Quantcast
Channel: VijayKarnataka
Viewing all articles
Browse latest Browse all 6795

ಮುಕುಂದ ಮುರಾರಿ ಚಿತ್ರ ವಿಮರ್ಶೆ: ದೇವರ ಆಟ ಬಲ್ಲವರಾರು?

$
0
0

ಕನ್ನಡ ಚಿತ್ರ


* ಶರಣು ಹುಲ್ಲೂರು

ನಾಸ್ತಿಕ ಮತ್ತು ಆಸ್ತಿಕ ವಾದಗಳ ಜಂಗಿ ನಿಕಾಲಿ ಕುಸ್ತಿ ಇಂದು ನೆನ್ನೆಯದ್ದಲ್ಲ. ದೇವರ ಇರುವಿಕೆಯನ್ನು ಪ್ರಶ್ನಿಸುವ ಮತ್ತು ದೇವರ ಬಗ್ಗೆ ಅಪಾರ ಭಕ್ತಿ ಇರುವ ಅನೇಕ ಚಿತ್ರಗಳು ಈಗಾಗಲೇ ತೆರೆಕಂಡಿವೆ. ಎರಡೂ ತಮ್ಮದೇ ಆದ ವಾದವನ್ನು ಮನರಂಜನೆಯನ್ನು ಕೊಡುತ್ತಲೇ ಮಂಡಿಸಿವೆ. ಆದರೆ, ಎರಡೂ ವಾದಗಳನ್ನು ತೆರೆಯ ಮೇಲೆ ತರುವ ಪ್ರಯತ್ನ ನಡೆದಿರುವುದು ಕಡಿಮೆ. ‘ಮುಕುಂದ ಮುರಾರಿ’ಯಲ್ಲಿ ಅಂತಹ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ನಂದಕಿಶೋರ್.

ಬಾಲಿವುಡ್‌ನ ‘ಓ ಮೈ ಗಾಡ್’ ಸಿನಿಮಾದ ರೀಮೇಕ್ ಚಿತ್ರ ಇದಾಗಿದ್ದರೂ, ಈ ನೆಲದ ಭಾವನಗೆ ಸರಿ ಹೊಂದುವಂತಹ ಒಂದಿಷ್ಟು ದೃಶ್ಯಗಳು ಸೇರ್ಪಡೆ ಆಗಿವೆ. ಹಾಗಾಗಿ ‘ಮುಕುಂದ ಮುರಾರಿ’ ಕನ್ನಡದ ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾಗುತ್ತಾರೆ.

ಉಪೇಂದ್ರ ತಮ್ಮ ಅನೇಕ ಸಿನಿಮಾಗಳಲ್ಲಿ ದೇವರ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಸ್ಥಾವರಕ್ಕೆ ಅಳಿವುಂಟು ಜಂಗಮಕ್ಕಿಲ್ಲ ಎಂಬ ಕಲ್ಪನೆಯನ್ನು ಅವರ ಅನೇಕ ಚಿತ್ರಗಳಲ್ಲಿ ದೃಶ್ಯವಾಗಿಸಿದ್ದಾರೆ. ‘ಐ ಯ್ಯಾಮ್ ಗಾಡ್. ಗಾಡ್ ಈಸ್ ಎ ಗ್ರೇಟ್’ ಎಂಬ ಅವರ ಸಂಭಾಷಣೆ ಈ ಹೊತ್ತಿಗೂ ಫೇಮಸ್. ‘ಮುಕುಂದ ಮುರಾರಿ’ ಸಿನಿಮಾದಲ್ಲೂ ಇವರು ನಿರ್ವಹಿಸಿದ ಮುಕುಂದ ಪಾತ್ರ ದೇವರ ಬಗ್ಗೆ ಪ್ರಶ್ನೆ ಮಾಡುತ್ತದೆ. ಆತನ ಮೇಲೆ ಕಟ್ಲೆ ಕೂಡ ಹೂಡುತ್ತದೆ. ನ್ಯಾಯಾಲಯದಲ್ಲಿ ವಾದದ ಮೂಲಕವೇ ದೇವರನ್ನು ಗೆಲ್ಲಲು ಪಣತೊಡುತ್ತದೆ. ಈ ಕತೆಯೊಂದಿಗೆ ಪಂಚಿಂಗ್ ಡೈಲಾಗ್ ಮತ್ತು ಉಪೇಂದ್ರ ಅವರ ಮ್ಯಾನರಿಸಂ ಹದವಾಗಿ ಬೆರೆತಿರುವುದರಿಂದ ಉಪ್ಪಿ ಪಾತ್ರವೇ ಇಡೀ ಸಿನಿಮಾದಲ್ಲಿ ಕಾಡುತ್ತದೆ.

ಮುರಾರಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸುದೀಪ್ ಕೂಡ ಅಚ್ಚುಕಟ್ಟಾಗಿ ಪಾತ್ರ ನಿರ್ವಹಿಸಿದ್ದಾರೆ. ಸ್ಟಾರ್ ಇಮೇಜ್ ಪಕ್ಕಕ್ಕಿಟ್ಟು ಪಾತ್ರವಾಗಿದ್ದಾರೆ. ಹಾಗಾಗಿ ಮುರಾರಿ ಪಾತ್ರ ಧ್ಯಾನಸ್ಥ ಮನಸ್ಥಿತ ಪ್ರತಿರೂಪದಂತೆ ಭಾಸವಾಗುತ್ತದೆ. ಅವರ ತಣ್ಣನೆಯ ನಗು ಮತ್ತು ಕಡಿಮೆ ಮಾತು ಇಡೀ ಸಿನಿಮಾಗೆ ಮತ್ತೊಂದು ದಿಕ್ಕನ್ನು ತೋರಿಸುತ್ತದೆ.

ಇಡೀ ಸಿನಿಮಾದ ಜೀವಾಳ ಪುಟ್ಟದೊಂದು ಘಟನೆ. ದೇವರನ್ನು ಕಂಡರೆ ಆಗದ ವ್ಯಕ್ತಿ ಮುಕುಂದ. ದೇವರೆ ತನ್ನ ಜೀವನದ ಬೆಳಕು ಅನ್ನುವ ಆತನ ಪತ್ನಿ ಸುಕನ್ಯಾ (ನಿಖಿತಾ ತುಕ್ರಾಲ್). ಈ ವೈರುಧ್ಯದ ಮಧ್ಯೆ ಮುಕುಂದ ಬದುಕಿನಲ್ಲಿ ಅವಘಡವೊಂದು ಸಂಭವಿಸುತ್ತದೆ. ಭೂಕಂಪದಿಂದಾಗಿ ಆತ ತನ್ನ ಸರ್ವಸ್ವವೇ ಆಗಿದ್ದ ಅಂಗಡಿಯನ್ನು ಕಳೆದುಕೊಳ್ಳುತ್ತಾನೆ. ಅಂಗಡಿಯ ಮೇಲೆ ಇನ್‌ಶ್ಯೂರೆನ್ಸ್ ಇದ್ದರೂ, ಭೂಕಂಪ ಅನ್ನುವುದು ಗಾಡ್ಸ್ ಆಕ್ಟ್ ಎಂಬ ಕಾರಣಕ್ಕೆ ಹಣ ನೀಡಲು ಕಂಪೆನಿ ನಿರಾಕರಿಸುತ್ತದೆ. ಆಗ ಮುಕುಂದ ದೇವರ ಮೇಲೆ ದಾವೆ ಹೂಡುತ್ತಾನೆ. ಈ ಕೇಸ್ ಏನಾಗುತ್ತದೆ ಅನ್ನುವುದೇ ಸಿನಿಮಾ.

ಇಡೀ ಸಿನಿಮಾ ಮಾತಿನ ಮಂಟಪದ ಮೇಲೆ ಕಟ್ಟಿರುವುದರಿಂದ ಆಗಾಗ್ಗೆ ಬರುವ ಕಲರ್‌ಫುಲ್ ಹಾಡುಗಳು ಮಾತಿಗೆ ಕೊಂಚ ವಿರಾಮ ಹೇಳುತ್ತವೆ. ಆದರೆ, ಕತೆಗೂ ಹಾಡಿಗೂ ಸಂಬಂಧವೇ ಸಿಗದ ಕಾರಣ, ಹಾಡು ಹಾಡಾಗಿಯಷ್ಟೇ ಉಳಿಯುತ್ತದೆ.

ಲೀಲಾಧರ ಸ್ವಾಮಿಯಾಗಿ ರವಿಶಂಕರ್, ಸಿದ್ಧೇಶ್ವರ ಸ್ವಾಮೀಜಿಯಾಗಿ ಅವಿನಾಶ್, ತಬಲಾ ನಾಣಿ ಕೂಡ ತಮ್ಮ ಪಾತ್ರಗಳ ಮೂಲಕ ಗಮನ ಸೆಳೆಯುತ್ತಾರೆ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಅಪಘಾತ ಗಾಯಾಳುಗಳಿಗೆ ನೆರವು ನೀಡಿದವರಿಗೆ ಜೀವರಕ್ಷಕ ಪ್ರಶಸ್ತಿ


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಶಿವಸೇನೆ ಬಿಗಿಪಟ್ಟು: ದೇಶ ಗೆದ್ದ ಬಿಜೆಪಿ ವಿಲವಿಲ


ಶುಭ ಫಲಕ್ಕಾಗಿ ಮನೆಯಲ್ಲಿ ಗಾಳಿ ಗಂಟೆ ಹಾಕುವ ಮುನ್ನ ಈ ವಿಚಾರ ತಿಳಿಯಿರಿ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>