Quantcast
Channel: VijayKarnataka
Viewing all articles
Browse latest Browse all 6795

ಷೇರುಪೇಟೆ: ಸೆನ್ಸೆಕ್ಸ್‌ 385 ಅಂಕ ಪತನ

$
0
0

ನಿಫ್ಟಿ 8,000ಕ್ಕಿಂತ ಕೆಳಕ್ಕೆ

* ನೋಟುಗಳ ಅಭಾವ ಎಫೆಕ್ಟ್

* ಅಮೆರಿಕದಲ್ಲಿ ಬಡ್ಡಿ ದರ ಏರಿಕೆ ಸಂಭವ

* ಬ್ಯಾಂಕಿಂಗ್‌ ಷೇರುಗಳ ದರವೂ ಇಳಿಕೆ

ಮುಂಬಯಿ: ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಸತತ ಆರನೇ ವಹಿವಾಟು ದಿನ ಕುಸಿತಕ್ಕೀಡಾಗಿದ್ದು, ಸೋಮವಾರ 385 ಅಂಕಗಳನ್ನು ಕಳೆದುಕೊಂಡಿತು.

ಸೆನ್ಸೆಕ್ಸ್‌ 25,765.14ಕ್ಕೆ ಸೂಚ್ಯಂಕ ಕುಸಿದಿದ್ದರೆ, ನಿಫ್ಟಿ 8,000 ಅಂಕಗಳ ಗಡಿಗಿಂತ ಕೆಳಕ್ಕಿಳಿಯಿತು. 500-1000 ರೂ. ನೋಟುಗಳನ್ನು ಹಿಂತೆಗೆದುಕೊಂಡಿರುವುದು ಹಾಗೂ ವಿದೇಶಿ ಹೂಡಿಕೆಯ ಹೊರಹರಿವು ಷೇರುಪೇಟೆಯ ಮೇಲೆ ನಕಾರಾತ್ಮಕ ಪ್ರಭಾವ ಬೀರಿತು.

ಅಮೆರಿಕದಲ್ಲಿ ಫೆಡರಲ್‌ ರಿಸರ್ವ್‌ ಮುಂದಿನ ತಿಂಗಳು ಬಡ್ಡಿ ದರವನ್ನು ಏರಿಸುವ ಸಾಧ್ಯತೆ ಇದೆ ಎಂಬ ವದಂತಿ ಹರಡಿದ್ದು, ಇದರ ಪರಿಣಾಮ ಷೇರು ಮಾರುಕಟ್ಟೆಯಲ್ಲಿ ವಿದೇಶಿ ಹೂಡಿಕೆಯ ಹೊರ ಹರಿವು ಹೆಚ್ಚಿದೆ. ನೂತನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ರಕ್ಷಣಾತ್ಮಕ ಆರ್ಥಿಕ ನೀತಿಯನ್ನು ಅನುಸರಿಸುವ ಸಾಧ್ಯತೆ ಇದೆ ಎನ್ನುತ್ತಾರೆ ವಿಶ್ಲೇಷಕರು.

ದೇಶದಲ್ಲಿ ನಗದು ಕೊರತೆಯಿಂದ ಉಂಟಾಗಿರುವ ಬಿಕ್ಕಟ್ಟು ಷೇರು ಮಾರುಕಟ್ಟೆಯನ್ನು ತಟ್ಟಿದೆ. ಬ್ಯಾಂಕಿಂಗ್‌ ವಲಯದ ಷೇರುಗಳು ಮೊದಲಿಗೆ ದರ ಹೆಚ್ಚಿಸಿಕೊಂಡಿದ್ದರೂ, ನಂತರ ದರ ಇಳಿಯತೊಡಗಿದೆ. ಇದಕ್ಕೆ ಕಾರಣ ನಗದು ಕೊರತೆಯ ಸಮಸ್ಯೆ ಉಲ್ಭನಿಸಿರುವುದು ಎನ್ನುತ್ತಾರೆ ಮಾರುಕಟ್ಟೆ ವಿಶ್ಲೇಷಕ ವಿನೋದ್‌ ನಾಯರ್‌.

ಸೆನ್ಸೆಕ್ಸ್‌ 26,246.70ಕ್ಕೆ ದಿನದ ವಹಿವಾಟು ಆರಂಭಿಸಿ, 26,270.28 ಮತ್ತು 25,717.93ರ ನಡುವೆ ವಹಿವಾಟು ನಡೆಸಿ, ಅಂತಿಮವಾಗಿ 385 ಅಂಕ ನಷ್ಟದಲ್ಲಿ 25,881ಕ್ಕೆ ಸ್ಥಿರವಾಯಿತು. ನಿಫ್ಟಿ 145 ಅಂಕ ಕಳೆದುಕೊಂಡು 7,929ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು.

ರಿಯಾಲ್ಟಿ, ಲೋಹ, ಆಟೊಮೊಬೈಲ್‌, ಪಿಎಸ್‌ಯು, ಉದ್ಯಮ, ಹಣಕಾಸು, ಸರಕು ಬಂಡವಾಳ, ವಿದ್ಯುತ್‌, ಎಫ್‌ಎಂಸಿಜಿ, ಐಟಿ ವಲಯದಲ್ಲಿ ಷೇರುಗಳು ಭಾರಿ ಮಾರಾಟವಾಯಿತು. ವಿದೇಶಿ ಹೂಡಿಕೆದಾರರು ಕಳೆದ ಶುಕ್ರವಾರ 926 ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದರು. ವಿದೇಶಿ ಷೇರು ಮಾರುಕಟ್ಟೆಗಳಲ್ಲಿ ಮಿಶ್ರ ಪ್ರತಿಕ್ರಿಯೆ ಇತ್ತು.

ಸೆನ್ಸೆಕ್ಸ್‌ನಲ್ಲಿ ಎಸ್‌ಬಿಐ ಷೇರು ದರ ಅತಿ ಹೆಚ್ಚು ನಷ್ಟಕ್ಕೀಡಾಯಿತು. (ಶೇ.6.51), ಪವರ್‌ ಗ್ರಿಡ್‌, ಟಾಟಾ ಸ್ಟೀಲ್‌, ಮಾರುತಿ, ಎನ್‌ಟಿಪಿಸಿ, ಐಟಿಸಿ, ಕೋಲ್‌ ಇಂಡಿಯಾ ಷೇರುಗಳ ದರ ಇಳಿಯಿತು. 2,223 ಷೇರುಗಳು ನಷ್ಟಕ್ಕೀಡಾದರೆ, 408 ಷೇರುಗಳು ಲಾಭ ಗಳಿಸಿತು.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>