Quantcast
Channel: VijayKarnataka
Viewing all articles
Browse latest Browse all 6795

ಕಹಿ ಚಿತ್ರ ವಿಮರ್ಶೆ: ನಗರ ತಲ್ಲಣಗಳ ಅಚ್ಚುಕಟ್ಟಾದ ಚೌಕಟ್ಟು

$
0
0

ಕನ್ನಡ ಚಿತ್ರ

* ಪದ್ಮಾ ಶಿವಮೊಗ್ಗ

ಕನ್ನಡ ಚಿತ್ರರಂಗದಲ್ಲಿ ಹೊಸಬರಿಂದ ಮಾತ್ರ ಪ್ರಯೋಗಾತ್ಮಕ ಚಿತ್ರಗಳನ್ನು ನಿರೀಕ್ಷಿಸಬಹುದು. ಈ ಸಾಲಿಗೆ ಅರವಿಂದ್ ಶಾಸ್ತ್ರಿ ಹೊಸ ಸೇರ್ಪಡೆ. ಸ್ಟಾರ್ ನಟರ ಬಿಲ್ಡಪ್‌ಗಳನ್ನು ನೋಡಲು ಇಷ್ಟಪಡದವರು, ಹೊಸ ರೀತಿಯ ಆಫ್‌ಬೀಟ್ ಚಿತ್ರ ಇಷ್ಟಪಡೋರು ಈ ಚಿತ್ರ ನೋಡಬಹುದು. ನೈಜವಾದ ಕ್ರೈಮ್‌ಸ್ಟೋರಿಯ ಚಿತ್ರವಿದು. ಅರವಿಂದ್ ಮೊದಲ ಚಿತ್ರದಲ್ಲೇ ಸೂಕ್ಷ್ಮನಿರ್ದೇಶಕ ಎನ್ನುವುದನ್ನು ಸಾಬೀತು ಮಾಡಿದ್ದಾರೆ.

ಎಷ್ಟೋ ಸಲ ಜೀವನದಲ್ಲಿ ನಡೆಯುವ ಕೆಲ ಘಟನೆಗಳು ಪೂರ್ವ ನಿರ್ಧಾರಿತ ಎನ್ನಿಸುವುದುಂಟು. ಇದನ್ನೇ ಇನ್ನು ಕೆಲವರು ವಿಧಿ ಲಿಖಿತ ಎನ್ನುತ್ತಾರೆ. ಹಾಗೆ ನಡೆಯುವ ಒಂದು ಘಟನೆ ಹಿಂದೆ ಯಾರ‌್ಯಾರದ್ದೋ ಬದುಕು ತಳುಕು ಹಾಕಿಕೊಂಡಿರುತ್ತೆ. ಅಥವಾ ಅವರೆಲ್ಲರೂ ಒಂದು ಘಟನೆಯಲ್ಲಿನ ಪಾತ್ರಧಾರಿಗಳೇ ಆಗಿರುತ್ತಾರೆ. ಇಂಥದ್ದೊಂದು ಸೂಕ್ಷ್ಮ ವಿಚಾರವನ್ನು ಸಹಜವಾಗಿ ತೆರೆಯ ಮೇಲೆ ತಂದಿದ್ದಾರೆ ನಿರ್ದೇಶಕರು. ಇಲ್ಲಿ ಅವರು ಯಾವುದೇ ಸಂದೇಶ ನೀಡುವುದಿಲ್ಲ ಅಥವಾ ಯಾವುದೇ ಸಮಸ್ಯೆಗೆ ಪರಿಹಾರವನ್ನೂ ಸೂಚಿಸುವುದಿಲ್ಲ. ನಾಲ್ವರು ವ್ಯಕ್ತಿಗಳ ವ್ಯಕ್ತಿತ್ವಕ್ಕೆ ತಕ್ಕಂತೆ ಸನ್ನಿವೇಶಗಳನ್ನು ಪೋಣಿಸಿ ಅವರ ಬದುಕಿನ ತಿರುವುಗಳನ್ನು ಒಂದು ಚೌಕಟ್ಟಿನೊಳಗೆ ತಂದಿದ್ದಾರೆ.

ಅಖಿಲಾ (ಕೃಷಿ ತಾಪಂದ) ಮೂರು ವರ್ಷಗಳಿಂದ ತಾಯಾಗುವ ಆಸೆ ಹೊತ್ತು ಬದುಕುತ್ತಿರ‌್ತುತಾಳೆ. ಎಂಜಿನಿಯರ್ ಹುದ್ದೆಯನ್ನು ಬಿಟ್ಟು ನರ್ಸರಿ ಟೀಚರ್ ಆಗಿರ‌್ತುತಾಳೆ. ಕಾದಂಬರಿ ಬರೆಯುವ ಕನಸು ಬೇರೆ ಇರುತ್ತೆ. ಮಗುವನ್ನು ಪಡೆಯಲು ಗಂಡ ಹೆಂಡತಿಯರಿಬ್ಬರಲ್ಲಿ ಯಾವ ಸಮಸ್ಯೆಯೂ ಇಲ್ಲವೆಂದು ವೈದ್ಯರು ಸರ್ಟಿಫಿಕೇಟ್ ಕೊಡುವ ಹೊತ್ತಿಗೆ ದುರಂತವೊಂದು ಸಂಭವಿಸಿ ತಾಯಿಯಾಗುವ ಅವಳ ಆಸೆಯೇ ಕಮರಿಹೋಗುತ್ತದೆ. ನಿಜಕ್ಕೂ ಇದು ಅವಳಿಗೆ ಕಹಿ ಗುಳಿಗೆ. ಆದರೆ, ಕೊನೆಗೆ ಅವಳ ಆಸೆಗೆ ಜೀವ ನೀಡುತ್ತದೆ. ಚಿತ್ರದ ಕೊನೆಯಲ್ಲಿ ಬರುವ ಡೈಲಾಗ್‌ನಂತೆಯೇ, ಎಷ್ಟೋ ಸಲ ಬೇಡದ್ದು ನಡೆದು, ಬೇಕಾದದ್ದನ್ನು ಕೊಡುತ್ತದೆ. ಕ್ಲೈಮಾಕ್ಸ್‌ಗೆ ಬರುವ ಮೊದಲು ಇನ್ನೂ ಮೂವರ ಲೈಫ್ ತಳುಕು ಹಾಕಿಕೊಳ್ಳುವುದು ಇಡೀ ಚಿತ್ರಕ್ಕೆ ತಿರುವು.

ನಗರಗಳಲ್ಲಿ ಕಾಣುವ ಸಂಕೀರ್ಣ ಮತ್ತು ಸಂಘರ್ಷದ ಬದುಕು ಇಲ್ಲಿದೆ. ತಲ್ಲಣಗಳಿವೆ. ಇದನ್ನು ಸಮರ್ಥವಾಗಿ ತೆರೆಗೆ ತರುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ಹೆಣ್ಣು ಅತ್ಯಾಚಾರದಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡದೆ ಇರುವುದಕ್ಕೆ ನಮ್ಮ ಸಮಾಜ ಕಾರಣ ಎನ್ನುವುದು ಇಲ್ಲಿ ಚರ್ಚೆಯಾಗುವ ಸಂಗತಿ.

ವಿದ್ಯಾ (ಮಾತಂಗಿ) ನೃತ್ಯಗಾರ್ತಿ. ದೊಡ್ಡ ಹೆಸರು ಮಾಡಬೇಕನ್ನೋ ಕನಸು ಅವಳದು. ಡ್ರಗ್ ದಂಧೆ ಮಾಡುವ ರವಿಯೊಂದಿಗೆ ದೈಹಿಕ ಸಂಬಂಧ ಇಟ್ಟುಕೊಂಡಿರುವ ಅವಳಿಗೆ ಕದಿಯುವ ಅಭ್ಯಾಸವೂ ಇರುತ್ತದೆ. ತನ್ನ ಅಗತ್ಯಗಳ ಪೂರೈಕೆಗೆ ಹೆತ್ತವರಂತೆ ಪ್ರೀತಿಸುವವರ ಮನೆಯಲ್ಲೂ ಕಳ್ಳತನ ಮಾಡುತ್ತಾಳೆ. ಟಿಮ್ಮಿ ಇವಳ ಪ್ರೀತಿಯ ನಾಯಿ. ಇನ್ನೊಂದು ಕಡೆ ಇವಳನ್ನು ಇಷ್ಟಪಡುವ ಇನ್ನೊಬ್ಬ ಯುವಕ ಹರಿ (ಹರಿ ಶರ್ವ) ಕವಿ. ಆದರೆ, ಜೀವನೋಪಾಯಕ್ಕೆ ಡ್ರಗ್ ದಂಧೆಯಲ್ಲಿ ತೊಡಗಿರುತ್ತಾನೆ. ಇನ್ನೊಬ್ಬ ರಘು (ಸೂರಜ್ ಗೌಡ) ಶ್ರೀಮಂತರ ಮಗ. ಇವನು ಸೈಕೋ. ಸದಾ ಇವನನ್ನು ಬಾಧಿಸುವ ವಿಚಾರವೆಂದರೆ, ‘ಅವರು ಒಟ್ಟಿಗೆ ಮಲಗಿದರು, ಹಾಗಾಗಿ ನಾ ಹುಟ್ಟಿದೆ’ ಎನ್ನೋದು. ಡ್ರಗ್ ಸೇವಿಸೋದರ ಜತೆ ರಾತ್ರಿ ಹೊತ್ತು ಬೀದಿಯಲ್ಲಿ ಸಿಕ್ಕ ನಾಯಿ ಮತ್ತು ಹೆಣ್ಣನ್ನು ಹಿಂಸಿಸಿ ಕೊಂದು ಸಮಾಧಾನಪಟ್ಟುಕೊಳ್ಳುತ್ತಿರುತ್ತಾನೆ. ಇವರೆಲ್ಲರ ಬದುಕನ್ನು ಕಂಕ್ಲೂಡ್ ಮಾಡುವ ಗೋಜಿಗೆ ನಿರ್ದೇಶಕ ಹೋಗಿಲ್ಲ. ಆದರೆ, ಕ್ರೈಮ್ ಟ್ರ್ಯಾಕ್‌ಗೆ ಹೇಗೆ ಕನೆಕ್ಟ್ ಆಗುತ್ತಾರೆ ಎನ್ನುವುದು ಹೇಳಿದ್ದಾರೆ. ಹೊಸಬರಾಗಿದ್ದರೂ ಎಲ್ಲರದೂ ಪ್ರಬುದ್ಧ ನಟನೆ.

ಭಿನ್ನವಾದ ನಿರೂಪಣೆಯಿಂದ ಚಿತ್ರ ಗಮನ ಸೆಳೆಯುತ್ತದೆ. ಸಣ್ಣ ಕುತೂಹಲವನ್ನೂ ಉಳಿಸಿಕೊಂಡು ಹೋಗುತ್ತದೆ. ಪ್ರತಿಯೊಂದು ದೃಶ್ಯವನ್ನೂ ಹೊಸದೆನ್ನಿಸುವಂತೆ ಚಿತ್ರಿಸಲಾಗಿದೆ. ಕೆಲ ಚಿತ್ರಗಳಲ್ಲಿ ಡೈಲಾಗ್‌ಗಳ ಇಟ್ಟಿಗೆಯಿಂದ ಸಿನಿಮಾ ಕಟ್ಟಿರುತ್ತಾರೆ. ಆದರೆ, ಈ ಚಿತ್ರದಲ್ಲಿ ಮೌನ ಹೆಚ್ಚು ಮಾತನಾಡುತ್ತದೆ. ಅನಿರೀಕ್ಷಿತ ಸನ್ನಿವೇಶಗಳು ಕತೆಯ ನಡೆಯನ್ನು ಹೇಳುತ್ತದೆ.

ಮಾಮೂಲಿ ಶೈಲಿಯನ್ನು ಬಿಟ್ಟು, ದಿಢೀರ್ ಅಂತ ನಾಲ್ವರ ಬದುಕಿನೊಳಗೆ ಪ್ರೇಕ್ಷಕರನ್ನು ತಂದು ಬಿಟ್ಟಂತೆ ಚಿತ್ರದ ನಿರೂಪಣೆ ಸಾಗಿದೆ. ಅಪರೂಪಕ್ಕೆ ಕನ್ನಡದಲ್ಲೊಂದು ವಿಭಿನ್ನ ಪ್ರಯೋಗ ನಡೆದಿದೆ. ಪ್ರಶಾಂತ್ ಛಾಯಾಗ್ರಹಣ, ಮಿಧುನ್ ಮುಕುಂದನ್ ಸಂಗೀತ ಪೂರಕವಾಗಿದೆ. ಸಮಾಜ ಶಾಸ್ತ್ರೀಯ ನೆಲೆಗಟ್ಟಿನಲ್ಲಿ ಚರ್ಚೆಯನ್ನು ಹುಟ್ಟುಹಾಕುವ ಶಕ್ತಿ ಚಿತ್ರಕ್ಕಿದೆ. ಕಮರ್ಷಿಯಲ್ ಅಂಶಗಳ ಸೋಂಕೂ ಇಲ್ಲದ, ಚಿತ್ರವನ್ನು ಎಲ್ಲರೂ ನೋಡಬಹುದಾಗಿದೆ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>