Quantcast
Channel: VijayKarnataka
Viewing all articles
Browse latest Browse all 6795

ಹೋಗಿದ್ದು ಫಿಫ್ಟಿ ನೋಡಲು, ಸಿಕ್ಕಿದ್ದು ತ್ರಿಶತಕದ ಸೌಭಾಗ್ಯ!

$
0
0

ಕರುಣ್‌ ಸಾಧನೆಯ ಬಗ್ಗೆ ತಂದೆ ಕಲಾಧರನ್‌ ಮಾತು | ಸೀನಿಯರ್‌ ನಾಯರ್‌ಗೆ ಬಯಸದೆ ಬಂದ ಭಾಗ್ಯ

ಬೆಂಗಳೂರು: ಅದೃಷ್ಟ ಎಂದರೆ ಇದೇ ಇರಬೇಕು. ಅರ್ಧಶತಕ ಗಳಿಸುವುದನ್ನು ನೋಡಲು ತೆರಳಿದ್ದ ತಂದೆ-ತಾಯಿಗೆ ಮಗ ತ್ರಿಶತಕದ ಐತಿಹಾಸಿಕ ಕ್ಷ ಣಕ್ಕೆ ಸಾಕ್ಷಿಯಾಗುವ ಸೌಭಾಗ್ಯವನ್ನು ತಂದುಕೊಟ್ಟ.

ಹೌದು. ಚೆನ್ನೈ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ಕರುಣ್‌ ನಾಯರ್‌ ತ್ರಿಶತಕ (303*) ದಾಖಲಿಸಿದ ಕ್ಷ ಣವನ್ನು ತಂದೆ ಕಲಾಧರನ್‌ ನಾಯರ್‌ ಹಾಗೂ ತಾಯಿ ಪ್ರೇಮಾ ನಾಯರ್‌ ಖುದ್ದು ಕ್ರೀಡಾಂಗಣದಲ್ಲಿ ಹಾಜರಿದ್ದು ಕಣ್ತುಂಬಿಕೊಂಡಿದ್ದರು. ಆದರೆ ಇದು ಕರುಣ್‌ ಹೆತ್ತವರಿಗೆ ಬಯಸದೆ ಬಂದ ಭಾಗ್ಯ. ಮಂಗಳವಾರ ಕಲಾಧರನ್‌ ನಾಯರ್‌ 'ವಿಜಯ ಕರ್ನಾಟಕ' ಜತೆ ಮಾತನಾಡುತ್ತಾ ಈ ಸಂಗತಿಯನ್ನು ಹಂಚಿಕೊಂಡರು.

''ಗುರುವಾರ ಸಂಜೆ 6.30ರವರೆಗೂ ಚೆನ್ನೈಗೆ ತೆರಳುವ ಯಾವುದೇ ಯೋಚನೆ ಇರಲಿಲ್ಲ. ಏಕೆಂದರೆ ಕರುಣ್‌ 5ನೇ ಟೆಸ್ಟ್‌ನಲ್ಲಿ ಆಡುತ್ತಾನೆ ಎಂಬ ನಂಬಿಕೆಯೇ ಇರಲಿಲ್ಲ. ಆದರೆ 7 ಗಂಟೆಯ ಹೊತ್ತಿಗೆ ಗಟ್ಟಿ ಮನಸ್ಸು ಮಾಡಿ ಚೆನ್ನೈಗೆ ತೆರಳಬೇಕೆಂದು ನಿರ್ಧರಿಸಿ ಪತ್ನಿ ಸಮೇತ ರಾತ್ರಿಯೇ ಹೊರಟು ಬಿಟ್ಟೆ. ಕರುಣ್‌ ಅರ್ಧಶತಕವನ್ನು ಗಳಿಸಲಿ ಎಂಬುದು ನಮ್ಮ ಆಸೆಯಾಗಿತ್ತು. ಆದರೆ ಆತ ನಮ್ಮ ಸಂಭ್ರಮ ನೂರು ಪಟ್ಟು ಹೆಚ್ಚಾಗುವಂತೆ ಆಟವಾಡಿದ. ತ್ರಿಶತಕದ ಸಾಧನೆ.. ಅದೊಂದು ಅದ್ಭುತ ಕ್ಷ ಣ,'' ಎಂದು ಸೀನಿಯರ್‌ ನಾಯರ್‌ ತಿಳಿಸಿದರು.

ಕರುಣ್‌ ಯಶಸ್ಸಿನಲ್ಲಿ ಕುಮಟಾದ ರಾಘು ಪಾತ್ರ

ಕರುಣ್‌ ನಾಯರ್‌ ಅವರ ಐತಿಹಾಸಿಕ ಸಾಧನೆಯ ಹಿಂದೆ ಕನ್ನಡಿಗರೊಬ್ಬರ ಪಾತ್ರವೂ ಇದೆ. ಭಾರತ ತಂಡದಲ್ಲಿ ಟ್ರೈನಿಂಗ್‌ ಅಸಿಸ್ಟೆಂಟ್‌ ಆಗಿರುವ ಥ್ರೋಡೌನ್‌ ತಜ್ಞ ಕುಮಟಾದ ರಾಘವೇಂದ್ರ ಡ್ವಿಗಿ, ನಾಯರ್‌ ಸಾಧನೆಯ ಹಿಂದಿದ್ದಾರೆ. ಈ ವಿಚಾರವನ್ನು ಸ್ವತಃ ಕರುಣ್‌ ಅವರೇ ಸೋಮವಾರ ಪಂದ್ಯದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

''ನೆಟ್ಸ್‌ನಲ್ಲಿ ರಾಘವೇಂದ್ರ ಅವರ ಥ್ರೋಡೌನ್‌ ಎದುರಿಸುವುದು ಸದಾ ದೊಡ್ಡ ಸವಾಲು. ಏಕೆಂದರೆ ಅವರು ಸತತವಾಗಿ ಆ ಎಸೆತಗಳನ್ನು ಅತ್ಯಂತ ವೇಗವಾಗಿ ಎಸೆಯುತ್ತಾರೆ. ಇದು ಚೆಂಡಿಗೆ ಅತಿ ಬೇಗನೆ ಪ್ರತಿಕ್ರಿಯಿಸುವ ಸಮಯ (ರಿಯಾಕ್ಷ ನ್‌ ಟೈಮ್‌)ವನ್ನು ಉತ್ತಮಪಡಿಸಿಕೊಳ್ಳಲು ನೆರವಾಗುತ್ತದೆ. ರಾಘವೇಂದ್ರ ಅವರಿಂದ ತಂಡದ ಎಲ್ಲಾ ಬ್ಯಾಟ್ಸ್‌ಮನ್‌ಗಳಿಗೆ ಭಾರಿ ಪ್ರಮಾಣದ ಲಾಭವಾಗಿದೆ. ನಮ್ಮ ಬ್ಯಾಟಿಂಗ್‌ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಲು ರಾಘವೇಂದ್ರ ಅವರು ನೆರವಾಗಿದ್ದಾರೆ,'' ಎಂದು ಕರುಣ್‌ ಹೇಳಿದರು.

ಕರುಣ್‌ಗೆ ಕುಂಬ್ಳೆ ಶಹಬ್ಬಾಸ್‌

ಕರುಣ್‌ ನಾಯರ್‌ ಅವರ ಮ್ಯಾರಾಥಾನ್‌ ಇನಿಂಗ್ಸ್‌ಗೆ ಭಾರತ ತಂಡದ ಪ್ರಧಾನ ಕೋಚ್‌ ಅನಿಲ್‌ ಕುಂಬ್ಳೆ ಮೆಚ್ಚುಗೆ ಸೂಚಿಸಿದ್ದಾರೆ. ಮಂಗಳವಾರ ಪಂದ್ಯ ಗೆದ್ದ ನಂತರ ಪ್ರತಿಕ್ರಿಯಿಸಿದ ಕುಂಬ್ಳೆ, ''ಕರುಣ್‌ ಸಾಮರ್ಥ್ಯದ ಬಗ್ಗೆ ತಿಳಿದಿತ್ತು. ಮೊದಲೆರಡು ಇನಿಂಗ್ಸ್‌ಗಳಲ್ಲಿ ವಿಫಲರಾದಾಗ ಬೇಸರವಾಗಿತ್ತು. ಆದರೆ ವೈಫಲ್ಯದಿಂದ ಶೀಘ್ರ ಹೊರ ಬಂದ ಕರುಣ್‌ ತನ್ನ ಸಾಮರ್ಥ್ಯ ಎಂಥದ್ದು ಎಂಬುದನ್ನು ತೋರಿಸಿದರು. ಕಷ್ಟದ ಸಂದರ್ಭದಲ್ಲಿ ಉತ್ತಮ ಆಟವಾಡುವ ವಿಭಿನ್ನ ಆಟಗಾರ ಅವರು. 3ನೇ ಟೆಸ್ಟ್‌ ಇನಿಂಗ್ಸ್‌ನಲ್ಲೇ ತ್ರಿಶತಕ ಗಳಿಸುವುದು ಅದ್ಭುತ ಸಾಧನೆ. ಅವರೊಬ್ಬ ದೀರ್ಘಕಾಲದ ಕ್ರಿಕೆಟ್‌ ಆಸ್ತಿ,'' ಎಂದರು.


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ತುಳು ತೆರೆಗೆ ಸೋನಿಯಾ ಎಂಟ್ರಿ


BIG NEWS : ಶಾಲೆಗಳ ಪ್ರಥಮ ಮಾನ್ಯತೆ, ಮಾನ್ಯತೆ ನವೀಕರಣದ ಕುರಿತು ‘ಶಿಕ್ಷಣ ಇಲಾಖೆ’ಯಿಂದ...


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>