Quantcast
Channel: VijayKarnataka
Viewing all articles
Browse latest Browse all 6795

ಅಗ್ಗವಲ್ಲ ಇದು ಶತಮಾನದ ಮಗ್ಗ!

$
0
0

ಶಿವಲಿಂಗ ಸಿದ್ನಾಳ ಮಹಾಲಿಂಗಪುರ: ಈತನ ವಯಸ್ಸು ಬರೋಬ್ಬರಿ 106. ಸರಕಾರ ಬದಲಾಗಿದೆ, ಅಧಿಕಾರ ಬದಲಾಗಿದೆ, ಸಂಗಡಿಗರೂ ಬದಲಾಗಿದ್ದಾರೆ. ಆದರೆ ಈತ ಮಾತ್ರ ಒಂದು ಶತಕದಿಂದ ತನ್ನ ಕಾಯಕದಲ್ಲಿ ನಿರತನಾಗಿದ್ದಾನೆ. ಎಲ್ಲವೂ ಬದಲಾದರೂ ತಾನು ಬದಲಾಗದೆ ನೇಕಾರನ ಬದುಕಿಗೆ ಆಸರೆಯಾಗಿದ್ದಾನೆ!

ಯಾರೀತ ಎಂಬ ಕುತೂಹಲವೇ? ಮಗ್ಗ, ಗಟ್ಟಿಮುಟ್ಟಾದ ಯಂತ್ರಚಾಲಿತ ಮಗ್ಗ!

ಪಟ್ಟಣದ ಜವಳಿ ಬಜಾರ್‌ ಹಳೆ ಪೋಸ್ಟ್‌ ಆಫೀಸ್‌ ಬಳಿಯ ನೇಕಾರ ಈಶ್ವರ ರಾಮಪ್ಪ ಹಳ್ಳಿ ಎಂಬುವರ ಮನೆಯಲ್ಲಿ ಈ ಮಗ್ಗವಿದೆ. ಇವತ್ತಿಗೂ ಯಾವುದೇ ವ್ಯತ್ಯಯವಿಲ್ಲದೆ ದಿನಕ್ಕೆ ಕನಿಷ್ಠ 5 ಸೀರೆ ನೇಯುವ ಮೂಲಕ ತನ್ನ ವರ್ಚಸ್ಸು ಉಳಿಸಿಕೊಂಡು ಬಂದಿದೆ.

ಅದರ ಕಬ್ಬಿಣದ ಚೆಸ್ಸಿ ಮೇಲೆ ಬಟರ್‌ವರ್ತ್‌ ಅಂಡ್‌ ಡಿಕಿನ್‌ಸನ್‌ ಬರ್ನಲೇ ಎಂದು ಕಂಪನಿ ಹೆಸರು ಬರೆಯಲಾಗಿದೆ. ಅದರ ಜತೆಗೆ 1910 ಮಾಡಲ್‌ ಎಂದು ಇಸ್ವಿಯನ್ನೂ ನಮೂದಿಸಲಾಗಿದೆ.

ಇದನ್ನು ಆಧರಿಸಿ ಮಗ್ಗದ ಆಯುಷ್ಯ ಅಂದಾಜಿಸಲಾಗಿದೆ, ಇದು ಇಂಗ್ಲೆಂಡ್‌ನ ಟೆಕ್ಸ್‌ಟೈಲ್‌ ಇನ್‌ಸ್ಟ್ರುಮೆಂಟ್‌ ಮ್ಯಾನ್ಯುಫಾಕ್ಚರಿಂಗ್‌ ಕಂಪನಿ ಉತ್ಪಾದನೆಯಾಗಿದ್ದು, ಬ್ರಿಟೀಷರ ಕಾಲದಲ್ಲಿ ಭಾರತದ ನೇಕಾರರಿಗೆ ಲಭಿಸಿದೆ ಎನ್ನಲಾಗುತ್ತಿದೆ. ಸಚಿವೆ ಉಮಾಶ್ರೀ ಕೂಡ ಇವರ ಮನೆಗೆ ಭೇಟಿ ನೀಡಿ ಶತಮಾನದ ಯಂತ್ರಮಗ್ಗ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

-----------

ಈ ಯಂತ್ರಮಗ್ಗ ಎಲ್ಲಿಂದ, ಯಾವಾಗ ಬಂದಿದೆ ಎಂಬುದು ಗೊತ್ತಿಲ್ಲ. ನಮ್ಮ ತಂದೆ-ತಾಯಿ ಇದರಿಂದಲೇ ನೇಯುತ್ತಿದ್ದರು. ತಲೆಮಾರಿನ ಉದ್ಯೋಗವಾಗಿ ನಾನೂ 30 ವರ್ಷಗಳಿಂದ ಇದೇ ಮಗ್ಗದಿಂದ ನೇಯುತ್ತಿದ್ದೇನೆ. ಯಾವತ್ತೂ ದುರಸ್ತಿ ಮಾಡಿಸಿಲ್ಲ. ಇದು ನನ್ನ ಕುಟುಂಬವನ್ನೇ ಸಲಹುತ್ತಿದೆ. ಇದನ್ನು ಮ್ಯೂಸಿಯಂನಲ್ಲಿ ಪ್ರದರ್ಶನಕ್ಕೆ ಇಡುವುದಾದರೆ ಮಾರಲು ಸಿದ್ಧನಿದ್ದೇನೆ. ಆಸಕ್ತರು ಮೊ.9008019014 ಸಂಪರ್ಕಿಸಬಹುದು.

-ಈಶ್ವರ ಹಳ್ಳಿ, ನೇಕಾರ

---------------

ಕೇವಲ 10ಗಿ20 ಅಳತೆಯ ಸ್ವಂತ ಜಾಗದಲ್ಲಿ ಈ ಯಂತ್ರಮಗ್ಗ ಅಳವಡಿಸಿ, ಪಕ್ಕದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಈಶ್ವರ ಪತ್ನಿ ರಾಜೇಶ್ವರಿ, ಇಬ್ಬರು ಮಕ್ಕಳೊಂದಿಗೆ ಸಂತೃಪ್ತ ಜೀವನ ನಡೆಸುತ್ತಿದ್ದಾರೆ. ಇದರಿಂದ ಮಗಳನ್ನು ಮೆರಿಟ್‌ ಆಧಾರದ ಮೇಲೆ ಬಿಎಚ್‌ಎಂಎಸ್‌, ಮಗನನ್ನು ಯೋಗಾ ನ್ಯಾಚ್ಯರೋಪತಿ (ಬಿಎನ್‌ವೈಎಸ್‌) ಓದಿಸುತ್ತಿದ್ದಾರೆ. ಸಂಪ್ರದಾಯಕ್ಕೆ ಹೆಚ್ಚು ಆದ್ಯತೆ ನೀಡುವ ಈ ಕುಟುಂಬದಲ್ಲಿ ಇಂದಿಗೂ ಟಿವಿ ಇಲ್ಲ. ಬದಲಾಗಿ ಹಳೇ ರೇಡಿಯೊದಿಂದ ಎಲ್ಲ ಉಪಯುಕ್ತ ಕಾರ್ಯಕ್ರಮ ಆಲಿಸುತ್ತಾರೆ. ಸಾಹಿತಿ, ಸಂಗೀತಕಾರರೆಂದರೆ ಇವರಿಗೆ ಅಚ್ಚುಮೆಚ್ಚು. ಆಕಾಶವಾಣಿಯಲ್ಲಿ ಸಂದರ್ಶನಕ್ಕೂ ಹೋಗಿ ಬಾನುಲಿಯ ಎಲ್ಲ ಕಲಾವಿದರಿಗೆ ತಾವು ನೇಯ್ದ ಬಟ್ಟೆ ಸ್ಯಾಂಪಲ್‌ ನೀಡಿ ಮನಗೆದ್ದಿದ್ದಾರೆ.


Viewing all articles
Browse latest Browse all 6795

Trending Articles


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ಮಲಗಿದ್ದ ಮಹಿಳೆ ಬೆದರಿಸಿ ಬೆತ್ತಲೆ ಫೋಟೋ ತೆಗೆದ ಕಳ್ಳ


ಅಪಘಾತ ಗಾಯಾಳುಗಳಿಗೆ ನೆರವು ನೀಡಿದವರಿಗೆ ಜೀವರಕ್ಷಕ ಪ್ರಶಸ್ತಿ


ಬಿಗ್‌ ನ್ಯೂಸ್: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟ -‌ ಈ ಬಾರಿಯೂ...


 ಕೌಟುಂಬಿಕ ಕಲಹ ಹಿನ್ನೆಲೆ; ಬುದ್ದಿವಾದ ಹೇಳಿದ ತಂಗಿಯನ್ನೇ ಕೊಂದ ಅಣ್ಣ…


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ವಚನಗಳಿಂದ ಸಂಗೀತ ಲೋಕ ಶ್ರೀಮಂತ


Final chapter from Krishnamacharya's Yogasanagalu Part II Pranayam. Plus the...


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಆಲೋಚನೆಗೂ ಕ್ರಿಯೆಯಷ್ಟೇ ಮಹತ್ವವಿದೆ


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


‘ವ್ಯಾಪಾರ’ದಲ್ಲಿ ವೃದ್ಧಿಯಾಗಲು ಹೀಗೆ ಮಾಡಿ….


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>