Quantcast
Channel: VijayKarnataka
Viewing all articles
Browse latest Browse all 6795

‘ಹೈ-ಕ. ಅಭಿವೃದ್ಧಿ ಶೂನ್ಯ’

$
0
0

ಕುರುಗೋಡು: ಹೈದರಾಬಾದ್‌-ಕರ್ನಾಟಕ ಅಭಿವೃದ್ಧಿ ಕೇವಲ ಹಾಳೆಯಲ್ಲಿ ಮಾತ್ರವಾಗಿದೆ. ವಾಸ್ತವದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಸರಕಾರ ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಲ್ಲಿ ನಿರ್ಲಕ್ಷ ್ಯ ಧೋರಣೆ ತಾಳಿದೆ ಎಂದು ಕಂಪ್ಲಿ ವಿಧಾನ ಸಭೆ ಕ್ಷೇತ್ರ ಶಾಸಕ ಟಿ.ಎಚ್‌. ಸುರೇಶ್‌ಬಾಬು ದೂರಿದರು.

ಇಲ್ಲಿನ ಪುರಸಭೆಯಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡು ಸಭೆಯ ಕಾರ್ಯಕಲಾಪ ವೀಕ್ಷಿಸುವ ಸಂದರ್ಭದಲ್ಲಿ ಮಾತನಾಡಿದರು.

ಹೈ-ಕ ಅಭಿವೃದ್ಧಿ ವರದಿಯಲ್ಲಿ ಕುರುಗೋಡು ಅತ್ಯಂತ ಹಿಂದುಳಿದಿದೆ ಎಂದು ನಮೂದಾಗಿದ್ದರೆ ಸಿಗುತ್ತಿರುವ ಅನುದಾನ ಕೇವಕಲ 1ಕೋಟಿ ರೂ. ಮಾತ್ರ . ಈ ಅಲ್ಪ ಅನುದಾನದಿಂದ ಹೆಚ್ಚಿನ ಅಭಿವೃದ್ಧಿ ಆಗದು. ಹೆಚ್ಚಿನ ಅನುದಾನ ನೀಡುವಂತೆ ಶಾಸನ ಸಭೆಯಲ್ಲಿ ಮಾತನಾಡುವೆ. ಕುರುಗೋಡು ತಾಲೂಕು ಎಂದು ಘೋಷಿಸಿ 6ವರ್ಷ ಕಳೆದರೂ ಹೆಚ್ಚಿನ ಅಭಿವೃದ್ಧಿ ಕೈಗೊಳ್ಳಲು ರಾಜ್ಯ ಸರಕಾರ ಸಮರ್ಪಕ ಕ್ರಮ ಕೈಗೊಳ್ಳುತ್ತಿಲ್ಲ ಎಂದರು.

ನೀರು ಮತ್ತು ಸ್ವಚ್ಛತೆಗೆ ಆದ್ಯತೆ: ಬೇಸಿಗೆ ಹತ್ತಿರ ವಾಗುತ್ತಿದ್ದೆ ಕುಡಿವ ನೀರು 23 ವಾರ್ಡಿಗೂ ಸಮರ್ಪಕವಾಗಿ ದಕ್ಕುತ್ತಿಲ್ಲ. ಕೆಲ ವಾರ್ಡ್‌ಗಳಿಗೆ ನೀರು ತಲುಪುತ್ತಿಲ್ಲ. ಈ ಬಗ್ಗೆ ಸಭೆ ಗಂಭೀರವಾಗಿ ಚಿಂತಿಸಬೇಕು ಎಂದು ಸದಸ್ಯ ಹನೀಫ್‌ ಮತ್ತು ಮಹೇಶ್‌ ಒತ್ತಾಯಿಸಿದರು. ಇದಕ್ಕೆ ಉಳಿದ ಸದಸ್ಯರು ಧ್ವನಿಗೂಡಿಸಿದರು. ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಶಾಸಕ, ಸಣ್ಣ ಹಾಗೂ ಮಧ್ಯಮ ವರ್ಗದ ಪಟ್ಟಣಗಳ ಅಭಿವೃದ್ಧಿಗೆ ಮುಖ್ಯಮಂತ್ರಿ ಅನುದಾನದಡಿ ಮಂಜೂರಾದ 10ಕೋಟಿ ರೂ. ಅನುದಾನವನ್ನು ಕುಡಿವ ನೀರಿಗೆ ಮೀಸಲಿರಿಸಬೇಕು. ಸಮಗ್ರ ಕುಡಿವ ನೀರಿನ ಕೆರೆಗೆ ಹೊಸ ಫಿಲ್ಟರ್‌ಬೆಡ್‌ ಹಾಗೂ 23 ವಾರ್ಡಿಗೆ ನೀರು ತಲುಪಿಸಲು ಅಗತ್ಯ ಟ್ಯಾಂಕರ್‌ ನಿರ್ಮಾಣ, ನೀರು ಸಬರಾಜು ಕೊಳವೆ ಜೋಡಣೆ, ಸಾರ್ವಜನಿಕ ನಳ ನಿರ್ಮಾಣಕ್ಕೆ ಮೀಸಲಿರಿಸಬೇಕು ಎಂದು ಸಭೆ ತೀರ್ಮಾನಿಸಿತು. ಅಲ್ಲದೆ, ಕೆಲ ಮಹಿಳಾ ಸದಸ್ಯರು ಒತ್ತಾಯಿಸಿದ ಸಾಮೂಹಿಕ ಶೌಚಾಲಯದ ಬಗ್ಗೆ ಬಿಹಾರ್‌ ಮಾದರಿಯ ಶೌಚಾಲಯ ನಿರ್ಮಿಸಿ ಇದರ ಉಸ್ತುವಾರಿಗೆ ಪುರಸಭೆ ಅನುದಾನ ನೀಡಬೇಕು. ಅಲ್ಲದೆ ಪಟ್ಟಣದ ಮುಖ್ಯ ವೃತ್ತದಲ್ಲಿ ಸಾರ್ವಜನಿಕರಿಗೆ ಹಾಗೂ ಪ್ರಯಾಣಿಕರಿಗಾಗಿ ಶೌಚಾಲಯ ನಿರ್ಮಿಸಲು ತಕ್ಷ ಣ ಕ್ರಿಯಾ ಯೋಜನೆ ಸಿದ್ಧ್ದಪಡಿಸುವಂತೆ ಸಭೆ ತೀರ್ಮಾನಿಸಲಾಯಿತು.

ಬೀಡಾಡಿ ದನ, ನಾಯಿ ಓಡಿಸಿ: ಪಟ್ಟಣದ ಮುಖ್ಯ ವೃತ್ತ ಹಾಗೂ ಗೆಣಿಕೆಹಾಳ್‌ ರಸ್ತೆಯಲ್ಲಿ ನಾಯಿ, ಬೀಡಾಡಿ ದನಗಳ ಹಾವಳಿ ಉಲ್ಬಣಗೊಂಡಿದೆ. ಇತ್ತೀಚೆಗೆ ನಾಯಿ ಕಡಿದು ಒಬ್ಬರು ಮೃತ ಪಟ್ಟಿದ್ದಾರೆ. ಸಂತೆ ಬಯಲಲ್ಲಿ ಅಲೆದಾಡುವ ಬೀಡಾಡಿ ದನಗಳು ದ್ವಿಚಕ್ರವಾಹನದ ಚೀಲದಲ್ಲಿನ ಸಂತೆ, ಸುಗಮ ಸಂಚಾರಕ್ಕೆ ಅಡ್ಡಿ ಪಡಿಸುತ್ತಿವೆ. ಈ ಬಗ್ಗೆ ಹಲ ಬಾರಿ ಮನವಿ ಸಲ್ಲಿಸಿದ್ದರೂ ಪುರಸಭೆ ಅಧಿಕಾರಿ ಗಮನ ನೀಡಿಲ್ಲ ಎಂದು ಸದಸ್ಯ ಗೌರಮ್ಮ ಮತ್ತು ವೆಂಕಟೇಶ್‌ ಆಗ್ರಹಿಸಿದರು.

ಈ ಬಗ್ಗೆ ಪುರ ಸಭೆ ಮುಖ್ಯಾಧಿಕಾರಿ ದುರುಗಣ್ಣ ಮಾತನಾಡಿ, ಬೀಡಾಡಿದನದ ಮಾಲೀಕರಿಗೆ ನೋಟೀಸ್‌ ಜಾರಿ ಮಾಡಲಾಗುವುದು. ಕ್ರಮ ಕೈಗೊಳ್ಳದಿದ್ದರೆ ದನಗಳನ್ನು ಬಂಡಿದೊಡ್ಡಿಗೆ ನೂಕಲಾಗುವುದು. ಅಲ್ಲದೆ ನಾಯಿಗಳ ವಿಲೇವಾರಿಗೆ ಪಶು ಸಂಗೋಪನಾ ಇಲಾಖೆ ಅಧಿಕಾರಿಗೆ ಮನವಿ ಮಾಡಲಾಗುವುದು ಎಂದರು

ತೆರಿಗೆ ಹೆಚ್ಚಳಕ್ಕೆ ನಕಾರ: ಪುರಸಭೆಯಾಗಿ ಮೇಲ್ದರ್ಜೆಗೇರಿದೆ. ಅಲ್ಲದೆ ಗ್ರಾ.ಪಂ. ಇದ್ದಾಗ ಪ್ರತಿ ಮೂರು ವರ್ಷಕ್ಕೊಮ್ಮೆ ತೆರಿಗೆ ಹೆಚ್ಚಿಸಲಾಗಿದೆ. ಮನೆ, ನೀರು, ಕಟ್ಟಡ ಹಾಗೂ ಆಸ್ತಿ ತೆರಿಗೆಯನ್ನು ಹೆಚ್ಚಿಸಲು ಪುರಸಭೆ ಅಧಿಕಾರಿ ನೀಡಿದ ಸಲಹೆಗೆ ಸದಸ್ಯರೆಲ್ಲರೂ ಒಕ್ಕೊರಲಿನಿಂದ ವಿರೋಧಿಸಿದ ಕಾರಣ ತಿರ್ಮಾನವನ್ನು ಕೈಬಿಡಲಾಯಿತು.

ಕೊನೆಯಲ್ಲಿ ನಾನಾ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು. ಅಭಿವೃದ್ಧಿ ಪ್ಯಾಕೇಜ್‌ ಜಾರಿಗೆ ಈಗಾಗಲೇ ಟೆಂಡರ್‌ ಕರೆಯಲಾಗಿದೆ. ಕೆಲ ಟೆಂಡರ್‌ಗಳು ತಾಂತ್ರಿಕೆ ತೊಂದರೆಯಿಂದಾಗಿ ನನೆಗುದಿಗೆ ಬಿದ್ದಿವೆ. ಇವುಗಳನ್ನು ಬಗೆಹರಿಸಿ ಪುನರ್‌ ಟೆಂಡರ್‌ ಪ್ರಕ್ರಿಯೆ ಹಾಗೂ ಜಿಲ್ಲಾಧಿಕಾರಿ ಅನುಮೋದನೆ ಕಳಿಸಲು ಸಭೆ ತೀರ್ಮಾನಿಸಿತು. ಸಭೆಯಲ್ಲಿ 14ನೇ ಹಣಕಾಸು, ಎಸ್‌ಎಫ್‌ಸಿ ಯೋಜನಗಳ 11ಪ್ಯಾಕೇಜ್‌ಗಳ ಕ್ರಿಯಾ ಯೋಜನೆಗೆ ಸಭೆ ಅನುಮೋದನೆ ನೀಡಿತು.

ಎ.ಕೆ.ಹನುಮಂತ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಎಂಜನಿಯರ್‌ ಮಹಾದೇವಪ್ಪ, ವ್ಯವಸ್ಥಾಪಕ ಈರಣ್ಣ, ಲೆಕ್ಕ ಪರಿಶೋಧಕ ಮೆಹಬೂಬ್‌ ಪಾಷಾ, ಇತರರು ಇದ್ದರು.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>