Quantcast
Channel: VijayKarnataka
Viewing all articles
Browse latest Browse all 6795

ಉಳಿಸಿದ 98 ಸಾವಿರ ರೂ. ಏನು ಮಾಡಬೇಕೆಂಬ ಚಿಂತೆ ಈ ಭಿಕ್ಷುಕನಿಗೆ

$
0
0

ಇಂದೋರ್: 500 ರೂ. ಹಾಗೂ 1000 ರೂ. ಮುಖಬೆಲೆಯ ನೋಟುಗಳನ್ನು ಕೇಂದ್ರ ಸರಕಾರ ನಿಷೇಧಿಸಿರುವುದು ಕಾಳಧನಿಕರನ್ನು ಮಟ್ಟ ಹಾಕಲು. ಜನಸಾಮಾನ್ಯರು ಒಂದೆರಡು ದಿನಗಳ ಕಾಲ ತೊಂದರೆ ಅನುಭವಿಸುವಂತಾದರೂ ಎಲ್ಲವೂ ಶೀಘ್ರದಲ್ಲಿಯೇ ಸರಿ ಹೋಗುವಂತೆ ಸಕಲ ಕ್ರಮಗಳನ್ನೂ ಸರಕಾರ ತೆಗೆದುಕೊಂಡಿದೆ. ಆದರೆ, ಇಲ್ಲೊಬ್ಬ ಭಿಕ್ಷುಕನಿಗೆ ಮಾತ್ರ ತಾನು ಜೀವಮಾನ ಪೂರ್ತಿ ಭಿಕ್ಷೆ ಬೇಡಿ, ಕೂಡಿಟ್ಟ ಹಣವನ್ನು ಏನು ಮಾಡಬೇಕೆಂಬುವುದೇ ತೋಚದಂತಾಗಿದೆ.

ಇಲ್ಲಿನ ದೇವಾಸ್ ಜಿಲ್ಲೆಯ ಭಿಕ್ಷುಕ ಸೀತಾರಾಮ್ ಕುರುಡನಾಗಿದ್ದು, ಕಳೆದ 20 ವರ್ಷಗಳಿಂದಲೂ ಭಿಕ್ಷೆ ಬೇಡುವುದನ್ನೇ ಕಾಯಕ ಮಾಡಿಕೊಂಡಿದ್ದಾನೆ. ಕಂಡ್ ಕಂಡಲ್ಲಿ ಭಿಕ್ಷೆ ಬೇಡಿ ಇದುವರೆಗೆ 98 ಸಾವಿರ ರೂ. ಉಳಿತಾಯ ಮಾಡಿದ್ದು, ಈ ಹಣವನ್ನೂ 500 ರೂ. ಹಾಗೂ 1000 ರೂ. ಮುಖಬೆಲೆಯ ಹಣದಿಂದಲೇ ಸಂಗ್ರಹಿಸಿಟ್ಟಿದ್ದಾನೆ. ನೋಟು ನಿಷೇಧದ ಹಿನ್ನೆಲೆಯಲ್ಲಿ ಈತನಿಗೆ ಏನು ಮಾಡಬೇಕೆಂಬುದು ತೋಚದೆ, ತಾನೂ ಕೂಡಿಟ್ಟ ಹಣವನ್ನು ತಂದು, ಗ್ರಾಮ ಪಂಚಾಯತಿ ಕಚೇರಿ ಅಧಿಕಾರಿಗಳಿಗೆ ಸಹಕರಿಸುವಂತೆ ಆಗ್ರಹಿಸಿದ್ದಾನೆ.

ಭಿಕ್ಷೆ ಬೇಡಿದ ಹಣವನ್ನು ಸುರಕ್ಷಿತವಾಗಿಡಲು ಸಾಧ್ಯವಾಗದ ಸೀತಾರಾಮ್, ತಮ್ಮ ಪರಿಚಯಸ್ಥರ ಬಳಿ ಸಂಪಾದಿಸಿದ ಹಣವನ್ನು ಇಟ್ಟುಕೊಳ್ಳಲು ಹೇಳಿದ್ದರು. ಇದೀಗ ಸರಕಾರದ ಈ ನಿರ್ಧಾರದಿಂದ ಈ ಹಣ ಇಟ್ಟುಕೊಳ್ಳುವುದು ವ್ಯರ್ಥವೆಂದು ಹೇಳಿ, ಜವಾಬ್ದಾರಿ ತೆಗೆದುಕೊಳ್ಳಲು ಆಗುವುದಿಲ್ಲವೆಂಬ ಸ್ನೇಹಿತರು, ಸೀತಾರಾಮ್‌ಗೆ ಹಣವನ್ನು ಮರಳಿಸಿದ್ದಾರೆ.

ಈ ಸಮಸ್ಯೆಗೆ ಸೂಕ್ತ ಪರಿಹಾರ ಕಂಡು ಕೊಳ್ಳಲು ನೆರವು ನೀಡುವ ಭರವಸೆಯನ್ನು ಗ್ರಾಮ ಪಂಚಾಯತಿ ಅಧಿಕಾರಿಗಳು ಭಿಕ್ಷುಕನಿಗೆ ನೀಡಿದ್ದು, ಬ್ಯಾಂಕ್ ಅಧಿಕಾರಿಗಳೊಂದಿಗೆ ಚರ್ಚಿಸಿ, ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಬ್ಯಾಂಕ್ ಖಾತೆ ತೆರೆದು, ಹಣವನ್ನಿಡಲು ಸೂಕ್ತ ವ್ಯವಸ್ಥೆ ಮಾಡಿಕೊಡುವ ಭರವಸೆ ಈ ಭಿಕ್ಷುಕನಿಗೆ ಸಿಕ್ಕಿದೆ.

ರಾಜಸ್ಥಾನ ಮೂಲದ ಸೀತಾರಾಮ್ ಸಿಯಾ ಗ್ರಾಮಕ್ಕೆ ಕಳೆದ 20 ವರ್ಷಗಳ ಹಿಂದೆ ಪತ್ನಿಯೊಂದಿಗೆ ವಲಸೆ ಬಂದಿದ್ದಾರೆ. ಕುರುಡರಾದ ಕಾರಣ ಎಲ್ಲಿಯೂ ಕೆಲಸ ಸಿಗದ ಕಾರಣ, ಹಳ್ಳಿಯ ರಸ್ತೆಗಳಲ್ಲಿ ಭಿಕ್ಷೆ ಬೇಡಲು ಆರಂಭಿಸಿದರು.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಅಪಘಾತ ಗಾಯಾಳುಗಳಿಗೆ ನೆರವು ನೀಡಿದವರಿಗೆ ಜೀವರಕ್ಷಕ ಪ್ರಶಸ್ತಿ


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಶಿವಸೇನೆ ಬಿಗಿಪಟ್ಟು: ದೇಶ ಗೆದ್ದ ಬಿಜೆಪಿ ವಿಲವಿಲ


ಶುಭ ಫಲಕ್ಕಾಗಿ ಮನೆಯಲ್ಲಿ ಗಾಳಿ ಗಂಟೆ ಹಾಕುವ ಮುನ್ನ ಈ ವಿಚಾರ ತಿಳಿಯಿರಿ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>