Quantcast
Channel: VijayKarnataka
Viewing all articles
Browse latest Browse all 6795

ಬಣ್ಣದ ಲೋಕದಲ್ಲಿ ವಿವಾದಗಳ ಮೆರವಣಿಗೆ

$
0
0

- ಶರಣು ಹುಲ್ಲೂರು

ಗಾಸಿಪ್‌ ಮತ್ತು ವಿವಾದಗಳಿಲ್ಲದ ಬಣ್ಣದ ಲೋಕವನ್ನು ಊಹಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಇಲ್ಲಿ ಕಾಂಟ್ರವರ್ಸಿಗಳು ಕಾಮನ್‌. ಸಿಲೆಬ್ರಿಟಿ ಅನ್ನುವ ಕಾರಣಕ್ಕಾಗಿ ಇವರ ವಿವಾದಗಳು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತವೆ. 2016ರಲ್ಲಿ ವಿವಾದಕ್ಕೀಡಾದ ತಾರೆಯರ ಸುತ್ತಮುತ್ತಲಿನ ಮಾಹಿತಿಯಿದು.

ಸಿನಿಮಾಗಳಷ್ಟೇ ವಿವಾದಗಳು ಕೂಡ ಸ್ಯಾಂಡಲ್‌ವುಡ್‌ನಲ್ಲಿ ಸಖತ್‌ ಸದ್ದು ಮಾಡುತ್ತವೆ. ಕೆಲವು ಕಾಂಟ್ರವರ್ಸಿಗಳು ಸಿನಿಮಾರಂಗಕ್ಕೇ ಸಂಬಂಧಿಸಿದ್ದರೆ, ಉಳಿದವು ಅವರ ಖಾಸಗಿ ಬದುಕಿನಲ್ಲಿ ಎದ್ದಿರುವ ಬಿರುಗಾಳಿಯಂಥವು.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹೆಚ್ಚು ವಿವಾದಗಳು ಸ್ಯಾಂಡಲ್‌ವುಡ್‌ನಲ್ಲಿ ಸಿಗುತ್ತವೆ. ಅದರಲ್ಲೂ ಹೆಚ್ಚು ಕಾಂಟ್ರವರ್ಸಿಗಳು ಪೊಲೀಸ್‌ ಠಾಣೆಯ ಮೆಟ್ಟಿಲು ಏರಿವೆ. ಕೆಲವು ಗಂಭೀರ ಸ್ವರೂಪವನ್ನೂ ಪಡೆದುಕೊಂಡಿವೆ.

ಯಶ್‌ ಕಾಂಟ್ರವರ್ಸಿ:

ಸ್ಯಾಂಡಲ್‌ವುಡ್‌ನಲ್ಲಿ ಹೆಚ್ಚು ಸದ್ದು ಮಾಡಿದ ವಿವಾದ ಯಶ್‌ ಅವರದ್ದು. ರೈತರ ಪರ ನಿಜವಾಗಿಯೂ ಕಾಳಜಿ ತೋರಿದ್ದ ಯಶ್‌ ಮೇಲೆ ಕೆಲವು ಮಾಧ್ಯಮಗಳು ಮುಗಿಬಿದ್ದವು. ಸಾಮಾಜಿಕ ಜಾಲತಾಣದಲ್ಲಿ 'ಎಲ್ಲಿದ್ದೀರಾ ಯಶ್‌?' ಎಂಬ ಟ್ರೋಲ್‌ ಆಂದೋಲನ ಶುರುವಾಯಿತು. ಬರೋಬ್ಬರಿ ಒಂದು ತಿಂಗಳ ಕಾಲ ಈ ವಿವಾದ ಜೀವಂತವಾಗಿತ್ತು. ಇನ್ನೂ ಈ ಕಾಂಟ್ರವರ್ಸಿ ಬೂದಿಮುಚ್ಚಿದ ಕೆಂಡದಂತಿದೆ.

ಮಾಲಾಶ್ರೀ- ಇಮ್ರಾನ್‌ ಜಗಳ್ಬಂದಿ:

ಮಾಲಾಶ್ರೀ ಮತ್ತು ನೃತ್ಯ ನಿರ್ದೇಶಕ ಇಮ್ರಾನ್‌ ಸರ್ದಾರಿಯ ನಡುವಿನ ಜಗಳ್ಬಂದಿ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಮಾಲಾಶ್ರೀಗೆ ನಟಿಸುವುದಕ್ಕೆ ಬರುವುದಿಲ್ಲ ಎಂಬ ಇಮ್ರಾನ್‌ ಮಾತಿಗೆ ಸಿಡಿದೆದ್ದ ಮಾಲಾಶ್ರೀ ಸರಣಿಯಾಗಿ ಪ್ರೆಸ್‌ಮೀಟ್‌ ಮಾಡಿದರು. ಒಂದು ವಾರಗಳ ಕಾಲ ಆರೋಪ -ಪ್ರತ್ಯಾರೋಪಗಳು ನಡೆದವು. ನಿರ್ಮಾಪಕ ಕೆ.ಮಂಜು ಮಧ್ಯಸ್ಥಿಕೆಯಲ್ಲಿ ವಿವಾದಕ್ಕೆ ಸುಖಾಂತ್ಯ ಹಾಡಲಾಯಿತು.

ಪೊಲೀಸ್‌ ಠಾಣೆಗೆ ಹೋದ ಸುಲ್ತಾನ್‌:

ದಿನಕರ್‌ ತೂಗುದೀಪ್‌ ಮತ್ತು ಬುಲೆಟ್‌ ಪ್ರಕಾಶ್‌ ನಡುವಿನ 'ಸುಲ್ತಾನ್‌' ಚಿತ್ರದ ವಿವಾದ ಪೊಲೀಸ್‌ ಠಾಣೆ ಮೆಟ್ಟಿಲೇರಿತು. ಎರಡ್ಮೂರು ವರ್ಷಗಳ ನಂತರ ಸೆಟ್ಟೇರಬೇಕಿರುವ 'ಸುಲ್ತಾನ್‌' ಸಿನಿಮಾದ ಪ್ರಮೋಷನ್‌ ಈಗಿನಿಂದಲೇ ಶುರು ಮಾಡಿದ್ದಾರೆ ಅನ್ನುವ ಕ್ಷುಲ್ಲಕ ಕಾರಣವೇ ಜಗಳಕ್ಕೆ ಕಾರಣವಾಗಿತ್ತು. ಇಬ್ಬರ ಮಧ್ಯ ಮಾರಾಮಾರಿಯೇ ನಡೆದು ಹೋಯಿತು. ಗಲಾಟೆ ತೀವ್ರಗೊಂಡ ಹಿನ್ನೆಲೆಯಲ್ಲಿ ಪೊಲೀಸ್‌ರೇ ಇಬ್ಬರ ಮಧ್ಯೆ ರಾಜಿಸಂಧಾನ ಮಾಡಿದರು.

ಹಿರಿಯ ನಟ ಸುಂದರ್‌ ರಾಜ್‌ ಪುತ್ರಿ ಮೇಘನಾ ಮದುವೆಯ ವಿಷಯ ಕೂಡ ಗಾಂಧಿನಗರದಲ್ಲಿ ಕೋಲಾಹಲ ಸೃಷ್ಟಿ ಮಾಡಿತ್ತು. ತಮಿಳುನಾಡು ಮೂಲದ ಉದ್ಯಮಿ ಜನಾರ್ಧನ್‌ ಎನ್ನುವವರನ್ನು ಮೇಘನಾ ಮದುವೆಯಾಗಿ, ವಂಚಿಸಿದ್ದಾರೆಂದು ದೂರು ದಾಖಲಾಗಿತ್ತು. ಕೊನೆಗೆ ಆರೋಪದಲ್ಲಿ ಯಾವುದೇ ಹುರುಳಿಲ್ಲ ಅನ್ನುವ ಕಾರಣ ಕೊಟ್ಟು ವಿವಾದಕ್ಕೆ ನಾಂದಿ ಹಾಡಲಾಯಿತು.

ದರ್ಶನ್‌ ಪತ್ನಿಯಿಂದ ದೂರು:

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಈ ವರ್ಷವೂ ಸುದ್ದಿಯಾದರು ದರ್ಶನ್‌. ಹೆಂಡತಿಯ ಮೇಲೆ ಮತ್ತೆ ದರ್ಶನ್‌ ಹಲ್ಲೆ ಮಾಡಿದ್ದಾರೆಂಬ ಆರೋಪ ಕೇಳಿ ಬಂತು. ಹೆಂಡತಿಯ ಮನೆಗೆ ನುಗ್ಗಿ ಕಾರು ಜಖಂಗೊಳಿಸಿದ್ದಾರೆಂದು ಪತ್ನಿ ವಿಜಯಲಕ್ಷ್ಮಿ ದೂರು ದಾಖಲಿಸಿದ್ದರು. ಇದು ಸಾಕಷ್ಟು ಸುದ್ದಿ ಆಗಿದ್ದರಿಂದ ಮಹಿಳಾ ಆಯೋಗ ಕೂಡ ಮಧ್ಯ ಪ್ರವೇಶ ಮಾಡಬೇಕಾಯಿತು.

ವಿಷ್ಣು ಸ್ಮಾರಕ ವಿವಾದ:

ಡಾ.ವಿಷ್ಣುವರ್ಧನ್‌ ಅವರ ಸ್ಮಾರಕದ ವಿಚಾರ ಈ ಬಾರಿಯೂ ಸದ್ದಾಯಿತು. ಭಾರತಿ ವಿಷ್ಣುವರ್ಧನ್‌ ಮತ್ತು ವಿಷ್ಣು ಅಭಿಮಾನಿಗಳ ಮಧ್ಯ ದೊಡ್ಡ ಹೋರಾಟವೇ ನಡೆಯಿತು. ಸ್ಮಾರಕ ಬೆಂಗಳೂರಿನಲ್ಲೇ ಇರಲಿ ಅನ್ನುವುದು ಅಭಿಮಾನಿಗಳ ಆಸೆ. ಮೈಸೂರಿಗೆ ಸ್ಥಳಾಂತರ ಆಗಲಿ ಅನ್ನುವುದು ಭಾರತಿ ಅವರ ಹಠ. ಇನ್ನೂ ಈ ಜಗಳಕ್ಕೆ ಮುಕ್ತಿ ಸಿಕ್ಕಿಲ್ಲ.

ಸಿನಿಮಾರಂಗ ನಾಯಕಿಯರನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಅವರಿಗೆ ಮೂಲಭೂತ ಸೌಕರ್ಯಗಳನ್ನೂ ಒದಗಿಸುತ್ತಿಲ್ಲ ಎಂದು ನಾಯಕಿ ಐಂದ್ರಿತಾ ರೇ ಗಂಭೀರ ಆರೋಪ ಮಾಡಿದರು. ಸಂಭಾವನೆ ವಿಚಾರದಲ್ಲೂ ಅವರು ಆಡಿದ ಮಾತುಗಳು ಸಾಕಷ್ಟು ಚರ್ಚೆಗೆ ಕಾರಣವಾದವು. ನಿರ್ಮಾಪಕರ ಸಂಘ ಈ ವಿಷಯದಲ್ಲಿ ಐಂದ್ರಿತಾ ರೇ ಅವರನ್ನು ಕಾರಣ ಕೇಳಿತ್ತು. ಕೊನೆಗೆ ತಾನಾಗಿಯೇ ಅದು ತಣ್ಣಗಾಯಿತು.

ರಮ್ಯಾ ರಗಳೆ:

ಪಾಕಿಸ್ತಾನದ ಪರವಾಗಿ ರಮ್ಯಾ ಮಾತನಾಡಿ ಸುಖಾಸುಮ್ಮನೆ ವಿವಾದವನ್ನು ಮೈಮೇಲೆ ಎಳೆದುಕೊಂಡರು. ಈ ಕಾರಣದಿಂದಾಗಿ ಅವರ ಮೇಲೆ ಮಂಗಳೂರಿನಲ್ಲಿ ಮೊಟ್ಟೆ ಎಸೆಯಲಾಯಿತು. ಸಾಮಾಜಿಕ ಜಾಲತಾಣದಲ್ಲೂ ಇವರ ವಿರುದ್ಧದ ಬರಹಗಳು ಕಂಡು ಬಂದವು. ರಮ್ಯಾ ಕಾಂಗ್ರೆಸ್‌ ಪಕ್ಷದ ಮಾಜಿ ಸಂಸದೆ ಕೂಡ ಆಗಿರುವುದರಿಂದ ಬಿಜೆಪಿ ಪ್ರತಿಭಟನೆ ಕೂಡ ಮಾಡಿತು.

ದನ ಕಾಯೋನು ಚಿತ್ರದ ನಿರ್ದೇಶಕ ಯೋಗರಾಜ್‌ ಭಟ್‌ ಹಾಗೂ ನಟ ದುನಿಯಾ ವಿಜಿ ಅವರು ಕಮಿಷನ್‌ ಪಡೆದಿದ್ದಾರೆಂದು ನಿರ್ಮಾಪಕ ಕನಕಪುರ ಶ್ರೀನಿವಾಸ್‌ ಆರೋಪ ಮಾಡಿ ವಿವಾದಕ್ಕೆ ಕಾರಣವಾದರು.

------------------

ಇತರ ವಿವಾದಗಳು :

* ನೀರ್‌ದೋಸೆ ಸಿನಿಮಾದ ವಿಚಾರವಾಗಿ ಜಗ್ಗೇಶ್‌ ಮತ್ತು ರಮ್ಯಾ ಮಧ್ಯೆ ಟ್ವಿಟ್‌ ವಾರ್‌.

* ಜಿಲ್‌ ಜಿಲ್‌ ತಂಡದಿಂದ ತಮಗೆ ಲೈಂಗಿಕ ಕಿರುಕುಳ ಆಗಿದೆ ಅಂತ ನಾಯಕಿ ಆರೋಪ ವಿವಾದಕ್ಕೆ ಕಾರಣವಾಯಿತು.

* ನಿರ್ದೇಶಕ ಎಸ್‌.ನಾರಾಯಣ್‌ ಚಿತ್ರದಿಂದ ಹುಚ್ಚ ವೆಂಕಟ್‌ ಹೊರನಡೆದು ಕಾಂಟ್ರವರ್ಸಿಗೆ ಕಾರಣರಾದರು.

* ಕಿರಗೂರಿನ ಗಯ್ಯಾಳಿಗಳು ಸಿನಿಮಾ ತಂಡ ಸೇರಿದಂತೆ ಹಲವು ಚಿತ್ರತಂಡದವರು ಸೆನ್ಸಾರ್‌ ಮಂಡಳಿಯ ವಿರುದ್ಧ ಹೋರಾಟ ಮಾಡಿದರು.

*ಅನುಮತಿ ಇಲ್ಲದೇ ಕಿರಿಕ್‌ ಪಾರ್ಟಿ ಸಿನಿಮಾದಲ್ಲಿ ಶಾಂತಿ ಕ್ರಾಂತಿ ಚಿತ್ರದ ಹಾಡು ಬಳಕೆಯಾಗಿದ್ದಕ್ಕೆ ಲಹರಿ ವೇಲು ಕೋರ್ಟ್‌ ಮೆಟ್ಟಿಲು ಏರಿದರು.

* ಪ್ರಕಾಶ್‌ ರೈ ಮತ್ತು ಮಾಧ್ಯಮಗಳ ನಡುವಿನ ಗಲಾಟೆ ವಿವಾದಕ್ಕೆ ನಾಂದಿ ಹಾಡಿತ್ತು.

* ಸೋನುಗೌಡ ಅವರ ಖಾಸಗಿ ಫೋಟೋಗಳು ಲೀಕ್‌ ಆಗಿ ಮುಜಗರ ಸೃಷ್ಟಿ ಮಾಡಿದ್ದವು.

* ಕಾವೇರಿ ವಿಷಯದಲ್ಲಿ ಅಂಬರೀಷ್‌ ಮತ್ತು ಯಶ್‌ ನಾಪತ್ತೆ ಆಗಿರುವ ವಿಚಾರ ಕೂಡ ಭಾರೀ ಸದ್ದು ಮಾಡಿತು. ಆನಂತರ ಅಂಬರೀಷ್‌ ರಾಜ್ಯದ ರೈತರಿಗೆ ಕ್ಷಮೆ ಕೋರಿದರು.

* ನಿರ್ಮಾಪಕ ಸುಂದರ್‌ ಪಿ. ಗೌಡ ಅವರ ಅಣ್ಣನ ಫ್ಯಾಮಿಲಿ ಮೇಲೆ ದುನಿಯಾ ವಿಜಯ್‌ ಗೂಂಡಾಗಿರಿ ಮಾಡಿದ ಆರೋಪ ಕೇಳಿಬಂತು.

* ಬಿಗ್‌ಬಾಸ್‌ ಮನೆಯಲ್ಲಿದ್ದ ಪ್ರಥಮ್‌ಗೆ ಹೊಡೆಯುವ ಮೂಲಕ ಮತ್ತೆ ವಿವಾದ ಮಾಡಿಕೊಂಡರು ವೆಂಕಟ್‌.

* ನಾಗರಹಾವು ಸಿನಿಮಾದ ನಿರ್ಮಾಪಕರು ತಮಗೆ ಸಂಪೂರ್ಣ ಸಂಭಾವನೆ ನೀಡಿಲ್ಲ ಎಂದು ದಿಗಂತ್‌ ಆರೋಪ.


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


Namaskāra नमस्कार (salutation)


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>