Quantcast
Channel: VijayKarnataka
Viewing all articles
Browse latest Browse all 6795

ನೇಪಾಳ ತಂಡ 21ಕ್ಕೆ ಆಲ್‌ಔಟ್‌!

$
0
0

ಮಹಿಳಾ ಏಷ್ಯಾ ಕಪ್‌ ಟಿ20 ಕ್ರಿಕೆಟ್‌ ಟೂರ್ನಿ | ಭಾರತ ತಂಡಕ್ಕೆ 99 ರನ್‌ಗಳ ಭರ್ಜರಿ ಗೆಲುವು

ಬ್ಯಾಂಕಾಕ್‌:ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಪ್ರಭುತ್ವ ಮೆರೆದ ಭಾರತದ ತಂಡ, ಮಹಿಳಾ ಏಷ್ಯಾ ಕಪ್‌ ಟಿ20 ಕ್ರಿಕೆಟ್‌ ಟೂರ್ನಿಯ ಕೊನೆಯ ಲೀಗ್‌ ಪಂದ್ಯದಲ್ಲಿ ನೇಪಾಳ ವಿರುದ್ಧ 99 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದೆ.

ಶುಕ್ರವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಭಾರತ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 120 ರನ್‌ ಗಳಿಸಿತು. ಗುರಿ ಬೆನ್ನಟ್ಟಿದ ನೇಪಾಳ 16.3 ಓವರ್‌ಗಳಲ್ಲಿ ಕೇವಲ 21 ರನ್‌ಗೆ ಆಲೌಟ್‌ ಆಗುವ ಮೂಲಕ ಟಿ20 ಇತಿಹಾಸದಲ್ಲೇ ಅತಿ ಕಡಿಮೆ ಮೊತ್ತ ಕಲೆ ಹಾಕಿದ ಅಪಖ್ಯಾತಿಗೆ ಒಳಗಾಯಿತು. ಇದೇ ಟೂರ್ನಿಯಲ್ಲಿ ಕಳೆದ ನ.30ರಂದು ಪಾಕಿಸ್ತಾನ ವಿರುದ್ಧ ಬಾಂಗ್ಲಾದೇಶ 44 ರನ್‌ ಗಳಿಸಿದ್ದು ತಂಡವೊಂದರ ಅತ್ಯಲ್ಪ ಮೊತ್ತವಾಗಿತ್ತು.

ಅಜೇಯ ಸಾಧನೆಯೊಂದಿಗೆ ಫೈನಲ್‌ ಪ್ರವೇಶಿಸಿರುವ ಭಾರತ ಪ್ರಶಸ್ತಿಗಾಗಿ ಭಾನುವಾರ ಸೆಣಸಲಿದೆ. ಭಾರತದ ಪರ ಆರಂಭಿಕ ಆಟಗಾರ್ತಿಯರಾಗಿ ಕಣಕ್ಕಿಳಿದ ಸಭಿನೆನಿ ಮೇಘನಾ (4) ಮತ್ತು ಕರ್ನಾಟಕದ ವಿ.ಆರ್‌ ವನಿತಾ (21) ಅಲ್ಪ ಕಾಣಿಕೆ ನೀಡಿ ಔಟಾದರು. 69ಕ್ಕೆ 5 ವಿಕೆಟ್‌ ಕಳೆದುಕೊಂಡು ಅಲ್ಪಮೊತ್ತಕ್ಕೆ ಕುಸಿಯುತ್ತಿದ್ದ ತಂಡವನ್ನು ಆಧರಿಸಿದ ಶಿಖಾ ಪಾಂಡೆ (ಅಜೇಯ 39) ಮತ್ತು ನಾಯಕಿ ಹರ್ಮನ್‌ಪ್ರೀತ್‌ ಕೌರ್‌ (ಔಟಾಗದೆ 14) ತಂಡದ ಗೌರವಾನ್ವಿತ ಮೊತ್ತಕ್ಕೆ ಕಾರಣರಾದರು. ಈ ಜೋಡಿ ಮುರಿಯದ 6ನೇ ವಿಕೆಟ್‌ಗೆ 51 ರನ್‌ ಕಲೆಹಾಕಿತು.

10ಕ್ಕೆ 5 ವಿಕೆಟ್‌

ಭಾರತೀಯರ ಸಂಘಟಿತ ಬೌಲಿಂಗ್‌ ದಾಳಿಗೆ ತತ್ತರಿಸಿದ ಅನನುಭವಿ ನೇಪಾಳ ಕೇವಲ ರನ್‌ ಗಳಿಸುವಷ್ಟರಲ್ಲೇ ಅಗ್ರ ಕ್ರಮಾಂಕದ ಐವರನ್ನು ಕಳೆದುಕೊಂಡಿತು. ಅಲ್ಲದೆ ನೇಪಾಳದ ಯಾವೊಬ್ಬ ಆಟಗಾರ್ತಿಯೂ ಎರಡಂಕಿ ಮೊತ್ತ ಮುಟ್ಟಲಿಲ್ಲ. ಸರಿತಾ ಮಾಗರ್‌ 6 ರನ್‌ ಗಳಿಸಿದ್ದೇ ಗರಿಷ್ಠ ಮೊತ್ತ ಎನಿಸಿತು. ಪೂನಮ್‌ ಯಾದವ್‌ ಮೂರು ವಿಕೆಟ್‌ ಪಡೆದರೆ, ಮೇಘನಾ ಮತ್ತು ಅನುಜಾ ಪಾಟೀಲ್‌ ತಲಾ ಎರಡು ವಿಕೆಟ್‌ ಉರುಳಿಸಿದರು.


ಸಂಕ್ಷಿಪ್ತ ಸ್ಕೋರ್‌

ಭಾರತ: 20 ಓವರ್‌ಗಳಲ್ಲಿ 5 ವಿಕೆಟ್‌ಗೆ 120 (ಶಿಖಾ ಪಾಂಡೆ ಔಟಾಗದೆ 39, ವಿ.ಆರ್‌ ವನಿತಾ 21, ಹರ್ಮನ್‌ಪ್ರೀತ್‌ ಕೌರ್‌ ಔಟಾಗದೆ 14; ರುಬಿನಾ ಛೆಟ್ರಿ 21ಕ್ಕೆ 2)

ನೇಪಾಳ: 16.3 ಓವರ್‌ಗಳಲ್ಲಿ 21(ಸರಿತಾ ಮಾಗರ್‌ 6; ಪೂನಮ್‌ ಯಾದವ್‌ 9ಕ್ಕೆ 3, ಮೇಘನಾ 3ಕ್ಕೆ 2, ಅನುಜಾ ಪಾಟೀಲ್‌ 0ಗೆ2)


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಮಲಗಿದ್ದ ಮಹಿಳೆ ಬೆದರಿಸಿ ಬೆತ್ತಲೆ ಫೋಟೋ ತೆಗೆದ ಕಳ್ಳ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


‘ವ್ಯಾಪಾರ’ದಲ್ಲಿ ವೃದ್ಧಿಯಾಗಲು ಹೀಗೆ ಮಾಡಿ….


ಅಪ್ಪ ಅಮ್ಮ ಬೈಯ್ತಾರೆ ಅಂತ ಬೆಂಗಳೂರಿಂದ ಚಳ್ಳಕೆರೆಗೆ ಹೋದ ಮಕ್ಕಳು


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


Namaskāra नमस्कार (salutation)


ತುಳು ತೆರೆಗೆ ಸೋನಿಯಾ ಎಂಟ್ರಿ



<script src="https://jsc.adskeeper.com/r/s/rssing.com.1596347.js" async> </script>