Quantcast
Channel: VijayKarnataka
Viewing all articles
Browse latest Browse all 6795

ಪ್ರೋಟಿನ್‌ನಲ್ಲಿದೆಯಾ ಬಲ ವರ್ಧನೆಯ ಸೀಕ್ರೆಟ್‌?

$
0
0

ದೇಹದ ಬಲವರ್ಧನೆಗೆ ಪ್ರೋಟಿನ್‌ ಅತ್ಯಗತ್ಯ. ಅದು ಆಹಾರದಿಂದಲೇ ಬರಬೇಕು.

ವಲ್ಲಾರಿ ಷಾ

- ಪವರ್‌ ಟಾಕ್‌ -

ಜಿಮ್‌ ಅಥವಾ ಇನ್ಯಾವುದೋ ವಿಧಾನದ ಮೂಲಕ ದೇಹವನ್ನು ಹುರಿಗೊಳಿಸಬಹುದು ಎಂದೇ ಹಲವರು ನಂಬುತ್ತಾರೆ. ಆದರೆ ನಿಮಗೆ ಗೊತ್ತಾ? ದೇಹದ ಬಲ ವರ್ಧಿಸುವುದು ಕೇವಲ ವ್ಯಾಯಾಮವಲ್ಲ, ಪ್ರೋಟಿನ್‌ ಅತ್ಯಗತ್ಯ.

ಕ್ರೀಡೆ ಅಥವಾ ದೈನಂದಿನ ಕೆಲಸಗಳನ್ನು ಮಾಡಲು ಬೇಕಾದ ಶಕ್ತಿ ಬರುವುದು ಮ್ಯಾಕ್ರೋ ಪೌಷ್ಟಿಕಾಂಶಗಳಿಂದ. ಕಾರ್ಬೋಹೈಡ್ರೇಟ್‌, ಪ್ರೋಟೀನ್‌ ಮತ್ತು ಕೊಬ್ಬು ಆಹಾರದಲ್ಲಿ ಸಾಕಷ್ಟು ಪ್ರಮಾಣದಲ್ಲಿರಬೇಕು. ಆರೋಗ್ಯವಂತ ಹೃದಯ ಮತ್ತು ಶರೀರಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಪ್ರೋಟಿನ್‌ ಸೇವನೆ ಅತ್ಯಗತ್ಯ. ಆದರೆ ಕೊಬ್ಬಿನಂತೆ ಇದು ಶರೀರ ಸಂಗ್ರಹಿಸಿಡುವುದಿಲ್ಲ. ಹಾಗಾಗಿ ಅದನ್ನು ಪ್ರತಿನಿತ್ಯ ಆಹಾರದ ಮೂಲಕ ಸೇವಿಸಲೇಬೇಕು.

ನಾವು ಮಾಡುವ ಕೆಲಸ ಅಥವಾ ಆಡುವ ಕ್ರೀಡೆಯನ್ನು ಅವಲಂಬಿಸಿ ನಮ್ಮ ಶರೀರಕ್ಕೆ ಅಗತ್ಯವಿರುವ ಪ್ರೋಟಿನ್‌ ಪ್ರಮಾಣವನ್ನು ನಿರ್ಧರಿಸಬಹುದು. ಮ್ಯಾರಥಾನ್‌, ಈಜು, ಜಿಮ್ನಾಸ್ಟಿಕ್ಸ್‌ಗಳಂತಹ ಸಹನೆಯ ಪರೀಕ್ಷೆ ಮಾಡುವ ಕ್ರೀಡೆಗಳಲ್ಲಿ ಪಾಲ್ಗೊಳ್ಳುವವರು ತಮ್ಮ ದೇಹ ತೂಕದ ಪ್ರತಿ ಕಿಲೋಗೆ ಪ್ರತಿ ನಿತ್ಯ 1.2-1.5 ಗ್ರಾಂ ಪ್ರೋಟಿನ್‌ ಸೇವಿಸಬೇಕು. ಹಾಕಿ, ಕ್ರಿಕೆಟ್‌, ಬ್ಯಾಸ್ಕೆಟ್‌ಬಾಲ್‌, ಫುಟ್ಬಾಲ್‌, ವಾಲಿಬಾಲ್‌, ಬಾಕ್ಸಿಂಗ್‌ ಇತ್ಯಾದಿ ಚಟುವಟಿಕೆಗಳಲ್ಲಿ ತೊಡಗಿರುವವರು ತಮ್ಮ ದೇಹ ತೂಕದ ಪ್ರತಿ ಕಿಲೋಗೆ ಪ್ರತಿ ನಿತ್ಯ 1.4-1.8 ಗ್ರಾಂ. ಪ್ರೋಟೀನ್‌ ಸೇವಿಸಬೇಕು.

ಪ್ರೋಟಿನ್‌ ಮೂಲ

ಮೊಟ್ಟೆ: ಮಧ್ಯಮ ಗಾತ್ರದ ಮೊಟ್ಟೆಯಲ್ಲಿ 6.5 ಗ್ರಾಂ ಪ್ರೋಟಿನ್‌ ಇರುತ್ತದೆ.

ಮೀನು ಮತ್ತು ಕಡಲ ಆಹಾರ: ಮೀನಿನಲ್ಲಿ ಪ್ರೋಟೀನ್‌ ಸಮೃದ್ಧವಾಗಿದ್ದು, ವಿಟಮಿನ್‌ ಬಿ12 ಇರುತ್ತದೆ. ಕೆಲವು ಮೀನುಗಳಲ್ಲಿ ಶಕ್ತಿಭರಿತವಾದ ಒಮೇಗಾ-3 ಫ್ಯಾಟಿ ಆಮ್ಲಗಳೂ ಇರುತ್ತವೆ.

ದ್ವಿದಳ ಧಾನ್ಯಗಳು: ಬೀನ್ಸ್‌, ಲೆಂಟಿಲ್‌ಗಳು, ಮತ್ತು ಸೋಯಾ ಕಾಳುಗಳನ್ನು ಹೆಚ್ಚು ಸೇವಿಸಿ.

ಹಾಲು ಮತ್ತು ಹಾಲಿನ ಉತ್ಪನ್ನಗಳು: ಇವುಗಳಲ್ಲಿ ವೇ ಮತ್ತು ಕ್ಯಾಸೀಯ್ನ್‌ ಎಂಬ ಪ್ರೋಟಿನ್‌ ಇದೆ.

ಕೋಳಿಮರಿ: 100 ಗ್ರಾಂ ಕೋಳಿಮರಿ ಎದೆಯಲ್ಲಿ ಸುಮಾರು 30 ಗ್ರಾಂ. ಪ್ರೋಟಿನ್‌ ಇರುತ್ತದೆ. ಕೋಳಿಮರಿಯಲ್ಲಿ ಸಂಶ್ಲೇಷಣೆಗೆ ಬೇಕಾದ 9 ಬಗೆಯ ಅಮೈನೋ ಆಮ್ಲಗಳು ಇವೆ. ಇವುಗಳನ್ನು ನಮ್ಮ ಶರೀರ ತಯಾರಿಸುವುದಿಲ್ಲ. ಹಾಗಾಗಿ ಅವುಗಳನ್ನು ಆಹಾರದಿಂದಲೇ ಪಡೆಯಬೇಕಿದೆ.

ಲೇಖಕರು: ವಲ್ಲರಿ ಶಾ, ಆಹಾರ ತಜ್ಞ


Viewing all articles
Browse latest Browse all 6795

Trending Articles


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ಮಲಗಿದ್ದ ಮಹಿಳೆ ಬೆದರಿಸಿ ಬೆತ್ತಲೆ ಫೋಟೋ ತೆಗೆದ ಕಳ್ಳ


ಅಪಘಾತ ಗಾಯಾಳುಗಳಿಗೆ ನೆರವು ನೀಡಿದವರಿಗೆ ಜೀವರಕ್ಷಕ ಪ್ರಶಸ್ತಿ


ಬಿಗ್‌ ನ್ಯೂಸ್: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟ -‌ ಈ ಬಾರಿಯೂ...


 ಕೌಟುಂಬಿಕ ಕಲಹ ಹಿನ್ನೆಲೆ; ಬುದ್ದಿವಾದ ಹೇಳಿದ ತಂಗಿಯನ್ನೇ ಕೊಂದ ಅಣ್ಣ…


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ವಚನಗಳಿಂದ ಸಂಗೀತ ಲೋಕ ಶ್ರೀಮಂತ


Final chapter from Krishnamacharya's Yogasanagalu Part II Pranayam. Plus the...


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಆಲೋಚನೆಗೂ ಕ್ರಿಯೆಯಷ್ಟೇ ಮಹತ್ವವಿದೆ


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


‘ವ್ಯಾಪಾರ’ದಲ್ಲಿ ವೃದ್ಧಿಯಾಗಲು ಹೀಗೆ ಮಾಡಿ….


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>