Quantcast
Channel: VijayKarnataka
Viewing all articles
Browse latest Browse all 6795

ಚಿತ್ರೀಕರಣದ ದುರಂತಕ್ಕೆ ನಿರ್ದೇಶಕ ಮಾತ್ರ ಹೊಣೆ

$
0
0

ಮಾಸ್ತಿಗುಡಿ ದುರಂತದಿಂದ ಎಚ್ಚೆತ್ತುಕೊಂಡಿರುವ ಚಿತ್ರೋದ್ಯಮ, ಹೊಸ ನಿಯಮವೊಂದನ್ನು ಜಾರಿ ಮಾಡಲು ಸಿದ್ಧತೆ ನಡೆಸುತ್ತಿದೆ. ಚಿತ್ರೀಕರಣದಲ್ಲಿ ದುರಂತ ಸಂಭವಿಸಿದರೆ ಅದಕ್ಕೆ ನಿರ್ದೇಶಕರನ್ನೇ ಹೊಣೆ ಮಾಡುವ ಮಾತುಗಳು ಕೇಳಿಬಂದಿದೆ. ಇದಕ್ಕೆ ನಿರ್ದೇಶಕರ ಸಂಘ ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ಹೊಸ ತಿಕ್ಕಾಟ ಆರಂಭವಾಗಿದೆ.

-----

* ಶರಣು ಹುಲ್ಲೂರು

ಮಾಸ್ತಿಗುಡಿ ದುರಂತಕ್ಕೆ ಹೊಣೆ ಯಾರು? ಎಂಬ ಚರ್ಚೆಗೆ ಈವರೆಗೂ ತಾರ್ಕಿಕ ಅಂತ್ಯ ಸಿಕ್ಕಿಲ್ಲ. ಕಾನೂನಿನ ಅಡಿಯಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದರೆ, ಚಿತ್ರೋದ್ಯಮದಲ್ಲಿ ನಾನಾ ಬಗೆಯ ತರ್ಕಗಳು ನಡೆಯುತ್ತಿವೆ. ಈ ಬೆನ್ನಲ್ಲೇ ಹೊಸ ವಿವಾದವೊಂದು ಸೃಷ್ಟಿಯಾಗಿದ್ದು, ಅದು ಬಿಗಡಾಯಿಸುವ ಮುನ್ಸೂಚನೆ ಸಿಕ್ಕಿದೆ.

ಮಾಸ್ತಿಗುಡಿ ಚಿತ್ರದ ನಾಯಕ ದುನಿಯಾ ವಿಜಯ್‌ ಆ ಚಿತ್ರದ ನಿರ್ಮಾಪಕರ ಪರ ಬ್ಯಾಟಿಂಗ್‌ ಮಾಡುತ್ತಿದ್ದಾರೆ. ಹಾಗಿದ್ದರೆ ನಿರ್ದೇಶಕರ ಪಾಡೇನು ಎಂಬ ಬಗ್ಗೆ ಚರ್ಚೆ ಆರಂಭವಾಗಿದೆ. ದುರಂತಕ್ಕೆ ನಿರ್ದೇಶಕ ಮಾತ್ರ ಹೊಣೆಯೋ ಅಥವಾ ಇಡೀ ಚಿತ್ರತಂಡದ ಜಬಾವ್ದಾರಿಯೋ ಎಂಬ ಬಗ್ಗೆ ಗೊಂದಲ ಉಂಟಾಗಿದೆ.

'ನಿರ್ಮಾಪಕರು ಯಾವ ತಪ್ಪೂ ಮಾಡಿಲ್ಲ. ಸುಖಾಸುಮ್ಮನೆ ಅವರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಲಾಗಿದೆ' ಎಂದು ವಿಜಯ್‌ ಬಹಿರಂಗ ಹೇಳಿಕೆ ನೀಡುತ್ತಿದ್ದಾರೆ. ಈ ದುರ್ಘಟನೆಗೆ ನೇರವಾಗಿ ಸಾಹಸ ನಿರ್ದೇಶಕರೇ ಕಾರಣ ಅನ್ನುವ ಮಾತೂ ಗಟ್ಟಿಯಾಗಿ ಕೇಳುತ್ತಿದೆ. ವಿಜಯ್‌ ಮಾತಿನ ಸಾರವೂ ಅದೇ ಆಗಿದೆ. ಚಿತ್ರತಂಡದ ಕ್ಯಾಪ್ಟನ್‌ ಎಂದು ಕರೆಯಿಸಿಕೊಳ್ಳುವ ನಿರ್ದೇಶಕ ಮತ್ತು ಸಹ ನಿರ್ದೇಶಕ ಕೂಡ ಆರೋಪಿ ಸ್ಥಾನದಲ್ಲೇ ನಿಲ್ಲಬೇಕು ಅನ್ನುವುದು ವಿಜಯ ಮಾತು ಪುಷ್ಠೀಕರಿಸಿವ ಮತ್ತೊಂದು ವರ್ಗದ ವಾದ.

ಈ ನಡುವೆ ಮಂಗಳವಾರ (ನ.15) ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ ನಡೆದದ್ದು, ಘಟನೆಗೆ ಆಯಾ ವಿಭಾಗದ ನಿರ್ದೇಶಕರನ್ನೇ ಹೊಣೆಯನ್ನಾಗಿಸುವ ಮಾತು ಬಲವಾಗಿ ಕೇಳಿಬಂದಿದೆ. ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ ಮಾತನಾಡಿ, 'ಕಷ್ಟಪಟ್ಟು ಹಣ ಹೊಂದಿಸಿಕೊಂಡು ಬರುವ ನಿರ್ಮಾಪಕರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸುವುದು ಸರಿಯಲ್ಲ. ನಿರ್ಮಾಪಕರು ಚಿತ್ರರಂಗದ ಬಗ್ಗೆ ವೃತ್ತಿಪರತೆ ಹೊಂದಿರುವುದಿಲ್ಲ. ಬದಲಿಗೆ ಹಣವನ್ನಷ್ಟೇ ಹೂಡುತ್ತಾರೆ. ನಿರ್ದೇಶಕರು ಕೇಳಿದ್ದನ್ನು ಒದಗಿಸುವುದಷ್ಟೇ ಅವರ ಜವಾಬ್ದಾರಿ. ಇನ್ನು ಮುಂದೆ ಇಂಥ ದುರಂತಗಳು ಸಂಭವಿಸಿದರೆ ಆಯಾ ಚಿತ್ರದ ಹಾಗೂ ಚಿತ್ರತಂಡದ ಆಯಾ ವಿಭಾಗದ ನಿರ್ದೇಶಕರೇ ಹೊಣೆ ಹೊರಬೇಕು' ಅಂದರು. ಈಗ ವಿವಾದ ಉಂಟಾಗಿರುವುದು ಮುನಿರತ್ನ ಅವರ ಮಾತಿನಗೆ ಬಗ್ಗೆಯೇ.

ನಿರ್ದೇಶಕರ ವಿರೋಧ

ಮುನಿರತ್ನ ಹೇಳಿಕೆಯನ್ನು ನಿರ್ದೇಶಕರ ಸಂಘದ ಅಧ್ಯಕ್ಷ ಎಂ.ಎಸ್‌. ರಮೇಶ್‌ ತೀವ್ರವಾಗಿ ವಿರೋಧಿಸಿದ್ದು, ಈ ಕ್ರಮ ಸರಿಯಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.

'ಮಾಸ್ತಿಗುಡಿ ದುರಂತ ಆಗಬಾರದಿತ್ತು. ಇಂಥ ದುರಂತಗಳು ನಡೆದಾಗ ಒಬ್ಬರ ಮೇಲೊಬ್ಬರು ಗೂಬೆ ಕೂರಿಸಬಾರದು. ಏನೇ ಆದರೂ ಎಲ್ಲರೂ ಜವಾಬ್ದಾರರೇ. ಎಲ್ಲರೂ ಕೂತು ಮಾತಾಡಬೇಕು. ಅದನ್ನು ಬಿಟ್ಟು ಆಟ ಗೆದ್ದಾಗ ಸಂಭ್ರಮಿಸೋದು ಅಥವಾ ಸೋತಾಗ ಆಟ ನೋಡೋಕೆ ಬಂದಿದ್ದೆ ಅನ್ನುವ ನೀತಿ ಅನುಸರಿಸುವುದು ಸರಿಯಲ್ಲ. ನಿರ್ದೇಶಕರು ಕೇಳಿದ್ದನ್ನು ಕೊಡದೇ ಇರುವ ನಿರ್ಮಾಪಕರ ಪಟ್ಟಿಯನ್ನೇ ನಾವು ಕೊಡಬಲ್ಲೆವು. ಆದರೆ, ಇದು ಒಬ್ಬರೇ ಕೂತು ತಗೆದುಕೊಳ್ಳುವ ನಿರ್ಧಾರವಲ್ಲ. ಸಭೆಗಳಿಗೆ ನಮ್ಮನ್ನು ಕರೆಯದೇ ಏಕಾಏಕಿ ಇಂಥ ಹೇಳಿಕೆ ನೀಡುವುದು ಸರಿಯಲ್ಲ' ಅಂತಾರೆ ರಮೇಶ್‌.

'ನಾವು ಕ್ರಿಯೇಟರ್‌ಗಳಷ್ಟೇ. ದುರಂತಕ್ಕೆ ನಿರ್ದೇಶಕ

ರನ್ನೇ ಹೊಣೆ ಮಾಡುವುದು ತಪ್ಪು. ನಿರ್ಮಾಪಕರೂ ಹೊಣೆ ಆಗಬಾರದು. ಘಟನೆಗೆ ಯಾರು ಕಾರಣರೋ ಅವರ ಮೇಲೆ ಮಾತ್ರ ಕ್ರಮ ತಗೆದುಕೊಳ್ಳಲಿ. ಅದನ್ನು ಬಿಟ್ಟು ಎಲ್ಲವನ್ನೂ ನಿರ್ದೇಶಕರ ತಲೆಗೆ ಕಟ್ಟಬೇಡಿ' ಅನ್ನುವುದು ನಿರ್ದೇಶಕ ಜೋಗಿ ಪ್ರೇಮ್‌ ಹೇಳುವ ಮಾತು.

'ಸಿನಿಮಾ ಅನ್ನುವುದು ಟೀಮ್‌ ವರ್ಕ್‌. ಏನೇ ಆದರೂ, ಎಲ್ಲರೂ ಜವಾಬ್ದಾರಿ ತಗೆದುಕೊಳ್ಳಬೇಕು. ನಿರ್ದೇಶಕರೇ ಹೊಣೆ ಅನ್ನುವುದು ಹಾಸ್ಯಾಸ್ಪದ ಅನಿಸುತ್ತದೆ. ನಿರ್ಮಾಪಕರದ್ದು

ದುಡ್ಡು ಕೊಡುವುದಷ್ಟೇ ಕೆಲಸ ಆಗಬಾರದು. ಸಿನಿಮಾ ಅನ್ನುವುದು ಅವರ ಕನಸಾಗಬೇಕು. ಸಿನಿಮಾಗಳಲ್ಲಿ ಅವಘಡಗಳು ಆಗುವುದು ಸಾಹಸ ದೃಶ್ಯಗಳು ಇದ್ದಾಗ ಮಾತ್ರ. ಅದಕ್ಕೊಂದು ನೀತಿ ರೂಪಿಸಬೇಕು ಅಂತ ನಾನು ಹೇಳುತ್ತಲೇ ಇದ್ದೇನೆ. ಮೊದಲು ನಾವೆಲ್ಲರೂ ಕೂತು ಮಾಡಬೇಕಾಗಿದ್ದು ನೀತಿ ರೂಪಿಸುವ ಕೆಲಸವನ್ನು. ಆರೋಪ ಪ್ರತ್ಯಾರೋಪ ಮಾಡುವುದು ಸರಿಯಲ್ಲ' ಎಂದು ನಿರ್ದೇಶಕ ಶಶಾಂಕ್‌ ಮಾತು.

-----

'ಸಿನಿಮಾಗಳಲ್ಲಿ ದುರಂತಗಳು ನಡೆದರೆ ಇನ್ನು ಮುಂದೆ ಆಯಾ ನಿರ್ದೇಶಕರೇ ಜವಾಬ್ದಾರರಾಗಿರುತ್ತಾರೆ. ನಿರ್ಮಾಪಕ ಉಳಿದರೆ ಮಾತ್ರ ಚಿತ್ರರಂಗ ಉಳಿಯುತ್ತದೆ. ನಿರ್ಮಾಪಕರಿಗೆ ರಕ್ಷ ಣೆ ಕೊಡುವುದು ಚಿತ್ರರಂಗದ ಕರ್ತವ್ಯ ಆಗಬೇಕು.

-ಮುನಿರತ್ನ, ನಿರ್ಮಾಪಕರ ಸಂಘದ ಅಧ್ಯಕ್ಷ

'ಎಲ್ಲದಕ್ಕೂ ನಿರ್ದೇಶಕರೇ ಹೊಣೆ ಅನ್ನುವುದು ತಪ್ಪಾಗುತ್ತದೆ. ಒಳ್ಳೆಯ ವಿಷಯಗಳು ಇದ್ದಾಗ ನಿರ್ದೇಶಕರು ಬೇಡ. ಕೆಟ್ಟದಾದಾಗ ಮಾತ್ರ ನಮ್ಮ ಮೇಲೆ ಗೂಬೆ ಕೂರಿಸುತ್ತಾರೆ. ಈ ನಡೆ ಒಳ್ಳೆಯದ್ದಲ್ಲ.

- ಎಂ.ಎಸ್‌.ರಮೇಶ್‌, ನಿರ್ದೇಶಕರ ಸಂಘದ ಅಧ್ಯಕ್ಷ


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


Namaskāra नमस्कार (salutation)


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>