Quantcast
Channel: VijayKarnataka
Viewing all articles
Browse latest Browse all 6795

ಎದೆ ಉರಿಗಿದೆ ಸರಳ ಪರಿಹಾರ

$
0
0

ಹಾರ್ಟ್‌ಬರ್ನ್ ನೋವು ಉಂಟು ಮಾಡುತ್ತದೆ, ಎದೆ ಉರಿಯುವಂತಹ ಅನುಭವಾಗುತ್ತದೆ ಅಥವಾ ಜಠರದ ಆಮ್ಲವು ಅನ್ನನಾಳದ ಮೂಲಕ ಮೇಲೆ ಬರುವುದರಿಂದ ಗಂಟಲಿನಲ್ಲಿ ಉರಿ ಉಂಟಾಗುತ್ತದೆ.

ಅನೇಕ ಸಂದರ್ಭದಲ್ಲಿ ಅಸಮರ್ಪಕ ಆಹಾರ ಸೇವನೆ ಮತ್ತು ಜೀವನಶೈಲಿಯೇ ಇದಕ್ಕೆ ಕಾರಣ. ಆದರೆ ನಿಮ್ಮ ದಿನಚರಿಯ ಹವ್ಯಾಸದಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡರೆ ಮತ್ತು ಕೆಲವು ಸರಳ ನೈಸರ್ಗಿಕ ಮನೆ ಮದ್ದಿನಿಂದ ಕಿರಿಕಿರಿ ಉಂಟು ಮಾಡುವ ಉರಿಯನ್ನು ತಡೆಗಟ್ಟಬಹುದು. ನಿಮ್ಮ ಅಡುಗೆ ಮನೆಯಲ್ಲಿರುವ ಸಾಂಬಾರ ಪದಾರ್ಥಗಳಿಂದಲೇ ಇದನ್ನು ನಿವಾರಣೆ ಮಾಡಬಹುದು.

ಜೀವನದಲ್ಲಿ ಮಸಾಲೆಯನ್ನು ಸೇರಿಸಿ:

ಈ ಸಾಂಪ್ರದಾಯಿಕ ಮಸಾಲೆಯನ್ನು ಭಾರತದಲ್ಲಿ ದೀರ್ಘಕಾಲದಿಂದ ಆ್ಯಸಿಡಿಟಿ ಮತ್ತು ಅಜೀರ್ಣಕ್ಕೆ ಉಪಯೋಗಿಸಲಾಗುತ್ತಿದೆ. ಬಾಷ್ಪಶೀಲ ತೈಲದಿಂದ ಉಂಟಾಗುವ ಎದೆಉರಿಯನ್ನು ಮಸಾಲೆ ಪದಾರ್ಥಗಳಾದ ಚೆಕ್ಕೆ, ಏಲಕ್ಕಿ ಮತ್ತು ಶುಂಠಿ ಹೋಗಲಾಡಿಸುತ್ತದೆ. ಈ ತೈಲವು ಜಠರದಲ್ಲಿ ಗ್ಯಾಸ್ಟ್ರಿಕ್ ಜ್ಯೂಸ್‌ನ ಹರಿವನ್ನು ಹೆಚ್ಚಿಸುತ್ತದೆ.

ಊಟದ ಬಳಿಕ ದೇಹದ ಭಂಗಿ ಹೀಗಿರಲಿ:

ದೇಹದ ಭಂಗಿ ಮತ್ತು ಆ್ಯಸಿಡಿಟಿಗೆ ನಿಕಟವಾದ ಸಂಬಂಧವಿದೆ. ವಿಶೇಷವಾಗಿ ಮಲಗುವುದಕ್ಕೂ ಮುನ್ನ. ರಾತ್ರಿ ವೇಳೆಯಲ್ಲಿ ಅಥವಾ ನಿದ್ರೆ ಮಾಡುವ ಸಂದರ್ಭದಲ್ಲಿ ಎದೆ ಉರಿ ಉಂಟಾಗುವುದಾದರೆ ಗುರುತ್ವಾಕರ್ಷಣೆಗೆ ಒಳಗಾಗಲು ಸಲಹೆ ನೀಡಲಾಗುತ್ತದೆ. ಮಲಗುವಾಗ ಯಾವಾಗಲೂ ತಲೆಯು ಸ್ವಲ್ಪ ಮೇಲಕ್ಕೆ ಇರಲಿ. ತಲೆಯ ಕೆಳ ಭಾಗದ ದೇಹವು ಮಲಗಿದಂತೆ ಇರಲಿ. ಇದನ್ನು ಹೊರತುಪಡಿಸಿದರೆ ಊಟಕ್ಕೂ ಮಲಗುವುದಕ್ಕೂ 1-2 ಗಂಟೆ ಕಾಲ ಅಂತರವಿರಲಿ.

ಆಗಾಗ್ಗೆ ಸೇಬುಹಣ್ಣು ಸೇವಿಸಿ:

ಇದು ಅತಿ ಸುಲಭ ಮತ್ತು ಅತ್ಯಂತ ಪರಿಣಾಮಕಾರಿಯಾಗಿದೆ. ಸೇಬುಹಣ್ಣು ಸೇವಿಸುವುದರಿಂದ ಆಮ್ಲೀಯವು ಹೊಟ್ಟೆಯನ್ನು ತಟಸ್ಥಗೊಳಿಸುತ್ತದೆ. ತಾಜಾ ಹಣ್ಣು ಅಥವಾ ಭಕ್ಷ್ಯಗಳ ರೂಪದಲ್ಲಾದರೂ ಸೇವಿಸಬಹುದು. ಅಥವಾ ಜೇನುತುಪ್ಪ ಮತ್ತು ಚೆಕ್ಕೆ ಪುಡಿಯನ್ನು ಮಿಕ್ಸ್ ಮಾಡಿ ಸೇವಿಸಬಹುದು. ಎದೆಉರಿಗೆ ಇದು ಒಳ್ಳೆಯ ಔಷಧ.

*ಧೂಮಪಾನ ಬೇಡ:

ಆಗಾಗ್ಗೆ ಎದೆಉರಿ ಮತ್ತು ಆ್ಯಸಿಡಿಟಿ ಉಂಟಾಗುತ್ತಿದ್ದರೆ ನಿಕೋಟಿನ್ ಉತ್ಪನ್ನವಾದ ಸಿಗರೇಟ್‌ನಿಂದ ದೂರವಿರಿ. ನಿಕೋಟಿನ್ ಹೊಟ್ಟೆ ಮತ್ತು ಅನ್ನನಾಳ ನಡುವೆ ಇರುವ ಕವಾಟಕ್ಕೆ ಕಿರಿಕಿರಿ ಮಾಡುವುದರಿಂದ ಎದೆಉರಿ ಉಂಟಾಗುತ್ತದೆ. ಅದಕ್ಕಿಂತಲೂ ಹೆಚ್ಚಾಗಿ ಈ ಉತ್ಪನ್ನಗಳು ನರಮಂಡಲವನ್ನು ದುರ್ಬಲಗೊಳಿಸುತ್ತದೆ. ಇದು ಹೊಟ್ಟೆ ಮತ್ತು ಕರುಳಿನ ಲೋಳೆ ಪೊರೆಯ ಕಾರ್ಯಚಟುವಟಿಕೆಯನ್ನು ಅಸಮರ್ಪಕವಾಗಿಸುತ್ತದೆ.

*ಸೂಕ್ತ ಪಾನೀಯವನ್ನು ಆಯ್ಕೆ ಮಾಡಿ:

ಈ ಪರಿಸ್ಥಿತಿಗೆ ಪರಿಹಾರ ಸಿಗಬೇಕೆಂದರೆ ಸೋಡಾ, ಮದ್ಯ ಮತ್ತು ಕೆಫೀನ್ ಒಳಗೊಂಡಿರುವ ಪಾನೀಯದಿಂದ ದೂರವಿರಿ. ಕೆಫೀನ್ ಒಳಗೊಂಡಿರುವ ಉತ್ಪನ್ನಗಳು ಎದೆಉರಿಯನ್ನು ಉಂಟು ಮಾಡುತ್ತದೆ ಎಂದು ಇತ್ತೀಚೆಗೆ ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ. ಇದಲ್ಲದೆ ಮದ್ಯಪಾನವು ಆ್ಯಸಿಡಿಟಿಯನ್ನು ಇನ್ನೂ ಹೆಚ್ಚಿಗೆ ಮಾಡುತ್ತದೆ.

*ಒತ್ತಡ ಮತ್ತು ಆ್ಯಸಿಡಿಟಿ:

ಸಾಮಾನ್ಯವಾಗಿ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುವಾಗ ನೀವು ಆ್ಯಸಿಡಿಟಿಗ ಒಳಗಾತ್ತೀರಿ. ಇದಕ್ಕೆ ಮುಖ್ಯ ಕಾರಣವೆಂದರೆ ಒತ್ತಡ ಮತ್ತು ಆಯಾಸ. ಇವು ಕೂಡ ಆ್ಯಸಿಡಿಟಿ ಹೆಚ್ಚಳಕ್ಕೆ ಪ್ರಚೋದನೆ ನೀಡುತ್ತದೆ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಬಿಗ್‌ ನ್ಯೂಸ್: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟ -‌ ಈ ಬಾರಿಯೂ...


 ಕೌಟುಂಬಿಕ ಕಲಹ ಹಿನ್ನೆಲೆ; ಬುದ್ದಿವಾದ ಹೇಳಿದ ತಂಗಿಯನ್ನೇ ಕೊಂದ ಅಣ್ಣ…


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


‘ಒಡಕು ಮೂಡಿಸಿದ ಸಿದ್ಧರಾಮಯ್ಯ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>