿಕಾರಿ ಡೇವಿಡ್‌ ರಾಜ್‌ ಹೇಳಿದ್ದಾರೆ.

ಹೈದರಾಬಾದ್‌ನಲ್ಲಿ ಸಾಕಷ್ಟು ಮಾನವ ಸಾಗಾಣಿಕೆ ರಾಕೆಟ್‌ಗಳನ್ನು ಮಟ್ಟ ಹಾಕಿರುವ ಪೊಲೀಸ್‌ ಕಮಿಷನರ್‌ ಮಹೇಶ್‌ ಭಗವತ್‌ ರಾಜ್‌ರ ಹೇಳಿಕೆಗೆ ಸಮ್ಮತಿ ಸೂಚಿಸಿದ್ದು, 'ಅಪಾರ್ಟ್‌ಮೆಂಟ್‌ಗಳಲ್ಲಿ ಮಾತ್ರವಲ್ಲ,ಆನ್‌ಲೈನ್‌ ಸೆಕ್ಸ್‌ ರಾಕೆಟ್‌, ವಿದೇಶಿ ಎಸ್ಕಾರ್ಟ್‌ ದಂಧೆ, ಮುಫ್ತಾ ವಿವಾಹಗಳಂತಹ ಕಾನೂನುಬಾಹಿರ ಚಟುವಟಿಕೆಗಳು ನಗರದಲ್ಲಿ ಮುಕ್ತವಾಗಿ ನಡೆಯುತ್ತಿವೆ' ಎಂದು ಹೇಳಿಕೆ ನೀಡಿದ್ದಾರೆ.


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


Namaskāra नमस्कार (salutation)


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>