Quantcast
Channel: VijayKarnataka
Viewing all articles
Browse latest Browse all 6795

ಚಿತ್ರಮಂದಿರಗಳಲ್ಲಿ ಇನ್ನು ಮೊಳಗಲಿದೆ ಜನ ಗಣ ಮನ

$
0
0

- ಪದ್ಮಾ ಶಿವಮೊಗ್ಗ

ನಮ್ಮ ದೇಶದ ಚಿತ್ರಮಂದಿರಗಳಲ್ಲಿ ಇನ್ನುಮೇಲೆ ಸಿನಿಮಾ ನೋಡುವ ಮೊದಲು ರಾಷ್ಟ್ರಗೀತೆ 'ಜನ ಗಣ ಮನ' ಹಾಡುವುದು ಕಡ್ಡಾಯ. ಯೆಸ್‌, ಬುಧವಾರ ಸುಪ್ರೀಂ ಕೋರ್ಟ್‌ ಇಂಥದೊಂದು ಆದೇಶ ಹೊರಡಿಸಿದೆ. ಇದನ್ನು ಜಾರಿಯಲ್ಲಿ ತರಲು ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಹತ್ತು ದಿನಗಳ ಗಡುವನ್ನೂ ನೀಡಿದೆ. ರಾಷ್ಟ್ರಗೀತೆ ಹಾಡುವ ವೇಳೆ ತೆರೆಯ ಮೇಲೆ ರಾಷ್ಟ್ರಧ್ವಜ ತೋರಿಸಬೇಕು ಹಾಗೂ ಆ ವೇಳೆ ಚಿತ್ರಮಂದಿರದಲ್ಲಿ ಇರುವ ಪ್ರೇಕ್ಷಕರೆಲ್ಲರೂ ಎದ್ದು ನಿಂತು ರಾಷ್ಟ್ರಗೀತೆಗೆ ಗೌರವ ತೋರಿಸಬೇಕು ಎಂಬ ನಿಯಮವನ್ನೂ ಕಡ್ಡಾಯಗೊಳಿಸಿದೆ. ಇದಕ್ಕೆ ಸ್ಯಾಂಡಲ್‌ವುಡ್‌ನ ಅನೇಕರು ಕೋರ್ಟ್‌ಗೆ ಅಭಿನಂದನೆ ಸಲ್ಲಿಸಿದ್ದಾರೆ.

ಒಳ್ಳೆಯ ನಿರ್ಣಯ:

ಇದು ಬಹಳ ಒಳ್ಳೆಯ ನಿರ್ಣಯ. ಚಿತ್ರರಂಗದ ಪರವಾಗಿ ಸುಪ್ರೀಂ ಕೋರ್ಟ್‌ ಅನ್ನು ಅಭಿನಂದಿಸುತ್ತೇನೆ ಎಂದಿದ್ದಾರೆ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು. 'ರಾಷ್ಟ್ರಗೀತೆ ಕೇಳಿಸಿದಾಗ ಎದ್ದು ನಿಂತು ಗೌರವಿಸಬೇಕು ಅಂತ ಜನರಲ್ಲಿ ಮನವಿ ಮಾಡುತ್ತೇನೆ. ನಮ್ಮಲ್ಲೂ ಆ ಜವಾಬ್ದಾರಿ ಇರಬೇಕು. ಚಿತ್ರಮಂದಿರದವರು ಪೋಸ್ಟರ್‌ ಹಾಕಿ ಜನರಿಗೆ ಇದರ ಬಗ್ಗೆ ಮನವರಿಕೆ ಮಾಡಬೇಕಿದೆ. ಈ ಸಂಬಂಧ ನಾನು ಥಿಯೇಟರ್‌ಗಳ ಮಾಲೀಕರ ಸಭೆ ಕರೆದು ತಿಳಿಸಬೇಕೆಂದಿದ್ದೇನೆ' ಎನ್ನುತ್ತಾರೆ ಅವರು.

ಪಾಲಿಸುತ್ತಾರೆಂಬ ನಂಬಿಕೆ ಇದೆ:

'ಸಾಮಾನ್ಯವಾಗಿ ಎಲ್ಲೇ ಇದ್ದರೂ ರಾಷ್ಟ್ರಗೀತೆ ಕೇಳಿದ ತಕ್ಷಣ ಜನ ಎದ್ದು ನಿಲ್ಲುತ್ತಾರೆ. ಇದು ಅಭ್ಯಾಸವಾಗಿ ಹೋಗಿದೆ. ಇನ್ನು ಸುಪ್ರೀಂ ಕೋರ್ಟ್‌ ಆರ್ಡರ್‌ ಮಾಡಿದೆ ಅಂದಮೇಲೆ ಎಲ್ಲರೂ ಪಾಲಿಸಲೇಬೇಕು. ಪಾಲಿಸುತ್ತಾರೆ ಎಂಬ ನಂಬಿಕೆಯೂ ಇದೆ. ಈಗ ಹೆಚ್ಚು ವಿದ್ಯಾವಂತರಿದ್ದಾರೆ. ಕೆಲವರಿಗೆ ಇದು ಅಭ್ಯಾಸ ಆಗೋಕೆ ಒಂದೆರಡು ದಿನ ಬೇಕಾಗಬಹುದು. ನಂತರ ಸರಿ ಹೋಗುತ್ತೆ' ಅಂತ ಅಂದವರು ಚಿತ್ರ ವಿತರಕರಾದ ಎನ್‌. ಕುಮಾರ್‌.

ಗೌರವಿಸುವುದು ಎಲ್ಲರ ಕರ್ತವ್ಯ:

ಮೊದಲೂ ಕೂಡಾ ಇದು ಜಾಲ್ತಿಯಲ್ಲಿತ್ತು. ಈಗ ಕೋರ್ಟ್‌ ಆದೇಶ ನೀಡಿರೋದು ಒಳ್ಳೆಯದೆ ಎಂದಿದ್ದು ಕನ್ನಡ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ರಾಜೇಂದ್ರ ಸಿಂಗ್‌ ಬಾಬು. 'ಎಲ್ಲರೂ ಇದನ್ನು ಗೌರವಿಸ್ತಾರೆ. ಹಿಂದೆ ಒಂದಿಬ್ಬರು ಕೂತಿದ್ದರು ಅಂತ ಪೊಲೀಸರು ಬಂಧಿಸಿದ ಉದಾಹರಣೆಗಳೂ ಇವೆ. ಈಗ ಜನರಿಗೆ ತಿಳಿವಳಿಕೆ ಇರೋದ್ರಿಂದ ಸಮಸ್ಯೆಯಾಗೋಲ್ಲ. ರಾಷ್ಟ್ರಗೀತೆಗೆ ಕೊಡಬೇಕಾದ ಗೌರವ ಕೊಡೋದು ಪ್ರತಿಯೊಬ್ಬರ ಕರ್ತವ್ಯ' ಎಂಬುದು ಬಾಬು ಅಭಿಮತ.

ಒಗ್ಗಟ್ಟು ಮೂಡಿಸಲು ಸಹಾಯಕ:

'ಎಲ್ಲರಲ್ಲೂ ನಾವು ಒಂದು ಎಂಬ ಭಾವನೆ ತರೋಕೆ ಇದು ಸಹಾಯಕ ಆಗಬಹುದು. ಇದು ಹಲವರಿಗೆ ಚರ್ಚಾಸ್ಪದ ವಿಷಯ ಅಂತಲೂ ಅನ್ನಿಸಬಹುದು. ಮನರಂಜನೆ ಸ್ಥಳದಲ್ಲಿ ರಾಷ್ಟ್ರಗೀತೆ ಮ್ಯಾಚ್‌ ಆಗಲ್ಲ ಅಂತಾನೂ ಅನ್ನಿಸಬಹುದು. ಆದರೆ, ಇದರ ಹಿಂದಿನ ಉದ್ದೇಶ ಏನು ಅನ್ನೋದನ್ನೂ ಅರ್ಥ ಮಾಡಿಕೊಳ್ಳುವ ಅಗತ್ಯ ಇದೆ. ತುಂಬ ಜನರಿಗೆ ರಾಷ್ಟ್ರಗೀತೆಯನ್ನು ವರ್ಷದಲ್ಲಿ ಒಂದೆರಡು ದಿನ (ರಾಷ್ಟ್ರೀಯ ಹಬ್ಬಗಳಂದು) ಮಾತ್ರ ನೆನಪಿಸಿಕೊಳ್ಳುವಂತಾಗಿದೆ. ಹಾಗಾಗಿ ಎಲ್ಲರೂ ಇದನ್ನು ಪಾಲಿಸುವಂತಾಗಬೇಕು' ಎಂಬ ವಿವರ ನೀಡುತ್ತಾರೆ ನಟ ಅವಿನಾಶ್‌.

ಭಾರತೀಯತೆ ಜಾಗೃತ ಆಗಿರುತ್ತೆ:

'ಶಾಲೆಯಲ್ಲಿದ್ದಾಗ ಮಕ್ಕಳು ರಾಷ್ಟ್ರಗೀತೆ ಹಾಡೋದು ಇರುತ್ತೆ. ಆದರೆ, ದೊಡ್ಡವರಾದ ಮೇಲೆ ಮರೆತೇ ಹೋದಂತೆ ಆಗುತ್ತೆ. ಹಾಗಾಗಿ ಚಿತ್ರಮಂದಿರಗಳಲ್ಲಿ ಇದನ್ನು ಜಾರಿಗೆ ತಂದಿದ್ದು ಒಳ್ಳೆಯದೇ ಆಯ್ತು. ಎಲ್ಲರಲ್ಲಿ ಭಾರತೀಯತೆ ಸದಾ ಜಾಗೃತವಾಗಿರುತ್ತೆ. ಎಲ್ಲಾ ಧರ್ಮ, ಜಾತಿಯವರಲ್ಲೂ ಏಕತೆ ಮೂಡೋಕೆ ಸಾಧ್ಯವಾಗುತ್ತೆ' ಎಂದು ನಟಿ ಸಂಜನಾ ಗಲ್ರಾನಿ ಪ್ರತಿಕ್ರಿಯಿಸಿದ್ದಾರೆ.

ಸರಿಯಾಗಿ ಪಾಲಿಸಲಿ:

ಚಿತ್ರಮಂದಿರದಲ್ಲಿ ಎಲ್ಲ ತರಹದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಾರೆ. ಹಾಗಾಗಿ ಈ ಜಾಗದಲ್ಲಿ ರಾಷ್ಟ್ರಗೀತೆ ಪ್ಲೇ ಮಾಡೋದು ಒಳ್ಳೆಯ ಆಲೋಚನೆ. ಎಲ್ಲರೂ ಇದನ್ನು ಸರಿಯಾಗಿ ಪಾಲಿಸಬೇಕು. ಕೆಲವರು ನಿರ್ಲಕ್ಷ್ಯ ಮಾಡಬಹುದು. ರಾಷ್ಟ್ರಗೀತೆಗೆ ಅಗೌರವ ತೋರಿಸಬಾರದು. ಇದು ಎಲ್ಲರಲ್ಲಿ ರಾಷ್ಟ್ರೀಯ ಭಾವನೆ ಮೂಡಲು ಪ್ರೇರಣೆಯಾಗುತ್ತೆ' ಅಂತ ಹೇಳಿದ್ದು ನಟಿ ಪ್ರಿಯಾಂಕಾ ಉಪೇಂದ್ರ.


Viewing all articles
Browse latest Browse all 6795

Trending Articles


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


ನಾಳೆ ಮೈಸೂರು ನಗರದ ಈ  ಭಾಗದಲ್ಲಿ ವಿದ್ಯುತ್ ವ್ಯತ್ಯಯ


ಬಟ್ಟೆ ಕಳಚಿ ಸೆಕ್ಸ್ ಗೆ ಕರೆದ ಮಂಗಳಮುಖಿಯರು


ಈ 12 ಕಾರಣಗಳಿಗೆ ನಿಮಗೆ ಡಿ.ಕೆ.ರವಿ ಇಷ್ಟವಾಗಲೇಬೇಕು!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ತುಳು ತೆರೆಗೆ ಸೋನಿಯಾ ಎಂಟ್ರಿ



<script src="https://jsc.adskeeper.com/r/s/rssing.com.1596347.js" async> </script>