Quantcast
Channel: VijayKarnataka
Viewing all articles
Browse latest Browse all 6795

ನ್ಯೂಜಿಲೆಂಡ್‌ಗೆ ಶರಣಾದ ಭಾರತ

$
0
0

ಮೆಲ್ಬೋರ್ನ್: ಕೊನೆಯ ಕ್ವಾರ್ಟರ್‌ನಲ್ಲಿ ತೋರಿದ ನಿರ್ಲಕ್ಷ ್ಯದಿಂದಾಗಿ ಭಾರತದ ಪುರುಷರ ತಂಡ ಇಲ್ಲಿ ನಡೆಯುತ್ತಿರುವ ನಾಲ್ಕು ರಾಷ್ಟ್ರಗಳ ಆಹ್ವಾನಿತ ಹಾಕಿ ಟೂರ್ನಿಯ ತನ್ನ ಮೂರನೇ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ ಸೋಲನುಭವಿಸಿದೆ.

ಹಿಂದಿನ ಪಂದ್ಯದ ಗೆಲುವಿನ ವಿಶ್ವಾಸದಲ್ಲಿ ಶನಿವಾರ ಕಣಕ್ಕಿಳಿದ ವಿಶ್ವದ 6ನೇ ರಾರ‍ಯಂಕಿನ ಭಾರತ 2-3 ಗೋಲ್‌ಗಳಿಂದ ನ್ಯೂಜಿಲೆಂಡ್‌ಗೆ ಶರಣಾಯಿತು. ಈ ಸೋಲಿನೊಂದಿಗೆ ಪ್ರಶಸ್ತಿ ರೇಸ್‌ನಿಂದ ಹೊರ ಬಿದ್ದ ಡ್ರ್ಯಾಗ್‌ ಫ್ಲಿಕ್ಕರ್‌ ವಿ.ಆರ್‌. ರಘುನಾಥ್‌ ಸಾರಥ್ಯದ ಭಾರತ, ಮೂರನೇ ಸ್ಥಾನಕ್ಕಾಗಿ ಭಾನುವಾರ ಮಲೇಷ್ಯಾ ತಂಡದ ಸವಾಲು ಎದುರಿಸಲಿದೆ. ನ್ಯೂಜಿಲೆಂಡ್‌ ಪರ ನಿಕ್‌ ರೋಸ್‌ (47ನೇ ನಿಮಿಷ), ಜಾಕೊಬ್‌ ಸ್ಮಿತ್‌ (48ನೇ ನಿಮಿಷ) ಮತ್ತು ಹುಗೊ ಇಂಗ್ಲಿಸ್‌ (57ನೇ ನಿಮಿಷ) ತಲಾ ಒಂದು ಗೋಲು ಬಾರಿಸಿ ಗೆಲುವು ತಂದರೆ, ಭಾರತ ಪರ ರೂಪಿಂದರ್‌ ಪಾಲ್‌ ಸಿಂಗ್‌ 18 ಮತ್ತು 57ನೇ ನಿಮಿಷದಲ್ಲಿ ಎರಡು ಗೋಲ್‌ ಬಾರಿಸಿ ದಿಟ್ಟ ಪ್ರತಿರೋಧ ಒಡ್ಡಿದರು.

ಪಂದ್ಯದ ಮೊದಲ ಕ್ವಾರ್ಟರ್‌ನಲ್ಲಿ ಉಭಯ ತಂಡಗಳು ಉತ್ತಮ ಹೋರಾಟ ನೀಡಿದವಾದರೂ ಹಲವು ಬಾರಿ ಪೆನಾಲ್ಟಿ ಅವಕಾಶಗಳನ್ನು ಸೃಷ್ಟಿಸಿದ ಭಾರತ ಪ್ರಭುತ್ವ ಸಾಧಿಸಿತು. ಆದರೆ ಗೋಲ್‌ ಗಳಿಸಲು ವಿಫಲಗೊಂಡಿತು. ಬಳಿಕ ಕಾರ್ಯತಂತ್ರದಲ್ಲಿ ಬದಲಾವಣೆ ಮಾಡಿಕೊಂಡ ಕಿವೀಸ್‌ ತಂಡ ಆಕ್ರಮಣಕಾರಿ ದಾಳಿಗೆ ಮುಂದಾಯಿತು. ಇದರ ಫಲವಾಗಿ ನಿಕ್‌ ರೋಸ್‌ ಚೆಂಡನ್ನು ಗೋಲಿನ ಪೆಟ್ಟಿಗೆಗೆ ಹೊಡೆದರೂ, ಚೆಂಡು ನೆಟ್‌ನ ಅಂಚಿಗೆ ತಾಗಿ ವಾಪಾಸ್ಸಾಯಿತು. ಇದರಿಂದ ಎಚ್ಚೆತ್ತ ಭಾರತದ ಕಸ್ಟೋಡಿಯನ್‌ ಆಕಾಶ್‌ ಚಿಕ್ಟೆ ಎದುರಾಳಿಯ ಗೋಲಿನ ಯತ್ನಗಳನ್ನು ಸಮರ್ಥವಾಗಿ ಹಿಮ್ಮೆಟ್ಟಿಸಿದರು. ಮೊದಲ ಕ್ವಾರ್ಟರ್‌ನ ಕೊನೆಯ ಕ್ಷ ಣದಲ್ಲಿ ಭಾರತ ಪೆನಾಲ್ಟಿ ಕಾರ್ನರ್‌ ಅವಕಾಶ ಗಿಟ್ಟಿಸಿತು. ಆದರೆ ಬ್ಲ್ಯಾಕ್‌ ಸ್ಟಿಕ್ಸ್‌ ನಾಯಕ ಶೆಯಾ ಮೆಕ್‌ಅಲೀಸ್‌ ಉತ್ತಮ ರಕ್ಷ ಣೆ ತೋರಿ ತಂಡದ ಹಿನ್ನಡೆಯನ್ನು ತಪ್ಪಿಸಿದರು.

ಖಾತೆ ತೆರೆದ ಭಾರತ

ದ್ವಿತೀಯ ಕ್ವಾರ್ಟರ್‌ನಲ್ಲಿ ಇನ್ನಷ್ಟು ಚುರುಕಿನ ಪ್ರದರ್ಶನಕ್ಕೆ ಒತ್ತು ನೀಡಿದ ಭಾರತ ಕೆಲವು ಹೊತ್ತು ಚೆಂಡಿನ ಮೇಲೆ ನಿಯಂತ್ರಣ ಸಾಧಿಸುವ ಪ್ರಯತ್ನ ನಡೆಸಿತು. ಇದರ ಲಾಭ ಪಡೆದ ಆಕಾಶ್‌ ದೀಪ್‌ ಸಿಂಗ್‌ ಚೆಂಡನ್ನು ಎದುರಾಳಿಯ ಗೋಲ್‌ ಪೆಟ್ಟಿಗೆಯತ್ತ ಹೊಡೆಯುವಲ್ಲಿ ಯಶಸ್ವಿಯಾದರೂ ಗೋಲ್‌ ಮಾತ್ರ ದಾಖಲಾಗಲಿಲ ್ಲ.ಆದರೆ ರೂಪಿಂದರ್‌ ಪಾಲ್‌ ಸಿಂಗ್‌ ಯಾವುದೇ ತಪ್ಪೆಸಗದೆ ಚೆಂಡನ್ನು ಗೋಲ್‌ ಪೆಟ್ಟಿಗೆ ಒಳಗೆ ಸೇರಿಸಿ ಭಾರತಕ್ಕೆ 1-0 ಅಂತರದ ಮುನ್ನಡೆ ಒದಗಿಸಿದರು. ನಂತರ ನ್ಯೂಜಿಲೆಂಡ್‌ ಚುರುಕಿನ ಆಟಕ್ಕೆ ಒತ್ತು ಕೊಟ್ಟ ಕಾರಣ ಭಾರತೀಯ ರಕ್ಷ ಣಾ ಬಳಗ ಒತ್ತಡಕ್ಕೆ ಒಳಗಾಯಿತು. ಆದಾಗ್ಯೂ ಭಾರತ ಮೊದಲಾರ್ಧಕ್ಕೆ 1-0 ಅಂತರ ಕಾಯ್ದುಕೊಂಡಿತು. ಮೂರನೇ ಕ್ವಾರ್ಟರ್‌ನಲ್ಲಿ ಪರಿಣಾಮಕಾರಿ ಪ್ರದರ್ಶನ ನೀಡಿದ ನ್ಯೂಜಿಲೆಂಡ್‌ ಸಮಬಲದ ಹೋರಾಟ ನೀಡಲು ಇನ್ನಿಲ್ಲದ ಹರಸಾಹಸ ನಡೆಸಿತು. ಆದರೆ ಎದುರಾಳಿಯ ಎಲ್ಲ ಯತ್ನಗಳನ್ನು ಭಾರತ ಸಮರ್ಥವಾಗಿ ಹಿಮ್ಮೆಟ್ಟಿಸಿತು.

ದಂಡ ತೆತ್ತ ಭಾರತ

ಮೊದಲ ಮೂರು ಕ್ವಾರ್ಟರ್‌ನಲ್ಲಿ ಭಾರತ ಮೇಲುಗೈ ಸಾಧಿಸಿದ್ದ ಕಾರಣ ಅಂತಿಮ ಕ್ವಾರ್ಟರ್‌ನಲ್ಲಿ ನಿರ್ಲಕ್ಷ ್ಯ ತಳೆಯಿತು. ಇದರ ಪೂರ್ಣ ಲಾಭ ಪಡೆದ ನ್ಯೂಜಿಲೆಂಡ್‌ ಸತತವಾಗಿ 2 ಗೋಲು ಬಾರಿಸಿ 2-1ರಲ್ಲಿ ಮುನ್ನಡೆ ಗಳಿಸಿತು. ಇದರಿಂದ ಒತ್ತಡಕ್ಕೆ ಸಿಲುಕಿದ ಭಾರತೀಯ ಆಟಗಾರರು ಮರು ಹೋರಾಟ ನೀಡಲು ಯತ್ನಿಸಿದರೂ ಯಾವುದೇ ಫಲ ಸಿಗಲಿಲ್ಲ. ಮತ್ತೆ 57ನೇ ನಿಮಿಷದಲ್ಲಿ ತಂಡದ ಮೂರನೇ ಗೋಲ್‌ ಬಾರಿಸಿದ ಕಿವೀಸ್‌ ಮುನ್ನಡೆಯನ್ನು 3-1ರಲ್ಲಿ ವಿಸ್ತರಿಸಿತು. ಇದೇ ನಿಮಿಷದಲ್ಲಿ ಭಾರತ ರೂಪಿಂದರ್‌ ಪಾಸ್‌ ಸಾಹಸದಿಂದ ಎರಡನೇ ಗೋಲ್‌ ಗಳಿಸಿತು. ಆದರೆ ಸೋಲು ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ.


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ತುಳು ತೆರೆಗೆ ಸೋನಿಯಾ ಎಂಟ್ರಿ


BIG NEWS : ಶಾಲೆಗಳ ಪ್ರಥಮ ಮಾನ್ಯತೆ, ಮಾನ್ಯತೆ ನವೀಕರಣದ ಕುರಿತು ‘ಶಿಕ್ಷಣ ಇಲಾಖೆ’ಯಿಂದ...


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!