ಉತ್ತರ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಕನ್ನಡಿಗ ಐಎಎಸ್ ಅಧಿಕಾರಿ ಸುಹಾಸ್ ಎಲ್.ವೈ ಸೋಮಶೇಖರ್ ಪಡುಕರೆ ಶಿವಮೊಗ್ಗ ಜಿಲ್ಲೆಯ ವಿನೋಬ ನಗರದ ನಿವಾಸಿಯಾಗಿರುವ ಸುಹಾಸ್ ಮೂಲತಃ ಅಲ್ಲಿಯ ಲಾಲಿನಕೆರೆಯವರು. ಚಿಕ್ಕಂದಿನಿಂದಲೂ ವಿಶೇಷ ಚೇತನರಾದ ಸುಹಾಸ್ ಆರಂಭದಲ್ಲಿ ಸಾಮಾನ್ಯರೊಂದಿಗೆ ಬ್ಯಾಡ್ಮಿಂಟನ್ ಆಡುತ್ತಿದ್ದರು. ನಂತರ ಪ್ಯಾರಾ ಬ್ಯಾಡ್ಮಿಂಟನ್ನಲ್ಲಿ ತಮ್ಮನ್ನು ತೊಡಗಿಸಿಕೊಂಡರು. ರಾಷ್ಟ್ರೀಯ ಮಟ್ಟದ ಚಾಂಪಿಯನ್ಷಿಪ್ಗಳಲ್ಲಿ ಯಶಸ್ಸು ಕಂಡ ನಂತರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಜ್ಜೆ ಹಾಕಿ ಯಶಸ್ಸು ಕಂಡರು. ಸುರತ್ಕಲ್ನಲ್ಲಿ ಎಂಜಿನಿಯರಿಂಗ್ ವಿಕಲಚೇತನರಾಗಿದ್ದರೂ ಸುಹಾಸ್ ಓದಿನಲ್ಲಿ ಯಾವಾಗಲೂ ಆಗ್ರಸ್ಥಾನ ಪಡೆಯುತ್ತಿದ್ದರು. ಸುರತ್ಕಲ್ನ ರಾಷ್ಟ್ರೀಯ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ ಮುಗಿಸಿದ ನಂತರ ಕೆಲವು ವರ್ಷಗಳ ಕಾಲ ಬೆಂಗಳೂರಿನ ಸ್ಯಾಪ್ಲ್ಯಾಬ್ಸ್ ಕಂಪೆನಿಯಲ್ಲಿ ಕೆಲಸ ಮಾಡಿದ್ದರು. ನಂತರ 2007ರ ಐಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಜಿಲ್ಲಾಧಿಕಾರಿಯಾಗಿ ನೇಮಕಗೊಂಡರು. ಐತಿಹಾಸಿಕ ಸಾಧನೆ ಅಂತಾರಾಷ್ಟ್ರೀಯ ಪ್ಯಾರಾ ಬ್ಯಾಡ್ಮಿಂಟನ್ನಲ್ಲಿ ಪದಕ ಗೆದ್ದ ಮೊದಲ ಐಎಎಸ್ ಅಧಿಕಾರಿ ಎಂಬ ಹೆಗ್ಗಳಿಕೆಗೆ ಸುಹಾಸ್ ಪಾತ್ರರಾಗಿದ್ದಾರೆ. ಯಾವುದೇ ಕ್ರೀಡೆಯಲ್ಲಿ ಚಿನ್ನ ಗೆದ್ದ ದೇಶದ ಮೊದಲ ಐಎಎಸ್ ಅಧಿಕಾರಿಯೂ ಹೌದು. ಇಂಡೋನೇಷ್ಯಾದ ಹರೇ ಸುಶಾಂತೊ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ 21-2, 21-11 ಅಂತರದಲ್ಲಿ ಜಯ ಗಳಿಸುವ ಮೂಲಕ ಸುಹಾಸ್ ಐತಿಹಾಸಿಕ ಸಾಧನೆ ಮಾಡಿದರು. ಬ್ಯಾಡ್ಮಿಂಟನ್ ಎರಡನೇ ಬದುಕು ಬುಧವಾರ ಉತ್ತರ ಪ್ರದೇಶದ ಅಜಮ್ಗಢ್ನಿಂದ 'ವಿಜಯ ಕರ್ನಾಟಕ'ದೊಂದಿಗೆ ಮಾತನಾಡಿದ ಸುಹಾಸ್, ''ಬ್ಯಾಡ್ಮಿಂಟನ್ ನನ್ನ ಎರಡನೇ ಬದುಕು, ನಿತ್ಯವೂ ಅಭ್ಯಾಸದಲ್ಲಿ ತೊಡಗಿರುತ್ತೇನೆ. ಕಠಿಣ ಶ್ರಮ ಯಶಸ್ಸನ್ನು ತಂದುಕೊಟ್ಟಿದೆ. ತಂದೆ ಯತಿರಾಜ್ ತೀರಿಕೊಂಡ ನಂತರ ತಾಯಿ ಜಯಶ್ರೀ ನನ್ನಲ್ಲಿ ಆತ್ಮವಿಶ್ವಾಸ ತುಂಬಿದರು. ವಿಶೇಷ ಚೇತನರು ತಮ್ಮಿಂದ ಏನೂ ಸಾಧ್ಯವಿಲ್ಲ ಎಂದು ಹಿಂಜರಿಯಬಾರದು. ಬದುಕಿನಲ್ಲಿ ಎಲ್ಲವನ್ನೂ ಸಾಧಿಸುವ ಛಲ ಇರಬೇಕು. ಹಾಗಿದ್ದಲ್ಲಿ ಮಾತ್ರ ಇಂತತಹ ಸಾಧನೆಗಳು ಸಾಧ್ಯ,'' ಎಂದರು. ತಂದೆಯೇ ಸ್ಫೂರ್ತಿ ಚಿಕ್ಕಂದಿನಲ್ಲೇ ಸುಹಾಸ್ಗೆ ಬ್ಯಾಡ್ಮಿಂಟನ್ ಕ್ರೀಡೆಯ ಪರಿಚಯವಾಗಿತ್ತು. ತಂದೆ ಯತಿರಾಜ್ ಆಡುವಾಗ ಸುಹಾಸ್ ಸ್ಕೋರ್ ಬರೆಯುತ್ತಿದ್ದರು. ಇದೇ ಅವರನ್ನು ಉತ್ತಮ ಬ್ಯಾಡ್ಮಿಂಟನ್ ಆಟಗಾರನನ್ನಾಗಿ ಮಾಡಿತು. ''ನಾನು ವೃತ್ತಿಪರ ಬ್ಯಾಡ್ಮಿಂಟನ್ ಆಟಗಾರನಲ್ಲ, ತಂದೆ ಆಡುವುದನ್ನು ನೋಡಿ ಕಲಿತೆ. ಆರಂಭದಲ್ಲಿ ಇತರ ಕ್ರೀಡೆಗಳಲ್ಲೂ ಪ್ರಶಸ್ತಿ ಗೆಲ್ಲುತ್ತಿದೆ. ಬಾಲ್ ಬ್ಯಾಡ್ಮಿಂಟನ್ನಲ್ಲೂ ಪಳಗಿದ್ದೆ. ಆದರೆ ಈಗ ಶಟ್ಲ್ ಬ್ಯಾಡ್ಮಿಂಟನ್ನಲ್ಲಿ ತೊಡಗಿಸಿಕೊಂಡಿರುವೆ,' ಎಂದು ಸುಹಾಸ್ ಹೇಳಿದರು.. ಹೆಚ್ಚು ಪಂದ್ಯಗಳು ವಿಶ್ವ ಪ್ಯಾರಾ ಬ್ಯಾಡ್ಮಿಂಟನ್ನಲ್ಲಿ ಸುಹಾಸ್ಗೆ ರಾರಯಂಕ್ ಇರಲಿಲ್ಲ. ಈ ಕಾರಣಕ್ಕಾಗಿ ಏಷ್ಯನ್ ಚಾಂಪಿಯನ್ಷಿಪ್ನ ಅರ್ಹತಾ ಸುತ್ತಿನಿಂದಲೇ ಆಡುವುದು ಅನಿವಾರ್ಯವಾಯಿತು ಎಂದಿದ್ದಾರೆ. ''ರಾರಯಂಕಿಂಗ್ ಇಲ್ಲದ ಕಾರಣ ಅರ್ಹತಾ ಸುತ್ತು, ಪ್ರಧಾನ ಸುತ್ತು, ಕ್ವಾರ್ಟರ್ ಫೈನಲ್, ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳನ್ನಾಡಬೇಕಾಯಿತು, ಚಳಿಯಿಂದ ಕೂಡಿದ ಚೀನಾದಲ್ಲಿ ಕಠಿಣ ಶ್ರಮ ಪಡಬೇಕಾಯಿತು,'' ಎಂದರು. ಮುಖ್ಯಮಂತ್ರಿಗಳ ಅಭಿನಂದನೆ ಕನ್ನಡಿಗ ಸುಹಾಸ್ ಅವರ ಸಾಧನೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಟ್ವಿಟರ್ನಲ್ಲಿ ಅಭಿನಂದನೆ ಸಲ್ಲಿಸಿರುವ ಮುಖ್ಯಮಂತ್ರಿಗಳು ತಮ್ಮ ಕಚೇರಿಗೆ ಸುಹಾಸ್ ಅವರನ್ನು ಕರೆಸಿಕೊಂಡು ಅಭಿನಂದನೆ ಸಲ್ಲಿಸಿದ್ದಾರೆ, @yadavakhilesh ಅಲ್ಲದೆ ಐಎಎಸ್ ಅಧಿಕಾರಿಗಳ ಸಂಘಟನೆಯೂ ಸುಹಾಸ್ ಅವರ ಸಾಧನೆಗೆ ಅಭಿನಂದನೆ ಸಲ್ಲಿಸಿದೆ. @IASassociation ಶಿವಮೊಗ್ಗದಲ್ಲಿ ಸಂಭ್ರಮ ಶಿವಮೊಗ್ಗದ ಜಿಲ್ಲಾಧಿಕಾರಿ ಡಾ. ಎಂ. ಲೋಕೇಶ್ ಹಾಗೂ ಸುಹಾಸ್ ಆತ್ಮೀಯ ಗೆಳೆಯರು. ಸುಹಾಸ್ ಚಿನ್ನ ಗೆದ್ದಿರುವುದಕ್ಕೆ ಡಾ.ಲೋಕೇಶ್ ಅಭಿನಂದನೆ ಸಲ್ಲಿಸಿದ್ದಾರೆ. 'ವಿಜಯ ಕರ್ನಾಟಕ'ದೊಂದಿಗೆ ಮಾತನಾಡಿದ ಡಾ. ಲೋಕೇಶ್, ''ಒಬ್ಬ ಬುದ್ಧಿವಂತ, ಸೃಜನಶೀಲ ಹಾಗೂ ಮಾನವತಾವಾದಿಯಲ್ಲಿ ಯಾವ ಉತ್ತಮ ಗುಣಗಳಿರುತ್ತವೆಯೋ ಅವೆಲ್ಲವೂ ಸುಹಾಸ್ ಅವರಲ್ಲಿದೆ. ಅವರೊಬ್ಬ ಬುದ್ಧಿವಂತ ಐಎಎಸ್ ಅಧಿಕಾರಿ. ಆಧುನಿಕ ತಂತ್ರಜ್ಞಾನದಲ್ಲಿ ಎತ್ತಿದ ಕೈ. ಒಬ್ಬ ಐಎಎಸ್ ಅಧಿಕಾರಿಯಾಗಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಯಲ್ಲಿ ಅವರು ಮಾಡಿರುವ ಸಾಧನೆ ಹೆಮ್ಮೆ ತರುವಂಥದ್ದು. ವಿಶೇಷ ಚೇತನರಿಗೆ ಅವರು ಮಾದರಿ ಇದ್ದಂತೆ. ಅಸಾಧ್ಯವಾದುದನ್ನು ಸಾಧಿಸಿರುವ ಅವರ ಶ್ರಮ ಮಾದರಿ,'' ಎಂದರು.
ಬೆಂಗಳೂರು: ಇತ್ತೀಚಿಗೆ ಚೀನಾದ ಬೀಜಿಂಗ್ನಲ್ಲಿ ನಡೆದ ಏಷ್ಯನ್ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನಲ್ಲಿ ಭಾರತದ ಸ್ಪರ್ಧಿಗಳು ಎರಡು ಚಿನ್ನದ ಪದಕ ಗೆದ್ದಿದ್ದಾರೆ. ಅವರಲ್ಲಿ ಸುಹಾಸ್ ಎಲ್.ವೈ ಕೂಡ ಒಬ್ಬರು. ಉತ್ತರ ಪ್ರದೇಶದ ಬನಾರಸ್ನ ಅಜಮ್ಗಢ್ ಜಿಲ್ಲೆಯ ಜಿಲ್ಲಾಧಿಕಾರಿಯಾಗಿರುವ ಸುಹಾಸ್ ಕರ್ನಾಟಕದವರೆಂಬುದು ಹೆಮ್ಮೆಯ ಸಂಗತಿ.
Proud of Suhas Ly, District Magistrate Azamgarh, who won gold for Badminton at the Asian Paralympic Championship.
Great feat by Suhas LY. An IAS officer. Now Gold Medallist & Asian Paralympic Baddy champ. Heartiest congratulations. We are proud of you !
↧
ಏಷ್ಯನ್ ಚಾಂಪಿಯನ್ಷಿಪ್ಲ್ಲಿ ಚಿನ್ನ ಗೆದ್ದ ಕನ್ನಡಿಗ ಜಿಲ್ಲಾಧಿಕಾರಿ
↧