Quantcast
Channel: VijayKarnataka
Viewing all articles
Browse latest Browse all 6795

ಎನ್‌ಪಿಎಸ್‌ ಖಾತೆಗೆ ಆನ್‌ಲೈನ್‌ ಮೂಲಕ ಹಣ ತುಂಬುವುದು ಹೇಗೆ?

$
0
0

ಹೊಸದಿಲ್ಲಿ: ಎನ್‌ಪಿಎಸ್‌ ಖಾತೆಗೆ ಆನ್‌ಲೈನ್‌ ಮೂಲಕ ಸುಲಭವಾಗಿ ಹಣ ಪಾವತಿಸಬಹುದು. ಎನ್‌ಪಿಎಸ್‌ ಟಯರ್‌-1 ಮತ್ತು ಟಯರ್‌-2 ಖಾತೆಗಳನ್ನು ತೆರೆದು, ಆನ್‌ಲೈನ್‌ನಲ್ಲಿ ಇ-ಎನ್‌ಪಿಎಸ್‌ ಮೂಲಕ ಕಂತನ್ನು ಪಾವತಿಸಲು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ(ಎನ್‌ಪಿಎಸ್‌) ಆಸ್ಪದ ನೀಡಿದೆ.

ಆನ್‌ಲೈನ್‌ನಲ್ಲಿ ಹಣ ಪಾವತಿಗೆ ಸದಸ್ಯರು ಇ-ಎನ್‌ಪಿಎಸ್‌ ಜಾಲತಾಣಕ್ಕೆ ಭೇಟಿ ನೀಡಿದರೆ ಸಾಕು. ಮುಂದಿನ ಹಂತಗಳನ್ನು ಪಾಲಿಸಿ, ಕೂತಲ್ಲಿಯೇ ಹಣ ತುಂಬಬಹುದು.

1. ಜಾಲತಾಣಕ್ಕೆ ಭೇಟಿ ನೀಡಿ: ಮೊದಲಿಗೆ ಇ-ಎನ್‌ಪಿಎಸ್‌ ಜಾಲತಾಣಕ್ಕೆ (https://enps.nsdl.com/eNPS/LandingPage. html) ಸದಸ್ಯರು ಭೇಟಿ ನೀಡಬೇಕು. ನಂತರ ಅಲ್ಲಿರುವ ‘Contribution’ ಎನ್ನುವ ಆಯ್ಕೆಯನ್ನು ಕ್ಲಿಕ್‌ ಮಾಡಬೇಕು.

2. ದೃಢೀಕರಣ: ತೆರೆದುಕೊಳ್ಳುವ ಹೊಸ ಪುಟದಲ್ಲಿ ಪಿಆರ್‌ಎಎನ್‌(ಪರ್ಮನೆಂಟ್‌ ರಿಟೈರ್ಡ್‌ಮೆಂಟ್‌ ಅಕೌಂಟ್‌ ನಂಬರ್‌) ಮತ್ತು ಜನ್ಮದಿನಾಂಕವನ್ನು ಕೇಳಲಾಗುತ್ತದೆ. ಅವುಗಳನ್ನು ತುಂಬಿ, ನಿಮ್ಮ ವಿವರಗಳನ್ನು ದೃಢೀಕರಿಸಬೇಕು. ದೃಢೀಕರಣ ಯಶಸ್ವಿಯಾದ ನಂತರ ಒಟಿಪಿ(ಒಂದು ಅವಧಿಯ ಪಾಸ್‌ವರ್ಡ್‌) ನಿಮ್ಮ ನೋಂದಾಯಿತ ಮೊಬೈಲ್‌ ಸಂಖ್ಯೆಗೆ ಬರುತ್ತದೆ.

3. ಹಣ ಪಾವತಿ:

ನಿಮ್ಮ ಮೊಬೈಲ್‌ಗೆ ಬಂದ ಒಟಿಪಿಯನ್ನು ನಮೂದಿಸಿದ ನಂತರ, ಆನ್‌ಲೈನ್‌ ಮೂಲಕ ನಿಮ್ಮ ಎನ್‌ಪಿಎಸ್‌ ಖಾತೆಗೆ ಹಣ ತುಂಬುವ ಪುಟ ತೆರೆದುಕೊಳ್ಳುತ್ತದೆ. ನಿಮ್ಮ ಡೆಬಿಟ್‌ ಅಥವಾ ಕ್ರೆಡಿಟ್‌ ಕಾರ್ಡ್‌ಗಳ ಮೂಲಕ ಅಥವಾ ಇಂಟರ್‌ನೆಟ್‌ ಬ್ಯಾಂಕ್‌ನ ಆಯ್ಕೆ ಬಳಸಿ ಟಯರ್‌-1 ಅಥವಾ ಟಯರ್‌-2 ಖಾತೆಗಳಿಗೆ ಹಣವನ್ನು ರವಾನಿಸಬಹುದು.

4. ಶುಲ್ಕ ಎಷ್ಟು?

ಆನ್‌ಲೈನ್‌ ಮೂಲಕ ಎನ್‌ಪಿಎಸ್‌ಗೆ ನೀವು ಜಮೆ ಮಾಡುವ ಕಂತಿನ ಮೊತ್ತದಲ್ಲಿ ಶೇ.0.05ರಷ್ಟು ಸೇವಾ ಶುಲ್ಕವನ್ನು ವಿಧಿಸಲಾಗುತ್ತದೆ. ಅಂದರೆ ಕನಿಷ್ಠ 5 ರೂ. ಮತ್ತು ಗರಿಷ್ಠ 5,000 ರೂ. ತನಕ ಶುಲ್ಕ ಅನ್ವಯ. ಒಂದು ವೇಳೆ ನೀವು ಆಧಾರ್‌ ಮೂಲಕ ಇ-ಎನ್‌ಪಿಎಸ್‌ ನೋಂದಾಯಿಸಿದ್ದರೇ, ಯಾವ ಶುಲ್ಕವೂ ಇರುವುದಿಲ್ಲ.

ಗಮನಿಸಿ...

ಇ-ಎನ್‌ಪಿಎಸ್‌ ಬಳಸಿ ಎನ್‌ಪಿಎಸ್‌ಗೆ ಎಷ್ಟು ಮೊತ್ತವನ್ನು ಬೇಕಾದರೂ ತುಂಬಬಹುದು. ನಿಮ್ಮ ಸಾಮರ್ಥ್ಯ‌ದ ಅನುಸಾರ ಹಣ ತುಂಬಲು ಅವಕಾಶವಿದೆ.

ಎನ್‌ಪಿಎಸ್‌ ಲೈಟ್‌ ಅಥವಾ ಅಟಲ್‌ ಪಿಂಚಣಿ ಯೋಜನೆಯ ಸದಸ್ಯರಿಗೆ ಇ-ಎನ್‌ಪಿಎಸ್‌ ಸೌಲಭ್ಯ ಇರುವುದಿಲ್ಲ.

ಸಕ್ರಿಯವಾಗಿರುವ ಟಯರ್‌-1 ಅಥವಾ ಟಯರ್‌-2 ಖಾತೆದಾರರು ಮಾತ್ರ ಆನ್‌ಲೈನ್‌ ಮೂಲಕ ಹಣ ಪಾವತಿಸಬಹುದು.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಬಿಗ್‌ ನ್ಯೂಸ್: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟ -‌ ಈ ಬಾರಿಯೂ...


 ಕೌಟುಂಬಿಕ ಕಲಹ ಹಿನ್ನೆಲೆ; ಬುದ್ದಿವಾದ ಹೇಳಿದ ತಂಗಿಯನ್ನೇ ಕೊಂದ ಅಣ್ಣ…


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


‘ಒಡಕು ಮೂಡಿಸಿದ ಸಿದ್ಧರಾಮಯ್ಯ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>