Quantcast
Channel: VijayKarnataka
Viewing all articles
Browse latest Browse all 6795

ದರ್ಶನ್‌ ಫೈಟ್‌ಗೆ 50 ಕ್ಯಾಮೆರಾ ಬಳಕೆ

$
0
0

ದರ್ಶನ್‌ ಅಭಿನಯದ ಹಾಡೊಂದನ್ನು ಶೂಟ್‌ ಮಾಡಲು 50 ಕ್ಯಾಮೆರಾ ಬಳಸಿರುವ ಸುದ್ದಿ ಬಂದಿದೆ. ತರುಣ್‌ ಸುಧೀರ್‌ ನಿರ್ದೇಶನದ ಹೊಸ ಚಿತ್ರದಲ್ಲಿ ಬುಲೆಟ್‌ ಟೈಮ್‌ ಶಾಟ್‌ನಲ್ಲಿ ಶೂಟ್‌ ಮಾಡಲಾಗಿದೆ. ಸ್ಯಾಂಡಲ್‌ವುಡ್‌ನಲ್ಲಿ ಇಂಥ ಪ್ರಯೋಗ ಇದೇ ಮೊದಲು.

***

ಹೊಸ ಚಿತ್ರದಲ್ಲಿ ದರ್ಶನ್‌ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರ ಅಭಿನಯದ ಫೈಟ್‌ ದೃಶ್ಯದ ಚಿತ್ರೀಕರಣಕ್ಕಾಗಿ 50 ಕ್ಯಾಮೆರಾ ಒಂದೇ ಸಮಯದಲ್ಲಿ ಬಳಸಲಾಗಿದೆ. ಮೂರು ಸೆಕೆಂಡ್‌ಗಳ ಅವಧಿಯ 8 ಶಾಟ್‌ಗಳನ್ನು ಎಲ್ಲಾ ಕ್ಯಾಮೆರಾಗಳಲ್ಲಿ ಚಿತ್ರೀಕರಿಸಲಾಗಿದೆ. 24 ಸೆಕೆಂಡ್‌ಗಳ ದೃಶ್ಯವನ್ನು 3 ದಿನಗಳ ಕಾಲ ಚಿತ್ರೀಕರಿಸಲಾಗಿದೆ. ಕನ್ನಡ ಚಿತ್ರರಂಗದಲ್ಲೇ ಬುಲೆಟ್‌ ಶಾಟ್‌ ವಿಧಾನದಲ್ಲಿ ಚಿತ್ರೀಕರಿಸಿದ ಮೊದಲ ಕನ್ನಡ ಚಿತ್ರ ಇದಾಗಲಿದೆ. ಇದಕ್ಕಾಗಿ ಸಿಂಗಪೂರ್‌ನ ಕಂಪನಿಯೊಂದರಿಂದ ಕ್ಯಾಮೆರಾಗಳನ್ನು ತರಿಸಲಾಗಿತ್ತು. 'ಸುಮಾರು 14 ಮಂದಿಯ ತಂಡ ಈ ಕ್ಯಾಮೆರಾಗಳ ಜತೆ ಬಂದಿದ್ದರು. 34 ಲಕ್ಷ ರೂ. ಖರ್ಚು ತಗುಲಿದೆ. 50 ಕ್ಯಾಮೆರಾಗಳನ್ನು ಒಂದು ಡಿಗ್ರಿ ಅಂತರದಲ್ಲಿ ಸಾಲಾಗಿ ನಿಲ್ಲಿಸಲಾಗಿತ್ತು. ಕ್ಯಾಮೆರಾಗಳನ್ನು ಸೆಟಪ್‌ ಮಾಡೋಕೇ ನಾಲ್ಕು ಗಂಟೆ ಬೇಕಾಯ್ತು. ಒಂದು ದಿನಕ್ಕೆ ಮೂರು ಶಾಟ್‌ಗಳನ್ನು ಮಾತ್ರ ಶೂಟ್‌ ಮಾಡೋಕೆ ಸಾಧ್ಯ. ಹೀಗಿರುವಾಗ ಮೊದಲ ದಿನ ಮೂರು ಸೆಕೆಂಡ್‌ಗಳ ಒಂದು ಶಾಟ್‌ ಮಾತ್ರ ಚಿತ್ರೀಕರಿಸಲು ಸಾಧ್ಯವಾಗಿದ್ದು. ಯಾಕೆಂದರೆ, ಹೇಗೆ ಶೂಟ್‌ ಮಾಡಬೇಕು ಅಂಥ ಆರ್ಥ ಮಾಡಿಕೊಳ್ಳೋದಕ್ಕೇ ಹೆಚ್ಚು ಸಮಯ ಬೇಕಾಯ್ತು' ಎನ್ನುತ್ತಾರೆ ನಿರ್ದೇಶಕ ತರುಣ್‌ ಸುಧೀರ್‌.

'ಒಂದೇ ಕ್ಯಾಮೆರಾದಲ್ಲಿ ಈ ರೀತಿ ಶೂಟ್‌ ಮಾಡಬೇಕು ಎಂದರೆ, ನಟನನ್ನು ಹಗ್ಗದಲ್ಲಿ ಕಟ್ಟಿ ಮೇಲೆ ಗಾಳಿಯಲ್ಲಿ ತೇಲಾಡುವಂತೆ ನೇತು ಹಾಕಬೇಕಿತ್ತು. ಕ್ಯಾಮೆರಾವನ್ನು ನಟನ ಸುತ್ತ ತಿರುಗಿಸಿ ಚಿತ್ರೀಕರಣ ಮಾಡಬೇಕಿತ್ತು. ಆದರೆ, ಇದು ಅಷ್ಟು ಇಫೆಕ್ಟಿವ್‌ ಆಗಿ ಮೂಡಿಬರೋಲ್ಲ. ಹಾಗಾಗಿ ಇಷ್ಟು ಕ್ಯಾಮೆರಾ ಉಪಯೋಗಿಸಲು ನಿರ್ಧರಿಸಿದೆವು' ಎನ್ನುತ್ತಾರೆ ನಿರ್ದೇಶಕ.

ಭಾರತದಲ್ಲಿ ಕೆಲವೇ ಕೆಲವು ಚಿತ್ರಗಳಲ್ಲಿ ಈ ರೀತಿಯ ಶಾಟ್‌ ಚಿತ್ರೀಕರಣ ಮಾಡಲಾಗಿದೆ. ಬಾಯ್ಸ್‌, ಅನ್ನಿಯನ್‌, ದಬಾಂಗ್‌ 2 ಚಿತ್ರಗಳಿಗೆ ಬುಲೆಟ್‌ ಶಾಟ್‌ ಇಡಲಾಗಿತ್ತು.


Viewing all articles
Browse latest Browse all 6795

Trending Articles


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


ನಾಳೆ ಮೈಸೂರು ನಗರದ ಈ  ಭಾಗದಲ್ಲಿ ವಿದ್ಯುತ್ ವ್ಯತ್ಯಯ


ಬಟ್ಟೆ ಕಳಚಿ ಸೆಕ್ಸ್ ಗೆ ಕರೆದ ಮಂಗಳಮುಖಿಯರು


ಈ 12 ಕಾರಣಗಳಿಗೆ ನಿಮಗೆ ಡಿ.ಕೆ.ರವಿ ಇಷ್ಟವಾಗಲೇಬೇಕು!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ತುಳು ತೆರೆಗೆ ಸೋನಿಯಾ ಎಂಟ್ರಿ



<script src="https://jsc.adskeeper.com/r/s/rssing.com.1596347.js" async> </script>