Quantcast
Channel: VijayKarnataka
Viewing all articles
Browse latest Browse all 6795

ಸಂಪಾದಕೀಯ: ಬಿಬಿಎಂಪಿ ಹೊಣೆಗೇಡಿತನ

$
0
0

ಐಟಿ ರಾಜಧಾನಿ ಎಂಬ ಹಿರಿಮೆ ಗಳಿಸಿರುವ ಬೆಂಗಳೂರು ಇತ್ತೀಚಿನ ವರ್ಷಗಳಲ್ಲಿ ತೀವ್ರಗತಿಯಲ್ಲಿ ಬೆಳವಣಿಗೆ ಹೊಂದುತ್ತಿದೆ. ಗಗನ ಚುಂಬಿ ಕಟ್ಟಡಗಳ ನಿರ್ಮಾಣದ ಭರಾಟೆ ಕೂಡ ಹೆಚ್ಚಿದೆ. ನಗರವೊಂದು ಇಡಿ ಇಡಿಯಾಗಿ ವಾಣಿಜ್ಯಪ್ರದೇಶವಾಗಿ ಮಾರ್ಪಟ್ಟಾಗ ಅಕ್ರಮಗಳಿಗೆ ದಂಡಿಯಾದ ಅವಕಾಶಗಳು ಸೃಷ್ಟಿಯಾಗುತ್ತವೆ. ಬಿಬಿಎಂಪಿ ಅಧಿಕಾರಿಗಳು, ಬಿಲ್ಡರ್‌ಗಳು, ಸ್ಥಳೀಯ ರಾಜಕಾರಣಿಗಳು ಒಂದುಗೂಡಿದರೆ ಈ ಕೂಟ ಎಂಥ ಕಾಯಿದೆಗಳನ್ನು ಬೇಕಾದರೂ ನೀರಿನಲ್ಲಿ ಮುಳುಗಿಸಿಬಿಡುತ್ತದೆ. ಇದು ಘೋರ ಅನಾಹುತಗಳಿಗೆ ದಾರಿ ಮಾಡಿಕೊಡುತ್ತದೆ. ಬುಧವಾರ, ಬೆಂಗಳೂರಿನ ಬೆಳ್ಳಂದೂರು ಬಳಿ, ನಿರ್ಮಾಣ ಹಂತದಲ್ಲಿದ್ದ ಏಳು ಅಂತಸ್ತಿನ ಕಟ್ಟಡವೊಂದು ಕುಸಿದು ಬಿದ್ದು, ಮೂವರು ದುರ್ಮರಣವನ್ನಪ್ಪಿರುವ ಘಟನೆ- ಬಿಬಿಎಂಪಿ ಆಡಳಿತ ವೈಫಲ್ಯಕ್ಕೆ ಹಿಡಿದ ಕನ್ನಡಿ.

ಕಾನೂನು ಉಲ್ಲಂಘನೆ ಮತ್ತು ಕಳಪೆ ಕಾಮಗಾರಿ-ಈ ಎರಡೂ ಕಾರಣಗಳಿಂದ ಈ ದುರಂತ ಸಂಭವಿಸಿದೆ. ಐಟಿ ಕಂಪನಿಗಳು ಇರುವ ತಾಣವಿದು. ಬಿದ್ದಿರುವ ಕಟ್ಟಡಗಳ ಸುತ್ತಮುತ್ತ ಹತ್ತಾರು ಪಿಜಿ ಕೇಂದ್ರಗಳಿವೆ. ಇದು ಕೂಡ ಇಂಥದ್ದೇ ಉದ್ದೇಶಕ್ಕೆ ನಿರ್ಮಾಣವಾಗುತ್ತಿತ್ತು. ಮೂರು ಅಂತಸ್ತುಗಳ ನಿರ್ಮಾಣಕ್ಕೆ ಮಾತ್ರ ಬಿಬಿಎಂಪಿ ಅನುಮತಿ ನೀಡಿತ್ತು ಎನ್ನಲಾಗಿದೆ. ಆದರೆ ಒಟ್ಟು ಏಳು ಅಂತಸ್ತುಗಳ ಕಟ್ಟಡ ತಲೆ ಎತ್ತಿತ್ತು. ಇದನ್ನು ಪ್ರಶ್ನಿಸಿ ಐದು ತಿಂಗಳ ಹಿಂದೆಯೇ ನಗರಾಡಳಿತ ಅಧಿಕಾರಿಗಳು ನೋಟಿಸ್‌ ಜಾರಿಗೊಳಿಸಿದ್ದರು. ಆದರೆ ನೋಟಿಸ್‌ ಹೊತ್ತು ಹಾಕಿದವರು ಆನಂತರ ತಮ್ಮ ಕೆಲಸ ಇನ್ನೇನು ಇಲ್ಲ ಎಂದುಕೊಂಡು ತೆಪ್ಪಗಾದರು. ಫಿಲ್ಟರ್‌ ಮರಳು ಸೇರಿದಂತೆ ಕಟ್ಟಡಕ್ಕೆ ಬಳಸಿದ್ದ ಕಳಪೆ ಗುಟ್ಟಮಟ್ಟದ ಸಾಮಗ್ರಿಗಳಿಂದ ಈ ಕಟ್ಟಡ ಉರುಳಿ ಬಿದ್ದಿದೆ. ಅದೃಷ್ಟವಶಾತ್‌ ಅಕ್ಕಪಕ್ಕದಲ್ಲಿ ಖಾಲಿ ಜಾಗ ಇದ್ದುದರಿಂದ ಹೆಚ್ಚಿನ ಜೀವ ಹಾನಿ ಸಂಭವಿಸಿಲ್ಲ. ವಸತಿ ಪ್ರದೇಶಗಳ ಮೇಲೆ ಬಿದ್ದಿದ್ದರೆ ಇನ್ನಷ್ಟು ಜೀವಗಳು ಜೀವಂತ ಸಮಾಧಿಗಳಾಗುತ್ತಿದ್ದವು. ಬಿಲ್ಡರ್‌ಗಳ ಲಾಭಕೋರತನ ಮತ್ತು ಅಧಿಕಾರಿಗಳ ಲಂಚಕೋರತನದ ಫಲವಾಗಿ, ನಿಯಮ ಉಲ್ಲಂಘನೆಯಿಂದ ನಡೆಯುವ ಅವಘಡಗಳಿಗೆ ಅಮಾಯಕ ಕಾರ್ಮಿಕರು ಬಲಿಪಶುಗಳಾಗುತ್ತಾರೆ. ಬಿಸಿಲು, ಮಳೆ, ಚಳಿ ಎನ್ನದೆ ಬಯಲಿನಲ್ಲೇ ದಿನ ಕಳೆಯುವ ಈ ಕಾರ್ಮಿಕರು ಕೈ ಕಾಲು ಮುರಿದುಕೊಂಡರೆ ಅವರ ಇಡೀ ಜೀವನ ಅಂಧಕಾರವಾಗುತ್ತದೆ. ಸ್ವಾವಲಂಬಿ ಜೀವನ ನಡೆಸುತ್ತಿದ್ದವರು ಏಕಾಏಕಿ ಪರಾವಲಂಬಿಗಳಾಗಬೇಕಾಗುತ್ತದೆ. ಪರಿಹಾರಕ್ಕಾಗಿ ನ್ಯಾಯಾಲಯಗಳಲ್ಲಿ ಹೋರಾಡುವ ಶಕ್ತಿಯಂತೂ ಇವರಿಗೆ ಇರುವುದಿಲ್ಲ. ಎಂದಿನಂತೆ ದುರಂತ ನಡೆದಾಗ ಬಿಲ್ಡರ್‌ಗಳು ಮತ್ತು ಗುತ್ತಿಗೆದಾರರ ಮೇಲೆ ಕಠಿಣ ಕ್ರಮ ಜರುಗಿಸುತ್ತೇವೆ ಎಂದು ಮೇಯರ್‌ ಎಚ್ಚರಿಕೆ ನೀಡುತ್ತಾರೆ. 'ಕಠಿಣ ಕ್ರಮ' ಎನ್ನುವ ಕ್ಲೀಷೆ ಮಾತುಗಳಲ್ಲಿ ಯೇ ಅವರ ಎಲ್ಲ ಕಾಳಜಿ ಬಸಿದು ಹೋಗುತ್ತದೆ. ಪೊಲೀಸರು ಮೊಕದ್ದಮೆ ದಾಖಲಿಸುತ್ತಾರೆ. ಆದರೆ ತಪ್ಪಿತಸ್ಥರಿಗೆ ಶಿಕ್ಷೆ ಆಗುವುದು ವಿರಳಾತಿ ವಿರಳ. ಕಳೆದ ಐದು ವರ್ಷಗಳ ಅವಧಿಯನ್ನಷ್ಟೇ ತೆಗೆದುಕೊಂಡರೆ ಇಂಥ ಹತ್ತಾರು ದುರಂತಗಳು ಸಂಭವಿಸಿವೆ. ಆದರೆ ಬಿಬಿಎಂಪಿ ಬುದ್ಧಿ ಕಲಿತಂತೆ ಕಾಣುವುದಿಲ್ಲ. ಕಟ್ಟಡ ನಿರ್ಮಾಣ ಸುರಕ್ಷ ತೆ-ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಹಿತರಕ್ಷ ಣೆ ಕಾಯಿದೆ-1996 ಅನ್ನು ಇನ್ನಷ್ಟು ಬಲಪಡಿಸಬೇಕು. ಕಟ್ಟಡ ನಿರ್ಮಾಣ ದಾರರು ನಿಯಮ ಮತ್ತು ಸುರಕ್ಷ ತೆಯ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ನೋಡಿಕೊಳ್ಳಬೇಕು. ಇದರಲ್ಲಿ ವಿಫಲರಾದ ಅಧಿಕಾರಿಗಳ ಮೇಲೆ ಗಂಭೀರ ಸ್ವರೂಪದ ಕ್ರಿಮಿನಲ್‌ ಮೊಕದ್ದಮೆ ಹೂಡಬೇಕು. ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಆರೋಗ್ಯ ವಿಮೆಯ ರಕ್ಷ ಣೆ ಸಿಗುವಂತಾಗಬೇಕು. ಜತೆಗೆ ಅಪಘಾತಕ್ಕೀಡಾದಾಗ ಸೂಕ್ತ ಚಿಕಿತ್ಸೆಗಾಗಿ ಪರದಾಡಬೇಕಾದ ದಯನೀಯ ಸ್ಥಿತಿಯನ್ನು ದೂರ ಮಾಡಬೇಕು. ಪರಿಹಾರದ ಹಣ ಸುಲಭವಾಗಿ ಕೈಗೆ ಸಿಗುವಂತಾಗಬೇಕು. ಇಂಥ ಅವಘಡಗಳು ಮತ್ತೆ ಮತ್ತೆ ಮರುಕಳಿಸದಂತೆ ಒಂದು ಸಮಗ್ರ ಯೋಜನೆಯನ್ನು ರೂಪಿಸಬೇಕು.


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ವೃದ್ದೆಗೆ ಚಾಕು ತೋರಿಸಿ ದುಷ್ಕೃತ್ಯ


ತುಳು ತೆರೆಗೆ ಸೋನಿಯಾ ಎಂಟ್ರಿ


ಗಮನಿಸಿ : ‘ಆಯುಷ್ಮಾನ್ ಕಾರ್ಡ್’ನಡಿ 5 ಲಕ್ಷದವರೆಗೆ ಸಿಗಲಿದೆ ಉಚಿತ ಚಿಕಿತ್ಸೆ, ಇಲ್ಲಿದೆ...


ಈ 12 ಕಾರಣಗಳಿಗೆ ನಿಮಗೆ ಡಿ.ಕೆ.ರವಿ ಇಷ್ಟವಾಗಲೇಬೇಕು!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ



<script src="https://jsc.adskeeper.com/r/s/rssing.com.1596347.js" async> </script>