Quantcast
Channel: VijayKarnataka
Viewing all articles
Browse latest Browse all 6795

ಕನ್ನಡಿಗರಿಗೆ ಮೀಸಲು:ಕ್ರಾಂತಿಕಾರಿ ಹೆಜ್ಜೆ

$
0
0

ಖಾಸಗಿ ರಂಗದಲ್ಲೂ ಮೀಸಲು ಕಲ್ಪಿಸಬೇಕು ಎನ್ನುವ ಕೂಗು ತುಂಬ ಹಳೆಯದು ಆದರೆ ರಾಜ್ಯ ಸರಕಾರ ಈ ನಿಟ್ಟಿನಲ್ಲಿ ಸದ್ದಿಲ್ಲದೆ ಕಾರ್ಯಪ್ರವೃತ್ತವಾಗಿದೆ. ಕರ್ನಾಟಕ ಕೈಗಾರಿಕಾ ಉದ್ಯೋಗ ನಿಯಮಾವಳಿ ಧಿಧಿ-1961ಕ್ಕೆ ತಿದ್ದುಪಡಿ ತರುವುದರ ಮೂಲಕ ಐಟಿ ಮತ್ತು ಬಿಟಿ ವಲಯವನ್ನು ಹೊರತು ಪಡಿಸಿ ಉಳಿದ ಎಲ್ಲ ಉದ್ಯಮಗಳಲ್ಲೂ ಸಿ ಮತ್ತು ಡಿ ದರ್ಜೆ ಉದ್ಯೋಗಗಳನ್ನು ನೂರಕ್ಕೆ ನೂರು ಕನ್ನಡಿಗರಿಗೆ ಒದಗಿಸುವಂತೆ ಆದೇಶಿಸಲು ಸಜ್ಜಾಗಿದೆ. ಈಗಾಗಲೇ ಕಾರ್ಮಿಕ ಇಲಾಖೆ ತಿದ್ದುಪಡಿ ವಿಧೇಯಕದ ಕರಡು ಸಿದ್ಧಪಡಿಸಿದೆ. ಇದೊಂದು ಕ್ರಾಂತಿಕಾರಿ ಹೆಜ್ಜೆ. ಏಕೆಂದರೆ ಸರಕಾರದಿಂದ ಭೂಮಿ, ನೀರು, ವಿದ್ಯುತ್‌ ಸೌಲಭ್ಯಗಳನ್ನು ಅಗ್ಗದ ದರದಲ್ಲಿ ಪಡೆಯುವ ಮತ್ತು ತೆರಿಗೆ ವಿನಾಯ್ತಿ ಗಳಿಸುವ ಉದ್ಯಮಗಳು ಕನ್ನಡಿಗರಿಗೆ ಉದ್ಯೋಗ ನೀಡುವುದು ಅವುಗಳ ಮೂಲಭೂತ ಹೊಣೆಗಾರಿಕೆ. ಉಚಿತ ಮತ್ತು ರಿಯಾಯ್ತಿ ದರದಲ್ಲಿ ಸೌಲಭ್ಯಗಳನ್ನು ಮಾತ್ರ ಪಡೆದುಕೊಂಡು ಕನ್ನಡಿಗರನ್ನು ದೂರೀಕರಿಸುವ ಪ್ರವೃತ್ತಿಯನ್ನು ಕೈಗಾರಿಕೆಗಳು ಬಹು ಹಿಂದಿನಿಂದಲೂ ಅನುಸರಿಸಿಕೊಂಡು ಬಂದಿದ್ದವು. ಈ ಕುರಿತು ಸಣ್ಣಪುಟ್ಟ ಊರುಗಳಿಂದ ಹಿಡಿದು ರಾಜಧಾನಿವರೆಗೆ ಕನ್ನಡಪರ ಸಂಘಟನೆಗಳು 'ನೆಲದ ಮಕ್ಕಳಿಗೆ ಕೆಲಸ' ಎನ್ನುವ ಘೋಷಣೆಯನ್ನು ಮೊಳಗಿಸುತ್ತಲೇ ಇದ್ದವು. ಇದೀಗ ಹಳೆಯ ಹಕ್ಕೊತ್ತಾಯಗಳಿಗೆ ಕಾನೂನು ಮಾನ್ಯತೆ ಸಿಗುವ ಕಾಲ ಸನ್ನಿಹಿತವಾಗಿದೆ.

ಶ್ರಮಾಧಾರಿತ ಕೆಲಸಗಳಿಗೆ ಉದ್ಯೋಗಿಗಳನ್ನು ಗುತ್ತಿಗೆ ಆಧಾರದ ಮೇಲೆ ತೆಗೆದುಕೊಳ್ಳುವ ರೂಢಿ ಇತ್ತೀಚೆಗೆ ತುಂಬ ವ್ಯಾಪಕವಾಗಿದೆ. ಶ್ರಮಿಕರನ್ನು ಒದಗಿಸುವ ಹತ್ತಾರು ಏಜೆನ್ಸಿಗಳಿವೆ. ಇವು ಕಂಪನಿಗಳು ಮತ್ತು ಉದ್ಯೋಗಿಗಳ ನಡುವೆ ಕೊಂಡಿಯಂತೆ ಕೆಲಸ ಮಾಡುತ್ತವೆ. ಸಂಬಳ ಮತ್ತಿತರ ಸೌಲಭ್ಯಗಳನ್ನು ಇವುಗಳೇ ನಿರ್ಣಯಿಸುತ್ತವೆ. ಇಂತ ಹೊರಗುತ್ತಿಗೆ ಪದ್ಧತಿ ಅಡಿಯಲ್ಲಿ ಕೆಲಸ ಮಾಡುವವರಿಗೆ ಯಾವುದೇ ಭದ್ರತೆ ಕೂಡ ಇರುವುದಿಲ್ಲ. ಸರಕಾರದ ಉದ್ದೇಶಿತ ವಿಧೇಯಕ ಈ ಅಂಶಗಳನ್ನು ಪರಿಗಣಿಸಬೇಕಾಗುತ್ತದೆ. ಹೊರಗುತ್ತಿಗೆ ಏಜೆನ್ಸಿಗಳನ್ನೂ ಕಾಯಿದೆ ವ್ಯಾಪ್ತಿಗೆ ತಂದು ನೂರಕ್ಕೆ ನೂರು ಕನ್ನಡಿಗರನ್ನು ನೇಮಿಸಿಕೊಳ್ಳಬೇಕು ಎಂದು ಕಟ್ಟಪ್ಪಣೆ ಮಾಡಬೇಕಾಗುತ್ತದೆ. ಖಾಸಗಿಯಲ್ಲಿ ಮೀಸಲು ಕಲ್ಪಿಸುವಾಗ ಸಿ ಮತ್ತು ಡಿ ದರ್ಜೆ ನೌಕರರಿಗೆ ನೀಡುತ್ತಿರುವ ವೇತನ ಹಾಗೂ ಮತ್ತಿತರ ಅನುಕೂಲಗಳ ಬಗ್ಗೆಗೂ ಆಲೋಚಿಸಬೇಕಾಗುತ್ತದೆ. ಇವು ಹಣದುಬ್ಬರ ಸೂಚ್ಯಂಕ, ಜೀವನಮಟ್ಟ, ಸಾಮಾಜಿಕ ಭದ್ರತೆಯಂಥ ಸಂಗತಿಗಳನ್ನು ಅಗತ್ಯವಾಗಿ ಲಕ್ಷ್ಯಕ್ಕೆ ತೆಗೆದುಕೊಳ್ಳಬೇಕಾಗುತ್ತದೆ. ಕೆಲಸದ ಸ್ವರೂಪದಲ್ಲಿ ಭಿನ್ನತೆಗಳಿಲ್ಲದೇ ಇದ್ದಾಗ ಕೇವಲ ಗುತ್ತಿಗೆ, ಅರೆಕಾಲಿಕ, ಪ್ರೊಬೇಷನರಿ ಮತ್ತು ಕಾಯಂ ಎಂಬ ಕಾರಣಕ್ಕೆ ವೇತನ ತಾರತಮ್ಯವಿರಬಾರದು ಎಂದು ಈಗಾಗಲೇ ಸುಪ್ರೀಂಕೋರ್ಟ್‌ ಆದೇಶ ನೀಡಿದೆ. ಮೀಸಲು ವ್ಯಾಪ್ತಿಯನ್ನು ಖಾಸಗಿಗೂ ವಿಸ್ತರಿಸುವ ಸಂದರ್ಭದಲ್ಲಿ ಉದ್ಯೋಗದ ಅವಕಾಶಗಳನ್ನಷ್ಟೇ ಪರಿಗಣಿಸದೆ, ಸೌಲಭ್ಯಗಳ ಹೆಚ್ಚಳವನ್ನೂ ದೃಷ್ಟಿಯಲ್ಲಿರಿಸಿಕೊಳ್ಳಬೇಕು. ''ಉದ್ಯೋಗಗಳೇ ಇಲ್ಲ ಎಂದಾಗ ಕನ್ನಡಿಗರನ್ನೇ ತೆಗೆದುಕೊಳ್ಳಬೇಕು ಎಂದು ನಾವೇನು ಪಟ್ಟು ಹಿಡಿಯುವುದಿಲ್ಲ. ಆದರೆ ಖಾಸಗಿಯಲ್ಲಿ ಕನ್ನಡಿಗರಿಗೆ ಮೊದಲ ಪ್ರಾಶಸ್ತ್ಯ ನೀಡಬೇಕು ,''ಎಂದು ಕಾರ್ಮಿಕ ಸಚಿವರು ಹೇಳುವುದರ ಮೂಲಕ ಇಂಥ ಒಂದು ಕಾನೂನು ರಚನೆಯಾದಾಗ ಉಂಟಾಗುವ ಅತಿರೇಕದ ಪರಿಸ್ಥಿತಿಗಳ ಕಡೆ ಕೂಡ ತಮ್ಮ ಗಮನವಿದೆ ಎಂಬುದನ್ನು ತೋರಿಸಿದ್ದಾರೆ. ಸರಕಾರದ ಉದ್ದೇಶಿತ ವಿಧೇಯಕದಲ್ಲಿ ಐಟಿ ಬಿಟಿಯನ್ನು ಹೊರಗಿಟ್ಟಿರುವುದು ಸರಿಯಲ್ಲ. ಇದಕ್ಕಿರುವ ಕಾನೂನು ತೊಡಕುಗಳನ್ನು ನಿವಾರಿಸಿಕೊಂಡು, ಈ ವಲಯಗಳಲ್ಲೂ ಕನ್ನಡಿಗರಿಗೆ ಉದ್ಯೋಗ ಕಲ್ಪಿಸುವಂತೆ ನೋಡಿಕೊಳ್ಳಬೇಕು. ಒಂದೆಡೆ ಎಲ್ಲೆಡೆಯಿಂದ ಬಂಡವಾಳ ರಾಜ್ಯಕ್ಕೆ ಹರಿದು ಬರಲಿ ಎನ್ನುವ ಕೈಗಾರಿಕಾ ನೀತಿಯನ್ನು ಅಳವಡಿಸಿಕೊಂಡಿರುವ ರಾಜ್ಯ ಸರಕಾರ ಮತ್ತೊಂದೆಡೆ ನೇಮಕದ ವಿಷಯದಲ್ಲಿ ಕಠಿಣ ನಿರ್ಬಂಧಗಳನ್ನು ಹೇರುವುದರಿಂದ ಉಂಟಾಗುವ ಪರಿಸ್ಥಿತಿಗಳ ಕುರಿತು ಕೂಡ ವ್ಯಾಪಕ ಚಿಂತನ ಮಂಥನ ನಡೆಸಬೇಕು.


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಅಶ್ಲೀಲ ವಿಡಿಯೋ ತೋರಿಸಿ ಸೆಕ್ಸ್ ಗೆ ಒತ್ತಾಯ, ಮನೆಗೆ ವೇಶ್ಯೆಯರ ಕರೆತಂದು ಅಸಭ್ಯ ವರ್ತನೆ:...


‘ಬಾಹುಬಲಿ’ಅಭಿಮಾನಿಗಳಿಗೆ ಗುಡ್ ನ್ಯೂಸ್ ಸುದ್ದಿ ! ಬರ್ತಿದೆ ‘ಪಾರ್ಟ್-3’


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ



<script src="https://jsc.adskeeper.com/r/s/rssing.com.1596347.js" async> </script>