Quantcast
Channel: VijayKarnataka
Viewing all articles
Browse latest Browse all 6795

ಅಖಿಲ ಭಾರತ ಕ್ರಾಸ್‌ಕಂಟ್ರಿಗೆ ಮೂಡಬಿದಿರೆ ಸಜ್ಜು

$
0
0

200 ವಿಶ್ವವಿದ್ಯಾನಿಲಯಗಳಿಂದ 3000 ಸ್ಪರ್ಧಿಗಳು ಪಾಲ್ಗೊಳ್ಳುವ ನಿರೀಕ್ಷೆ

ಬೆಂಗಳೂರು: ಶುಕ್ರವಾರ ಮೂಡಬಿದಿರೆಯ ಆಳ್ವಾಸ್‌ ಶಿಕ್ಷಣ ಸಂಸ್ಥೆ ಹಾಗೂ ರಾಜೀವ್‌ ಗಾಂಧಿ ಆರೋಗ್ಯ ವಿವಿ ಸಹಯೋಗದೊಂದಿಗೆ ನಡೆಯಲಿರುವ ಅಖಿಲ ಭಾರತ ಅಂತರ್‌ ವಿಶ್ವವಿದ್ಯಾನಿಲಯ ಕ್ರಾಸ್‌ಕಂಟ್ರಿ ಚಾಂಪಿಯನ್‌ಷಿಪ್‌ಗೆ ಸಕಲ ಸಿದ್ಧತೆ ಭರದಿಂದ ಸಾಗಿದೆ.

ಆಳ್ವಾಸ್‌ ಶಿಕ್ಷಣ ಸಂಸ್ಥೆ ಎರಡನೇ ಬಾರಿಗೆ ಅಖಿಲ ಭಾರತ ಮಟ್ಟದ ಕ್ರಾಸ್‌ಕಂಟ್ರಿ ರೇಸ್‌ ಆಯೋಜಿಸುತ್ತಿದೆ. ಈ ಹಿಂದೆ ಮಂಗಳೂರು ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ಈ ಚಾಂಪಿಯನ್‌ಷಿಪ್‌ ನಡೆದಿತ್ತು. ಆವಾಗಲೂ ಆಳ್ವಾಸ್‌ ಶಿಕ್ಷಣ ಸಂಸ್ಥೆಯೇ ಆಯೋಜನೆ ಮಾಡಿತ್ತು.

ದೇಶದ 200 ವಿಶ್ವವಿದ್ಯಾನಿಲಯಗಳಿಂದ 3000ಕ್ಕೂ ಹೆಚ್ಚು ಸ್ಪರ್ಧಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಮೂಡಬಿದಿರೆಯ ಸ್ವರಾಜ್‌ ಮೈದಾನದಿಂದ ಆರಂಭಗೊಳ್ಳುವ ಈ ಕ್ರಾಸ್‌ಕಂಟ್ರಿಯ ಮಹಿಳೆಯರ ವಿಭಾಗಕ್ಕೆ ಬೆಳಿಗ್ಗೆ 6:45ಕ್ಕೆ ಚಾಲನೆ ದೊರೆಯಲಿದೆ. ಅದೇ ರೀತಿ ಬೆಳಿಗ್ಗೆ 7:30ಕ್ಕೆ ಪುರುಷರ ವಿಭಾಗದ ಸ್ಪರ್ಧೆ ನಡೆಯಲಿದೆ. ಸ್ವರಾಜ್‌ ಮೈದಾನದ್‌ ಸಿಂಥಟಿಕ್‌ ಟ್ರ್ಯಾಕ್‌ನಲ್ಲಿ ಸ್ಪರ್ಧೆ ಸಮಾಪನಗೊಳ್ಳಲಿದೆ.

ಕ್ರಾಸ್‌ಕಂಟ್ರಿಯ ಆರಂಭಿಕ ಹಂತದಲ್ಲಿ ಏಕ ಕಾಲಕ್ಕೆ 1200 ಸ್ಪರ್ಧಿಗಳು ಸರಾಗವಾಗಿ ಓಡುವ ಸಲುವಾಗಿ 34 ಬ್ಲಾಕ್‌ಗಳನ್ನು ಸಿದ್ಧಪಡಿಸಲಾಗಿದೆ. ವೈಬ್ರೇಟರ್‌ ರೋಲರ್‌ ಮೂಲಕ ಸ್ವರಾಜ್‌ ಮೈದಾನವನ್ನು ಸಮತಟ್ಟುಗೊಳಿಸಲಾಗಿದೆ. ಓಟದ ವೇಳೆ ಕ್ರೀಡಾಪಟುಗಳಿಗೆ ನೀರು, ವೈದ್ಯಕೀಯ ಸೇವೆ ಹಾಗೂ ಝೀರೋ ಪಾಯಿಂಟ್‌ ಟ್ರಾಫಿಕ್‌ ವ್ಯವಸ್ಥೆ ಮಾಡಲಾಗಿದೆ. ಡಿಜಿಟರ್‌ ಕಾಲಮಾಪನ ವ್ಯವಸ್ಥೆ ಕಲ್ಪಿಸಲಾಗಿದೆ.

ವಿಜೇತರಿಗೆ ನಗದು ಬಹುಮಾನ

ಅಖಿಲ ಭಾರತ ಅಂತರ್‌ ವಿಶ್ವವಿದ್ಯಾನಿಲಯದ ಇತಿಹಾಸದಲ್ಲೇ ಮೊದಲ ಬಾರಿಗೆ ವಿಜೇತ ಸ್ಪರ್ಧೆಗಳಿಗೆ ನಗದು ಬಹುಮಾನ ನೀಡಲಾಗುವುದು. ಚಾಂಪಿಯನ್‌ಷಿಪ್‌ ಯಶಸ್ಸಿಗಾಗಿ 150 ಮಂದಿ ತಾಂತ್ರಿಕ ಅಧಿಕಾರಿಗಳು, 600 ಕ್ರೀಡಾಧಿಕಾರಿಗಳು ಶ್ರಮಿಸಲಿದ್ದಾರೆ. 150 ಮಂದಿ ಕ್ರೀಡಾ ಸಾಧಕರನ್ನು ಈ ಚಾಂಪಿಯನ್‌ಷಿಪ್‌ಗೆ ಆಹ್ವಾನಿಸಲಾಗಿದೆ. ಈ ಕ್ರೀಡಾಕೂಟವು ರಾಷ್ಟ್ರದಲ್ಲಿಯೇ ಮಾದರಿಯಾಗುವಂತೆ ಯಶಸ್ಸುಗೊಳಿಸಲಾಗುವುದು ಎಂದು ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ಚಾಂಪಿಯನ್‌ಷಿಪ್‌ನ ಕಾರ್ಯಾಧ್ಯಕ್ಷರಾದ ಡಾ. ಎಂ. ಮೋಹನ್‌ ಆಳ್ವಾ ತಿಳಿಸಿದ್ದಾರೆ.

-----

''ಈ ಬಾರಿ ನಡೆಯುವ ಅಖಿಲ ಭಾರತ ಅಂತರ್‌ ವಿಶ್ವವಿದ್ಯಾನಿಲಯ ಕ್ರಾಸ್‌ಕಂಟ್ರಿ ಮಾದರಿಯಾಗಬೇಕು. ಕ್ರೀಡಾಪಟುಗಳು ಹಾಗೂ ಇತರ ವಿಶ್ವವಿದ್ಯಾನಿಲಯದ ಪ್ರತಿನಿಧಿಗಳು ಇದನ್ನು ಅನುಸರಿಸಿ ಇದಕ್ಕಿಂತ ಉತ್ತಮವಾಗಿ ಮಾಡಲು ಸ್ಫೂರ್ತಿಯಾಗಬೇಕು''.

* ಡಾ. ಮೋಹನ್‌ ಆಳ್ವಾ, ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರು


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಮಲಗಿದ್ದ ಮಹಿಳೆ ಬೆದರಿಸಿ ಬೆತ್ತಲೆ ಫೋಟೋ ತೆಗೆದ ಕಳ್ಳ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


‘ವ್ಯಾಪಾರ’ದಲ್ಲಿ ವೃದ್ಧಿಯಾಗಲು ಹೀಗೆ ಮಾಡಿ….


ಅಪ್ಪ ಅಮ್ಮ ಬೈಯ್ತಾರೆ ಅಂತ ಬೆಂಗಳೂರಿಂದ ಚಳ್ಳಕೆರೆಗೆ ಹೋದ ಮಕ್ಕಳು


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


Namaskāra नमस्कार (salutation)


ತುಳು ತೆರೆಗೆ ಸೋನಿಯಾ ಎಂಟ್ರಿ



<script src="https://jsc.adskeeper.com/r/s/rssing.com.1596347.js" async> </script>