Quantcast
Channel: VijayKarnataka
Viewing all articles
Browse latest Browse all 6795

ಉಗ್ರ ಪೋಷಕರಿಗೆ ಬುದ್ದಿ ಕಲಿಸುತ್ತೇವೆ: ಮೋದಿ

$
0
0

ಲಖನೌ: ಭಯೋತ್ಪಾದನೆಯನ್ನು ಪೋಷಿಸುವವರಿಗೆ ಬುದ್ದಿ ಕಲಿಸಬೇಕಾಗಿದೆ. ಆ ಕೆಲಸ ಈಗಾಗಲೇ ಚಾಲ್ತಿಯಲ್ಲಿದೆ. ಭಾರತ ಯುದ್ಧಕ್ಕಿಂತ ಬುದ್ಧನೆಡೆಗೆ ಹೋಗಲು ಬಯಸುತ್ತದೆಯಾದರೂ, ಮಾನವೀಯತೆ ಉಳಿವಿಗೆ ಅನಿವಾರ‌್ಯವಾದರೆ ಯುದ್ಧ ಮಾಡಲೂ ಸಿದ್ಧವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಲಖನೌದ ಐತಿಹಾಸಿಕ ಅಶಿಭಾಗ್‌ನಲ್ಲಿ ದಸರಾ ಅಂಗವಾಗಿ ರಾಮಲೀಲಾ ಆಚರಣೆಯಲ್ಲಿ ಪಾಲ್ಗೊಂಡ ಮೋದಿ, ನೇರವಾಗಿ ಹೆಸರಿಸದೇ ಪಾಕಿಸ್ತಾನಕ್ಕೆ ಕಠಿಣ ಸಂದೇಶ ರವಾನಿಸಿದರು. ‘‘ಭಯೋತ್ಪಾದನೆ ವಿರುದ್ಧ ಮೊದಲು ಸಮರ ಸಾರಿದ್ದು ರಾಮಾಯಣ ಕಾಲದ ಜಟಾಯು. ಜಗತ್ತಿನೆಲ್ಲೆಡೆ ಭೀತಿ ಮೂಡಿಸಿದ್ದ ರಾವಣನೆಂಬ ದುಷ್ಟ ಅಸುರನ ಕೈಯಿಂದ ಅಸಹಾಯಕ ಸೀತಾ ಮಾತೆಯನ್ನು ರಕ್ಷಿಸಲು ಆತ ಹೋರಾಡಿ ಪ್ರಾಣ ತೆತ್ತಿದ್ದ. ನಾವು ರಾಮನಾಗದಿದ್ದರೂ ಪರವಾಗಿಲ್ಲ,ಕನಿಷ್ಠ ಜಟಾಯು ಆಗಬೇಕು. ಭಯೋತ್ಪಾದನೆ ಸಮಾಜಕ್ಕಂಟಿದ ವಿಷಕ್ರಿಮಿಯಿದ್ದಂತೆ ಅದರ ನಾಶಕ್ಕೆ ಪ್ರತಿಯೊಬ್ಬರೂ ಜಟಾಯುಗಳಾಗಬೇಕು,’’ ಎಂದರು.

ಬಡತನ, ಅನಕ್ಷರತೆ

‘‘ಬಡತನ, ಅನಕ್ಷರತೆ, ಭ್ರಷ್ಟಾಚಾರ ಮೊದಲಾದವು ರಾವಣನ ಇನ್ನೊಂದು ಸ್ವರೂಪವೇ ಆಗಿದೆ. ಅವುಗಳನ್ನು ದಹಿಸಿ ಸಮಾಜದಲ್ಲಿ ಸ್ವಾಸ್ಥ್ಯ ನೆಲಸುವಂತೆ ಮಾಡಬೇಕು. ನಾವು ವಿಜಯ ದಶಮಿ ಆಚರಿಸುತ್ತಿರುವಾಗಲೇ ಜಗತ್ತು ‘ಅಂತಾರಾಷ್ಟ್ರೀಯ ಬಾಲಕಿಯರ ದಿನ’ವನ್ನು ಆಚರಿಸುತ್ತಿದೆ. ಸಮಾಜದಲ್ಲಿ ಹೆಣ್ಣು ಮಕ್ಕಳನ್ನು ರಕ್ಷಿಸಿ, ಬೆಳೆಸುವ ಕೆಲಸ ಆಗಬೇಕಿದೆ. ಧರ್ಮ, ಜಾತಿ, ಪಂಗಡಗಳ ಭೇದ-ಭಾವ ಎಣಿಸದೇ ಮಹಿಳೆಯರನ್ನು ಗೌರವಿಸಿ, ಅವರ ಹಕ್ಕುಗಳನ್ನು ರಕ್ಷಿಸಬೇಕಾಗಿದೆ,’’ ಎಂದು ಪ್ರಧಾನಿ ತಿಳಿಸಿದರು.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಬಿಗ್‌ ನ್ಯೂಸ್: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟ -‌ ಈ ಬಾರಿಯೂ...


 ಕೌಟುಂಬಿಕ ಕಲಹ ಹಿನ್ನೆಲೆ; ಬುದ್ದಿವಾದ ಹೇಳಿದ ತಂಗಿಯನ್ನೇ ಕೊಂದ ಅಣ್ಣ…


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


‘ಒಡಕು ಮೂಡಿಸಿದ ಸಿದ್ಧರಾಮಯ್ಯ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>