Quantcast
Channel: VijayKarnataka
Viewing all articles
Browse latest Browse all 6795

ಕರಾಟೆ, ಬ್ಯಾಡ್ಮಿಂಟನ್‌ನ ಮಾಣಿಕ್ಯ

$
0
0

ಬೆಂಗಳೂರು: ಕ್ರೀಡಾ ಕ್ಷೇತ್ರದಲ್ಲಿ ಕರಾಟೆಗೆ ತನ್ನದೇ ಆದ ಮಹತ್ವವಿದೆ. ಕೆಲವರು ಈ ಕ್ರೀಡೆಯನ್ನು ಸಾಧನೆಯ ಶಿಖರವೇರಲು ಆರಿಸಿಕೊಂಡರೆ, ಇನ್ನು ಕೆಲವರು ಆತ್ಮರಕ್ಷ ಣೆಗಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಹೀಗೆ ಕರಾಟೆಯಲ್ಲೇ ಉನ್ನತ ಮಟ್ಟದ ಸಾಧನೆ ಮಾಡಬೇಕೆಂಬ ತುಡಿತ ಹೊಂದಿರುವ ಹುಡುಗನೇ ಮಾಣಿಕ್ಯ ಅಡಿಗ.

ಬೆಂಗಳೂರಿನ ಇಂದಿರಾಗನಗರದ ಪ್ರಕಾಶ್‌ ಅಡಿಗ, ಮಾಲತಿ ದಂಪತಿಯ ಪುತ್ರ ಮಾಣಿಕ್ಯ ಭರವಸೆಯ ಕರಾಟೆ ಪಟು. 10ರ ಹರೆಯದ ಮಾಣಿಕ್ಯ ಇಂದಿರಾನಗರದ ಪೂರ್ಣಪ್ರಜ್ಞ ವಿದ್ಯಾ ಸಂಸ್ಥೆಯಲ್ಲಿ 5ನೇ ತರಗತಿ ವಿದ್ಯಾರ್ಥಿ. ಚಿಕ್ಕ ವಯಸ್ಸಿನಲ್ಲೇ ಯಶಸ್ಸಿನ ಶಿಖರವೇರುತ್ತಿರುವ ಪ್ರತಿಭೆ.

ಕಳೆದ ವರ್ಷ ಕುರುಕ್ಷೇತ್ರದಲ್ಲಿ ನಡೆದ ಅಖಿಲ ಭಾರತ ಕರಾಟೆ-ಡೊ ಫೆಡರೇಷನ್‌ ಆಯೋಜಿಸಿದ್ದ ರಾಷ್ಟ್ರೀಯ ಕರಾಟೆ ಚಾಂಪಿಯನ್‌ಷಿಪ್‌ನ 8ರ ವಯೋಮಿತಿಯಲ್ಲಿ ಮಾಣಿಕ್ಯ ಕಟ ವಿಭಾಗದಲ್ಲಿ ಚಿನ್ನದ ಪದಕ ಗೆದ್ದು ಮಿಂಚಿದ್ದರು.

2013ರಲ್ಲಿ ಮೈಸೂರಿನಲ್ಲಿ ನಡೆದ ರಾಷ್ಟ್ರೀಯ ಶಿಟೊ-ರು ಕರಾಟೆ ಚಾಂಪಿಯನ್‌ಷಿಪ್‌ನ ಆರರ ವಯೋಮಿತಿಯ ಬಾಲಕರ ಸ್ಪರ್ಧೆಯಲ್ಲಿ ಮಾಣಿಕ್ಯ ಕಟ ಹಾಗೂ ಕುಮಿತೆ ವಿಭಾಗಗಳಲ್ಲಿ 3ನೇ ಸ್ಥಾನ ಪಡೆದಿದ್ದರು. 2014ರಲ್ಲಿ ಬೆಂಗಳೂರಿನಲ್ಲಿ ನಡೆದ ಅಂತರ್‌ಶಾಲಾ ಶಿಟೊ-ರು ಕರಾಟೆ ಚಾಂಪಿಯನ್‌ಷಿಪ್‌ನ ಕಟ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದ ಸಾಧನೆ ಮಾಡಿದ್ದರು. ಅಲ್ಲದೆ 2015ರಲ್ಲಿ ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಅಖಿಲ ಭಾರತ ಕರಾಟೆ-ಡೊ ಫೆಡರೇಷನ್‌ ಆಯೋಜಿಸಿದ್ದ ರಾಷ್ಟ್ರೀಯ ಕರಾಟೆ ಚಾಂಪಿಯನ್‌ಷಿಪ್‌ನ 8ರ ವಯೋಮಿತಿಯಲ್ಲಿ ಮಾಣಿಕ್ಯ ಕಟ ವಿಭಾಗದಲ್ಲಿ ಕಂಚು ಹಾಗೂ ಕುಮಿತೆ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.

ಬ್ಯಾಡ್ಮಿಂಟನ್‌ನಲ್ಲೂ ಮಿಂಚು

ಕರಾಟೆಯ ಜತೆ ಮಾಣಿಕ್ಯ ಬ್ಯಾಡ್ಮಿಂಟನ್‌ನಲ್ಲೂ ಮಿಂಚುತ್ತಿರುವುದು ವಿಶೇಷ. ಇತ್ತೀಚೆಗೆ ನಡೆದ ಹಿರಿಯ ಪ್ರಾಥಮಿಕ ಶಾಲಾ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಇಂದಿರಾನಗರದ ಪೂರ್ಣಪ್ರಜ್ಞ ಶಾಲಾ ತಂಡವನ್ನು ಪ್ರತಿನಿಧಿಸಿದ್ದ ಮಾಣಿಕ್ಯ ಚಾಂಪಿಯನ್‌ ಆಗಿ ಹೊರ ಹೊಮ್ಮಿದ್ದರು. ಬ್ಯಾಡ್ಮಿಂಟನ್‌ನಲ್ಲಿ ಪುಲ್ಲೇಲ ಗೋಪಿಚಂದ್‌ ಹಾಗೂ ಸೈನಾ ನೆಹ್ವಾಲ್‌ ಅವರನ್ನು ಮಾದರಿಯಾಗಿರಿಸಿಕೊಂಡಿರುವ ಮಾಣಿಕ್ಯ ದೇಶವನ್ನು ಪ್ರತಿನಿಧಿಸುವ ಗುರಿ ಹೊಂದಿದ್ದಾರೆ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>