Quantcast
Channel: VijayKarnataka
Viewing all articles
Browse latest Browse all 6795

ನೈಜ ಕತೆಯ ಥ್ರಿಲ್ಲರ್‌ ವೆನಿಲ್ಲಾ

$
0
0

ಒಲವೇ ಮಂದಾರ ಖ್ಯಾತಿಯ ನಿರ್ದೇಶಕ ಜಯತೀರ್ಥ ಮತ್ತೊಂದು ಹೊಸ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಲು ರೆಡಿಯಾಗಿದ್ದಾರೆ. ನೀನಾಸಂ ಸತೀಶ್‌ ನಟನೆಯ ಬ್ಯೂಟಿಫುಲ್‌ ಮನಸುಗಳು ಸಿನಿಮಾದ ಕೆಲಸಗಳನ್ನು ಮೊನ್ನೆಯಷ್ಟೇ ಮುಗಿಸಿರುವ ಜಯತೀರ್ಥ, ತಮ್ಮ ಹೊಸ ಚಿತ್ರಕ್ಕೆ 'ವೆನಿಲ್ಲಾ' ಎಂದು ಹೆಸರಿಟ್ಟಿದ್ದಾರೆ. ಈ ಸಿನಿಮಾ ಮೂಲಕ ಹೊಸ ಪ್ರತಿಭೆಗಳನ್ನು ಅವರು ಬೆಳ್ಳಿ ತೆರೆಗೆ ಪರಿಚಯ ಮಾಡಲಿದ್ದಾರೆ.

ರಂಗಕರ್ಮಿ, ಸಾಮಾಜಿಕ ಕಾರ್ಯಕರ್ತರಾಗಿರುವ ಈ ನಿರ್ದೇಶಕರು, ತಮ್ಮ ಮೊದಲ ಸಿನಿಮಾದಿಂದಲೂ ಗಮನ ಸೆಳೆಯುತ್ತಾ ಬಂದವರು. ಚಿತ್ರದಿಂದ ಚಿತ್ರಕ್ಕೆ ವಿಭಿನ್ನತೆ ಕಾಯ್ದುಕೊಂಡ ಜಯತೀರ್ಥ ಈಗ ತಮ್ಮ ಮುಂದಿನ ಚಿತ್ರಕ್ಕೆ ನಿಗೂಢ ಮತ್ತು ಥ್ರಿಲ್ಲರ್‌ ಕತೆಯನ್ನು ಆಯ್ದುಕೊಂಡಿದ್ದಾರೆ. ಸಿನಿಮಾದ 'ವೆನಿಲ್ಲಾ' ಎಂಬ ಶೀರ್ಷಿಕೆಗೂ, ಗಿಡ ಮತ್ತು ಸ್ವಾದಕ್ಕೂ ಸಂಬಂಧವಿದೆಯಂತೆ. ಈ ಬಗ್ಗೆ ಜ. 1ರಂದು ಅಧಿಕೃತ ಘೋಷಣೆ ಮಾಡಲಿದ್ದಾರಂತೆ ನಿರ್ದೇಶಕ.

ಸುತ್ತಮುತ್ತಲಿನ ಪರಿಸರವನ್ನು ಹಾಳುಗೆಡವುತ್ತಿರುವ ಜಾಗತಿಕ ಮಾಫಿಯಾಗೆ ಸಂಬಂಧಿಸಿದ ಕತೆ ಇರುವ 'ವೆನಿಲ್ಲಾ'ದಲ್ಲಿ ಪ್ರೀತಿಯು ಒಂದು ವಿಷಯವಾಗಿ ಚಿತ್ರಿತವಾಗುತ್ತದಂತೆ. 'ವೆನಿಲ್ಲಾ' ಸಿನಿಮಾಗಾಗಿ ಅವಿನಾಶ್‌ ಮತ್ತು ಸ್ವಾತಿ ಕೊಂಡೆ ಎಂಬ ಹೊಸ ಪ್ರತಿಭೆಗಳನ್ನು ಅವರು ನಾಯಕ, ನಾಯಕಿಯನ್ನಾಗಿ ಆಯ್ಕೆ ಮಾಡಿದ್ದಾರೆ. ಅವಿನಾಶ್‌ಗೆ ರಂಗಭೂಮಿ ಹಿನ್ನೆಲೆ ಇದೆ. ಬ್ಯೂಟಿಫುಲ್‌ ಮನಸುಗಳ ಚಿತ್ರಕ್ಕಾಗಿ ಕರೆದ ಆಡಿಷನ್‌ ವೇಳೆಯಲ್ಲಿಯೇ ಸ್ವಾತಿ ಆಯ್ಕೆಯಾಗಿದ್ದರಂತೆ. ಇಬ್ಬರಿಗೂ ಜಯತೀರ್ಥ ಅವರೇ ಖುದ್ದು ತರಬೇತಿ ನೀಡಿದ್ದಾರೆ.

ಪ್ರತಿ ಸಿನಿಮಾದಲ್ಲಿ ವಿಭಿನ್ನ ಕತೆಗಳನ್ನು ಆಯ್ಕೆ ಮಾಡಿಕೊಳ್ಳುತ್ತೇನೆ. ವೆನಿಲ್ಲಾದಲ್ಲಿಯೂ ಥ್ರಿಲ್ಲರ್‌ ಕತೆಯನ್ನು ಆಯ್ಕೆ ಮಾಡಲಾಗಿದೆ.

-ಜಯತೀರ್ಥ, ನಿರ್ದೇಶಕ


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>