Quantcast
Channel: VijayKarnataka
Viewing all articles
Browse latest Browse all 6795

ಹೊಸ ವರ್ಷದಲ್ಲಿ ಪೂಜಾ ಹಸೆಮಣೆಗೆ

$
0
0

ಮಳೆ ಹುಡುಗಿ ಪೂಜಾ ಗಾಂಧಿ ಸದ್ದಿಲ್ಲದೇ ಮದುವೆ ಸಿದ್ಧತೆಯಲ್ಲಿ ತೊಡಗಿದ್ದಾರೆ. ಬಿಸ್ನೆಸ್‌ಮನ್‌ ಪ್ರಶಾಂತ್‌ ರಾಜು ಜತೆ ಅವರು ಹೊಸ ವರ್ಷದಲ್ಲಿ ಸಪ್ತಪದಿ ತುಳಿಯಲಿದ್ದಾರಂತೆ.

- ಶರಣು ಹುಲ್ಲೂರು

ಜಿಲೇಬಿ ಚಿತ್ರದ ಪ್ರಚಾರದಲ್ಲಿರುವ ಪೂಜಾ ಗಾಂಧಿ, ತಮ್ಮ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ಕೊಟ್ಟಿದ್ದಾರೆ. 2017ರ ಜನವರಿ ಅಥವಾ ಫೆಬ್ರವರಿ ತಿಂಗಳಲ್ಲಿ ಇವರು ಮದುವೆಯಾಗಲಿದ್ದಾರೆ. ಅದಕ್ಕಾಗಿ ಈಗಿನಿಂದಲೇ ಸಿದ್ಧತೆಯನ್ನೂಮಾಡಿಕೊಳ್ಳುತ್ತಿದ್ದಾರೆ.

ಕಳೆದೊಂದು ವರ್ಷದಿಂದ ಬಿಸ್ನೆಸ್‌ಮನ್‌ ಪ್ರಶಾಂತ್‌ ರಾಜು ಅವರನ್ನು ಪ್ರೀತಿಸುತ್ತಿದ್ದ ಪೂಜಾ, ಮನೆಯವರ ಒಪ್ಪಿಗೆ ಪಡೆದೇ ಸಪ್ತಪದಿ ತುಳಿಯುತ್ತಿದ್ದಾರಂತೆ. ಹಾಗಾಗಿ ಇದು ಲವ್‌ ಕಮ್‌ ಅರೇಂಜ್ಡ್‌ ಮ್ಯಾರೇಜ್‌ ಅಂತಾರೆ ಪೂಜಾ. ಕರ್ನಾಟಕ, ದುಬೈ ಸೇರಿದಂತೆ ಹಲವು ಕಡೆ ಪ್ರಶಾಂತ್‌ ಉದ್ಯಮ ನಡೆಸುತ್ತಿದ್ದು, ಅವರಿಗೆ ರಾಜಕೀಯ ಹಿನ್ನೆಲೆ ಕೂಡ ಇದೆ ಎನ್ನಲಾಗುತ್ತಿದೆ.

ಪೂಜಾ ಆಪ್ತರು ಹೇಳುವಂತೆ, ಇವರಿಬ್ಬರೂ ಮೊದಲು ಭೇಟಿಯಾಗಿದ್ದು ರಾವಣಿ ಸಿನಿಮಾದ ವೇಳೆಯಲ್ಲಿ. ಈ ಚಿತ್ರಕ್ಕೆ ಪೂಜಾ ನಾಯಕಿ. ಅಂದುಕೊಂಡಂತೆ ಸಿನಿಮಾ ಆಗಿದ್ದರೆ ಪ್ರಶಾಂತ್‌ ಅವರೇ ಚಿತ್ರಕ್ಕೆ ದುಡ್ಡು ಹಾಕಬೇಕಿತ್ತಂತೆ. ಆದರೆ, ಈ ಸಿನಿಮಾ ಅರ್ಧಕ್ಕೆ ನಿಂತಿತು. ಆದರೆ, ಪೂಜಾಗಿರುವ ಪ್ರಶಾಂತ್‌ ಮೇಲಿನ ಪ್ರೇಮ ಮಾತ್ರ ಮುಂದುವರಿದಿದೆ. ಈಗದು ಮದುವೆಯತನಕ ತಂದು ನಿಲ್ಲಿಸಿದೆ.

ಪರಸ್ಪರ ಇಬ್ಬರೂ ಅರ್ಥ ಮಾಡಿಕೊಂಡೇ ಹಸೆಮಣೆ ಏರುತ್ತಿದ್ದಾರಂತೆ. ಪ್ರಶಾಂತ್‌ ಅವರನ್ನು ಗಾಢವಾಗಿ ಪ್ರೀತಿಸುತ್ತಿರುವ ಪೂಜಾ, ಆ ಪ್ರೇಮದ ನೆನಪಿಗಾಗಿ ತಮ್ಮ ಕೈಮೇಲೆ 'ಪ್ರಶಾಂತ್‌ ಮತ್ತು ಪೂಜಾ' ಎಂದು ಹಚ್ಚೆ ಹಾಕಿಸಿಕೊಂಡಿದ್ದಾರೆ.

ತಮ್ಮ ಮದುವೆ ಕುರಿತು ಲವಲವಿಕೆ ಜತೆ ಮಾತನಾಡಿದ ಪೂಜಾ, 'ನಾನು ಮದುವೆ ಆಗುತ್ತಿರುವುದು ನಿಜ. ಮದುವೆ ಆಗುತ್ತಿರುವ ಹುಡುಗ ಒಳ್ಳೆಯವನು. ನನ್ನನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾನೆ. ಖಂಡಿತ ಎಲ್ಲರನ್ನೂ ಮದುವೆಗೆ ಕರೆಯುತ್ತೇನೆ' ಅಂತಾರೆ.

ನಾಲ್ಕು ವರ್ಷಗಳ ಹಿಂದೆಯೇ ಪೂಜಾ ಅವರಿಗೆ ಆನಂದಗೌಡ ಎಂಬುವವರ ಜತೆ ನಿಶ್ಚಿತಾರ್ಥವಾಗಿತ್ತು. ಕೆಲವೇ ತಿಂಗಳಲ್ಲಿ ಅದು ಮುರಿದು ಬಿದ್ದಿತ್ತು. ಆ ಕಹಿ ಘಟನೆಯನ್ನು ಮರೆತು ಹಸೆಮಣೆ ಏರಲು ಸಜ್ಜಾಗಿದ್ದಾರೆ ಮಳೆ ಹುಡುಗಿ.

ನನ್ನ ಮದುವೆ ಫಿಕ್ಸ್‌ ಆಗಿದೆ. ಎಲ್ಲರ ಸಮ್ಮುಖದಲ್ಲೇ ಮದುವೆ ಆಗುತ್ತೇನೆ. ಮದುವೆ ದಿನಾಂಕ ಮತ್ತು ಸಿದ್ಧತೆ ಕುರಿತು ಸದ್ಯ ಏನೂ ಹೇಳಲಾರೆ. ಮುಂದಿನ ವರ್ಷ ಜನವರಿ ಅಥವಾ ಫೆಬ್ರವರಿಯಲ್ಲಿ ಡೇಟ್‌ ಫಿಕ್ಸ್‌ ಮಾಡಲು ಪ್ಲಾನ್‌ ನಡೆದಿದೆ.

- ಪೂಜಾ ಗಾಂಧಿ, ನಟಿ



Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>