Quantcast
Channel: VijayKarnataka
Viewing all articles
Browse latest Browse all 6795

18ನೇ ರೇಡ್‌ ದಿ ಹಿಮಾಲಯ ರಾಲಿಗೆ ಚಾಲನೆ

$
0
0

ದಾಖಲೆಯ 240 ಮಂದಿ ಸ್ಪರ್ಧಿಗಳು ಭಾಗಿ

ಬೆಂಗಳೂರು: ವಿಶ್ವದ ಅತ್ಯಂತ ಕಠಿಣ ರಾರ‍ಯಲಿಗಳಲ್ಲಿ ಒಂದಾದ ಮಾರುತಿ ಸುಜುಕಿ ರೇಡ್‌ ದಿ ಹಿಮಾಲಯ ರಾರ‍ಯಲಿಯ 18ನೇ ಆವೃತ್ತಿಗೆ ಶನಿವಾರ ಚಾಲನೆ ದೊರೆತಿದ್ದು, ಭಾನುವಾರ ಮುಂಜಾನೆ ರಾರ‍ಯಲಿ ರೇಸ್‌ ಆರಂಭಗೊಂಡಿದೆ.

ಸಮುದ್ರ ಮಟ್ಟಕ್ಕಿಂತಲೂ ಸಾವಿರಾರು ಮೀಟರ್‌ಗಳ ಎತ್ತರದಲ್ಲಿ ಸಾಗುವ ರೇಡ್‌ ದಿ ಹಿಮಾಲಯ ರಾರ‍ಯಲಿ ಈ ಬಾರಿ ಹಿಮಾಚಲ ಪ್ರದೇಶದ ಮನಾಲಿಯಲ್ಲಿ ಚಾಲನೆ ಪಡೆದಿದ್ದು, ಒಟ್ಟಾರೆ 7 ದಿನಗಳ ಕಾಲ ಹಿಮಾಲಯದ ಬೆಟ್ಟ ಗುಡ್ಡಗಳ ಮಾರ್ಗದಲ್ಲಿ 2000 ಕಿ.ಮೀ ವರೆಗೆ ಸಾಗಿ ಜಮ್ಮು ಮತ್ತು ಕಾಶ್ಮೀರದ ಲೇಹ್‌ನಲ್ಲಿ ಅಂತ್ಯಗೊಳ್ಳಲಿದೆ.

ರೇಡ್‌ ದಿ ಹಿಮಾಲಯನ್‌ ರಾರ‍ಯಲಿಯಲ್ಲಿ ವರ್ಷದಿಂದ ವರ್ಷಕ್ಕೆ ಸ್ಪರ್ಧಿಗಳ ಸಂಖ್ಯೆ ಏರುತ್ತಲಿದ್ದು, ಈ ಬಾರಿ ಒಟ್ಟಾರೆ 240 ಮಂದಿ ರಾರ‍ಯಲಿ ಪಟುಗಳು ಕಣದಲ್ಲಿದ್ದಾರೆ. ಒಟ್ಟಾರೆ 155 ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದ್ದು, ಅಕ್ಟೋಬರ್‌ 15 ರಂದು ಮನಾಲಿಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಎಕ್ಸ್‌ಟ್ರೀಮ್‌ ಕಾರ್ಸ್‌ ವಿಭಾಗದಲ್ಲಿ ಈ ಬಾರಿ 10 ಮಂದಿ ಮಹಿಳಾ ಸ್ಪರ್ಧಿಗಳು ಇರುವುದು ವಿಶೇಷ.

ಸಮುದ್ರ ಮಟ್ಟದಿಂದ 17,500 ಅಡಿ ಎತ್ತರದ ಮಾರ್ಗಗಳಲ್ಲಿ ಸಾಗುವ ರಾರ‍ಯಲಿಯು, ಸ್ಪರ್ಧಿಗಳಿಗೆ -15 ಡಿಗ್ರಿ ಸೆಲ್ಷಿಯಸ್‌ ನಷ್ಟು ಕೊರೆಯುವ ಚಳಿಯನ್ನು ಎದುರಿಸುವಂತೆ ಮಾಡುತ್ತದೆ. ಇದರೊದಿಗೆ ರಾರ‍ಯಲಿಪಟುಗಳ ಚಾಲನಾ ಸಾಮರ್ಥ್ಯ‌ದ ಜತೆಗೆ ದೈಹಿಕ ಸಾಮರ್ಥ್ಯ‌ವನ್ನೂ ಇಲ್ಲಿ ಅಳೆಯಲಾಗುತ್ತದೆ.

ಪ್ರತಿಬಾರಿಯಂತೆ ಎಕ್ಸ್‌ಟ್ರೀಮ್‌ ಕಾರ್ಸ್‌ ಆ್ಯಂಡ್‌ ಬೈಕ್‌ ಮತ್ತು ಅಡ್ವೇಂಚರ್‌ ಟ್ರಯಲ್‌ ವಿಭಾಗಗಳಲ್ಲಿ ಸ್ಪರ್ಧಿಗಳು ಪೈಪೋಟಿ ನಡೆಸಲಿದ್ದಾರೆ. ವೃತ್ತಿಪರ ರಾರ‍ಯಲಿಪಟುಗಳು ಎಕ್ಸ್‌ಟ್ರೀಮ್‌ ಕಾರ್ಸ್‌ ಮತ್ತು ಬೈಕ್ಸ್‌ ವಿಭಾಗದಲ್ಲಿ ಪೈಪೋಟಿ ನಡೆಸಿದರೆ, ರಾರ‍ಯಲಿ ಅನುಭವ ಪಡೆದುಕೊಳ್ಳುತ್ತಿರುವ ಅಮೆಚೂರ್‌ ರಾರ‍ಯಲಿ ಪಟುಗಳು ಟೈಮ್‌, ಡಿಸ್ಟನ್ಸ್‌ ಮತ್ತು ಸ್ಪೀಡ್‌ (ಟಿಎಸ್‌ಡಿ) ಮಾದರಿಯ ಅಡ್ವೇಂಚರ್‌ ಟ್ರಯಲ್‌ ವಿಭಾಗದಲ್ಲಿ ಕಣಕ್ಕಿಳಿಯಲಿದ್ದಾರೆ.

ನಟರಾಜ್‌ ಗೆಲ್ಲುವ ಫೇವರಿಟ್‌

ರಾರ‍ಯಲಿಯ ಎಕ್ಸ್‌ಟ್ರೀಮ್‌ ಕಾರ್ಸ್‌ ವಿಭಾಗದಲ್ಲಿ 9 ಬಾರಿಯ ಚಾಂಪಿಯನ್‌ ಮನಾಲಿ ಮ್ಯಾನ್‌ ಖ್ಯಾತಿಯ ಸುರೇಶ್‌ ರಾಣಾ ಕಣದಲ್ಲಿದ್ದು, ಎಕ್ಸ್‌ಟ್ರೀಮ್‌ ಬೈಕ್ಸ್‌ ವಿಭಾಗದಲ್ಲಿ ಮಾಜಿ ಚಾಂಪಿಯನ್‌ ಕನ್ನಡಿಗ ಆರ್‌. ನಟರಾಜ್‌ ಗೆಲ್ಲುವ ಫೇವರಿಟ್‌ ರೈಡರ್‌ ಎನಿಸಿದ್ದಾರೆ. ಉಳಿದಂತೆ ಬೈಕ್ಸ್‌ ವಿಭಾಗದಲ್ಲಿ ಕನ್ನಡಿಗರ ಪ್ರಾಬಲ್ಯವೇ ಹೆಚ್ಚಿದ್ದು ಬೆಂಗಳೂರಿನ ಅನುಭವಿ ರಾರ‍ಯಲಿಪಟು ವಿಶ್ವಾಸ್‌ ಎಸ್‌.ಡಿ, ತನ್ವೀರ್‌ ವಹೀದ್‌ ಹಾಗೂ ಮಹಿಳಾ ರೈಡರ್‌ ಐಶ್ವರ್ಯ ಪಿಸೇ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದ್ದಾರೆ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>