Quantcast
Channel: VijayKarnataka
Viewing all articles
Browse latest Browse all 6795

ಶಿವಣ್ಣನ ತಂಗಿಯಾಗಿದ್ದಕ್ಕೆ ಹೆಮ್ಮೆ ಇದೆ

$
0
0

ಅಣ್ಣ ತಂಗಿ ಬಾಂಧವ್ಯದ ಸ್ಟೋರಿಗಳು ಅಂದಾಕ್ಷಣ ಥಟ್ಟನೆ ನೆನಪಾಗುವ ಹೆಸರು ಶಿವರಾಜ್‌ಕುಮಾರ್‌ ಮತ್ತು ರಾಧಿಕಾ ಕುಮಾರಸ್ವಾಮಿ. ಇದು ಫೇಮಸ್‌ ಜೋಡಿ ಕೂಡ. ಈಗ ಶಿವಣ್ಣನಿಗೆ ಹೊಸ ತಂಗಿ ಸಿಕ್ಕಿದ್ದಾಳೆ ರಾಧಿಕಾ ಸ್ಥಾನವನ್ನು ಆಶಿಕಾ ತುಂಬಲಿದ್ದಾರೆ.

- ಶರಣು ಹುಲ್ಲೂರು

ಶಿವರಾಜ್‌ಕುಮಾರ್‌ ನಾಯಕನಾದರೆ, ತಂಗಿಯ ಪಾತ್ರಕ್ಕೆ ರಾಧಿಕಾ ಕುಮಾರಸ್ವಾಮಿ ಇರಲೇಬೇಕಿತ್ತು. ಈ ಜೋಡಿ ಅಷ್ಟೊಂದು ಫೇಮಸ್‌ ಆಗಿತ್ತು. ತಂಗಿಯ ಪಾತ್ರಗಳಿಂದ ರಾಧಿಕಾ ದೂರವಾಗುತ್ತಿದ್ದಂತೆಯೇ ಆ ಸ್ಥಾನವನ್ನು ಯಾರು ತುಂಬಲಿದ್ದಾರೆ ಅನ್ನುವ ಹುಡುಕಾಟ ಕೂಡ ನಡೆದಿತ್ತು. ಶಿವರಾಜ್‌ಕುಮಾರ್‌ಗೆ ಈಗ ಹೊಸ ತಂಗಿ ಸಿಕ್ಕಿದ್ದಾರೆ. ಕ್ರೇಜಿಬಾಯ್‌ ಚಿತ್ರದ ಮೂಲಕ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡಿರುವ ಆಶಿಕಾ, ತಂಗಿಯಾಗಿ ನಟಿಸಲು ಒಪ್ಪಿಕೊಂಡಿದ್ದಾರೆ.

* ಶಿವರಾಜ್‌ಕುಮಾರ್‌ ಅಣ್ಣನ ಪಾತ್ರ ಒಪ್ಪಿಕೊಂಡರೆ ತಂಗಿಯಾಗಿ ರಾಧಿಕಾ ಕುಮಾರಸ್ವಾಮಿ ಇರಲೇಬೇಕಿತ್ತು. ಇದೀಗ ಆ ಜವಾಬ್ದಾರಿ ಸ್ಥಾನವನ್ನು ನೀವು ತುಂಬಬೇಕಿದೆ. ಏನನಿಸುತ್ತಿದೆ?

ನಿಜ ಹೇಳುತ್ತೇನೆ. ತಂಗಿಯ ಪಾತ್ರ ಅಂದಾಕ್ಷಣ ಈಗಲೇ ಅಂತಹ ಪಾತ್ರ ಬೇಕಾ ಅಂತ ಅನಿಸಿದ್ದು ನಿಜ. ನಾನು ಮೊದ ಮೊದಲು ಆಗಲ್ಲ ಅಂತಾನೇ ಹೇಳಿದ್ದೆ. ಒಂದು ಬಾರಿ ಕತೆ ಕೇಳಿ ಅಂತ ನಿರ್ದೇಶಕರು ಹೇಳಿದರು. ಕತೆ ಕೇಳಿದ ನಂತರ ಒಪ್ಪಿಕೊಂಡೆ. ಈ ಪಾತ್ರ ವಿಭಿನ್ನವಾಗಿದೆ.

* ತಂಗಿಯ ಪಾತ್ರದಲ್ಲಿ ಅಂಥದ್ದೇನು ವಿಶೇಷವಿದೆ?

ಈಕೆ ಕಣ್ಣೀರು ಹಾಕುತ್ತಾ ಕೂರುವ ತಂಗಿಯಲ್ಲ. ತುಂಬಾ ಬೋಲ್ಡ್‌ ತಂಗಿ. ಅಣ್ಣ ತಂಗಿ ಬಾಂಧವ್ಯದ ಸ್ಟೋರಿ ಇಲ್ಲಿದ್ದರೂ, ಈ ತಂಗಿಯ ಹಿನ್ನೆಲೆಯೇ ಬೇರೆಯದ್ದಾಗಿದೆ. ಹಾಗಾಗಿ ಪಾತ್ರ ವಿಭಿನ್ನವಾಗಿದೆ. ಅಣ್ಣ ತಂಗಿಯ ಕತೆಗಳು ಈಗ ಬದಲಾಗಿವೆ.

* ಎರಡನೇ ಸಿನಿಮಾದಲ್ಲೇ ಶಿವರಾಜ್‌ಕುಮಾರ್‌ ಜತೆ ನಟಿಸಲು ಅವಕಾಶ ಸಿಕ್ಕಿದೆ. ಈ ಕುರಿತು ಏನು ಹೇಳುತ್ತೀರಿ?

ಶಿವಣ್ಣನ ತಂಗಿಯ ಪಾತ್ರ ಸಿಕ್ಕಿದ್ದು ಹೆಮ್ಮೆ ಅನಿಸುತ್ತಿದೆ. ಇಷ್ಟು ಬೇಗ ಇಂಥದ್ದೊಂದು ಅವಕಾಶ ನನಗೆ ಸಿಗುತ್ತದೆ ಅಂತ ಭಾವಿಸಿರಲಿಲ್ಲ. ಹಾಗಾಗಿ ಸಂಭ್ರಮ ಪಡುತ್ತಿದ್ದೇನೆ. ಡಿಸೆಂಬರ್‌ನಿಂದ ನನ್ನ ಭಾಗದ ಚಿತ್ರೀಕರಣ ನಡೆಯಲಿದೆ. ಆ ದಿನಗಳಿಗಾಗಿ ಕಾಯುತ್ತಿದ್ದೇನೆ.

* ನಿಮ್ಮ ಪಾತ್ರಕ್ಕೆ ಸಿನಿಮಾದಲ್ಲಿ ಎಷ್ಟು ಮಹತ್ವವಿದೆ?

ಎರಡು ರೀತಿಯಲ್ಲಿ ನನ್ನ ಪಾತ್ರ ಸಾಗುತ್ತದೆ. ಶಿವಣ್ಣನ ತಂಗಿಯದ್ದು ಒಂದಾದರೆ, ತಮಿಳು ನಟ ವಂಶಿ ಕೃಷ್ಣ ಅವರ ಲವರ್‌ ಆಗಿಯೂ ನಾನು ನಟಿಸುತ್ತಿದ್ದೇನೆ. ನಮ್ಮ ಲವರ್‌ಸ್ಟೋರಿ ಮತ್ತು ಅಣ್ಣನ ಪ್ರೀತಿ ಎರಡೂ ನನಗೆ ಈ ಸಿನಿಮಾದಲ್ಲಿ ಸಿಗಲಿವೆ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಬಿಗ್‌ ನ್ಯೂಸ್: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟ -‌ ಈ ಬಾರಿಯೂ...


 ಕೌಟುಂಬಿಕ ಕಲಹ ಹಿನ್ನೆಲೆ; ಬುದ್ದಿವಾದ ಹೇಳಿದ ತಂಗಿಯನ್ನೇ ಕೊಂದ ಅಣ್ಣ…


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


‘ಒಡಕು ಮೂಡಿಸಿದ ಸಿದ್ಧರಾಮಯ್ಯ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>