Quantcast
Channel: VijayKarnataka
Viewing all articles
Browse latest Browse all 6795

ದೀಪಾವಳಿ ಬೆಳಕಿನಲ್ಲಿ ಹೊಸ ಬದುಕಿನ ಆಶಯ

$
0
0

ದೀಪಾವಳಿಯ ಸಂಭ್ರಮ ಎದುರಿನಲ್ಲಿದೆ. ಈ ನಿಮಿತ್ತ ಇಂದಿನಿಂದ ಲವಲವಿಕೆಯಲ್ಲಿ ಈ ಹಬ್ಬದ ಸಡಗರ ಸರಣಿ ರೂಪದಲ್ಲಿ ಪ್ರಕಟಗೊಳ್ಳಲಿದೆ. ದೀಪಾವಳಿಯ ಬೆಳಕು, ಎಲ್ಲರ ಬದುಕಿನಲ್ಲೂ ಹೊಸ ಬೆಳಕನ್ನು ನೀಡಲಿ ಎಂಬ ಆಶಯ ನಮ್ಮದು.

- ವಿದ್ಯಾರಶ್ಮಿ ಪೆಲತ್ತಡ್ಕ

ಸಾಲು ಬೆಳಕಿನ ಸಾಲು. ಹೊಸ ಬಟ್ಟೆಯ ಸಂಭ್ರಮ. ಹಬ್ಬದೂಟದ ರುಚಿ. ಇದು ದೀಪಾವಳಿ. ಮನೆ-ಮನಗಳಲ್ಲಿ ಬೆಳಕಿನ ಮಳೆಯಲ್ಲಿ ತೋಯಿಸುವ ಈ ಹಬ್ಬಕ್ಕೆ ಇನ್ನು ಹೆಚ್ಚು ದಿನಗಳು ದೂರವಿಲ್ಲ. ನಿತ್ಯದ ಕೆಲಸದ ಏಕತಾನತೆ ಮುರಿದು ಹೊಸದೊಂದು ಬೆಳಕಿನಲ್ಲಿ ಬದುಕನ್ನು ನೋಡಲೊಂದು ನೆಪ ಮಾಡಿಕೊಡುವ ಈ ಹಬ್ಬಕ್ಕೆ ಸಂಭ್ರಮದ ತಯಾರಿಯೂ ನಡೆದಿದೆ.

ಅದೇ ಹಣತೆ, ಅದೇ ಸಿಹಿ, ಅದೇ ಹೊಸಬಟ್ಟೆ, ಇಷ್ಟೇ ಅಲ್ಲವೇ ಅದರಲ್ಲೇನು ವಿಶೇಷ ಅನಿಸುವುದಿದೆ. ದೀಪಾವಳಿಯೆಂದರೆ ಅವೇ ದೀಪಗಳ ಹಬ್ಬ ನಿಜ. ಆದರೂ, ಈ ಬಾರಿಯ ಹಬ್ಬ ವಿಭಿನ್ನ. ಪ್ರತಿ ಬಾರಿಯೂ ಬರುವ ಹಬ್ಬದ ಪರಿಕಲ್ಪನೆ ಅದುವೇ. ಆದರೆ, ಅದರ ಹಿಂದೆ ಗೂಡು ಕಟ್ಟಿರುವ ನಮ್ಮ ಕನಸುಗಳು ಭಿನ್ನವಾಗಿರುತ್ತವೆ, ಎದುರಿಸಬೇಕಾಗಿರುವ ಸವಾಲುಗಳು ಹೊಸದಾಗಿರುತ್ತವೆ. ಅದಕ್ಕೇ ವರ್ಷದಿಂದ ವರ್ಷಕ್ಕೆ ಹಬ್ಬ ಭಿನ್ನವಾಗುತ್ತದೆ.

ಹೊಸತು ಹೊಸತು

ಈ ಹಬ್ಬದ ಖುಷಿಗಾಗಿಯೇ ಹೊಸ ಹೊಸ ಗೂಡುದೀಪಗಳು ಬಂದಿವೆ. ಹಣತೆಯಲ್ಲೇ ಹೊಸ ವಿನ್ಯಾಸ ಕಣ್ಸೆಳೆದಿದೆ. ಮನೆಮನೆಯ ಅಲಂಕಾರ ಹೆಚ್ಚಿಸಲು ನೂರೆಂಟು ದಾರಿಗಳು ಕಾಣಿಸುತ್ತಿವೆ. ವಿದ್ಯುದ್ದೀಪಗಳ ಮಿಣಿಮಿಣಿ ಬೆಳಕಂತೂ ಹಲವು ಬಗೆಯಲ್ಲಿ ಕಣ್ಸೆಳೆದಿವೆ. ಫ್ಯಾಷನ್‌ ಕೂಡ ಕಳೆದ ವರ್ಷದಿಂದ ಈ ವರ್ಷಕ್ಕೆ ಬದಲಾಗಿಬಿಟ್ಟಿದೆ. ಹೊಸ ಡಿಸೈನರ್‌ ಬಟ್ಟೆಗಳು ದೀಪಗಳ ಹಬ್ಬಕ್ಕೆಂದೇ ಮಾರುಕಟ್ಟೆಗೆ ಬಂದಿವೆ. ಆಭರಣಗಳಂತೂ ಕೊಳ್ಳುವವರಿಗಾಗಿ ಕಾದಿವೆ.

ಇವೆಲ್ಲದರ ಮಧ್ಯೆ ಪರಿಸರಸ್ನೇಹಿ ದೀಪಾವಳಿ ಆಚರಿಸೋಣ ಅನ್ನುವವರು ದೀಪಾವಳಿಯ ಬೆಳಕಿನಲ್ಲಿ ಮಾಲಿನ್ಯವಾಗದಂತೆ ತಡೆಯೋಣ ಅನ್ನುತ್ತಿದ್ದಾರೆ. 'ಈ ಬಾರಿಯಿಂದ ಪಟಾಕಿ ಕೊಳ್ಳುವುದಿಲ್ಲ' ಎಂದು ಶಪಥ ಮಾಡಿದವರಂತೂ ಅನೇಕ ಮಂದಿ. 'ಹಬ್ಬದ ದಿನ ಮನೆಯಲ್ಲಿ ಹಬ್ಬದೂಟ ಮಾಡುವ ಜತೆಗೆ ಅನಾಥಾಶ್ರಾಮಕ್ಕೆ ಹಣ ಡೋನೇಟ್‌ ಮಾಡುತ್ತೇನೆ' ಅನ್ನುವವರು ಕೆಲವರಾದರೆ, 'ವೃದ್ಧಾಶ್ರಮದಲ್ಲೇ ಈ ಬಾರಿಯ ಹಬ್ಬ ಆಚರಿಸುತ್ತೇನೆ' ಅನ್ನುವವರು ಇನ್ನು ಕೆಲವರು. ಹಬ್ಬಕ್ಕೆ ಸಾಮಾಜಿಕ ಆಯಾಮ ಸಿಗುವ ಬಗೆ ಇದು.

ಬಂಧವ ಬೆಸೆದು

ಎಷ್ಟೇ ಹೊಸ ಜೋಡಿಯಾದರೂ ವರ್ಷ ಕಳೆದಂತೆ ಪರಸ್ಪರ ಹಳಬರಾಗುತ್ತಾರೆ. ದಿನವೂ ಅದೇ ಮುಖ, ಅದೇ ಮಾತು... ಅನ್ನುವಂತಾದಾಗಲೇ ಇಂತಹ ಹಬ್ಬಗಳು ಅಲ್ಲಿ ಹೊಸ ಉಲ್ಲಾಸ ತುಂಬುವುದು. ರಾಷ್ಟ್ರಕವಿ ಜಿ.ಎಸ್‌.ಶಿವರುದ್ರಪ್ಪನವರೇ ಹೇಳಿದ್ದಾರಲ್ಲ,

ಆದರೂ ಹಣತೆ ಹಚ್ಚುತ್ತೇನೆ ನಾನೂ ;

ಕತ್ತಲೆಯನ್ನು ದಾಟುತ್ತೇನೆಂಬ ಭ್ರಮೆಯಿಂದಲ್ಲ,

ಇರುವಷ್ಟು ಹೊತ್ತು ನಿನ್ನ ಮುಖ ನಾನು, ನನ್ನ ಮುಖ ನೀನು

ನೋಡಬಹುದೆಂಬ ಒಂದೇ ಒಂದು ಆಸೆಯಿಂದ

ಹೌದು. ಮನೆಮಂದಿಯೆಲ್ಲ ಪುರುಸೊತ್ತಿನಲ್ಲಿ ಕುಳಿತು ಸುಖದುಃಖ ಮಾತಾಡಲು, ಬೆರೆಯಲು ಹಬ್ಬವೇ ಪ್ರಶಸ್ತ. ಶಿವರುದ್ರಪ್ಪನವರೇ ಬರೆದ ಮತ್ತೊಂದು ಸಾಲಿದೆ,

ಹಣತೆ ಆರಿದ ಮೇಲೆ, ನೀನು ಯಾರೋ, ಮತ್ತೆ ನಾನು ಯಾರೋ...

- ಹೀಗಾಗಬಾರದು ಎಂಬ ಕಾಳಜಿಯೂ ನಮಗೆ ಬೇಕು. ಹಬ್ಬದ ಮರುದಿನ ನೀನ್ಯಾರೋ ನಾನ್ಯಾರೋ ಎಂಬ ಕವಲು ದಾರಿಯ ನಡೆ ಉಂಟಾಗದಿರಲಿ ಅನ್ನುವುದಕ್ಕೇ ಇಂತಹ ಹಬ್ಬಗಳು ನಮ್ಮನ್ನು ಆಪ್ತ ಬೆಳಕಿನಲ್ಲಿ ಮೀಯಿಸುವುದು. ಈ ಭಾವ ಬೆಳಕು ಎಲ್ಲರಿಗೂ ಸಿಗುವಂತಾಗಲಿ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>