Quantcast
Channel: VijayKarnataka
Viewing all articles
Browse latest Browse all 6795

ಗುಲಾಂನಬಿ ಕ್ಷಮೆಯಾಚನೆಗೆ ಯಡಿಯೂರಪ್ಪ ಆಗ್ರಹ

$
0
0

ಬೆಂಗಳೂರು: ನೋಟು ಬದಲಾವಣೆಗೆ ಸಾಲಿನಲ್ಲಿ ನಿಂತವರ ಸಾವುಗಳ ಪ್ರಕರಣವನ್ನು ಉರಿ ವಲಯದಲ್ಲಿನ ಸೈನಿಕರ ಸಾವಿಗೆ ಹೋಲಿಸಿರುವ ಕಾಂಗ್ರೆಸ್‌ ನಾಯಕ ಗುಲಾಂನಬಿ ಆಜಾದ್‌ ಅವರ ಹೇಳಿಕೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಖಂಡಿಸಿದ್ದಾರೆ.

''ಭಾರತದಲ್ಲಿ ನಡೆಯುತ್ತಿರುವ ಉಗ್ರಗಾಮಿ ಚಟುವಟಿಕೆಗಳಿಗೆಲ್ಲ ಪಾಕಿಸ್ತಾನವೇ ಕಾರಣ ಎನ್ನುವುದು ಗೊತ್ತಿದ್ದರೂ ಗುಲಾಂನಬಿ ಅವರಂತಹ ನಾಯಕರು ಪಾಕ್‌ ಪರವಾದ ಹೇಳಿಕೆ ನೀಡುತ್ತಿರುವುದು ದುರಂತ. ಉಗ್ರವಾದದ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳದೇ ಇದ್ದ ಕಾಂಗ್ರೆಸ್‌ಗೆ ಈಗ ಮೋದಿಯವರನ್ನು ಟೀಕಿಸುವಾಗಲೂ ಪಾಕಿಸ್ತಾನದ ಪರವಾದ ಮೃದುಧೋರಣೆ ತಳೆದಿದ್ದದು ಸರಿಯಲ್ಲ,'' ಎಂದು ಹೇಳಿದರು.

''ನೋಟು ಬದಲಾವಣೆ ಪ್ರಕ್ರಿಯೆಯಲ್ಲಿ ಸಾರ್ವಜನಿಕರು ತಾಳ್ಮೆಯಿಂದಲೇ ಪಾಲ್ಗೊಳ್ಳುತ್ತಿದ್ದಾರೆ. ದೇಶ ಹಿತದ ಸಲುವಾಗಿ ಜನ ಸಹಕರಿಸುತ್ತಿದ್ದರೂ ಜನರನ್ನು ಪ್ರಚೋದಿಸುವ ಕಾರ್ಯದಲ್ಲಿ ಕಾಂಗ್ರೆಸ್‌ ಮತ್ತು ಇತರ ಪಕ್ಷಗಳ ನಾಯಕರು ನಿರತರಾಗಿದ್ದಾರೆ. ಗುಲಾಂನಬಿ ಆಜಾದ್‌ ತಕ್ಷಣವೇ ತಮ್ಮ ಹೇಳಿಕೆ ಹಿಂಪಡೆದು ದೇಶದ ಜನರ ಕ್ಷಮೆಯಾಚಿಸಬೇಕು,'' ಎಂದು ಯಡಿಯೂರಪ್ಪ ಆಗ್ರಹಿಸಿದ್ದಾರೆ.



Viewing all articles
Browse latest Browse all 6795

Trending Articles



<script src="https://jsc.adskeeper.com/r/s/rssing.com.1596347.js" async> </script>