Quantcast
Channel: VijayKarnataka
Viewing all articles
Browse latest Browse all 6795

ಕಥಾ ಸಂಗಮ

$
0
0

-ಪದ್ಮಾ ಶಿವಮೊಗ್ಗ

ಇಲ್ಲಿಯವರೆಗೆ ಎರಡು ಗಂಟೆಗಳ ಅವಧಿಯ ಸಿನಿಮಾದಲ್ಲಿಒಂದು ಕಥೆ ಇರುತ್ತಿತ್ತು. ಹಲವು ವರ್ಷಗಳ ಹಿಂದೆ ‘ಕಥಾಸಂಗಮ’ ಚಿತ್ರದಲ್ಲಿ ಮೂರು ಕತೆಗಳನ್ನು ಹೇಳಲಾಗಿತ್ತು. ಈಗ ಮತ್ತೆ ಒಂದೇ ಚಿತ್ರದಲ್ಲಿ ಹಲವು ಪ್ರತ್ಯೇಕ ಕತೆಗಳನ್ನು ಹೇಳುವ ಪ್ರಯತ್ನ ನಡೆದಿದೆ.ಒಂದೇ ಟೈಟಲ್, ಒಂದೇ ಸಿನಿಮಾ, ಒಂದೇ ಟೈಮ್‌ನಲ್ಲಿ ನಾಲ್ಕು ಚಿತ್ರಗಳನ್ನು ನೋಡಬಹುದಾಗಿದೆ.

ದಯವಿಟ್ಟು ಗಮನಿಸಿ

ರೋಹಿತ್ ಪದಕಿ ನಿರ್ದೇಶನದ ‘ದಯವಿಟ್ಟು ಗಮನಿಸಿ’ ಚಿತ್ರದಲ್ಲಿ ನಾಲ್ಕು ಪ್ರತ್ಯೇಕ ಕತೆಗಳನ್ನು ಹೇಳಲಾಗುತ್ತಿದೆ. ಬೆಂಗಳೂರಿನ ನಾಲ್ಕು ವರ್ಗಗಳ ಕತೆಯನ್ನು ಹೇಳುವುದರ ಜತೆಗೆ ಬದುಕಿನ ನಾಲ್ಕು ಹೇಳುವುದರ ಜತೆಗೆ ಬದುಕಿನ ನಾಲ್ಕು ಆಯಾಮಗಳನ್ನು ಹೆಣೆದಿದ್ದಾರೆ. 30 ನಿಮಿಷಗಳ ಒಂದೊಂದು
ಕತೆಯಲ್ಲಿ ಬರುವ ಎಲ್ಲಾ ಪಾತ್ರಗಳಿಗೆ ಸಂಬಂಧ ಇದೆಯೋ ಇಲ್ಲವೋ ಎನ್ನುವುದು ಸಸ್ಪೆನ್ಸ್ ಎನ್ನುತ್ತಾರೆ ನಿರ್ದೇಶಕ ರೋಹಿತ್‌. ಪ್ರಕಾಶ್ ಬೆಳವಾಡಿ, ವಸಿಷ್ಟ ಸಿಂಹ, ಸುಕೃತಾ ವಾಗ್ಳೆ ಸೇರಿದಂತೆ ಅನೇಕರು ನಟಿಸಿದ್ದಾರೆ.

ಹ್ಯಾಪಿ ನ್ಯೂ ಯಿಯರ್ ಪನ್ನಗ ಭರಣ ನಿರ್ದೇಶನದ ಈ ಚಿತ್ರದಲ್ಲಿ 5 ಕತೆಗಳಿವೆ. ಒಂದೊಂದು ಕತೆಗೆ ಒಬ್ಬೊಬ್ಬ ಹೀರೊ. ವಿಜಯ ರಾಘವೇಂದ್ರ, ದಿಗಂತ್, ಧನಂಜಯ್, ಬಿ. ಸಿ. ಪಾಟೀಲ್, ಸಾಯಿ ಕುಮಾರ್ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

ಈಗ ಕನ್ನಡ ಚಿತ್ರರಂಗದಲ್ಲಿ ಪ್ರಯೋಗಾತ್ಮಕ ಚಿತ್ರಗಳಿಗೆ ಯಶಸ್ಸು ಸಿಗುತ್ತಿದೆ. ಹೀರೊ ಮುಖ್ಯ ಅನ್ನೋದಕ್ಕಿಂತ ಒಳ್ಳೆಯ ಕತೆ ಬೇಕು ಅನ್ನೋ ನಿರ್ಮಾಪಕರು ಈಗ ಸಿಗುತ್ತಿದ್ದಾರೆ. ಹಾಗಾಗಿ ಇಂಥ ಪ್ರಯೋಗ ಮಾಡಲು ಸಾಧ್ಯವಾಗುತ್ತಿದೆ’ ಎನ್ನುತ್ತಾರೆ. ಪನ್ನಗ ಭರಣ. ಚಿತ್ರಕ್ಕೆ ಬಿ.ಸಿ. ಪಾಟೀಲ್ ಬಂಡವಾಳ ಹೂಡಿದ್ದಾರೆ. 4ಕೆ: ಹಂಸಲೇಖ ಹೊಸ ರೀತಿಯ ಸಿನಿಮಾ ಮಾಡಲಿದ್ದಾರೆ. ತಮ್ಮ ಸ್ವಂತ ಬ್ಯಾನರ್‌ನಿಂದ ‘4ಕೆ’ ಎಂಬ ಚಿತ್ರದಲ್ಲಿ ನಾಲ್ಕು ಪ್ರತ್ಯೇಕ ಕತೆಗಳನ್ನು ಹೇಳಲು ನಿರ್ಧರಿಸಿದ್ದಾರೆ. ಪ್ರತಿಯೊಂದು ಕತೆಗೂ ಬೇರೆ ಬೇರೆ ನಾಲ್ವರು ನಿರ್ದೇಶಕರು ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಒಂದು ಕತೆಗೆ ಹಂಸಲೇಖ ನಿರ್ದೇಶನವಿದೆ. ನಾಲ್ವರು ಪ್ರಸಿದಟಛಿ ಬರಹಗಾರರು ಬರೆದ ಕತೆಗಳನ್ನು ತೆರೆಗೆ ತರಲಿದ್ದಾರೆ. ಇನ್ನೊಂದು ವಿಶೇಷವೆಂದರೆ, ಈ ನಾಲ್ಕು ಕಿರುಚಿತ್ರಗಳಿಗೆ ನಾಲ್ವರು ನಿರ್ಮಾಪಕರಿದ್ದಾರೆ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಅಪಘಾತ ಗಾಯಾಳುಗಳಿಗೆ ನೆರವು ನೀಡಿದವರಿಗೆ ಜೀವರಕ್ಷಕ ಪ್ರಶಸ್ತಿ


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಶಿವಸೇನೆ ಬಿಗಿಪಟ್ಟು: ದೇಶ ಗೆದ್ದ ಬಿಜೆಪಿ ವಿಲವಿಲ


ಶುಭ ಫಲಕ್ಕಾಗಿ ಮನೆಯಲ್ಲಿ ಗಾಳಿ ಗಂಟೆ ಹಾಕುವ ಮುನ್ನ ಈ ವಿಚಾರ ತಿಳಿಯಿರಿ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>