Quantcast
Channel: VijayKarnataka
Viewing all articles
Browse latest Browse all 6795

ತಲಾಕ್‌ಗೆ ಕೇಂದ್ರ ಆಕ್ಷೇಪ: ಬಹುಪತ್ನಿತ್ವಕ್ಕೂ ನಿಷೇಧ ಕೋರಿಕೆ

$
0
0

ಸುಪ್ರೀಂಕೋರ್ಟ್‌ಗೆ ಅಫಿದವಿತ್‌ * ಬಹುಪತ್ನಿತ್ವಕ್ಕೂ ನಿಷೇಧ ಕೋರಿಕೆ

ಹೊಸದಿಲ್ಲಿ: ದೇಶದ ಸಂವಿಧಾನದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕೇಂದ್ರ ಸರಕಾರ, ಮುಸ್ಲಿಮರಲ್ಲಿ ಆಚರಣೆಯಲ್ಲಿರುವ ತ್ರಿವಳಿ ತಲಾಕ್‌, ನಿಕಾಹ್‌ ಹಲಾಲ ಮತ್ತು ಬಹುಪತ್ನಿತ್ವವನ್ನು ವಿರೋಧಿಸಿ ಸುಪ್ರೀಂಕೋರ್ಟ್‌ಗೆ ಅಫಿದವಿತ್‌ ಸಲ್ಲಿಸಿದೆ. ಮತ್ತು ಜಾತ್ಯತೀತತೆ ಮತ್ತು ಲಿಂಗ ಸಮಾನತೆಯ ಆಧಾರದಲ್ಲಿ ಈ ಪದ್ಧತಿಗಳ ಮರುಪರಿಶೀಲನೆ ನಡೆಸಬೇಕು ಎಂದು ಶಿಫಾರಸು ಮಾಡಿದೆ.

ದೇಶದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಗೆ ಎನ್‌ಡಿಎ ಸರಕಾರ ಚಿಂತನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಈ ಅಫಿದವಿತ್‌ ಮಹತ್ವ ಪಡೆದಿದೆ.

ಕಾನೂನು ಮತ್ತು ನ್ಯಾಯ ಸಚಿವಾಲಯ ಸಲ್ಲಿಸಿದ ಅಫಿದವಿತ್‌ನಲ್ಲಿ, ಲಿಂಗ ಸಮಾನತೆ, ಜಾತ್ಯತೀತತೆ, ಅಂತಾರಾಷ್ಟ್ರೀಯ ಕರಾರುಗಳು, ಧಾರ್ಮಿಕ ಆಚರಣೆಗಳು ಮತ್ತು ನಾನಾ ಇಸ್ಲಾಮಿಕ್‌ ರಾಷ್ಟ್ರಗಳಲ್ಲಿ ಜಾರಿಯಲ್ಲಿರುವ ವೈವಾಹಿಕ ಕಾನೂನುಗಳನ್ನು ಉಲ್ಲೇಖಿಸಲಾಗಿದೆ. ಮತ್ತು ಇವುಗಳ ಆಧಾರದಲ್ಲಿ ಸುಪ್ರೀಂಕೋರ್ಟ್‌ ತ್ರಿವಳಿ ತಲಾಕ್‌, ಬಹುಪತ್ನಿತ್ವದ ನ್ಯಾಯಾನ್ಯಾಯವನ್ನು ವಿಶ್ಲೇಷಿಸಿ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದೆ.

ತ್ರಿವಳಿ ತಲಾಕ್‌, ನಿಕಾಹ್‌ ಹಲಾಲಾ ಮತ್ತು ಬಹುಪತ್ನಿತ್ವವನ್ನು ಲಿಂಗ ನ್ಯಾಯ, ತಾರತಮ್ಯ, ಗೌರವದ ಬದುಕು ಮತ್ತು ಸಮಾನತೆಯ ಬೆಳಕಿನಲ್ಲಿ ನೋಡಬೇಕು ಎಂದು ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಮುಕುಲಿತಾ ವಿಜಯವರ್ಗಿಯ ಅವರು ಸಲ್ಲಿಸಿದ ಅಫಿದವಿತ್‌ನಲ್ಲಿ ತಿಳಿಸಲಾಗಿದೆ.

ಲಿಂಗ ಸಮಾನತೆಯ ನೆಲೆಯಲ್ಲಿ ಕೇಂದ್ರ ಸರಕಾರ ಮೊದಲ ಬಾರಿಗೆ ನಿಭಾಯಿಸಿದ ಶಾಬಾನೋ ಪ್ರಕರಣ, ಅದು ಮುಸ್ಲಿಮರ ಪದ್ಧತಿಗಳಿಗೆ ಎಸೆದ ಸವಾಲುಗಳನ್ನು ಅಫಿದವಿತ್‌ನಲ್ಲಿ ಉಲ್ಲೇಖಿಸಲಾಗಿದೆ. ಭಾರತದ ಸಂವಿಧಾನದಡಿ ಮಹಿಳೆಯರಿಗೆ ನೀಡಲಾಗಿರುವ ಸಮಾನ ಸ್ಥಾನಮಾನ ಮತ್ತು ಗೌರವಯುತ ಬದುಕಿನ ಅವಕಾಶಗಳನ್ನು ನಿರಾಕರಿಸುವುದು ಸರಿಯೇ ಎನ್ನುವ ಮೂಲಭೂತ ಪ್ರಶ್ನೆಯನ್ನು ಆಧರಿಸಿ ಕೋರ್ಟ್‌ ತೀರ್ಮಾನ ತೆಗೆದುಕೊಳ್ಳಬೇಕು ತಿಳಿಸಲಾಗಿದೆ.

ವಿಶ್ವ ಸಂಸ್ಥೆಯ ಸ್ಥಾಪಕ ಸದಸ್ಯ ರಾಷ್ಟ್ರಗಳಲ್ಲ ಒಂದಾಗಿರುವ ಭಾರತ ಅಂತಾರಾಷ್ಟ್ರೀಯ ಕರಾರುಗಳಿಗೂ ಬದ್ಧವಾಗಿರಬೇಕಾಗುತ್ತದೆ ಎಂದು ತಿಳಿಸಿರುವ 29 ಪುಟಗಳ ಅಫಿದವಿತ್‌ ಮೂಲಭೂತ ಹಕ್ಕುಗಳಿಗೆ ಸಂಬಂಧಿಸಿದ ವೈಯಕ್ತಿಕ ಕಾನೂನುಗಳನ್ನು ವಿಸ್ತೃತವಾಗಿ ಉಲ್ಲೇಖಿಸಿದೆ.

ಮಹಾರಾಷ್ಟ್ರದ ಕೆಲವು ಪ್ರದೇಶಗಳಲ್ಲಿ ಬಹುಪತ್ನಿತ್ವ ಆಚರಣೆಯಲ್ಲಿರುವುದರಿಂದ ಅದನ್ನು ಅಸಾಂವಿಧಾನಿಕ ಎಂದು ಹೇಳುವಂತಿಲ್ಲ ಎಂಬ ಮುಂಬಯಿ ಹೈಕೋರ್ಟ್‌ನ 1952ರ ಅದೇಶವನ್ನು ಮರುಪರಿಶೀಲಿಸಬೇಕು ಎಂದು ಅಭಿಪ್ರಾಯಪಟ್ಟಿದೆ.

ಧಾರ್ಮಿಕ ಭಾಗವಲ್ಲ

ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಮಂಡಳಿ ಇತ್ತೀಚೆಗೆ ಸಲ್ಲಿಸಿರುವ ಅಫಿದವಿತ್‌ನಲ್ಲಿ ಹೇಳಿರುವ ಅಂಶಗಳಿಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ, ತ್ರಿವಳಿ ತಲಾಕ್‌, ನಿಕಾಹ್‌ ಹಲಾಲ ಮತ್ತು ಬಹುಪತ್ನಿತ್ವಗಳನ್ನು ಧಾರ್ಮಿಕ ಅನಿವಾರ್ಯ ಭಾಗ ಎಂದು ಪರಿಗಣಿಸುವಂತಿಲ್ಲ. ಇದು ಸಂವಿಧಾನದ ಧಾರ್ಮಿಕ ಆಚರಣೆಗಳ ರಕ್ಷಣೆಗೆ ಅವಕಾಶ ನೀಡುವ 25ನೇ ವಿಧಿಯಡಿ ಬರುವುದಿಲ್ಲ ಎಂದು ಹೇಳಿದೆ.

ಕೋರ್ಟ್‌ ಮಾಹಿತಿ ಕೋರಿತ್ತು

ಮುಸ್ಲಿಂ ಸಮುದಾಯದ ಮೂಲಭೂತ ಹಕ್ಕುಗಳಲ್ಲಿ ಕೋರ್ಟ್‌ ಎಷ್ಟರ ಮಟ್ಟಿಗೆ ಹಸ್ತಕ್ಷೇಪ ಮಾಡಬಹುದು ಎಂಬ ಬಗ್ಗೆ ಸುಪ್ರೀಂ ಕೋರ್ಟ್‌ ಸರಕಾರ ನಿಲುವನ್ನು ತಿಳಿಯಬಯಸಿತ್ತು. ಲಿಂಗ ಸಮಾನತೆ, ಮಹಿಳೆಯರ ಗೌರವದ ವಿಷಯದಲ್ಲಿ ರಾಜಿ ಸಾಧ್ಯವಿಲ್ಲ. ಇಸ್ಲಾಂನ ಅವಿಭಾಜ್ಯ ಭಾಗವಲ್ಲದ ಆಚರಣೆಗಳನ್ನು ತಡೆಯುವುದು ಉತ್ತಮ ಮತ್ತು ಈ ನಿಟ್ಟಿನಲ್ಲಿ ಸುಧಾರಣೆ ಆಗಬೇಕು ಎಂದು ಸರಕಾರ ತಿಳಿಸಿದೆ.

ಅಫಿದವಿತ್‌ ಮುಖ್ಯಾಂಶಗಳು

* ತ್ರಿವಳಿ ತಲಾಕ್‌ ಮೂಲಕ ವಿವಾಹ ಅಂತ್ಯ ಧಾರ್ಮಿಕ ಆಚರಣೆಯ ಭಾಗವಲ್ಲ.

* ಜಾತ್ಯತೀತ ಭಾಗದಲ್ಲಿ ತಲಾಕ್‌ ಮತ್ತು ಬಹುಪತ್ನಿತ್ವ ಸಾಧುವಲ್ಲ

* 20 ಇಸ್ಲಾಮಿಕ್‌ ದೇಶಗಳು ವೈವಾಹಿಕ ಕಾನೂನುಗಳನ್ನು ಬದಲಿಸಿವೆ ಎಂದು ಉಲ್ಲೇಖ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಬಿಗ್‌ ನ್ಯೂಸ್: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟ -‌ ಈ ಬಾರಿಯೂ...


 ಕೌಟುಂಬಿಕ ಕಲಹ ಹಿನ್ನೆಲೆ; ಬುದ್ದಿವಾದ ಹೇಳಿದ ತಂಗಿಯನ್ನೇ ಕೊಂದ ಅಣ್ಣ…


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


‘ಒಡಕು ಮೂಡಿಸಿದ ಸಿದ್ಧರಾಮಯ್ಯ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>