Quantcast
Channel: VijayKarnataka
Viewing all articles
Browse latest Browse all 6795

ಕಿರಿಯ ಆರೋಗ್ಯ ಹುದ್ದೆ ಭರ್ತಿಗೆ ಮನವಿ

$
0
0

ಹಗರಿಬೊಮ್ಮನಹಳ್ಳಿ: ತಾಲೂಕಿನ ಕಡಲಬಾಳು ಗ್ರಾಮಸ್ಥರ ಕನಿಷ್ಠ ಚಿಕಿತ್ಸೆಗೆ ಸಹಕಾರಿಯಾಗಿ ಕೂಡಲೇ ಖಾಲಿ ಇರುವ ಕಿರಿಯ ಆರೋಗ್ಯ ಸಹಾಯಕಿ ನೇಮಕ ಮಾಡುವಂತೆ ಒತ್ತಾಯಿಸಿ ಬಿಜೆಪಿ ಹಿಂದುಳಿದ ವರ್ಗಗಳ ತಾಲೂಕು ಪದಾಧಿಕಾರಿಗಳು ಪಟ್ಟಣದ ಆಸ್ಪತ್ರೆಯಲ್ಲಿ ಜಿಲ್ಲಾ ಆರೋಗ್ಯ ವೈದ್ಯಾಧಿಕಾರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

ತಾ.ಪಂ.ಸದಸ್ಯ ಅನಿಲ್‌ ಜಾಣ ಮಾತನಾಡಿ, ಈಗಾಗಲೇ 8 ತಿಂಗಳಿಂದಲೂ ಹುದ್ದೆ ಖಾಲಿ ಇದೆ. ಬ್ಯಾಲಾಳು ಮತ್ತು ಗ್ರಾಮದ ಜನರಿಗೆ ಎಎನ್‌ಎಂ ಕೇಂದ್ರದಿಂದ ಮಾತ್ರ ಕನಿಷ್ಠ ಚಿಕಿತ್ಸೆ ಒದಗುತ್ತದೆ. ಆದರೆ, ಹುದ್ದೆ ಖಾಲಿ ಹಿನ್ನೆಲೆಯಲ್ಲಿ ಪಟ್ಟಣದ ಆಸ್ಪತ್ರೆಗೆ ದುಬಾರಿ ವೆಚ್ಚದಲ್ಲಿ ಚಿಕಿತ್ಸೆ ಹೊಂದುವಂತಾಗಿದೆ. ಕೂಡಲೇ ಹುದ್ದೆ ನೇಮಕಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಮನವಿ ಸ್ವೀಕರಿಸಿದ ಡಿಟಿಒ ನಿಜಾಮುದ್ದೀನ್‌ ಪ್ರತಿಕ್ರಿಯಿಸಿ, ವಾರದೊಳಗೆ ಆರೋಗ್ಯ ಸಹಾಯಕಿ ನೇಮಕ ಮಾಡಲಾಗುವುದು. ಈ ಕುರಿತಂತೆ ಜಿಲ್ಲಾ ಆರೋಗ್ಯಾಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು. ಬಿಜೆಪಿ ಹಿಂದುಳಿದ ವರ್ಗದ ಜಿಲ್ಲಾಧ್ಯಕ್ಷ ಮುಟುಗನಹಳ್ಳಿ ಕೊಟ್ರೇಶ್‌, ತಾ.ಪಂ.ಸಾಮಾಜಿಕ ನ್ಯಾಯಸಮಿತಿ ಅಧ್ಯಕ್ಷ ಬುಡ್ಡಿಬಸವರಾಜ, ಮಾನವ ಹಕ್ಕುಗಳ ಸಂರಕ್ಷ ಣೆ ಮತ್ತು ಸೇವೆ ಸಮಿತಿ ಜಿಲ್ಲಾಧ್ಯಕ್ಷ ಎಚ್‌.ಎಂ.ಚನ್ನವೀರ್‌, ಗ್ರಾ.ಪಂ.ಸದಸ್ಯ ನಾಗರಾಜ, ಮುಖಂಡರಾದ ಶರಣಪ್ಪ, ಚಿಂತ್ರಪಳ್ಳಿ ಲಕ್ಷ್ಮಿಪತಿ ಇದ್ದರು.


Viewing all articles
Browse latest Browse all 6795

Trending Articles



<script src="https://jsc.adskeeper.com/r/s/rssing.com.1596347.js" async> </script>